Advertisement

Category: ಸಂಪಿಗೆ ಸ್ಪೆಷಲ್

ಜಾವಳಿ ನಾಟ್ಯಬಂಧದ ಅನಾವರಣ…

‘ಜಾವಳಿಯ ಪರಿಕಲ್ಪನೆಯು ಅಭಿನಯ ಪ್ರಧಾನವಾಗಿರುವುದಕ್ಕೆ ಇದೊಂದು ನಾಟ್ಯ ಬಂಧ. ಜಾವಳಿಯ ವಸ್ತು “ಶೃಂಗಾರ” ಮಧುರಭಾವ. ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಜಾವಳಿಗಳು ರಚಿತವಾಗಿವೆ. ಅವುಗಳ ವೈವಿಧ್ಯತೆಯೂ ರಮ್ಯಮನೋಹರವಾಗಿವೆ. ನೃತ್ಯಕ್ಷೇತ್ರದಲ್ಲಿ ಶೃಂಗಾರವೆಂದರೆ ಪರಿಪೂರ್ಣ ಅರ್ಪಣೆಯಲ್ಲದೆ ಮತ್ತೇನೂ ಅಲ್ಲ. ಅಷ್ಟೇ ಅಲ್ಲ. ನಾಯಕ-ನಾಯಕೀ ಭಾವವೇ ಜಾವಳಿಯ ಕೇಂದ್ರ ಬಿಂದು…’

Read More

ಅಪ್ಪನೆಂಬ ಆಲದ ಮರದ ನೆರಳಿನಲ್ಲಿ ಆಶ್ರಯಿತ ಹಕ್ಕಿಗಳು….

“ಅಪ್ಪಾಜಿ ತನಗಿಂತ ಹತ್ತು ವರ್ಷ ಚಿಕ್ಕವರಿದ್ದ ಮಕ್ಕಳಂತಿದ್ದ ಚಿಕ್ಕಪ್ಪಂದಿರು ಹೊತ್ತಿನ ಊಟಕ್ಕಾಗಿ ಇತರರ ಹೊಲಗಳಲ್ಲಿ ಕೆಲಸ ಮಾಡಿ ಹೆಬ್ಬೆರಳು ಕಿತ್ತು ರಕ್ತ ಸೋರಿಕೊಳ್ಳುವುದನ್ನು ನೋಡಿ ಮಧ್ಯ ರಾತ್ರಿ ಎದ್ದು ತನ್ನ ಜವಾಬ್ದಾರಿ ನೆನೆಯುತ್ತಿದ್ದನಾ. ಮೊದಲ ಚಿಕ್ಕಪ್ಪ ಬೇಗ ಮದುವೆಯಾಗಿ ಮಕ್ಕಳಿಗೆ ಊಟಕ್ಕೆ ನೀಡಲಾರದೇ ಹೆಣಗುತ್ತಿದ್ದುದು ಬಾದಿಸಿತ್ತಾ. ನಮ್ಮಜ್ಜಿ ಅಪ್ಪನ ತಮ್ಮಂದಿರಿಗೆ ಬಡಿಸಲು ಇಲ್ಲದಾಗ ಒದ್ದಾಡಿದ್ದು ಅಪ್ಪನ ಕಣ್ರೆಪ್ಪೆ ನೋಯಿಸಿತ್ತಾ. ಅಪ್ಪನ ಅಕ್ಕ ತಂಗಿಯರ ಬಗ್ಗೆ ಯೋಚಿಸಿ ಅಜ್ಜಿ ದಂಗಾಗಿದ್ದು ಅಪ್ಪನ ಕರಳು ಕರೆದಿತ್ತಾ.”
ಮಂಜುಳ ಡಿ ಬರೆದ ಲಹರಿ ನಿಮ್ಮ ಓದಿಗೆ

Read More

ಹಳ್ಳಿ ಮೇಷ್ಟರ ಕಾವ್ಯದ ಸೋಜಿಗ: ಸುಚೊ ಕುರಿತು ನಾದಾ ಬರಹ

“ಒಂದು ಎಳವೆಯಿಂದಲೆ ಅವರು ನಡೆಸಿಕೊಂಡು ಬಂದ ಓದು. ಮಾಸ್ತಿ, ಅಡಿಗ, ಹಾಮಾ ನಾಯಕರಂಥವರ ಮುಂದೆ ನಿಂತು ಮಾತನಾಡಬೇಕಿದ್ದರೆ ಅವರನ್ನು ಚೆನ್ನಾಗಿಯೇ ಓದಿರಬೇಕು. ಓದಿರಲೇಬೇಕು. ಚೊಕ್ಕಾಡಿಯವರು ತಮ್ಮ ತಂದೆಯವರಿಂದ ಬಂದ ‘ಮನೆಮನೆಗೆ ಪುಸ್ತಕ ಮಾರಾಟ’ದ ಉಪ ಉದ್ಯೋಗವನ್ನು ನಿಭಾಯಿಸುತ್ತಿದ್ದುದರಿಂದ ಮಾರಾಟಕ್ಕೆಂದು ತರಿಸುತ್ತಿದ್ದ ಪುಸ್ತಕಗಳನ್ನು ಮೊದಲು ತಾವು ಓದಿ ಬಳಿಕ ಮಿಕ್ಕವರಿಗೆ ಓದಿಸುತ್ತಿದ್ದರು ಎಂದರೆ ಅಚ್ಚರಿ ಪಡಬೇಕಿಲ್ಲ. ಹಳ್ಳಿಯಲ್ಲಿ ಕುಳಿತು ಅವರು…”

Read More

ಸ್ವಾಭಿಮಾನಕ್ಕೆ ಅಂತಸ್ತಿನ ಗಡಿರೇಖೆಗಳುಂಟೆ!

“ಆಕೆಯದ್ದು ವಿಚಿತ್ರ ಸ್ವಭಾವ. ಅಮ್ಮ ಹೇಳಿರುತ್ತಿದ್ದ ಸಮಯಕ್ಕೆ ಯಾವತ್ತೂ ಬಂದಿದ್ದು ನನಗೆ ನೆನಪಿಲ್ಲ. ತನಗೆ ಬಿಡುವಾದಾಗಲೇ ಆಕೆ ಕೆಲಸಕ್ಕೆ ಬರೋದು. ಹಾಗಂತ ಕಡಿಮೆ ದುಡ್ಡಿಗೆ, ಚೌಕಾಸಿಗೆ ಬರುವ ಹೆಂಗಸೂ ಆಕೆಯಲ್ಲ. ಹಾಗೇನಾದ್ರೂ ಕೇಳಿದ್ರೆ ‘ಆಯ್ತು, ಎಲ್ಡು ಬಟ್ಟೆ ಕಮ್ಮಿ ಒಕ್ಕೊಡ್ತೀನಿ.. ಸುಮ್ಮನಿರ್ತಾರಾ…ʼ ಅಂತ ಸೀದಾ ಕೇಳಿಬಿಡುವವಳು. ಹಾಗಾಗಿ ಅವಳ ಈ ಸ್ವಭಾವ ಸಹಿಸಿಕೊಳ್ಳುವವರು ಅಥವಾ ಅನಿವಾರ್ಯವಿದ್ದವರು ಮಾತ್ರವೇ ಅವಳನ್ನು ಕೆಲಸಕ್ಕೆ ಕರೆಯುತ್ತಿದ್ದರು. …”

Read More

ಅನುಭಾವ ಅಂಬುಧಿಯಲ್ಲಿ ಮಿಂದವಳು…: ಅಕ್ಕಮಹಾದೇವಿ ಜಯಂತಿ ಸಂದರ್ಭದಲ್ಲಿ ಪ್ರಜ್ಞಾ ಮತ್ತಿಹಳ್ಳಿ ಬರಹ

“ನಾವೆಲ್ಲರೂ ಲೌಕಿಕದ ಸಕಲ ಭೋಗ ಸಂಗತಿಗಳನ್ನೂ ಇನ್ನಿಲ್ಲದಂತೆ ಹಪಹಪಿಸಿ ಕೊಂಡು ಸುಖಿಸುತ್ತಿದ್ದೇವೆ. ಪ್ರತಿಯೊಂದರಲ್ಲಿಯೂ ಐಷಾರಾಮಿ ವಸ್ತುಗಳನ್ನು ಅಪೇಕ್ಷಿಸುತ್ತೇವೆ. ಈ ಭೋಗ ಸಂಸ್ಕೃತಿಯಿಂದಾಗಿ ಪ್ರಕೃತಿಯಲ್ಲಿ ಲೋಹ-ಅದಿರು-ಗಿಡ-ಮರ-ನದಿ-ಸಮುದ್ರ ಎಲ್ಲವೂ ಅತಿಯಾಗಿ ಬಳಸಲ್ಪಟ್ಟು ಶೋಷಣೆಗೆ ಗುರಿಯಾಗಿವೆ. ಸರಳ ಬದುಕಿಗೆ ಮೊರೆ ಹೋದವರೂ ಕೂಡ ಹೇಳಿದಷ್ಟು ಸುಲಭವಾಗಿ ತಮ್ಮ ಸನ್ಯಾಸವನ್ನು ಆಚರಣೆಗೆ ತರಲಾರರು. ಅಕ್ಕ ಸನ್ಯಾಸವೆಂದರೆ ಹೇಗಿರಬೇಕೆಂದು ತುಂಬಾ ಸರಳವಾದ ಶಬ್ದಗಳಲ್ಲಿ ವಿವರಿಸುತ್ತಾಳೆ.”
ಅಕ್ಕಮಹಾದೇವಿ ಜಯಂತಿಯ ಸಂದರ್ಭದಲ್ಲಿ ಪ್ರಜ್ಞಾ ಮತ್ತಿಹಳ್ಳಿ ಬರಹ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ