Advertisement

Category: ಅಂಕಣ

ಕನಸಿಗಿದೆ ಘನತೆ ಎನ್ನುತ ಕಾಡುವ ವಸಂತ

ಬೇರೆಬೇರೆ ದೇಶಗಳಿಂದ ತಂದಿಟ್ಟು ಬೆಳೆದ ಸಸ್ಯಸಂಪತ್ತಿಗೆ ಹೋಲಿಸಿದರೆ ಆಸ್ಟ್ರೇಲಿಯಾದ ಸ್ವಾಭಾವಿಕ, ದೇಶೀಯ ಹೂಗಳು ಇಲ್ಲಿ ಹೆಚ್ಚಾಗಿ ಜನಜನಿತವಾಗಿಲ್ಲ. ಕಾರಣ ನಿಮಗೆ ಹೊಳೆದಿರಬಹುದು. ಸಮಾಜವು ವಸಾಹತುಶಾಹಿ ಆಡಳಿತದಲ್ಲಿ ಇಲ್ಲಿನ ಎಲ್ಲವನ್ನೂ ಇಲ್ಲವಾಗಿಸುವ ಮನೋಭಾವವನ್ನಿಟ್ಟುಕೊಂಡು ದೇಶೀಯ ಹೂಹಣ್ಣುಗಳನ್ನು ಮೂಲೆಗೊತ್ತಿತ್ತು. ಕಳೆದೆರಡು ದಶಕಗಳಲ್ಲಿ ಬದಲಾವಣೆ ಗಾಳಿಗೆ ಶಕ್ತಿಬಂದಿದೆ. ಈಗ ಸರಕಾರಗಳು ಮತ್ತು ತೋಟಗಾರಿಕೆ ಸಮುದಾಯಗಳು ದೇಶೀಯ…”

Read More

ಸರಿ ತಪ್ಪುಗಳ ನಡುವೆ ರೇಖೆ ಎಳೆಯುವ ಮೊದಲು

ಒಬ್ಬರಿಗೆ ಸರಿ ಎನ್ನಿಸಿದ್ದು ಇನ್ನೊಬ್ಬರಿಗೆ ತಪ್ಪಾಗುವ ಈ ಚಮತ್ಕಾರವನ್ನು ಲೇಖಕರು ಆನೆ ಮತ್ತು ಮಾವುತನ ಉಪಮೆ ಬಳಸಿ ವಿಶ್ಲೇಷಿಸುತ್ತಾರೆ. ಅಷ್ಟು ದೊಡ್ಡ ಆನೆಯ ಮುಂದೆ ಮಾವುತ ಕಾಣುವುದೇ ಇಲ್ಲ. ಆದರೆ ಕೈಯಲ್ಲಿರುವ ಪುಟ್ಟದಾದ ಅಂಕುಶವನ್ನು ಉಪಯೋಗಿಸಿಕೊಂಡು ಅಂಥ ಬೃಹತ್ ಆಸೆಯನ್ನು ಅವನು ಪಳಗಿಸಬಲ್ಲ. ಹಾಗೆಯೇ ನಮ್ಮ ಯೋಚನೆಗಳನ್ನು ಕೂಡ ನಮ್ಮ ಅಂತರ್ದೃಷ್ಟಿಯೇ ಪಳಗಿಸುತ್ತದೆ, ಅದು ಕಣ್ಣಿಗೆ ಕಾಣಿಸದಿದ್ದರೂ ಬಹಳ ಪ್ರಭಾವಶಾಲಿಯಾದುದು ಎನ್ನುತ್ತಾರೆ.

Read More

ಪಯಣಪ್ರಿಯರ ನಾಡಿನ ಕೆಲವು ಮಾತುಗಳು

ನಾನು ಚಿಕ್ಕವನಿದ್ದಾಗ, ‘ಕುಟುಂಬ ಸಮೇತ ಹಾಲಿಡೆʼಗಳೇನಿದ್ದರೂ ತೀರ್ಥಯಾತ್ರೆಗಳೇ! ನಮ್ಮ ನಮ್ಮ ಮನೆಯ ದೇವರುಗಳ ಮತ್ತು ನಂಬಿಕೆಗಳ ಪ್ರಕಾರ ನಮ್ಮ ಹಾಲಿಡೆಯ ಗಮ್ಯಸ್ಥಾನಗಳು ನಿಗದಿಯಾಗಿರುತ್ತಿದ್ದವು. ತುಳಸಿಗೇರಿ, ಯಲಗೂರ, ಬಸವನ ಬಾಗೇವಾಡಿಗಳೇ ಕುಟುಂಬ ಸಮೇತ ಪ್ರಯಾಣದ ‘ಡೇಟ್ರಿಪ್ʼ ಜಾಗಗಳು. ಅವನ್ನು ಬಿಟ್ಟರೆ, ಮಂತ್ರಾಲಯ, ತಿರುಪತಿ, ಧರ್ಮಸ್ಥಳ ಅಥವಾ ಶೃಂಗೇರಿಗಳಿಗೆ ಬಸ್ಸಿನಲ್ಲಿ ಪಯಣಿಸಿ, ಅಲ್ಲಿಯ ಧರ್ಮಛತ್ರಗಳಲ್ಲೇ ತಂಗಿದ್ದು ದೇವರ ದರ್ಶನ ಮಾಡಿ…”

Read More

ಬೀಳುವವರನ್ನು ಕೈಹಿಡಿಯಬೇಕಾದವರು ಯಾರು?

ಅಸಹಾಯಕರು, ನಿರ್ಗತಿಕರು, ಬಡವರು ಹಾಗು ಅವಕಾಶ ವಂಚಿತರು ಪ್ರಪಂಚದ ಯಾವುದೇ ದೇಶದಲ್ಲಿದ್ದರೂ ಅವರು ಶಾಪಗ್ರಸ್ತರೆ. ಎಲ್ಲೋ ಕೆಲವರಿಗೆ ನೆರವು ಸಿಗುತ್ತದೆ, ಎಲ್ಲೋ ಕೆಲವು ನಿರ್ಗತಿಕರು ಸೆಟೆದು ನಿಲ್ಲುತ್ತಾರೆ, ಎಲ್ಲೋ ಕೆಲವು ಬಡವರು ತಿರುಗಿ ಬೀಳುತ್ತಾರೆ, ಕೆಲವರಿಗಷ್ಟೇ ಅವಕಾಶ ಸಿಗುತ್ತದೆ, ಆದರೆ ಉಳಿದವರಿಗೆ ದಾರಿ ಎಲ್ಲಿ. ಹಣವಂತರ ಜಗತ್ತಿನಲ್ಲಿ, ಮೋಸಗಾರರ ವಂಚನೆಯಲ್ಲಿ ಮುಗ್ಧರಿಗೆ ಮತ್ತು ನ್ಯಾಯವಂತರಿಗೆ ಸೋಲು ಕಟ್ಟಿಟ್ಟ ಬುತ್ತಿ. ಸಣ್ಣ ಹೋರಾಟ ನಡೆದರೆ ಅವರನ್ನು ಮಟ್ಟ ಹಾಕಲು ತುದಿಗಾಲಲ್ಲಿ ನಿಂತಿರುತ್ತದೆ ಈ ಜಗತ್ತು. ಪ್ರಶಾಂತ್‌ ಬೀಚಿ ಅಂಕಣ

Read More

ಅರ್ಥಲೋಕದ ಬೆರಗುಗಳ ಅನಾವರಣ

ಈ ಕಾದಂಬರಿಯ ಕಥನ ಶೈಲಿ ಸರಳವಾಗಿಲ್ಲ; ಯಾಕೆಂದರೆ, ಇಕೋ ತಾನು ಪ್ರಸ್ತುತ ಪಡಿಸುತ್ತಿರುವುದು ಮಧ್ಯಯುಗೀಯ ಅಧಿಕೃತ ಹಸ್ತಪ್ರತಿಯೆಂಬ ಕಲ್ಪನೆ ಓದುಗರಲ್ಲಿ ಮೂಡಿಸಲಿಕ್ಕಾಗಿ ಪ್ರಯತ್ನಿಸಿದ್ದಾನೆ. ಮಧ್ಯಯುಗದ ಐತಿಹಾಸಿಕ ವಿವರಗಳು, ಅಂದಿನ ಸಮಕಾಲೀನ ಚರ್ಚೆಗಳು, ಆವಿಷ್ಕಾರಗಳು, ಚರ್ಚು ಮತ್ತದರ ಆಂತರಿಕ ವಿವಾದಗಳು, ಇತ್ಯಾದಿ ಅನೇಕ ವಿವರಗಳನ್ನು ಬಳಸಿಕೊಳ್ಳಲಾಗಿದೆ. ಹಾಗೆಯೇ ಅನೇಕ ಸಮಕಾಲೀನ ವಿದ್ವಾಂಸರು, ಅನೇಕ ಭಾಷೆಗಳಲ್ಲಿರುವ ಅವರ ಬರಹಗಳನ್ನು, ಅನೇಕ ಪುರಾತನ ಉದ್ಧರಣಗಳನ್ನು ಉಲ್ಲೇಖಿಸಲಾಗಿದೆ.
ಉಂಬರ್ಟೋ ಇಕೋ ಬರೆದ “ದ ನೇಮ್ ಆಫ್ ದ ರೋಸ್”ಕಾದಂಬರಿಯ ಕುರಿತು ಬರೆದಿದ್ದಾರೆ ಕಮಲಾಕರ ಕಡವೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ