ಅವ`ಲಕ್ಕಿ’ ಎಂಬ ಅದೃಷ್ಟಶಾಲಿ ತಿನಿಸು!
ತೌಳವನಾಡಿನಲ್ಲಿ ಅವಲಕ್ಕಿಗೆ ಬಜಿಲು ಎಂದು ಹೇಳುತ್ತಾರೆ. ಬೆಳಗ್ಗೆ ಅಥವಾ ಸಂಜೆಯ ತಿಂಡಿಗೆ ಸಜ್ಜಿಗೆ-ಬಜಿಲು ಕರಾವಳಿಯಲ್ಲಿ ಬಹಳ ಪ್ರಸಿದ್ಧ. ಸಜ್ಜಿಗೆ ಎಂದರೆ ಉಪ್ಪಿಟ್ಟು. ಇದು ಕರಾವಳಿಯ ಹೊರಗಿನವರಿಗೆ ತಿಳಿದಿರಲಿಕ್ಕಿಲ್ಲ. ಇನ್ನೊಂದು ಅಷ್ಟೇ ಪ್ರಸಿದ್ಧ ತಿಂಡಿಯೆಂದರೆ ಕಡ್ಳೆ-ಬಜಿಲು. ಇವು ಇಲ್ಲಿನ ಹೊಟೇಲುಗಳಲ್ಲೂ ಸಿಗುತ್ತವೆ. ಸಮಾರಂಭಗಳಲ್ಲಿ ಉಳಿದ ತಿಂಡಿಗಳಿಗಿಂತ ಅವಲಕ್ಕಿ-ಸಜ್ಜಿಗೆ ಮಾಡುವುದೇ ಹೆಚ್ಚು. ಏಕೆಂದರೆ, ಇದನ್ನು ತಯಾರಿಸಲು ಕಡಿಮೆ ಶ್ರಮ-ಸಮಯ-ಪರಿಕರ ಸಾಕು. ಮಧ್ಯಾಹ್ನವಾದರೂ ಹಸಿವೆಯಾಗುವುದಿಲ್ಲ. ಹೊಟ್ಟೆಯಲ್ಲಿ ಕಾಂಕ್ರೀಟ್ ಹಾಕಿದಂತೆ ಗಟ್ಟಿ!
ಸಹನಾ ಕಾಂತಬೈಲು ಬರೆದ ಲಲಿತ ಪ್ರಬಂಧಗಳ ಸಂಕಲನ ‘ಇದು ಬರಿ ಮಣ್ಣಲ್ಲ’ ಪುಸ್ತಕದಿಂದ ಒಂದು ಪ್ರಬಂಧ ನಿಮ್ಮ ಓದಿಗೆ

