Advertisement

Category: ದಿನದ ಪುಸ್ತಕ

ಇತಿಹಾಸದ ಪದರಗಳ ಅವಲೋಕನ..

ಸಾವಿರಾರು ವರ್ಷಗಳನ್ನು ಎಳೆದು ತಂದು ತನ್ನ ಮೂಗಿನ ನೇರದಂತೆ ಇತಿಹಾಸದ ತುಣುಕನ್ನು ಬರೆದ ಮೆಗಾಸ್ತಾನಿಸನ ಇತಿಹಾಸದ ಆಧಾರದಿಂದ ನಾವು ಅಧ್ಯಯನ ಆರಂಭಿಸುತ್ತೇವೆಯೇ ವಿನಹಃ ಮೂಲಕ್ಕೆ ಹೋಗುವುದಿಲ್ಲ. ಸಂಸ್ಕೃತ ಭಾಷೆಯ ವ್ಯಾಕರಣ ಕೊಟ್ಟ ಪತಂಜಲಿ, ವರರುಚಿ, ಪಾಣಿನಿಯ ಮೊದಲಾದವರೆಲ್ಲ ಇದ್ದುದು ಪೂರ್ವದಲ್ಲಿ, ಆದರೆ ಅದ್ಯಾಕೋ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಸಂಸ್ಕೃತ ಕಣ್ಮರೆಯಾಗಿ ಪ್ರಾಕೃತ ಆಕ್ರಮಿಸಿದ್ದು ಅಂದರೆ ಗೋಜಲು ಗೋಜಲಿನ ಇತಿಹಾಸ ಅಂದಿನಿಂದಲೇ ಆರಂಭವಾಯಿತು ಎಂದು ಸ್ಪಷ್ಟವಾದ ಮಾಹಿತಿ ನೀಡುತ್ತದೆ ಈ ಪುಸ್ತಕ.
ಸದ್ಯೋಜಾತ ಭಟ್ಟ ಬರೆದ ‘ಮಿಹಿರಕುಲಿ’ ಪುಸ್ತಕದ ಕುರಿತು ಸ್ಮಿತಾ ರಾಘವೇಂದ್ರ ಬರಹ

Read More

ವಿಶಿಷ್ಟ ಶಬ್ದಶಿಲ್ಪ ‘ಆಕಾಶದೇವರು’….

ಶೂನ್ಯತತ್ವ ಒಂದು ಬಹುಮುಖ್ಯ ತಾತ್ವಿಕತೆಯಾಗಿ ಈ ಕತೆಯಲ್ಲಿ ಕಂಡುಬರುತ್ತದೆ. ಶೂನ್ಯತತ್ವದ ಪರಿಕಲ್ಪನೆಯೂ ಭಾರತೀಯ ದಾರ್ಶನಿಕ ಪರಂಪರೆಯಲ್ಲಿ ಬಹುದೊಡ್ಡ ಸಾಧಕ ಪ್ರಮಾಣವಾಗಿದೆ. ಶೂನ್ಯ ಎಂದರೆ ತಟ್ಟನೆ ನೆನಪಾಗುವುದು ಅಲ್ಲಮ ಮತ್ತು ಶರಣರ ಶೂನ್ಯತತ್ವದ ಪರಿಕಲ್ಪನೆ. ಅದೊಂದು ಆನುಭಾವಿಕ ನೆಲೆಯ ಚಿಂತನೆ. ಸೃಷ್ಟಿಯ ಮೂಲತತ್ವವನ್ನು ಕುರಿತು ಆಲೋಚನೆಗೆ, ಚಿಂತನೆಗೆ ಹಚ್ಚುವ ಪರಿಕಲ್ಪನೆಯಾಗಿ ಶೂನ್ಯತತ್ವ ನಮ್ಮ ಮುಂದಿದೆ.
ಬಿ. ಸುಜ್ಞಾನಮೂರ್ತಿ ಅನುವಾದಿಸಿದ “ಆಕಾಶದೇವರು” ವಿಲೋಮಕತೆಯ ಕುರಿತು ಡಾ. ನಂದೀಶ್ವರ ದಂಡೆ ಬರಹ

Read More

ಆಸ್ಕರ್ ವೈಲ್ಡ್ ಕಾದಂಬರಿ: ಗುಂಗು ಹಿಡಿಸುವ ಓದು

ತನ್ನ ಮತ್ತು ವೇನ್ ಳ ಮಾಯೆಗಳನ್ನೆಲ್ಲ ತೋರಿಸಿ ಬೇಸ್ತು ಬೀಳಿಸುವ ಉತ್ಸಾಹ ಗ್ರೇ ಗೆ. ಬೇಸಿಲ್ ಮತ್ತು ಹ್ಯಾರಿಯನ್ನು ಕರೆದುಕೊಂಡು ಹೋಗಿ ಥಿಯೇಟರಿನಲ್ಲಿ ವೇನ್ ಳ ಪ್ರತಿಭಾ ಸೌಂದರ್ಯವನ್ನು ತೋರಿಸುವ ಪ್ರಯತ್ನ ಮಾಡಿದ ಗ್ರೇ. ಆದರೆ ಅಂದು ರಾತ್ರಿ ದೊಡ್ಡ ಆಘಾತ ಕಾದಿತ್ತು. ರೊಸಾಲಿಂಡಳ ಪಾತ್ರ ಮಾಡಿದ್ದ ವೇನ್, ಜೀವಂತಿಕೆಯನ್ನೇ ಕಳೆದುಕೊಂಡ ಆಟದ ಬೊಂಬೆಯಂತೆ ನಟಿಸಿದಳು.
ಆಸ್ಕರ್ ವೈಲ್ಡ್ ಬರೆದ ‘ದಿ ಪಿಕ್ಚ್ ರ್ ಆಫ್ ಡೋರಿಯನ್ ಗ್ರೇ’ ಕಾದಂಬರಿ ಕುರಿತು ನವೀನ ಗಣಪತಿ ಬರಹ

Read More

ಸರ್ ಎಂ. ವಿಶ್ವೇಶ್ವರಯ್ಯ ಕುರಿತ ಪುಸ್ತಕದ ಬಗ್ಗೆ ಕೆ.ಆರ್.ಉಮಾದೇವಿ ಉರಾಳ ಬರಹ

“ದಿವಾನರಾದ ಅವಧಿಯಲ್ಲಿ ಮಹಾರಾಜರೊಂದಿಗೆ ಒಮ್ಮೆ ಕೆಮ್ಮಣ್ಣುಗುಂಡಿಗೆ ಹೋಗಿದ್ದಾಗ ಸೂರ್ಯೋದಯಕ್ಕೂ ಮೊದಲೇ ಎದ್ದು ವಾಯುವಿಹಾರ ಕೈಗೊಂಡಿದ್ದ ಸರ್ ಎಂ.ವಿ.ಯವರಿಗೆ ಮಣ್ಣಿನ ರಾಶಿಯಲ್ಲಿನ ಬೆಣಚುಕಲ್ಲುಗಳು ಕಣ್ಣಿಗೆ ಬೀಳುತ್ತವೆ. ಅವನ್ನು ಸೂರ್ಯನ ಬೆಳಕಲ್ಲಿ ಹಿಡಿದು ನೋಡಿದ ಅವರು ಉದ್ಗರಿಸುತ್ತಾರೆ. “ನಾವು ಕಲ್ಲಿದ್ದಲಿಗಾಗಿ ಇನ್ನು ಬರ್ಮಿಂಗ್ ಹ್ಯಾಂ ನತ್ತ ನೋಡಬೇಕಿಲ್ಲ!” ಮುಂದೆ ಅದಿರಿನ ನಿಕ್ಷೇಪಗಳನ್ನು ಗಮನಿಸುತ್ತಾರೆ.”
ಜಿ.ವಿ.ಸಂಗಮೇಶ್ವರ ಬರೆದ ‘ಕಬ್ಬಿಣದ ಕಥೆ ವ್ಯಥೆ’ ಪುಸ್ತಕದ ಬಗ್ಗೆ ಕೆ.ಆರ್.ಉಮಾದೇವಿ ಉರಾಳ ಬರಹ

Read More

ಮದ್ಲೆಗಾರ ಲಕ್ಷ್ಮೀಶ ಅಮ್ಮಣ್ಣಾಯರ ರಂಗಾಂತರಂಗ…

“ಕಥನದ ಉತ್ತರಾರ್ಧದಲ್ಲಿ ಲಕ್ಷ್ಮೀಶರು ತನ್ನ ರಂಗಾನುಭವಾಧಾರಿತ ರಂಗ ಚಿಂತನೆಗಳನ್ನು ಸರಳವಾದ ಭಾಷೆಯಲ್ಲಿ ಮಂಡಿಸಿದ್ದು, ಚರ್ಚಿಸಬೇಕಾದ, ಚಿಂತನೀಯವಾದ ಅನೇಕ ವಿಚಾರಗಳು ಅಲ್ಲಿ ಬಂದಿವೆ. ಇಡಿಯ ಆಟಕ್ಕೆ ಆಧಾರವಾಗಿ ನಿರ್ವಹಣೆ, ಹಾಡು, ಕುಣಿತಗಳನ್ನು ನಡೆಸುವ ಮೆರೆಸುವ ಹಿಮ್ಮೇಳದ ಮಹತ್ವ ಸಾಮಾನ್ಯ ಪ್ರೇಕ್ಷಕನಿಗೆ ಅರಿವಿಗೆ ಬರದಿರುವ ಸಂಗತಿ, ಹಲವು ವಾದಕರ ವಾಣಿಯಾಗಿ ಇಲ್ಲಿ ಪ್ರಸ್ತಾವಿತವಾಗಿದೆ. ಅದು ನಿಜ ಕೂಡ.”
ಲಕ್ಷ್ಮಿ ಮಚ್ಚಿನ ಬರೆದ ಮದ್ಲೆಗಾರ ಲಕ್ಷ್ಮೀಶ ಅಮ್ಮಣ್ಣಾಯರ ರಂಗಾಂತರಂಗಕ್ಕೆ ಡಾ. ಎಂ.ಪ್ರಭಾಕರ ಜೋಷಿ ಬರೆದ ಮುನ್ನುಡಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ