Advertisement

ಕೆಂಡಸಂಪಿಗೆ

ಕೋಮಾವೂ, ಮಂಜನ ಚಕ್ಕುಲಿಯೂ… : ವಿನಾಯಕ ಅರಳಸುರಳಿ ಅಂಕಣ

ತೊಡೆಯ ಮೇಲೆ ಪೆಟ್ಟು ತಿಂದ ಶಿವುವಿಗೆ ತಾನು ಮಂಜುವನ್ನು ಸೋಲಿಸಲಾರೆ ಎಂಬುದು ಅರ್ಥವಾಯಿತೋ ಏನೋ? ಇನ್ನೂ ಬೀಳಲಿರುವ ಒದೆಗಳಿಂದ ತಪ್ಪಿಸಿಕೊಳ್ಳಲು ಇರುವ ಏಕಮಾತ್ರ ಉಪಾಯವೆಂಬಂತೆ ಅವನು ತನ್ನ ಕಾಲು ಹಿಡಿದುಕೊಂಡು ನೆಲಕ್ಕೆ ಬಿದ್ದುಕೊಂಡು “ಅಯ್ಯೋ.. ಅಮ್ಮಾ.. ಅಯ್ಯಯ್ಯಮ್ಮಾ” ಎನ್ನುತ್ತಾ ಒದ್ದಾಡತೊಡಗಿದ. ತಾನಾಗಿ ಹೊಡೆಯಲಾಗದ ಮಂಜುವಿಗೆ ಮೇಷ್ಟರ ಕೈಯಿಂದ ಹೊಡೆಸುವ ಉಪಾಯವೂ ಅವನದಾಗಿತ್ತೋ ಏನೋ? ಪರಿಸ್ಥಿತಿಯ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿ, ಬೇಗ ಈ ವಿಷಯ ಮೇಷ್ಟರನ್ನು ಮುಟ್ಟುವಂತೆ ಮಾಡಲೆಂದು ಎದೆ, ಕಾಲು ಹಿಡಿದುಕೊಂಡು ಒದ್ದಾಡುತ್ತಾ “ಅಯ್ಯೋ.. ಅಮ್ಮಾ‌‌.. ನಂಗ್ ಉಸಿರಾಡುಕಾತಿಲ್ಯೋ.. ಅಪ್ಪಯ್ಯೋ.. ಅಬ್ಯೋ” ಎಂದು ಇನ್ನೇನು ಐಸಿಯುಗೆ ಸೇರಿಸಬೇಕಾದ ರೋಗಿಯಂತೆ ನಟಿಸತೊಡಗಿದ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ

Read More

ಉಳಿದು ಹೋಗುವುದೆಂದರೆ… ವಿನಾಯಕ ಅರಳಸುರಳಿ ಅಂಕಣ

ಮುಂದಿನ ಕೆಲ ವರ್ಷಗಳ ಕಾಲ ಆ ಪತ್ರ ಹಾಗೆಯೇ ಇಲ್ಲದ ಅಜ್ಜನ ಹೆಸರನ್ನು ವಿಳಾಸವಾಗಿಸಿಕೊಂಡು ಬಂದು ನಮಗೆಲ್ಲ ಶುಭಾಶಯ ಹೇಳುತ್ತಿತ್ತು. ಕೊನೆಗೊಂದು ದಿನ ಯಾರಿಂದಲೋ ಗೊತ್ತಾದ ವಿಷಯವೇನೆಂದರೆ ಆ ಪತ್ರದ ಬುಡದಲ್ಲಿ ‘ಶುಭಕೋರುವವರು – ABC ಆಚಾರ್’ ಎಂದು ಬರೆದಿರುತ್ತಿದ್ದ, ಅಜ್ಜ ಹೇಳುತ್ತಿದ್ದ ಆಚಾರ್ ಇದ್ದರಲ್ಲ, ಅವರೂ ತೀರಿಹೋಗಿ ಕೆಲ ವರ್ಷಗಳೇ ಆಗಿದ್ದವು! ಅವರ ಮಗನೇ ಅವರ ಹೆಸರಿನಲ್ಲಿ ಈ ಶುಭಾಶಯ ಪತ್ರವನ್ನು ಗ್ರಾಹಕರಿಗೆ ಕಳಿಸುತ್ತಿದ್ದ! ಹೇಗೆ ಅವರ ದೃಷ್ಟಿಯಲ್ಲಿ ತೀರಿಹೋದ ಬಳಿಕವೂ ಅಜ್ಜ ಜೀವಂತವಾಗಿದ್ದನೋ ಹಾಗೇ ನಮ್ಮೆಲ್ಲರ ದೃಷ್ಟಿಯಲ್ಲಿ ಆಚಾರರೂ ಜೀವಂತವಾಗಿದ್ದರು!
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

Read More

ವಿನಾಯಕ‌ ಅರಳಸುರಳಿ ಹೊಸ ಅಂಕಣ “ಆಕಾಶ ಕಿಟಕಿ” ಇಂದಿನಿಂದ ಶುರು

ಮೊದಲಿನಿಂದ ಖಾಲಿಯೇ ಇರುವ ಕುರ್ಚಿಗಿಂತ ನಡುವೆ ಒಂದಷ್ಟು ಹೊತ್ತು ಯಾರೋ ಕುಳಿತಿದ್ದು ಎದ್ದು ಹೋದ ಆಸನ ಹೆಚ್ಚು ಖಾಲಿಯಾಗಿ ಕಾಣುತ್ತದೆ. ನವ ಮಾಸ ತುಂಬಿದ ಬಳಿಕ ಜೀವದ ಬದಲಿಗೆ ಶೂನ್ಯವನ್ನು ಹಡೆದ ಒಡಲು ಹೊಸದಾದ ಖಾಲಿತನಕ್ಕೀಡಾಗುತ್ತದೆ. ಬಂದೇ ಬರುವನೆಂದು ನಂಬಿದ್ದ ಅತಿಥಿ.. ಬರಲೇ ಬೇಕಿದ್ದ ಅತಿಥಿ.. ಅವನ ಸ್ವಾಗತಕ್ಕೆ ಏನೆಲ್ಲ ತಯಾರಾಗಿತ್ತು! ತಂದಿಟ್ಟುಕೊಂಡ ಮಲ್ಲಿಗೆ ಮೆದುವಿನ ಟೊಪ್ಪಿಯಿತ್ತು. ಮೊಲದ ತುಪ್ಪಳದಂಥಾ ಅಂಗಿಯಿತ್ತು. ಅದರ ಅಂಚಲ್ಲಿ ಕೈಯಲ್ಲೇ ಹೊಲಿದ ಕಸೂತಿಯಿತ್ತು.
ವಿನಾಯಕ‌ ಅರಳಸುರಳಿ ಹೊಸ ಅಂಕಣ “ಆಕಾಶ ಕಿಟಕಿ” ಇಂದಿನಿಂದ, ಮಂಗಳವಾರಗಳಂದು, ಹದಿನೈದು ದಿಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ ಪ್ರಕಟವಾಗಲಿದೆ

Read More

ತಮ್ಮ ಬೆಂಗಳೂರಿಗೆ ಬಂದ..: ವಿನಾಯಕ ಅರಳಸುರಳಿ ಲಲಿತ ಪ್ರಬಂಧ

ಕೊಂಚ ಸ್ಥಿತಿವಂತರಾಗಿದ್ದ ಪಕ್ಕದ ಮನೆಯ ಅಣ್ಣನ ಮಗನ ಬರ್ತಡೇ ಪಾರ್ಟಿಯಲ್ಲಿ ತಿನ್ನಲು ಸಿಕ್ಕ ಚಿಕ್ಕ ಕೇಕ್‌ನ ತುಣುಕನ್ನೇ ಸ್ವರ್ಗ ಲೋಕದ ತಿನಿಸೆಂಬಂತೆ ಅದೊಂದು ದಿನ ತಿಂದಿದ್ದೆವು. ಇನ್ನೊಂದು ಪೀಸ್ ಬೇಕು ಎಂಬ ಆಸೆಯನ್ನು ಬಾಯಲ್ಲೇ ಇಟ್ಟುಕೊಂಡು ಕೈ ತೊಳೆದಿದ್ದೆವು. ಯಾರೋ ತುಂಡೊಂದನ್ನು ಬೇಡವೆಂದು ತಟ್ಟೆಯಲ್ಲೇ ಬಿಟ್ಟಾಗ ಅದು ನಮಗೆ ಸಿಗುವುದೇನೋ ಎಂದು ಆಸೆಯಿಂದ ಕಾದಿದ್ದೆವು. ಇಂತಿಪ್ಪ ಅಪೂರ್ಣ ಬಯಕೆಗಳ ಬಾಲ್ಯವನ್ನೇ ಕಳೆದ ತಮ್ಮನಿಗೆ ಈಗಲೂ ಈ ಪಟ್ಟಣದ ವಿಶೇಷ ತಿಂಡಿಗಳ ಬಗ್ಗೆ ಆಸೆಯಿದ್ದರೆ ಅದರಲ್ಲಿ ಯಾವ ತಪ್ಪಾಗಲೀ, ಅತಿಯಾಸೆಯಾಗಲೀ ನನಗೆ ಕಾಣಲಿಲ್ಲ.
ವಿನಾಯಕ ಅರಳಸುರಳಿ ಬರೆದ ಲಲಿತ ಪ್ರಬಂಧ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ