Advertisement

Category: ದಿನದ ಪುಸ್ತಕ

ಶೋಭಾ ಹಿರೇಕೈ ಕಂಡ್ರಾಜಿ ಕವನ ಸಂಕಲನಕ್ಕೆ ವಿಷ್ಣು ನಾಯ್ಕರು ಬರೆದ ಮುನ್ನುಡಿ

“ಇಲ್ಲಿ. ನಾವು ಕೆಲವು ದುಡಿಮೆಯ ವರ್ಗವನ್ನು ಹಂಗುಹರಕೊಂಡವರಂತೆ ದುಡಿಸಿಕೊಳ್ಳುತ್ತೇವೆ. ಆ ಕಾರಣಕ್ಕಾಗಿ ಅವರಿಗೆ ಕೂಲಿ ಕೊಡುತ್ತೇವಲ್ಲ ಅಂದುಕೊಳ್ಳಬಹುದು. ನಿಜ, ಕೊಡುತ್ತೇವೆ. ಆದರೆ ಆ ಕಾರಣಕ್ಕಾಗಿ ಅವರ ದೇಹ ನುಗ್ಗಾಗುವುದೆಂಬ ಅಳತೆಯ ಅರಿವಿಲ್ಲ ನಮಗೆ. ಅವರ ಬೆವರಿಗೆ ನಾವು ಕಟ್ಟಿದ ಬೆಲೆ ಸಾಲದು. ಅವರು ಕಳಕೊಂಡ ದೇಹದ ತೂಕದ ಅರಿವಿಲ್ಲ ನಮಗೆ. ಅವರು ನಮಗಾಗಿ ನಿದ್ದೆಯನ್ನೂ ಮಾರುತ್ತಾರೆಂಬ ಅಂದಾಜಿಲ್ಲ ನಮಗೆ.”

Read More

ದಿಲೀಪ್ ಕುಮಾರ್ ಪುಸ್ತಕಕ್ಕೆ ಮೂಡ್ನಾಕೂಡು ಚಿನ್ನಸ್ವಾಮಿಯವರ ಮಾತುಗಳು

“ಅವನು ಚಳಿ ಕಾಯಿಸಿಕೊಳ್ಳಲು ಬೆಂಕಿಯ ಮುಂದೆ ಕೂತಿದ್ದಾನೆ. ಸುಮ್ಮನೆ ಕುಳಿತಿಲ್ಲ; ಎದೆಯೊಳಗೆ ಬೆಂಕಿ ಇಟ್ಟುಕೊಂಡು ಕಾಯುತ್ತಿದ್ದಾನೆ. ಆ ಕಾಯುವಿಕೆಯ ತೀಕ್ಷ್ಣತೆಯನ್ನು ‘ಬೆಂಕಿ ಹೊರಗಿಲ್ಲ’ ಎಂಬ ಮಾತು ಮಿಂಚಿನಂತೆ ಹೊಳೆಯಿಸುತ್ತದೆ. ಉತ್ತಮ ಕಾವ್ಯ ಮಾಡುವ ಕೆಲಸ ಇಷ್ಟೆ. ಶಬ್ದವಿದೆ, ಅದಕ್ಕೊಂದು ಅರ್ಥವಿದೆ. ಅದರಿಂದಾಚೆ ಆ ಶಬ್ದಾರ್ಥಗಳು ಇನ್ನೇನಿನ್ನೇನನ್ನೋ ಧ್ವನಿಸುತ್ತವೆ. ಅದು ಕಾವ್ಯ. ಪ್ಯಾಬ್ಲೊ ನೆರೂಡ ಹೇಳುತ್ತಾನೆ.”

Read More

ನಟರಾಜ್ ಹುಳಿಯಾರರ ಪುಸ್ತಕದ ಕುರಿತು ಎಚ್.ಆರ್. ರಮೇಶ್ ಬರಹ

“ಯಾವಾಗಲೋ ಚಿಕ್ಕ ವಯಸ್ಸಿನಲ್ಲಿ ನೋಡಿದ ಒಂದು ಸಾವನ್ನು ಬಿಟ್ಟರೆ ಮತ್ತೆ, ಮತ್ತೊಂದು ಸಾವನ್ನು ನೋಡುವುದು 1998 ರ ಆಗಸ್ಟ್ ನಡುರಾತ್ರಿಯ ಡಿ.ಆರ್ ಅವರ ಸಾವು. ಇದರ ಬಗ್ಗೆ ಬರೆಯುವಾಗ ಹುಳಿಯಾರ್ ತಮ್ಮ ಕರುಳ ಬಳ್ಳಿಯ ಯಾವುದೋ ಒಂದು ಕುಡಿ ಕಡಿದು ಹೋದಾಗ ಆಗುವಷ್ಟೇ ನೋವು, ವಿಷಾದ, ಖಾಲಿತನ, ತೀವ್ರವಾಗಿ ಅವರಿಗೂ ಆಗುವುದನ್ನು ಕಾಣಬಹುದು. ಅದೇ ಥರ 2000 ರ ಇಸ್ವಿಯಲ್ಲಿ ಜರುಗಿದ ಲಂಕೇಶ್ ಸಾವು.”

Read More

ಅಶೋಕ್ ಕುಮಾರ್ ಅನುವಾದಿಸಿದ ಸುಭಾಷ್ ಚಂದ್ರನ್ ಅವರ ಕಾದಂಬರಿಯ ಒಂದು ಭಾಗ

“ಮಳೆ ಜೋರಾಗಿ ಮರವನ್ನೇ ಮುಳುಗಿಸುವಂತೆ ಸುರಿಯತೊಡಗಿದಾಗ ರಣಹದ್ದಿನ ಪುಕ್ಕಗಳು ತೊಯ್ದು ತೊಪ್ಪೆಯಾಗುವುದನ್ನು ತನ್ನ ಕಡೆಗಣ್ಣಿಂದ ನೋಡುವುದು ಅಯ್ಯಾಪಿಳ್ಳೆಗೆ ಸಾಧ್ಯವಾಯಿತು. ಪಂಜರಕ್ಕೆ ಒತ್ತಿಕೊಂಡಂತಿದ್ದ ಜುಟ್ಟಿನ ಗಂಟು ಕಳಚಿಕೊಂಡು ಹಿಂದಕ್ಕೆ ಚದುರಿದ್ದ ಕೂದಲಿಗೆ ಕುತ್ತಿಗೆಯನ್ನೊತ್ತಿ ಅಯ್ಯಾಪಿಳ್ಳೆ ತಲೆಯನ್ನು ಹೊರಳಿಸಲು ನೋಡಿದನಾದರೂ ಸಾಧ್ಯವಾಗಲಿಲ್ಲ. ಭೋರ್ಗರೆದು ಸುರಿಯುತ್ತಿರುವ ಮಳೆಯಲ್ಲಿ ಆತ ಬಾಯಾರಿ ತಹತಹಿಸಿದ.”

Read More

ಫಿಯಟ್ ಲಕ್ಸ್…. ಬೆಳಕಾಗಲಿ: ಕೆ.ವಿ. ತಿರುಮಲೇಶ್ ಲೇಖನ

“ಈಗ ಈ ಚಿಮಿಣಿ ಕೈದೀಪಕ್ಕೆ ಬಂದರೆ, ಇದು ಬಹೂಪಯೋಗಿಯಾಗಿದ್ದರೂ, ಇದಕ್ಕೆ ಕೆಲವು ಮಿತಿಗಳೂ ಇದ್ದುವು. ಇದು ಗಾಳಿಗೆ ನಿಲ್ಲುವುದಿಲ್ಲವಾದ ಕಾರಣ, ಮನೆಯ ಹೊರಗೆ ಉಪಯೋಗವಿಲ್ಲ; ಮನೆಯೊಳಗೂ ಗಾಳಿ ಹೆಚ್ಚು ಬಂದರೆ ಇದು ಇದೀಗ ನಂದೀತು ಎನ್ನುವ ಆತಂಕ ಉಂಟುಮಾಡುತ್ತ ಇರುತ್ತದೆ. ಹತ್ತಿರ ಇರಿಸಿ ಪುಸ್ತಕ ಓದಲು ಪರವಾಯಿಲ್ಲ. ರಾತ್ರಿ ಊಟದ ಸಮಯ ನಾವು ಚಿಮಿಣಿಯ ತೂಗುದೀಪವನ್ನು ಉಪಯೋಗಿಸುತ್ತಿದ್ದೆವು.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ