Advertisement

Category: ಸರಣಿ

ಎನ್.ಸಿ.ಸಿ ಇಷ್ಟ; ಭಜನೆ ಮಾಡಲೇಕೆ ಕಷ್ಟ?: ಬಸವನಗೌಡ ಹೆಬ್ಬಳಗೆರೆ ಸರಣಿ

ಭಜನೆ ಬಗ್ಗೆ ಯಾಕಿಷ್ಟು ಬೇಸರವಾಗಿದ್ವಿ ಅಂದ್ರೆ ಅರ್ಧ ಘಂಟೆಗೆ ಮುಗಿದಿದ್ರೆ ಏನೂ ಅನಿಸ್ತಾ ಇರಲಿಲ್ಲ. ಕೆಲವೊಮ್ಮೆ ಮುಕ್ಕಾಲು ಘಂಟೆಯಾದ್ರೂ ಮುಗೀತ ಇರಲಿಲ್ಲ. ಆಗ ‘ಓದೋಕೆ ಸಮಯ ಸಾಲೋಲ್ಲ’ ಎಂಬ ಭಾವನೆ ನಮ್ಮಲ್ಲಿ ಮೂಡಿತ್ತು. “ಹೊರಗಿನಿಂದ ಶಾಲೆಗೆ ಬರುವವರು ಈ ಸಮಯದಲ್ಲಿ ಓದ್ತಾ ಇರ್ತಾರೆ, ನಾವು ಮಾತ್ರ ಭಜನೆ ಮಾಡ್ತೀವಿ” ಎಂದು ನಮ್ಮ ಸೀನಿಯರ್ ಹುಡುಗರು ಹೇಳಿದ್ದರಿಂದ ಭಜನೆ ಅಂದ್ರೆ ಮೂಗು ಮುರಿಯಂತಾಗುತ್ತಿತ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ಸರಣಿ

Read More

ಅರಾಸೇ ಜೊತೆ ಕಾಫೀ ಕಥೆ: ಎಚ್. ಗೋಪಾಲಕೃಷ್ಣ ಸರಣಿ

ತುರ್ತು ಪರಿಸ್ಥಿತಿ ಸಮಯದಲ್ಲಿ ಇವರನ್ನೂ ಜೈಲಿಗೆ ಹಾಕಿದ್ದರು. ಅಲ್ಲಿ ಇವರ ಜತೆ ಸುಮಾರು ರಾಜಕೀಯ ನಾಯಕರು ಸಹ ಇದ್ದರು. ಸುಮಾರು ಇವರ ಜತೆಯ ಜೈಲುವಾಸಿಗಳು ಮುಂದೆ ಕೇಂದ್ರ ಸರ್ಕಾರದಲ್ಲಿ ಹಾಗೂ ರಾಜ್ಯ ಸರ್ಕಾರದಲ್ಲಿ ಅತ್ಯಂತ ಪ್ರಭಾವಿ ಹುದ್ದೆ ಹೊಂದಿದ್ದರು. ಇವರು ಯೋಗ, ಕನ್ನಡ ಪಾಠ, ಮನೆ ವೈದ್ಯ ಮೊದಲಾದ ಶಿಕ್ಷಣ ಅಲ್ಲಿ ಕೊಡುತ್ತಿದ್ದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂವತ್ತೇಳನೆಯ ಕಂತು ನಿಮ್ಮ ಓದಿಗೆ

Read More

ಶಿಕ್ಷೆ ರಹಿತ ಶಿಕ್ಷಣ: ಅನುಸೂಯ ಯತೀಶ್ ಸರಣಿ

ನಮ್ಮ ಶಿಕ್ಷಕರು ಕೊಡುತ್ತಿದ್ದ ಆ ಶಿಕ್ಷೆ ನೆನಪಿಸಿಕೊಂಡರೆ ಈಗಲೂ ಭಯವಾಗುತ್ತದೆ. ಈ ಕಾರಣದಿಂದಲೇ ನಾನು ನನ್ನ ವಿದ್ಯಾರ್ಥಿಗಳನ್ನು ದಂಡಿಸಲಾರೆ. ಹಾಗಾಗಿ ತಮ್ಮ ಮನೋಗತವನ್ನು ವಿದ್ಯಾರ್ಥಿಗಳು ನಿರ್ಭಯದಿಂದ ನನ್ನೊಂದಿಗೆ ಹಂಚಿಕೊಳ್ಳುತ್ತಾರೆ. ಪ್ರಯೋಗ, ಯೋಜನೆ, ಚಟುವಟಿಕೆ, ಕಲಿಕಾ ಬೋಧನಾ ಪ್ರಕ್ರಿಯೆ, ಕ್ರೀಡೆ ಎಲ್ಲದರಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಇಂತಹ ಅವಕಾಶ ದೊರೆಯುವುದು ಮುಕ್ತವಾದ, ಭಯವಿಲ್ಲದ ವಾತಾವರಣ ಇದ್ದಾಗ ಮಾತ್ರ.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ

Read More

ಹೂವೊಂದರ ಹಾಡುಗಳು: ಎಸ್. ಜಯಶ್ರೀನಿವಾಸ ರಾವ್ ಸರಣಿ

ಅನಾರೋಗ್ಯ ವಿಧಿಸಿದ ಮಿತಿಗಳನ್ನು ಮೀರಿ ನಿಂತ ಅವರ ಕಾವ್ಯ-ಧ್ವನಿ ಆಧುನಿಕ ಪ್ರಪಂಚದ ಹಿಂಸಾಚಾರ ಮತ್ತು ಕತ್ತಲೆಯ ಬಗ್ಗೆ ಭಾವಗೀತಾತ್ಮಕ ಹೇಳಿಕೆಗಳನ್ನು ನೀಡುತ್ತದೆ. ಇವುಗಳಿಂದ ಹುಟ್ಟಿವೆ ಅವರ ಛಿದ್ರಿತ ವಾಕ್‌ಶೈಲಿಯ ಅತಿವಾಸ್ತವಿಕ ಸೌಂದರ್ಯದಿಂದ ತಲ್ಲಣಗೊಳಿಸುವ ಪ್ರತಿಮಾಕಾರ ಕವನಗಳು. ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ಅಮೆರಿಕದ ಥೇಟರಿನಲ್ಲಿ ಬ್ಯಾಟರಿ ಬಿಟ್ಟ ಕತೆ!: ಗುರುಪ್ರಸಾದ ಕುರ್ತಕೋಟಿ ಸರಣಿ

ಒಂದು ಎಡವಟ್ಟಾಗಿತ್ತು! ನಾನು ಹಳೆಯ, ಕಮಲ್ ಹಾಸನ್ ನಟಿಸಿದ್ದ ಪುಷ್ಪಕ ವಿಮಾನದಂತೆಯೇ ಇದು ಕೂಡ ತಮಾಷೆಯಾಗಿಯೇ ಇರಬಹುದು ಅಂದುಕೊಂಡಿದ್ದೆ. ಆದರೆ ಇದು ಅಪ್ಪ ಮಗಳ ನಡುವೆ ಪ್ರೀತಿ ವಾತ್ಸಲ್ಯದ ಬಗ್ಗೆ ಕೇಂದ್ರಿತವಾಗಿದ್ದು, ಕತೆಯಲ್ಲಿ ಬಹಳಷ್ಟು ಭಾವನಾತ್ಮಕ ಘಟನೆಗಳು ಇದ್ದವು. ಸ್ವಲ್ಪ ಸಮಯದಲ್ಲೇ ಅತ್ತಿತ್ತ ಗಮನಿಸಲು ಶುರು ಮಾಡಿದರೆ ಎಷ್ಟೋ ಹೆಣ್ಣು ಮಕ್ಕಳು ಕಣ್ಣೀರು ಹಾಕಲು ಶುರು ಮಾಡಿದ್ದರು. ಇತ್ತೀಚೆಗಷ್ಟೇ ಅಪ್ಪನನ್ನು ಕಳೆದುಕೊಂಡಿದ್ದ ನನ್ನ ಹೆಂಡತಿ ಕೂಡ ಗೊಳೋ ಅಂತ ಅಳಲು ಶುರು ಮಾಡಿದ್ದಳು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ