Advertisement

Category: ಸರಣಿ

ಇಂಗ್ಲಿಷ್ ಪಾಸು ಮಾಡಿಸುವ ‘ದಾತ’

ಹಾಸ್ಟೆಲ್‌ನಲ್ಲಿ ಓದುವುದಕ್ಕೆ ಬಿಎಸ್ಸಿ ಹುಡುಗರಿಗಿಂತ ಹೆಚ್ಚಿನ ಸಮಯ ವ್ಯಯಿಸುತ್ತಿದ್ದ ನಾವು, ರಾತ್ರಿ ಹಗಲೆನ್ನದೆ ಪುಸ್ತಕ ಹಿಡಿದೇ ಇರುತ್ತಿದ್ದೆವು. ಸದಾ ಕನ್ನಡಕ ಹಾಕುತ್ತ ಎಲ್ಲರಿಂದ ‘ಇಂಟಲಿಜೆಂಟ್’ ಎಂದು ಕರೆಸಿಕೊಳ್ಳುತ್ತಿದ್ದ ರಂಗನಾಥ್ ನಮ್ಮ ಓದನ್ನ ಕಂಡು ‘ನೀವು ಸೈನ್ಸ್‌ ತಗಬೇಕಾಗಿತ್ತು ಕಂಡ್ರಲ’ ಎನ್ನುತ್ತಿದ್ದ. ಓದಿ ಬಸವಳಿಯುತ್ತಿದ್ದ ನಮಗೆ ಮಧ್ಯೆ ಕರೆಂಟ್ ಹೋದರೆ ತಂಪೆನಿಸುತ್ತಿತ್ತು. ಆದರೆ ಅದನ್ನ ತೋರಗೊಡದೆ ಕರೆಂಟಿಗೆ ಶಪಿಸುವರಂತೆ ನಾಟಕವಾಡುತ್ತಿದ್ದೆವು. ಹೀಗೆ ಒಮ್ಮೆ ನಮಗೂ ಪ್ರಭನಿಗೂ ಚಾಲೆಂಜ್ ಬಿತ್ತು.
ಗುರುಪ್ರಸಾದ್ ಕಂಟಲಗೆರೆ ಬರೆಯುವ ಟ್ರಂಕು ತಟ್ಟೆ ಸರಣಿಯ ಬರಹ ಇಲ್ಲಿದೆ.

Read More

ಹಿಮ್ಮೇಳದಲ್ಲಿ ಮದ್ದಳೆ, ಖಂಜೀರ, ಪುಂಗಿ ಇತ್ಯಾದಿ

ಖಂಜೀರ ಪೂರ್ಣಪ್ರಮಾಣದಲ್ಲಿ  ಯಕ್ಷಗಾನ ಹಿಮ್ಮೇಳದ ಭಾಗವಾಗಿತ್ತು. ಭಾಗವತರ ಹಿಂದೆ ಒತ್ತು ಮದ್ದಳೆಗಾರರು ಅಥವಾ ಅಲ್ಪ ಸ್ವಲ್ಪ ತಾಳ ಜ್ಞಾನ ಇದ್ದವರು, ಖಂಜೀರವನ್ನು ನಿಂತು ನುಡಿಸುತ್ತಿದ್ದರು. ಹಿರಿಯ ಬಲಿಪ ನಾರಾಯಣ ಭಾಗವತರು ಮೇಳ ತಿರುಗಾಟದಲ್ಲಿ ಖಂಜೀರದ ನುಡಿಸುವಿಕೆಯೊಂದಿಗೆ ಭಾಗವತಿಕೆಯನ್ನು ಮಾಡಿದ್ದರು. ಖಂಜೀರದ ಬಳಕೆ ಕಾಲಕ್ರಮೇಣ ನಿಂತಿತು. ಹೊಸ ವಾದ್ಯಗಳು ಹಿಮ್ಮೇಳವನ್ನು ಸೇರಿಕೊಂಡ ಬಗ್ಗೆ ‘ಬಲಿಪ ಮಾರ್ಗ’ ಸರಣಿಯಲ್ಲಿ ಕೃಷ್ಣ ಪ್ರಕಾಶ್ ಉಳಿತ್ತಾಯ ಬರೆದಿದ್ದಾರೆ.

Read More

ಗಣ್ಯರ ಒಡನಾಟದಲ್ಲಿ ಕಂಡ ಸರಳತೆಯ ಮುಖಗಳು

ಯಾವುದಾದರೂ ಗಣ್ಯ ವ್ಯಕ್ತಿಗಳನ್ನು ಬರುವಿಕೆಯು ಮಧ್ಯಾಹ್ನ ಹನ್ನೊಂದು ಗಂಟೆಗೆ ಎಂದು ಇದ್ದರೂ ನಾವು ಭದ್ರತೆಯ ದೃಷ್ಟಿಯಿಂದ ಬೆಳಿಗ್ಗೆ ಮುಂಜಾನೆಯೇ ಅಲ್ಲಿರಬೇಕಾಗುತ್ತಿತ್ತು. ಅಲ್ಲಿ ಎಲ್ಲ ತಪಾಸಣೆಗಳನ್ನು ಮಾಡಿದ ನಂತರ ಆಸ್ಪತ್ರೆಯವರಾದ ನಾವು ಮೊದಲಿನ ಸುತ್ತಿನಲ್ಲಿ ಇರುತ್ತಿದ್ದೆವು. ಗಣ್ಯವ್ಯಕ್ತಿಗಳಿಗಾಗಿ ತಯಾರು ಮಾಡುತ್ತಿರುವ ಎಲ್ಲಾ ತಿನಿಸುಗಳ ರುಚಿಯನ್ನು ಕೂಡ ನೋಡಬೇಕೆಂಬ ಸೂಚನೆ ನೀಡಲಾಯಿತು. ಡಾ. ಕೆ.ಬಿ. ಸೂರ್ಯಕುಮಾರ್ ಬರೆಯುವ ನೆನಪುಗಳ ಮೆರವಣಿಗೆ ಸರಣಿ.

Read More

`ಗಂಟಿಚೋರರು’ ಮೂಲತಃ ಸೈನಿಕರಾಗಿದ್ದರೆ?

ಠಕ್ಕರ ಹಿನ್ನೆಲೆಯಲ್ಲಿ ಗಂಟಿಚೋರರನ್ನು ನೋಡಿದರೆ ಮತ್ತೊಂದು ಆಯಾಮ ತೆರೆದುಕೊಳ್ಳುತ್ತದೆ. ಠಕ್ಕರು ದೊಡ್ಡಮಟ್ಟದ ಲೂಟಿ, ಕೊಲೆ ಸುಲಿಗೆ ಮುಂತಾದವುಗಳ ಮೂಲಕ ಜನರನ್ನು ಭಯಭೀತರನ್ನಾಗಿಸುತ್ತಿದ್ದರು. ಅವರು ಹೆಚ್ಚಾಗಿ ವ್ಯಾಪಾರಿಗಳನ್ನು ಲೂಟಿ ಮಾಡುತ್ತಿದ್ದರು. ಹಾಗಾಗಿ ಇವರು ಒಂದು ರೀತಿಯಲ್ಲಿ ಅಲೆಮಾರಿ ಕಳ್ಳರಾಗಿದ್ದರು. ಆದರೆ ಗಂಟಿಚೋರರ ಹೆಸರಲ್ಲೇ ‘ಗಂಟುಕಳ್ಳರು’ ಎಂದಿರುವುದು ಇವರ ಕಳ್ಳತನದ ಸ್ವರೂಪವನ್ನು ಕಾಣಿಸುತ್ತದೆ. ಹೀಗಾಗಿಯೇ ಇವರನ್ನು ಸಂತೆಕಳ್ಳರು ಎಂದೂ ಕರೆಯುತ್ತಿದ್ದರು. 
ಅರುಣ್ ಜೋಳದ ಕೂಡ್ಲಿಗಿ ಬರೆಯುವ ಗಂಟಿಚೋರರ ಕಥನದ ಮೂರನೇಯ ಕಂತು ಇಲ್ಲಿದೆ.

Read More

ಉಪೇಂದ್ರನ ಹಾವಳಿ ಮತ್ತು ರಾಮಾಂಜಿ ಲವ್

ಸರ್ಕಾರದಿಂದ ನಡೆಯುವ ಯಾವುದೇ ಪರೀಕ್ಷೆಗಳನ್ನು ನಡೆಸಲು ನಮ್ಮ ಜೂನಿಯರ್ ಕಾಲೇಜಿನ ಕೊಠಡಿಗಳನ್ನ ಕಡ್ಡಾಯವಾಗಿ ತೆಗೆದುಕೊಳ್ಳುತ್ತಿದ್ದುದರಿಂದ ಆಗೆಲ್ಲ ನಮಗೆ ದೀರ್ಘ ರಜೆ ಸಿಗುತ್ತಿತ್ತು. ಚೆನ್ನಾಗಿ ಓದಬೇಕೆಂಬ ಕನಸು ಹೊತ್ತು ಬಂದಿದ್ದ ನಮಗೆ ಇಲ್ಲಿನ ವಿಪರೀತ ರಜೆಗಳಿಂದಾಗಿ ನಿರಾಸೆ ಉಂಟಾಗಿತ್ತು. ನಮಗೆ ಇತ್ತ ಕೆಲ ತಿಂಗಳು ಕಳೆದರೂ ಕಾಲೇಜು ಪ್ರಾರಂಭ ಆಗದೆ ಊರಲ್ಲೆ ಉಳಿದಾಗ, ಪಕ್ಕದ ಮನೆ ಕೇಸುದೊಡಪ್ಪ ‘ಎಲ್ಲೊ ಪೇಲಾಗವೆ ಅದ್ಕೆ ಹೋಗಿಲ್ಲ’ ಎಂದು ಅನುಮಾನ ಪಟ್ಟುಕೊಳ್ಳುತ್ತಿತ್ತು. ಗುರುಪ್ರಸಾದ್‌ ಕಂಟಲಗೆರೆ ಬರಹ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ