Advertisement

Category: ದಿನದ ಪುಸ್ತಕ

ಅಮೀರ್ ಬಾಯಿ ಕರ್ನಾಟಕಿ: ಸ್ಫೂರ್ತಿದಾಯಕ ಕೃತಿ

ಮಹಿಳೆಯರಿಗೆ ಬಹುತೇಕ ನಿರಾಕರಿಸಲ್ಪಟ್ಟಿರುವ ಕಲಾಕ್ಷೇತ್ರದ ವಲಯಕ್ಕೆ ಅಮೀರಬಾಯಿಯಂಥ ಅಭಿನಯ ತಾರೆ ಪ್ರವೇಶ ಪಡೆದದ್ದು ಒಂದು ಪವಾಡವೇ ಸರಿ.  ಸಂಪ್ರದಾಯದ ಗೆರೆ ದಾಟಿ, ಅಮೀರ್ ಬಾಯಿ, ಪ್ರತಿಭೆಯನ್ನು ಪೋಷಿಸಲು ಮುಂದಾದರು. ಮುಂಬೈಯ ಎಚ್.ಎಂ.ವಿ ಕಂಪನಿಯು ಅಮೀರಬಾಯಿಯ ಪ್ರತಿಭೆಯನ್ನು ಗುರುತಿಸಿ ಧ್ವನಿ ಮುದ್ರಣಕ್ಕೆ ಕರೆಸಿಕೊಂಡಿತು. ಹದಿನಾರು ವರ್ಷದ ಅಮೀರಬಾಯಿ ಅಲ್ಲಿ ಕವ್ವಾಲಿಯೊಂದನ್ನು ಹಾಡಿದ್ದರು. ನಂತರ ಅವಕಾಶಗಳು ಇವರನ್ನು ಹುಡುಕುತ್ತಾ ಬಂದವು. ಪ್ರೊ. ರಹಮತ್ ತರೀಕೆರೆ ಬರೆದ ಅಮೀರ್ ಬಾಯಿ ಕರ್ನಾಟಕಿ ಕೃತಿಯ ಕುರಿತು ಡಾ. ಸುಮಂಗಲಾ ಮೇಟಿ ತಮ್ಮ ಅನಿಸಿಕೆಗಳನ್ನು ಬರೆದಿದ್ದಾರೆ.

Read More

ಕಂಬಾರರಿಗೆ ಒದಗಿ ಬಂದ ಮತ್ತೊಂದು ಕತೆ ಚಾಂದಬೀ ಸರ್ಕಾರ

ದೇಶಪಾಂಡೆ ಅವರ ಮನೆಯಿಂದ ಖಾನ್ ಇದ್ದ ಸ್ಥಳಕ್ಕೆ ತಲುಪುವತನಕ ಚಾಂದಬೀ ಭೂಮಿಯ ಮೇಲೆ ಕಾಲೂರಲೇ ಇಲ್ಲ. ಕ್ಷಣಕ್ಕೊಮ್ಮೆ ಗರ್ಭವ ಮುಟ್ಟಿ ನೋಡಿಕೊಳ್ಳುತ್ತ ಪ್ರತಿಸಲವೂ ಹೊಸ ಹೊಸದಾಗಿ ಕೃಷ್ಣನ ತಾಯಿ ಯಶೋಧೆಯಾಗಿ ಕನಸು ಕಾಣತೊಡಗಿದಳು. ಖಾನನ ಬಳಿಗೆ ಹೋದೊಡನೆ ದೇಶಪಾಂಡೆ ದಂಪತಿಗಳ ಪ್ರೀತಿ, ಗೌರವಾದರಗಳನ್ನು ಹತ್ತು ಸಲ ಹೇಳಿದಳು. ಬಸಿರಾದ ವಿಷಯವನ್ನು ಹತ್ತು ಬಾರಿ ಹೇಳಿದಳು. ಪ್ರತಿಯೊಂದು ಸಲವೂ ಇದೇ ಮೊದಲನೇ ಸಲವೆಂಬಂತೆ ಪ್ರತಿಸಲವೂ ಹೊಸ ಹೊಸ ವಿವರಗಳೊಂದಿಗೆ ಹೇಳಿದಳು.
ಡಾ. ಚಂದ್ರಶೇಖರ ಕಂಬಾರರ ಹೊಸ ಕಾದಂಬರಿ ‘ಚಾಂದಬೀ ಸರ್ಕಾರ’ದ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ಮನುಷ್ಯನ ಆದ್ಯತೆಗಳ ಶೋಧಿಸುವ ‘ಕಾಂಚನಸೀತ’

‘ಕಾಂಚನಸೀತೆ’ ಎನ್ನುವ ಹೆಸರೇ ನಿಗೂಢವಾಗಿದೆ. ರಾಮಾಯಣವನ್ನು ನಿಕಟವಾಗಿ ಬಲ್ಲವರಿಗೂ ಇದರ ಪರಿಚಯ ಇರುವುದಿಲ್ಲ. ಸೀತಾಪರಿತ್ಯಾಗದ, ನಂತರ ರಾಮನು ಅಶ್ವಮೇಧ ಮತ್ತು ಇತರ ಯಾಗಗಳನ್ನು ಮಾಡಬೇಕಾಗಿ ಬಂದಾಗ, ಪತ್ನಿಯಾದ ಸೀತೆಯ ಜಾಗದಲ್ಲಿ ಅವಳ ಚಿನ್ನದ ವಿಗ್ರಹವನ್ನು ಮಾಡಿಸಿ, ಅದನ್ನು ಪಕ್ಕದಲ್ಲಿ ಇಟ್ಟುಕೊಂಡು ಅಂಥ ಕಾರ್ಯಕ್ರಮಗಳನ್ನು ನೆರವೇರಿಸಿಕೊಂಡನೆಂದು ವಾಲ್ಮೀಕಿ ರಾಮಾಯಣದ ‘ಉತ್ತರಕಾಂಡ’ವೂ ಹೇಳುತ್ತದೆ. ಭವಭೂತಿಯ ‘ಉತ್ತರರಾಮಚರಿತೆ’ ನಾಟಕವು ಈ ಕಥೆಯನ್ನು ಇನ್ನಷ್ಟು ವಿಸ್ತರಿಸುತ್ತದೆ.

Read More

‘ದೇವ್ರು’ ಪದ್ಮನಾಭ ಭಟ್‌ ಹೊಸ ಕಾದಂಬರಿಯ ಕೆಲವು ಪುಟಗಳು

ಸುಬ್ಬಿ ಈಗ ಇದ್ದಿದ್ದರೆ ಏನು ಹೇಳುತ್ತಿದ್ದಳು? ಈ ಪುಟ್ಟ ಲಲಿತೆಯನ್ನು ಆ ದೇವ್ರುವಿನ ಎದುರಿಗೆ ತೆಗೆದುಕೊಂಡು ಹೋಗಿ ನಿಲ್ಲಿಸಿದರೆ ಏನನ್ನಬಹುದು? ಹುಟ್ಟಾ ನೋಡೇ ಇರದ ಮನುಷ್ಯನನ್ನು ಅಣ್ಣ ಎಂದು ಹೇಳಿದರೆ ಒಪ್ಪಿಕೊಳ್ಳಬಹುದೇ? ದೇವ್ರು ಇವಳನ್ನು ನೋಡಿ ಹೇಗೆ ಪ್ರತಿಕ್ರಿಯಿಸಬಹುದು? ಹೀಗೆ ಹತ್ತು ಹಲವು ಆಲೋಚನೆಗಳು ಮನಸಲ್ಲಿ ಸುಳಿಯುತ್ತಲೇ ಇದ್ದವು. “ಅವ್ನ ಮತ್ತೆ ನನ್ನ ಋಣ ತೀರಿದೆ. ಇನ್ಮೇಲೆ ಅವ್ನಾಗೇ ಎದ್ರಿಗೆ ಬಂದ್ರೂ ನಾನು ಮಾತಾಡಿಸ್ಬಾರ್ದು’ ಎಂದುಕೊಂಡಳು. ಪದ್ಮನಾಭ ಭಟ್‌ ಶೇವ್ಕಾರ ಹೊಸ ಕಾದಂಬರಿ ‘ದೇವ್ರು’ ಅ.24ರಂದು ಬಿಡುಗಡೆ ಆಗಲಿದೆ. ಕಾದಂಬರಿಯ ಕೆಲವು ಪುಟಗಳು ನಿಮ್ಮ ಓದಿಗೆ

Read More

‘ಹುಲಿಕಡ್ಜಿಳʼ ಕಥಾ ಸಂಕಲನದ ಕುರಿತು ಸ್ಮಿತಾ ರಾಘವೇಂದ್ರ ಬರಹ

ಇಲ್ಲಿನ ಹೆಚ್ಚಿನ ಕಥೆಗಳು ಮಲೆನಾಡು, ಆಗುಂಬೆ,ತೀರ್ಥಹಳ್ಳಿಯಂತಹ ಗ್ರಾಮಾಂತರ ಪ್ರದೇಶದ ಪರಿಸರದ ಸಂಪೂರ್ಣ ಚಿತ್ರಣವನ್ನು ಓದುಗನಿಗೆ ನೀಡುತ್ತದೆ. ಹೆಣ್ಣು ಹೇಳಿಕೊಳ್ಳದ ಕೆಲವು ಸೂಕ್ಷ್ಮಗಳನ್ನು ಅತಿ ಸೂಕ್ಷ್ಮವಾಗಿ ಕಥೆಯಲ್ಲಿ ಲೇಖಕ ಹರೀಶ್ ದಾಖಲಿಸಿದ್ದಾರೆ. ತಾನು ಹುಟ್ಟಿ ಬೆಳೆದ ಊರು ಮನೆಗಳನ್ನು ಬಿಟ್ಟು, ಇಷ್ಟಕ್ಕೋ, ಅನಿವಾರ್ಯಕ್ಕೋ, ಪಟ್ಟಣ ಸೇರಿಕೊಂಡ ನೂರಾರು ಮನಸ್ಸುಗಳು. ದಾರಿ ಕಾಯುತ್ತ ಹಳ್ಳಿಯಲ್ಲೇ ಉಳಿದ ಹಿರಿ ಜೀವಗಳು. ಇಂತಹ ನಯನಾಜೂಕಿನ ಭಾವಗಳ ಚಿತ್ರಣ ಸೆರೆಹಿಡಿದಿದ್ದಾರೆ.
ಹರೀಶ್‌ ಟಿ.ಜಿ ಬರೆದ ‘ಹುಲಿಕಡ್ಜಿಳ’ ಕಥಾಸಂಕಲನದ ಕುರಿತು ಸ್ಮಿತಾ ರಾಘವೇಂದ್ರ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ