Advertisement

Category: ಸರಣಿ

ʻಲೋಕ ಸಿನಿಮಾ ಟಾಕೀಸ್‌ʼನಲ್ಲಿ ಫ್ರಾನ್ಸ್‌ ನ ʻಕ್ಯಾಶ್ʼ ಸಿನಿಮಾ

ಈ ಚಿತ್ರದ ಕಥಾಹಂದರ ನವೀನ ಮತ್ತು ಸಂಕೀರ್ಣ ಸ್ವರೂಪದ್ದು. ಪ್ಯಾರಿಸ್‌ನಲ್ಲಿ ಟಿವಿ ಕಂಪೆನಿಯಲ್ಲಿ ಸಾಹಿತ್ಯ ವಲಯದಲ್ಲಿನ ಪುಸ್ತಕಗಳನ್ನು ಕುರಿತಂತೆ ಕೆಲಸ ಮಾಡುವ ಜಾರ್ಜ್, ಪ್ರಕಾಶನ ಸಂಸ್ಥೆಯಲ್ಲಿ ಕೆಲಸ ಮಾಡುವ ಹೆಂಡತಿ ಆನ್‌ ಮತ್ತು ಮಗ ಫಿರಟ್ ಜತೆಗೂಡಿ ಮಧ್ಯಮ ದರ್ಜೆಯ ಮೇಲ್ವರ್ಗದ ಜೀವನ ನಡೆಸುತ್ತಿರುತ್ತಾನೆ. ಅವನಿಗೆ ಯಾರೋ ಗುಪ್ತವಾಗಿರಿಸಿದ ಕ್ಯಾಮೆರಾದಿಂದ ಅವನ ಮನೆ ಇತ್ಯಾದಿಯ ವಿಡಿಯೋ ಟೇಪುಗಳನ್ನು ಕಳಿಸುತ್ತಿರುತ್ತಾರೆ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಫ್ರಾನ್ಸ್‌ ನ ʻಕ್ಯಾಶ್ʼ(ಹಿಡನ್‌) ಸಿನಿಮಾದ ವಿಶ್ಲೇಷಣೆ

Read More

ಚಂದ್ರನ ಬೆಳಕು ಜೀರುಂಡೆಯ ಜೋಗುಳದಲ್ಲೊಂದು ನಿದ್ದೆ

ಎರಡ್ಮೂರು ಬಾರಿ ಆ ಶಬ್ದ ಆವರ್ತನೆಯಾಯಿತು. ಹಿಂದಿರುಗಿ ನೋಡಿದ. ಮತ್ತೆ “ಶ್ಶ್-ಶ್ಶ್” ಶಬ್ದ ಮತ್ತೆ ಕೇಳುತ್ತಿದೆ. ಇದಿನಬ್ಬನ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಹ ಅನುಭವ. ಇನ್ನೇನು ಮಾಡುವುದೆಂದು ತೋಚದೆ ಕತ್ತಲಲ್ಲಿ ಬೆಕ್ಕಿನಂತೆ ಮೆಲ್ಲಗೆ ಮುಂದಡಿಟ್ಟ. ಆಗ ಕಂಡ ದೃಶ್ಯ ಎಂಥವನ ಎದೆಯಲ್ಲೂ ನಡುಕ ಹುಟ್ಟಿಸುವಷ್ಟು ಭಯಾನಕವಾಗಿತ್ತು. ಹೆಬ್ಬಾವಿನ ಗಾತ್ರದ ಕೊಳಕು ಮಂಡಲ ಹಾವೊಂದು ಲಾಟೀನು ಬೆಳಕಿಗೆ ಬುಸುಗುಡುತ್ತಿದೆ. -ಮುನವ್ವರ್ ಜೋಗಿಬೆಟ್ಟು ಬರೆಯುವ ಡರ್ಬನ್ ಇದಿನಬ್ಬ ಕಾದಂಬರಿಯ ಆರನೇ ಕಂತು.

Read More

ಅಪರಾಧ ಮತ್ತು ಶಿಕ್ಷೆ: ಮಾಡಿದ ಪಾಪಕ್ಕೆ….

ರಾಸ್ಕೋಲ್ನಿಕೋವ್ ಗುರಿ ಇಲ್ಲದೆ ಅಲೆದ. ಸೂರ್ಯ ಮುಳುಗುತ್ತಿದ್ದ. ಎಂಥದೋ ದುಃಖ ಅವನನ್ನು ಇತ್ತೀಚೆಗೆ ಕಾಡುತ್ತಿತ್ತು ಅದೊಂದು ಥರ ದುಶ್ಶಕುನದಂಥ ದುಃಖ. ಒಂದು ಚದರಗಜ ಜಾಗದಲ್ಲಿ ನಿಂತು ಕೊನೆಯಿರದ ದುಃಖವನ್ನು ಅನಂತವಾಗಿ ಅನುಭವಿಸುತ್ತಲೇ ಇರಬೇಕಾದೀತು ಅನ್ನುವಂಥ ಕೆಟ್ಟಶಕುನ ನುಡಿಯುತ್ತಿದೆ ಅನಿಸುವಂಥ ದುಃಖ. ಸಂಜೆಯ ಹೊತ್ತಿನಲ್ಲಿ ಇಂಥ ಭಾವ ಸಾಮಾನ್ಯವಾಗಿ ಅವನ ಮನಸ್ಸನ್ನು ಕವಿದುಕೊಳ್ಳುತ್ತಿತ್ತು.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

Read More

ಕೋಮಲ ಗಾಂಧಾರ ಮತ್ತು ಪರ್ದಾ

ಕರೀಂ ಖಾನ್ ಮತ್ತು ಮಕ್ಕಳು ಬಳಸುವ ಸಿತಾರ್‌ನಲ್ಲಿ ೧೯ ಪರ್ದಾಗಳೇ ಇವೆ. ಯಾಕೆ ಇವರು ಇನ್ನೂ ಆಧುನಿಕತೆಯನ್ನು ಒಪ್ಪಿಕೊಂಡಿಲ್ಲ ಎಂದು ಎಲ್ಲರೂ ಕೇಳತೊಡಗಿದ್ದರು. ಕರೀಂ ಖಾನರಿಗೆ ಈ ಪ್ರಶ್ನೆ ಇಷ್ಟವಾಗುತ್ತಿರಲಿಲ್ಲ. ಆದರೆ ರಫೀಕ್ ಮತ್ತು ಶಫೀಕ್ ಈ ಕುರಿತು ಬಹಳಷ್ಟು ಚರ್ಚೆ, ಅಧ್ಯಯನ, ಪ್ರಯೋಗಗಳನ್ನು ಮಾಡಿದರು. ಹೊಸವಿಧಾನವನ್ನು ಒಪ್ಪಿಕೊಳ್ಳುವುದು ಸರಳವಾದ ವಿಚಾರ ಆಗಿರಲಿಲ್ಲ.
ಶೇಣಿ ಮುರಳಿ ಬರೆದ ರಫೀಕ್ ಖಾನ್ ಜೀವನ ಚರಿತ್ರೆ ‘ಖಾನ್ ಕಾಂಪೌಂಡ್’ ಕೃತಿಯ ಒಂದು ಅಧ್ಯಾಯ

Read More

ಮದುವೆ, ಮಜಾ ಹಾಗೂ ಮೂವತ್ತು ದಾಟಿದ ಜವ್ವನಿಗರು

ಸಂತಿಯೇನೂ ತಾನು ಮದುವೆಯಾಗಲ್ಲ ಎಂದವನಲ್ಲ, ಆದರೆ ಕೇರಿಯೊಳಗೆ ಇನ್ನೇನು ನಾಳೆಯೋ ನಾಡಿದ್ದೋ ಬಿದ್ದು ಹೋಗುವುದೆಂಬಷ್ಟು ಹಳೆಯ ಮನೆಯೊಂದನ್ನು ಬಿಟ್ಟು ಯಾವುದೇ ಆಸ್ತಿಪಾಸ್ತಿ ಇಲ್ಲದ, ನೋಡಲು ತೊಳೆದ ಕೆಂಡದಂತೆ ಮುಟ್ಟಿದರೆ ಕೈಗೆ ಹತ್ತುವಷ್ಟು ಕಪ್ಪುಬಣ್ಣಕ್ಕಿದ್ದ. ಸಂತಿಗೆ ಸರಿಯಾದ ಕೆಲಸವೂ ಇರಲಿಲ್ಲವಲ್ಲಾ.. ಹೀಗೆ ಎಲ್ಲದರಲ್ಲೂ ನಪಾಸಾದ ಸಂತಿಯ ಕರ್ಮಕ್ಕೆ ಕಲಶವಿಟ್ಟಂತೆ ನಕ್ಕರೆ ಮುಂದಿದ್ದವರಿಗೆ ಚುಚ್ಚುವಷ್ಟು ಉಬ್ಬುಹಲ್ಲು ಬೇರೆ!
ಮಧುರಾಣಿ ಬರೆಯುವ ‘ಮಠದ ಕೇರಿ’ ಕಥಾನಕ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ