Advertisement

Category: ದಿನದ ಪುಸ್ತಕ

ಪ್ರೀತಿ ಎಂಬ ಸಿಹಿಗುಳಿಗೆ ಕೊಡುವ ಚೇತನ

ಅವರು ಯಾವತ್ತು ಎಲ್ಲಿಗೇ ಬಂದರೂ ಇದುವರೆಗೆ ಅವರ ಮ್ಲಾನವಾದ ಮುಖವನ್ನು ನಾನು ನೋಡೇ ಇಲ್ಲ. ಯಾವಾಗಲೂ ನಗ್ತಾ ನಗ್ತಾ ಇರ್ತಾರೆ. ಅವರು ಮತ್ತು ಅವರ ಗೆಳತಿ ಸಂಧ್ಯಾ ರಾಣಿ ಯಾವುದೇ ಸಮಾರಂಭಕ್ಕೆ ಬಂದರೂ ಅವರು ಮುಖ ಕಳೆಗುಂದಿದ್ದನ್ನು ನಾನು ನೋಡೇ ಇಲ್ಲ. ಅವರು ಬಂದರೆ ಆ ವಾತಾವರಣವೆಲ್ಲ ಲೈಟ್ ಹೊತ್ತಿಸಿದಂತೆ… ಒಂದು ನೂರು ಕ್ಯಾಂಡಲ್ ಬಲ್ಬ್ ಹೊತ್ತಿಸಿದ ಹಾಗೆ! ಅವರನ್ನು ನೋಡ್ತಿದ್ದರೆ ನಮಗೂ ಆ ಉಲ್ಲಾಸ ವರ್ಗವಾಗಿ ಬಿಡತ್ತೆ. ಅದೇ ರೀತಿಯ ಅನುಭವ ಅವರ ಸಾಸಿವೆ ತಂದವಳು ಪುಸ್ತಕ ಓದುವಾಗಲೂ ಆಗಿತ್ತು.
ಬಿ.ವಿ. ಭಾರತಿ ಅವರ ‘ಎಲ್ಲಿಂದಲೋ ಬಂದವರು’ ಕೃತಿಗೆ ಟಿ.ಎನ್. ಸೀತಾರಾಮ್ ಬರೆದ ಮುನ್ನುಡಿ

Read More

ರೂಪಕವೆಂಬ ಭಾಷಾ ಶರೀರದ ಹಂಗಿಲ್ಲದ ಅಭಿವ್ಯಕ್ತಿ

ಶೋಭಾ ನಾಯಕ ಮೊದಲ ಬಾರಿಗೆ ಅದು ಗಂಡಿನದು ಹೇಗೋ ಹಾಗೆಯೇ ಹೆಣ್ಣಿನದೂ ಹೌದು ಎಂಬುದನ್ನು ಸ್ಥಾಪಿಸಿದ್ದಾರೆ. ಇನ್ನೂ ಒಳಗೆ ಹೋಗಿ ಮಾತನಾಡುವುದಾದರೆ ಅಲ್ಲಿನ ಶಯನದ ಒಡೆತನ ಕೇವಲ ಗಂಡನದು ಎಂಬ ಗಂಡಾಳ್ವಿಕೆಯ ನಡಾವಳಿಯನ್ನು ಮುರಿಯಲೆತ್ನಿಸಿದ್ದಾರೆ. ಈ ನಡಾವಳಿಗಳನ್ನು ಪ್ರಶ್ನಿಸಿದವರು ಗಂಡುಬೀರಿಯರಾಗಿ ಕಾಣುವ ಅಪಾಯಗಳು ಸದಾ ಇದ್ದೇ ಇರುತ್ತವೆ. ಡಾ. ವಿನಯಾ ನಾಯಕ ಮುನ್ನುಡಿಯ ಮಾತುಗಳಲ್ಲಿ ಮುದ್ದುಪಳನಿಯ ‘ರಾಧಿಕಾ ಸಾಂತ್ವಾನಂ’ ಕೃತಿ ಕುರಿತು ಸರಿಯಾಗಿಯೇ ಪ್ರಸ್ತಾಪಿಸಿದ್ದಾರೆ.
ಡಾ. ಶೋಭಾ ನಾಯಕ ಅವರ ‘ಶಯ್ಯಾಗೃಹದ ಸುದ್ದಿಗಳುʼ ಕವನ ಸಂಕಲನದ ಕುರಿತು ಡಾ. ಎಚ್‌.ಎಲ್. ಪುಷ್ಪ ಬರಹ

Read More

ಗುರುಪ್ರಸಾದ್ ಕಾಗಿನೆಲೆ ಬರೆದ ಹೊಸ ಕಾದಂಬರಿಯ ತುಣುಕು

ಮಲೀಕ ಮಾತಾಡಲಿಲ್ಲ. ಆಕೆಯನ್ನು ಸೆಳೆದುಕೊಂಡ. ತುಟಿಗೆ ತುಟಿ ಸೇರಿಸಿದ. ಇವನ ತುಟಿಗಳ ಕೊಂಕೋ, ಆಕೆಯ ಕೃತಕ ತುಟಿ ಕಳೆದುಕೊಂಡಿದ್ದ ತೇವವೋ, ಮುತ್ತಿಗೊಂದು ಸತ್ವವಿರಲಿಲ್ಲ, ಸೆಳೆತವಿರಲಿಲ್ಲ. ಸ್ಥಿತಿಸ್ಥಾಪಕತ್ವ ಕಳೆದುಕೊಂಡ ರಬ್ಬರಿನ ಬೊಂಬೆಯ ತುಟಿಯನ್ನು ಚುಂಬಿಸಿದಂತಾಯಿತು, ಮಲೀಕನಿಗೆ.  ಆಕೆ ಮುತ್ತಿನಿಂದಲೇ ಮಲೀಕನನ್ನು ದೂರಸರಿಸುವುದಕ್ಕೆ ಪ್ರಯತ್ನಿಸಿದಳು. -ದೇಹ ಸೌಂದರ್ಯದ ಜಿಜ್ಞಾಸೆಯನ್ನು ಕುರಿತು ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ ಬರೆದ ಹೊಸ ಕಾದಂಬರಿ ‘ಕಾಯಾ’ ದಿಂದ ಆಯ್ದ ಒಂದು ಅಧ್ಯಾಯ ನಿಮ್ಮ ಓದಿಗಾಗಿ. 

Read More

ಶರೀಫರ ಅನುಭವ ಲೋಕಕ್ಕೊಂದು ಕೈಪಿಡಿ

ಹತ್ತೊಂಬತ್ತನೇ ಶತಮಾನದಲ್ಲಿ ಮುಸ್ಲಿಂ ದಂಪತಿಯ ಮಗನಾಗಿ ಜನಿಸಿದ ವರಕವಿ ಮಹಾ ಮಾನವತಾವಾದಿ ಸಂತಶ್ರೇಷ್ಠ ಪರಿಪೂರ್ಣ ಶಿವಯೋಗಿ ಶರೀಫರು ರಾಮಾಯಣ ಮಹಾಭಾರತ, ದೇವಿಪುರಾಣ, ಪ್ರಭುಲಿಂಗಲೀಲೆ, ಬಸವ, ಅಲ್ಲಮ ಅಕ್ಕರನ್ನು ಮೈಗೂಡಿಸಿಕೊಂಡಿದ್ದವರು. ಮಾಸ್ತರರಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳ ರೂವಾರಿಯಾಗಿದ್ದವರು. ಕಳಸದ ಗೋವಿಂದ ಭಟ್ಟರನ್ನು ಸಂಧಿಸಿದಾಗ, ಗೋವಿಂದಭಟ್ಟರು ತಮ್ಮ ಅನುಭಾವದ ಆಧ್ಯಾತ್ಮ ಸಾಮ್ರಾಜ್ಯಕ್ಕೆ ಶರೀಫರನ್ನೇ ಉತ್ತರಾಧಿಕಾರಿಯಾಗಿಸುತ್ತಾರೆ.  ಚಂದ್ರಪ್ರಭಾ ಬರೆದ  ‘ತಗಿ ನಿನ್ನ ತಂಬೂರಿ, ಷರೀಫರ ತತ್ವ ಭಾಷ್ಯ’ ಪುಸ್ತಕದ ಕುರಿತು ಕೆ.ಆರ್.ಉಮಾದೇವಿ ಉರಾಳ ಬರಹ

Read More

ರಚನಾಕೌಶಲ ಬಿಂಬಿಸುವ ಬುದ್ಧಚರಣ

ಇಲ್ಲಿ ಅಪೂರ್ವವಾದ ರಚನಾ ಸೌಂದರ್ಯವನ್ನು ಗಮನಿಸಬಹುದು. ಭಗವಂತ ಸುಗತನ ಕರುಣೆಯೆಂಬ ಮನದ ಹುತ್ತಗಟ್ಟುವಿಕೆ ನಾಲ್ಕು ಪಾದಗಳ ಪದ್ಯಗಳಿಂದ ತೊಡಗಿ, ಎಂಟು ಮತ್ತು ಹದಿನಾಲ್ಕಕ್ಕೆ ಏರಿ; ಮತ್ತೆ ಎಂಟಕ್ಕಿಳಿದು ನಾಲ್ಕು ಪಾದಗಳಿಗೆ ಕೊನೆಯಾಗಿ ಒಂದು ಪಾದದ “ಓಂ ಶಾಂತಿಃ ಶಾಂತಿಃ ಶಾಂತಿಃ” ಎಂಬ ಉಕ್ತಿಯಲ್ಲಿ ಕೊನೆಯಾಗುವುದು ಧ್ವನಿಪೂರ್ಣವಾಗಿದೆ. ಕರುಣ ರಸದ ಆತ್ಯಂತಿಕ ನೆಲೆ ಶಾಂತರಸದಲ್ಲೇ ಎಂಬುದು ಇಡೀ ಕಾವ್ಯ ಧ್ವನಿಸುತ್ತದೆ. ಇದನ್ನು ಕವಿಯು ಕೇವಲ ಕಾವ್ಯದಲ್ಲಿ ಮಾತ್ರ ಬಿಂಬಿಸದೆ ತನ್ನ ರಚನಾ ಕೌಶಲದಲ್ಲೂ ಔಚಿತ್ಯಪೂರ್ಣವಾಗಿ ಕಾಣಿಸಿರುವುದು ಮನಮುಟ್ಟುವಂಥದ್ದು..
ಹೆಚ್.ಎಸ್.ವೆಂಕಟೇಶಮೂರ್ತಿ ಬರೆದ ಬುದ್ಧ ಚರಣ ಕವನ ಸಂಕಲನದ ಕುರಿತು ಕೃಷ್ಣಪ್ರಕಾಶ್ ಉಳಿತ್ತಾಯ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ