Advertisement

Category: ಅಂಕಣ

ಕಥೆಗಾರ ಕುವೆಂಪು: ಆಶಾಜಗದೀಶ್ ಅಂಕಣ

“ಇದೇ ಹೊತ್ತಿನಲ್ಲಿ ತನಗೆ ಅನ್ನಕೊಟ್ಟು ಕಾಪಾಡಿದ ಧಣಿಗಳ ಕುಟುಂಬವನ್ನು ಉಳಿಸಬೇಕೆಂದು ನಿಶ್ಚಯ ಮಾಡಿಕೊಂಡ ಲಿಂಗ, ತನ್ನ ತಬ್ಬಲಿ ಮಗನನ್ನು ನೆನೆಸಿಕೊಳ್ಳುತ್ತಲೇ ಯಾರಿಗೂ ತಿಳಿಯದಂತೆ ಹೊಳೆಗೆ ಹಾರಿಕೊಂಡುಬಿಡುತ್ತಾನೆ. ಭಯದಲ್ಲಿದ್ದ ಸುಬ್ಬಣ್ಣನ ಮನೆಯವರಿಗೆ ಅದು ತಿಳಿಯುವುದಿಲ್ಲ. ದೋಣಿ ಪಕ್ಕದೂರನ್ನು ತಲುಪುತ್ತದೆ. ಆಗ ಲಿಂಗ ಇಲ್ಲದಿರುವುದು ಗೊತ್ತಾಗಿ ಎಲ್ಲರೂ ಅವನನ್ನು ಹುಡುಕುತ್ತಾರೆ ಮತ್ತು ಅವನಿಗಾಗಿ ಕಣ್ಣೀರಿಡುತ್ತಾರೆ. ಕೊನೆಗೆ ಅವನ ಆಸೆ ಬಿಡುತ್ತಾರೆ. ಆದರೆ ಮರುದಿನ ಆಶ್ಚರ್ಯವೆಂಬಂತೆ.. “

Read More

ಕೆಂಪುಬೀದಿಯ ಹೆಣ್ಣುಮಕ್ಕಳ ಕಾಳಜಿ : ಶ್ರೀಹರ್ಷ ಸಾಲಿಮಠ ಅಂಕಣ

“ನಮ್ಮ ಗೆಳೆಯರೆಲ್ಲ ಕಾರಿನಲ್ಲಿ ತಾವು ಸಲ್ಪದರಲ್ಲಿ ಮಾಡುವುದರಿಂದ ತಪ್ಪಿಸಿಕೊಂಡ ಅನಾಹುತದ ಬಗ್ಗೆ ಹರಟತೊಡಗಿದ್ದರು. ನನ್ನ ಮನಸ್ಸು ಇನ್ನೂ ಪೋಸ್ಟರ್ ನಲ್ಲೇ ನೆಟ್ಟಿತ್ತು. ಅದು ನನ್ನ ಜೀವನದ ಮೊಟ್ಟಮೊದಲ ಮತ್ತು ಇಲ್ಲಿಯವರೆಗಿನ ಏಕೈಕ ವೇಶ್ಯಾಗೃಹಕ್ಕೆ ಕಾಲಿಟ್ಟ ಅನುಭವ. ಆದರೆ ಈ ಅನುಭವದ ಬಗ್ಗೆ ನನಗೆ ಬೇಸರವಿಲ್ಲ. ಬಹುಷಃ ಹೆಣ್ಣನ್ನು ನೋಡಬೇಕಾದ ಒಂದು ಹೊಸ ದೃಷ್ಟಿಕೋನದ ಬಗ್ಗೆ ಕಂಡುಕೊಂಡಿದ್ದೆ. ಸಂಪ್ರದಾಯಸ್ಥ ಮನೆತನದ ಗಂಡಸುಗಳು ಮಿಸೋಜಿನಿಸ್ಟ್ ಗಳಾಗಿರುವುದು…”

Read More

ಕೋವಿಡ್ ಕಾಲದ ಚಿಕ್ಕಪುಟ್ಟ ಸಮಾಧಾನಗಳು: ವಿನತೆ ಶರ್ಮಾ ಅಂಕಣ

“ಬಳ್ಳಿ ಡಿಎನ್ಎ ಸರಪಣಿಯಂತೆ ಬೆಳೆದಂತೆಲ್ಲಾ ಅದರ ಜೊತೆಗೂಡಿ ನನ್ನ ಬಾಲ್ಯದ ನೆನಪುಗಳು ಬಿಚ್ಚಿಕೊಂಡು ನಮ್ಮಜ್ಜಿ, ನಮ್ಮಪ್ಪ ಬೆಳೆಯುತ್ತಿದ್ದ ಅವರೆಕಾಯಿ ಫಸಲು ಮನಸ್ಸಿಗೆ ಬಂದು ಕಣ್ಣಮುಂದೆ ಭದ್ರವಾಗಿ ಕೂತಿತ್ತು. ಅದು ಅವರೆ ಬಳ್ಳಿಯೇ ಹೌದು ಎನ್ನುವುದು ನಿಧಾನವಾಗಿ ಖಾತ್ರಿಯಾದಂತೆಲ್ಲಾ ರೋಮಾಂಚನವಾಗಿ ನಾಲ್ಕಾರು ಜನರ ಬಳಿ ಹೇಳಿಕೊಂಡು, ಗಾರ್ಡನಿಂಗ್ ಗುಂಪಿನಲ್ಲಿ ಫೋಟೋ ಹಾಕಿ…”

Read More

ಬ್ರಿಟನ್ನಿನ ಸಂಕಟದ ಕಾಲದ ಎರಡು ಪತ್ರಗಳು: ಯೋಗೀಂದ್ರ ಮರವಂತೆ ಅಂಕಣ

“ಕಳೆದ ಮೂರ್ನಾಲ್ಕು ವಾರಗಳಿಂದ ಇಲ್ಲಿನ ಎಲ್ಲ ಸುದ್ದಿ ವಾಹಿನಿಗಳ ಮೂಲಕ ಆಡಳಿತದ ಅತ್ಯಂತ ಜವಾಬ್ದಾರಿಯುತ ಕುರ್ಚಿಯಲ್ಲಿ ಕೂರುವವರು ಆರೋಗ್ಯ ಇಲಾಖೆಯ ಹಿರಿಯ ಸಲಹೆಗಾರರು ನಿತ್ಯವೂ ಎಚ್ಚರಿಕೆಯ ಮುಂಜಾಗರೂಕತಾ ಕ್ರಮಗಳ ಬಗೆಗೆ ನೀಡುತ್ತಿದ್ದ ಸಂದೇಶ ಹಾಗು ಹದಗೆಟ್ಟ ಅರ್ಥವ್ಯವಸ್ಥೆಗೆ ಚೇತರಿಕೆ, ನಿರುದ್ಯೋಗ ಪೀಡಿತರಿಗೆ ತಾತ್ಕಾಲಿಕ ಬೆಂಬಲ ಯೋಜನೆಗಳ ಬಗ್ಗೆ ಹಣಕಾಸು ಮಂತ್ರಾಲಯ ತೆಗೆದುಕೊಂಡ ಹೆಜ್ಜೆಗಳೇ…”

Read More

ಮರೆಯಲಾಗದ ಮಠದ ಕೇರಿ ದೀಪಾವಳಿ: ಮಧುರಾಣಿ ಎಚ್ ಎಸ್ ಅಂಕಣ

“ಅಂದು ಮಲಗಿದ ಜಾನಕಮ್ಮನವರು ಮತ್ತೆ ಮೇಲೇಳಲೇ ಇಲ್ಲ. ಒಂದು ವಾರದ ನಂತರ ಇದ್ದ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು. ದಿಕ್ಕು ದೆಸೆಯಿಲ್ಲದ ನರಸಿಂಹರಾಯರು ಅಮ್ಮನನ್ನು ಕಳೆದುಕೊಂಡ ಪುಟ್ಟ ಮಗುವಿನಂತೆ ಗೋಳಾಡಿದರು. ಪಕ್ಕದಲ್ಲೇ ಇದ್ದು ಎಲ್ಲವನ್ನೂ ಗಮನಿಸುತ್ತಿದ್ದ ನಮ್ಮ ಮನೆಯವರಿಗೆ ಅವರ ಒಂಟಿತನ ಕರಳು ಕಿವುಚುತ್ತಿತ್ತು.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ