Advertisement

Category: ದಿನದ ಪುಸ್ತಕ

ಸುಧಾ ಆಡುಕಳ ಅನುವಾದಿಸಿದ ಟ್ಯಾಗೋರರ ಭಾಷಣ

ನೊಬೆಲ್ ಪ್ರಶಸ್ತಿ ಪುರಸ್ಕೃತ ಕವಿ, ಬರಹಗಾರ ರವೀಂದ್ರನಾಥ ಟ್ಯಾಗೋರ್ ಅವರ ಗೀತಾಂಜಲಿ ಕೃತಿಯನ್ನು ಕನ್ನಡದ ಲೇಖಕಿ ಸುಧಾ ಆಡುಕಳ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ನೊಬೆಲ್ ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ಟ್ಯಾಗೋರರು ಮಾಡಿದ ಭಾಷಣವನ್ನು ಈ ಕೃತಿಯಲ್ಲಿ ಸೇರಿಸಲಾಗಿದೆ. ವಿದ್ವಾಂಸ, ತತ್ವಜ್ಞಾನಿ ಆಗಿದ್ದ ಟ್ಯಾಗೋರರು ಈ ಭಾಷಣದಲ್ಲಿ ತಮ್ಮ ಬಗ್ಗೆ ಹಾಗೂ ಜಗತ್ತನ್ನು ತಾವು ಅರ್ಥೈಸಿಕೊಂಡ ಬಗ್ಗೆ ವಿವರಿಸಿದ್ದಾರೆ. ಗಂಗೆಯ ತಟದಲ್ಲಿ ಕಳೆದ ದಿವ್ಯ ಏಕಾಂತದ ಕ್ಷಣಗಳು ನೀಡಿದ ಪ್ರತಿಫಲನವಾಗಿ ಕವನಗಳು ಹೇಗೆ ಒಲಿದು ಬಂದವು ಎಂಬುದನ್ನು ಹೇಳಿದ್ದಾರೆ.

Read More

ಆರ್.ದಿಲೀಪ್ ಕುಮಾರ್ ಹೊಸ ಪುಸ್ತಕದ ಕುರಿತು ರವೀಂದ್ರನಾಯಕ್‌ ಬರಹ

ಹಳೆಗನ್ನಡದ ಪಠ್ಯಗಳನ್ನು ಓದಬೇಕು ಎಂಬ ಆಸೆಗೆ ಪೂರಕವಾಗಿ ದೊರೆತುದು ಎಚ್.ಎಸ್. ವೆಂಕಟೇಶ ಮೂರ್ತಿಯವರ ‘ಕುಮಾರವ್ಯಾಸ ಕಥಾಂತರ’. ಇದು ಕುಮಾರವ್ಯಾಸನ ಕಾವ್ಯಕ್ಕೆ ಹೊಸಬರಿಗೆ ಪ್ರವೇಶ ಮಾಡಲಿಕ್ಕೊಂದು ಸುಲಭದ ದಾರಿ ಅಂತ ಅನ್ನಿಸಿ ಆ ಕೃತಿಯನ್ನು ಓದಿದೆ.  ಓದಿನ ನಂತರ ನಿಜಕ್ಕೂ ನನಗೆ  ಕುಮಾರವ್ಯಾಸ ಹತ್ತಿರನಾದ. ತನ್ನ ಕಾವ್ಯದ ಗುಟ್ಟುಗಳನ್ನು ಅರ್ಥಗಳನ್ನು ನನಗೆ ಈಗ ಬಿಟ್ಟುಕೊಟ್ಟು ನನ್ನ ದಿನನಿತ್ಯದ ಗೆಳೆಯನೇ ಆಗಿದ್ದಾನೆ.
ಆರ್.ದಿಲೀಪ್ ಕುಮಾರ್ ಹೊಸ ಪುಸ್ತಕ ಪಚ್ಚೆಯ ಜಗುಲಿ ಕುರಿತು  ಬರೆದಿದ್ದಾರೆ ರವೀಂದ್ರನಾಯಕ್‌ ಸಣ್ಣಕ್ಕಿಬೆಟ್ಟು 

Read More

ಸ್ಮಿತಾ ಅಮೃತರಾಜ್‌ ಪುಸ್ತಕಕ್ಕೆ ಜಯಶ್ರೀ ಬಿ  ಕದ್ರಿ ಬರೆದ ಮುನ್ನುಡಿ

ಸ್ಮಿತಾರ ಬರಹಗಳು ಕೆಲವೊಮ್ಮೆ ಅಸಹಾಯಕ ಚಿಟ್ಟೆಯೊಂದರ ಫಡಫಡಿಕೆಯಂತೆ, ಕೆಲವೊಮೆ ನದಿಯ ಜುಳುಹುಳು ನಾದದಂತೆ, ಅಂಗಳದಲ್ಲಿ ಬೇರುಬಿಟ್ಟ ಗಿಡವೊಂದು ಸುಗಂಧ ರೂಪದಲ್ಲಾದರೂ ತನ್ನ ಅಂತಃ ಸತ್ವ ಗಾಳಿಯಲ್ಲಿ ತೇಲಿ ಹೋಗಬೇಕೆಂದು ಹಂಬಲಿಸುವಂತೆ, ಸುಡುಕೆಂಡದಲ್ಲಿ ಅಂತರ್ಗತವಾದ ಕಿಚ್ಚಿನಂತೆ, ಕಿರು ತೊರೆಯೊಂದು ನದಿ ರೂಪದಲ್ಲಿ ಹರಿದು ಸಾಗರ ಸೇರುವೆನೆಂದು ಅಚಲ ವಿಶ್ವಾಸದಲ್ಲಿ ಹರಿಯುವಂತೆ ಒಟ್ಟಂದದಲ್ಲಿ ಹೆಣ್ಣಿನ ಧೀ ಶಕ್ತಿಯ ಸಾಮ್ಯ ರೂಪದಲ್ಲಿ ಇವೆ.
ಸ್ಮಿತಾ ಅಮೃತರಾಜ್‌ ಸಂಪಾಜೆ ಬರೆದ ಲಲಿತ ಪ್ರಬಂಧಗಳ ಸಂಕಲನ ‘ನೆಲದಾಯ ಪರಿಮಳ’ಕ್ಕೆ ಜಯಶ್ರೀ ಬಿ ಕದ್ರಿ ಬರೆದ ಮುನ್ನುಡಿ

Read More

ಆಶಾ ರಘು ಬರೆದ ‘ಮಾಯೆ’ ಕಾದಂಬರಿಯ ತುಣುಕು

ವಿಶಾಲವಾದ ಕೋಣೆ. ಕೆತ್ತನೆಯ ಕುಸುರಿ ಮಾಡಲಾದ ದೊಡ್ಡ ಮಂಚ. ಮೆತ್ತೆ.. ಎರಡು ದೊಡ್ಡ ದೊಡ್ಡ ಗವಾಕ್ಷಿಗಳು. ಅವಕ್ಕೆ ತೆಳುಪರದೆ. ಇನ್ನುಳಿದ ಗೋಡೆಯ ಭಾಗಗಳಲ್ಲಿ ನಾಲ್ಕಾರು ನೃತ್ಯ ಭಂಗಿಗಳ ಚಿತ್ರಪಟಗಳು. ಮೆತ್ತೆಯ ಮೇಲೆ ನನ್ನ ಪಕ್ಕದಲ್ಲಿ ಕುಳಿತು, ನನ್ನ ಕೈಗಳನ್ನು ಅವಳ ಕೈಗಳಲ್ಲಿ ಹಿಡಿದು ಮುಗುಳುನಕ್ಕಳು. ನನಗೆ ಅವಳ ಜಾಗದಲ್ಲಿ ವೈಶಾಲಿಯನ್ನು ಕಲ್ಪಿಸಿಕೊಂಡು ಕಣ್ಣುಗಳಲ್ಲಿ ನೀರು ತುಂಬಿಕೊಂಡುಬಿಟ್ಟಿತು. ಆಶಾ ರಘು ಬರೆದ  ‘ಮಾಯೆ’ ಕಾದಂಬರಿಯ ಒಂದು ಅಧ್ಯಾಯ ಕೆಂಡಸಂಪಿಗೆಯ ಓದುಗರಿಗಾಗಿ ಇಲ್ಲಿದೆ.

Read More

ಸು.ರುದ್ರಮೂರ್ತಿ ಶಾಸ್ತ್ರಿ ಬರೆದ ಹೊಸ ಕಾದಂಬರಿಯ ಕೆಲವು ಪುಟಗಳು

ಮಹಾದೇವಿ ಅಡಿಗೆ ಮನೆಯ ಬಾಗಿಲ ಮರೆಯಿಂದಲೇ ಇಣುಕಿ ನೋಡುತ್ತಿದ್ದಳು. ನಿನ್ನೆ ಕೌಶಿಕ ತನ್ನನ್ನು ನುಂಗುವಂತೆ ನೋಡುತ್ತಿದ್ದುದಕ್ಕೂ, ಈಗ ಮಂತ್ರಿ ಮನೆಗೆ ಬಂದಿರುವುದಕ್ಕೂ ಏನೋ ಸಂಬಂಧವಿರಬೇಕೆಂದು ಅವಳಿಗೆ ಸಂದೇಹ ಬಂತು.  ಹೇಗೆ ಮಾತು ಆರಂಭಿಸಬೇಕೆಂದು ತೋಚದೆ ಮಹಾಬಲಯ್ಯ ಚಡಪಡಿಸಿದ. ಆದರೆ ಬಂದಾಗಿದೆ, ಮಾತಾಡಲೇಬೇಕಾಗಿತ್ತು. ರಾಜಾಜ್ಞೆಯನ್ನು ಮಂತ್ರಿಯಾಗಿ ಪಾಲಿಸಲೇ ಬೇಕಾಗಿತ್ತು. -ಸು.ರುದ್ರಮೂರ್ತಿ ಶಾಸ್ತ್ರಿಗಳು  ಬರೆದ ‘ಅಕ್ಕಮಹಾದೇವಿ’ ಹೊಸ ಕಾದಂಬರಿಯ ಒಂದು ಅಧ್ಯಾಯ ಇಲ್ಲಿದೆ. 

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ