Advertisement

Category: ಸಂಪಿಗೆ ಸ್ಪೆಷಲ್

ಒಂದೊಂದ್ಲೆ ಒಂದು…!: ಕ್ಷಮಾ ವಿ ಭಾನುಪ್ರಕಾಶ್ ಬರಹ

ವೈಜ್ಞಾನಿಕ ತಳಹದಿಯೇ ಇಲ್ದೇ, ಯಾವುದೋ ಬಂಜರು ಭೂಮಿಯಲ್ಲಿ ಸುಲಭವಾಗಿ ಸಿಕ್ಕ ಯಾವುದೋ ಪ್ರಭೇದದ ಸಸಿಗಳನ್ನ ನೆಟ್ಟು, ಪರಿಸರ ದಿನ ಆಚರಿಸೋದು ಅತ್ಯಂತ ಅರ್ಥಹೀನ; ಮರಗಳನ್ನು ನೆಟ್ಟು ಎಲ್ಲೆಂದರಲ್ಲಿ ಕಾಡು ಮಾಡಿಬಿಡ್ತೀವಿ ಅಂದ್ರೆ ಹೇಗೆ? ಅಲ್ಲಿ ಯಾವ ಜೀವರಾಶಿಯಿತ್ತು? ಅಲ್ಲಿನ ಆಹಾರ ಸರಪಳಿಯ ಕಥೆಯೇನು? ಅಲ್ಲಿನ ಅಜೈವಿಕ ಹಾಗೂ ಜೈವಿಕ ಅಂಶಗಳ ನಡುವಿನ ಸಮತೋಲನದ ಕಥೆಯೇನು?
ಈ ಹೊಸ ವರ್ಷದಿಂದ ಸ್ವಲ್ಪವಾದರೂ ನಾವು ನಿಂತಿರುವ ಈ ಭೂಮಿಯ ಕುರಿತು ಯಾವೆಲ್ಲ ರೀತಿಯಲ್ಲಿ ಕಾಳಜಿ ವಹಿಸಬಹುದು ಎನ್ನುವುದರ ಕುರಿತು ಕ್ಷಮಾ ವಿ. ಭಾನುಪ್ರಕಾಶ್‌ ಬರಹ

Read More

ವರ್ತಮಾನದ ಬೆಂಕಿಯಲ್ಲಿ ಅರಳಿದ ಹೂವು ಮೈ ಫ್ಯಾಮಿಲಿ: ಎಚ್. ಆರ್. ರಮೇಶ ಬರಹ

ಈ ನಾಟಕದ ಮತ್ತೊಂದು ವೈಶಿಷ್ಟ್ಯತೆಯೆಂದರೆ, ಇಂದಿನ ತಂತ್ರಜ್ಞಾನ ಮತ್ತು ಅದರ ಪರಿಣಾಮದ ಸೋ ಕಾಲ್ಡ್ ಆನ್ ಲೈನ್ ಸಾಮಾಜಿಕ ಜಾಲ ತಾಣಗಳು ಮನುಷ್ಯ ಸಂಬಂಧಗಳನ್ನು ಸಡಿಲಗೊಳಿಸುತ್ತ, ಒಂಟಿತನಗಳನ್ನು ಹುಟ್ಟುಹಾಕುತ್ತ ಮನುಷ್ಯರನ್ನು ಭಾವನಾರಹಿತರನ್ನಾಗಿಸುತ್ತಿರುವುದನ್ನು, ಇಡೀ ಮನುಕುಲವೇ ಅನುಭವಿಸುತ್ತಿರುವುದನ್ನು, ಭಾರತೀಯ ಸಂದರ್ಭದಲ್ಲಿ ಇಟ್ಟು ನೋಡಿರುವುದು. ಇದಕ್ಕೆ ಪುರಾಣ, ಇತಿಹಾಸ, ಮತ್ತು ಜ್ವಲಂತ ಸಂಗತಿಗಳು ರೂಪಕವಾಗಿ ಮೈದಾಳಿ ಬಂದಿವೆ.
ಕುಮಾರಿ ಗೌತಮಿ ಕತೆಯಾಧಾರಿತ ಮೈಸೂರಿನ ರಂಗಾಯಣದ ರೆಪರ್ಟರಿ ಕಲಾವಿದರು ಅಭಿನಯಿಸಿದ “ಮೈ ಫ್ಯಾಮಿಲಿ” ನಾಟಕದ ಕುರಿತು ಎಚ್.ಆರ್.‌ ರಮೇಶ್‌ ಬರಹ

Read More

ಹಿಂಗೊಂದಿತ್ತು ಕಾಲ…: ವಸಂತಕುಮಾರ್‌ ಕಲ್ಯಾಣಿ ಬರಹ

ತರಕಾರಿ ಗುಣಮಟ್ಟ ನೋಡುವುದು, ಚೌಕಾಶಿ ಮಾಡುವುದು ಮೊದಲಾದರಲ್ಲಿ ತೊಡಗಿಕೊಂಡರೆ, ಈ ಸಮೂಹದಲ್ಲಿದ್ದ ರಾಮಕ್ಕ, ಚೆನ್ನಮ್ಮಕ್ಕ, ಜೊತೆ ಇನ್ನೊಬ್ಬರು ಇದ್ದರು -ಒಂದು ಹೂವಿನ ಹೆಸರು ಅವರದು- ಯಾವ ಮಾಯದಲ್ಲೋ ಎರಡು ಬದನೆಕಾಯಿಯನ್ನೋ, ಒಂದು ಮಾವಿನ ಹಣ್ಣನ್ನೋ ‘ಅಬೇಸ್’ ಮಾಡಿ ಸೆರಗಿನಲ್ಲಿ ಮುಚ್ಚಿಟ್ಟುಕೊಂಡು ಗಾಡಿ ಹೋದ ನಂತರ ಉಳಿದವರಿಗೆ ತಮ್ಮ ಕೈಚಳಕದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವುದೂ, ಉಳಿದವರು ಅದಕ್ಕೆ ಕೊಂಕಿನ, ಮೆಚ್ಚುಗೆಯ ಮಾತಾಡುತ್ತಾ ಒಂದಷ್ಟು ಸಮಯ ಕಳೆಯುತ್ತಿದ್ದರೆ, ನಮ್ಮಮ್ಮ ಪಾಪ ಭೀರು, “ಪಾಪ ಯಾಕೆ ಹಾಗೆ ಮಾಡಿದೆ, ಈ ಬಿಸಿಲಿನಲ್ಲಿ ಸುತ್ತುವ ಅವನಿಗೆ ನಷ್ಟವಾಯಿತಲ್ಲ” ಎಂದು ಕೊರಗುತಿದ್ದರು.
ವಸಂತಕುಮಾರ್‌ ಕಲ್ಯಾಣಿ ಬರಹ ನಿಮ್ಮ ಓದಿಗೆ

Read More

ಮಹಾರಾಜಾ ಕಾಲೇಜಿನ ಮಧುರ ನೆನಪು ……: ಮೂರ್ತಿ ದೇರಾಜೆ ಬರಹ

ಮೈಸೂರಿಗೆ ಬಂದು ಮಹಾರಾಜಾ ಕಾಲೇಜು ನೋಡಿ ನಾವು ಮಾತ್ರ ಅಲ್ಲ…. ನನ್ನ ಅಪ್ಪನೂ ಕಂಗಾಲು. ಕಾಲೇಜು ಕಛೇರಿಯಲ್ಲಿ, “ಮಾರ್ಕ್ಸ್ ಎಷ್ಟಿದೆ…? ಬೇಕಾದ ಸಬ್ಜೆಕ್ಟ್ ಅಷ್ಟು ಸುಲಭದಲ್ಲೆಲ್ಲಾ ಸಿಗಲ್ಲ….” ಅಂತೆಲ್ಲ ಸ್ವಲ್ಪ ಹೆಚ್ಚೇ ಹೆದರಿಸಿದರೂ…… ಸೀಟಂತೂ ಸಿಕ್ಕಿತು. ನಮ್ಮ ಪೂರ್ವಜನ್ಮದ ಪುಣ್ಯ ಅಂತ ಭಾವಿಸಿದ್ದೆವು…… ಆಗ ನಮಗೇನು ಗೊತ್ತು….!! ವರ್ಷ ಕಳೆಯುವಾಗ ಗೊತ್ತಾಯ್ತು, ಇಲ್ಲಿ ಮಾರ್ಕ್ಸ್ ವಿಷಯ ಬಿಡಿ…. ! ೪-೫ ಭಾರಿ ಫೈಲ್ ಆದವರಿಗೂ ಎಡ್ಮಿಶನ್ ಕಷ್ಟವಿಲ್ಲ ಅಂತ.
ಮೈಸೂರಿನ ಮಹಾರಾಜಾ ಕಾಲೇಜು ದಿನಗಳ ಕುರಿತು ಮೂರ್ತಿ ದೇರಾಜೆ ಬರಹ ನಿಮ್ಮ ಓದಿಗೆ

Read More

ಕಾಡು ಮತ್ತು ಕಾಡಬೆಳುದಿಂಗಳು… ಶ್ರೀಧರ ಪತ್ತಾರ ಬರಹ

ನೀರವ ರಾತ್ರಿಗಳಲ್ಲಿ ನನ್ನಲ್ಲಿ ಆಗಾಗ ಒಂಟಿತನ ಹೆಡೆಯಾಡಿಸುವುದೂ ಉಂಟು. ಮಾತುಗಳು ಜಾರಿ ನನ್ನನ್ನು ಮೌನ ಕವಚಿಕೊಂಡಾಗ ಸಹಜವಾಗಿಯೇ ಮುಗಿಲು ದಿಟ್ಟಿಸುತ್ತೇನೆ. ಅಂತೆಯೇ ಈಗೀಗ ಚಂದ್ರನನ್ನು ದಿಟ್ಟಿಸುತ್ತಾ ಚುಕ್ಕಿಗಳೆಣಿಸುವ ಅಭ್ಯಾಸ ಶುರುವಾಗಿದೆ ನನಗೆ. ಆಗ ಚಂದಿರನ ಮೊಗದಲ್ಲಿ ಪ್ರತಿಫಲಿಸುವ ಅವಳಂತದೇ ನಗು ಕಾಣುತ್ತದೆ. ನಗೆಯುಕ್ಕಿಸುತ್ತಿರುವುದು ಚಂದ್ರನೋ ಇಲ್ಲ ಅವಳೋ… ಹೀಗೂ ಒಮ್ಮೊಮ್ಮೆ ಗೊಂದಲವಾಗುವುದು.
ಶ್ರೀಧರ ಪತ್ತಾರ ಬರಹ ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ