Advertisement

Category: ದಿನದ ಪುಸ್ತಕ

ಜೀವನ ಸತ್ವದ ಶೋಧದಂತೆ ಇರುವ ಕೃತಿ : ಡಾ. ಗೀತಾ ವಸಂತ

ಅಂತರ್ಜಾಲ ಮಾಧ್ಯಮ ಅನ್ವೇಷಣೆ ಪ್ರವೃತ್ತಿಯುಳ್ಳ ಯುವಬರಹಗಾರರ ಭವಿಷ್ಯದ ಮಾಧ್ಯಮವಾಗಿದೆ. ಆದರೆ ಅದು ಸಮಾಜದ ಆಗುಹೋಗುಗಳ ಕುರಿತು ವಾಸ್ತವಿಕ ಪ್ರಜ್ಞೆಗೆ ವಿಮುಖವಾಗದೇ, ರಾಜಕೀಯ ಹಾಗೂ ವೈಚಾರಿಕ ಪ್ರಜ್ಞೆಯ ತಳಹದಿಯ ಮೇಲೆ ಬೆಳೆಯಬೇಕೆಂಬ ಮುನ್ನೋಟವನ್ನು ಮಂಜುಳಾ ಗೋನಾಳ ಅವರು ತಮ್ಮ ಕೃತಿಯ ಮೂಲಕ ವ್ಯಕ್ತಪಡಿಸುತ್ತಾರೆ. ’ನುಡಿಯ ನೆರಳು’ ಕೃತಿಗೆ ಡಾ. ಗೀತಾ ವಸಂತ್ ಬರೆದ ಮುನ್ನುಡಿ ಇಲ್ಲಿದೆ.

Read More

‘ಅಮ್ಮನ ಕೋಣೆಗೆ ಏಸಿ’ ಕೃತಿಗೆ ಅರವಿಂದ ಚೊಕ್ಕಾಡಿ ಬರೆದ ಮುನ್ನುಡಿ

“ಲೇಖಕ ವೈಯಕ್ತಿಕವಾಗಿ ಏನೇ ಆಗಿದ್ದರೂ ಸಾಮಾಜಿಕವಾಗಿ ಆತನಿಗಿರುವ; ಸಮಾಜ ಸ್ವೀಕರಿಸುವ ಆತನ ‘ಸ್ಥಿತಿ’ಯು ಆತನ ಕೃತಿಯನ್ನು ಸಮಾಜವು ಬರಮಾಡಿಕೊಳ್ಳುವುದರಲ್ಲಿ ನಿರ್ಧಾರಕ ಅಂಶವಾಗಿರುತ್ತದೆ ಎಂಬ ನೆಲೆಯಲ್ಲಿ ಈ ಕೃತಿಯ ಇನ್ನೊಂದು ಮಗ್ಗುಲನ್ನು ನಾನು ಕಾಣಿಸಬೇಕಾಗುತ್ತದೆ. ನನಗೆ ತಿಳಿದ ಮಟ್ಟಿಗೆ ಕುಕ್ಕಿಲ ಅವರು ತಾನು ಮುಸ್ಲಿಂ ಅಲ್ಲ; ಜಾತ್ಯತೀತ ಎಂದು ಘೋಷಿಸಿಕೊಂಡವರಲ್ಲ.”
ಏ.ಕೆ. ಕುಕ್ಕಿಲ ಬರೆದ ‘ಅಮ್ಮನ ಕೋಣೆಗೆ ಏಸಿ’ ಕಥಾ ಸಂಕಲನದ ಕುರಿತು ಅರವಿಂದ ಚೊಕ್ಕಾಡಿ ಬರೆದ ಮುನ್ನುಡಿ

Read More

ರಮೇಶ ಅರೋಲಿ ಪುಸ್ತಕಕ್ಕೆ ಲಲಿತಾ ಸಿದ್ಧಬಸವಯ್ಯ ಬರೆದ ಮುನ್ನುಡಿ

“ಈ ಎಲ್ಲ ಯುವಕವಿಗಳು ಬಂಡಾಯದ ಕುದಿಯನ್ನು ಆರಗೊಡದೆ ಕಲಾತ್ಮಕ ತೋಡುಗಾಲುವೆಗಳನ್ನು ನಿರ್ಮಿಸಿಕೊಂಡವರು ಎಂದೆ, ಹೌದು. ಅದರಲ್ಲಿ ಒಬ್ಬೊಬ್ಬರದೂ ಒಂದೊಂದು ಬಗೆ. ಹಾಗಾಗಿಯೇ ಕನ್ನಡಕ್ಕಿದು ಕೇಡುಗಾಲವಲ್ಲ, ಊರ್ಜಿತಕಾಲ. ನಾನಿಲ್ಲಿ ಅರೋಲಿಯವರು ಕಟ್ಟಿಕೊಂಡಿರುವ ಮಾರ್ಗದ ಬಗ್ಗೆ ಹೇಳುವೆ. ಅದು ದೇಸೀ ಪರದೇಸೀಗಳ ಕಸಿ ಮಾಡಿಕೊಂಡ ಮಾರ್ಗ.”
ರಮೇಶ ಅರೋಲಿ ಬರೆದ ‘ಬಿಡು ಸಾಕು ಈ ಕೇಡುಗಾಲಕ್ಕಿಷ್ಟುʼ ಕವನ ಸಂಕಲನಕ್ಕೆ ಲಲಿತಾ ಸಿದ್ಧಬಸವಯ್ಯ ಬರೆದ ಮುನ್ನುಡಿ

Read More

ಡಾ. ಪುರುಷೋತ್ತಮ ಬಿಳಿಮಲೆಯವರ ಪುಸ್ತಕಕ್ಕೆ ಪ್ರೊ.ಅಶೋಕ ಶೆಟ್ಟರ್ ಬರೆದ ಮುನ್ನುಡಿ

“ಬ್ರಿಟೀಷರ ಭೂಕಂದಾಯವನ್ನು ವಿರೋಧಿಸಿ ನಡೆದ ಹೋರಾಟಗಳು ಅಸಂಖ್ಯ. ದಕ್ಷಿಣ ಕನ್ನಡ ಮತ್ತು ಕೊಡಗು ಪ್ರದೇಶಗಳಲ್ಲಿ ಬ್ರಿಟೀಷರು ಭೂಸ್ವಾಮ್ಯ ಮತ್ತು ಭೂಕಂದಾಯಕ್ಕೆ ಸಂಬಂಧಿಸಿ ಜಾರಿಗೆ ತಂದ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸಿದ ಹೋರಾಟದ ಕತೆ ಮೈನವಿರೇಳಿಸುವಂತಹುದು. ರೈತರ ಕೆಚ್ಚು, ವಿಶ್ವಾಸ, ಹೇಗಾದರೂ ಮಾಡಿ ಬ್ರಿಟೀಷರ ಕಂದಾಯ ಹೊರೆಯಿಂದ ಮುಕ್ತವಾಗಬೇಕು ಎಂಬ ಅವರ ಪ್ರಯತ್ನವನ್ನು ಸಾರುವ  ಘಟನೆಯ  ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಡಾ. ಪುರುಷೋತ್ತಮ ಬಿಳಿಮಲೆ ಮಾಡಿದ್ದಾರೆ. ” 
‘ಅಮರ ಸುಳ್ಯದ ರೈತ ಹೋರಾಟ’  ಪುಸ್ತಕಕ್ಕೆ ಪ್ರೊ.ಅಶೋಕ ಶೆಟ್ಟರ್ ಬರೆದ ಮುನ್ನುಡಿ ಇಲ್ಲಿದೆ.

Read More

ಸಿದ್ರಾಮ್ ಪಾಟೀಲ ಕಥಾ ಸಂಕಲನದ ಕುರಿತು ಪ್ರಿಯಾ ಭಟ್‌ ಬರೆದ ಬರಹ

“ಕಥೆಗಳಲ್ಲಿ ಭಾಷೆಯದೇ ಒಂದು ತೂಕ. ಉತ್ತರ ಕರ್ನಾಟಕ ದ ಬದುಕಿನ ಸೊಗಡು ಭಾಷೆಯನ್ನು ಸಶಕ್ತವಾಗಿ ಬಳಸುವುದರೊಂದಿಗೆ ಪ್ರಾದೇಶಿಕತೆಯನ್ನು ತುಂಬಿಕೊಟ್ಟಿದ್ದಾರೆ ಲೇಖಕರು. ಸಣ್ಣಕತೆಗಳಲ್ಲಿ ಪ್ರಾದೇಶಿಕ ಭಾಷೆಯನ್ನು ಬಳಸಿಕೊಂಡೂ ಓದುಗರ ಕತೆಯ ಕುತೂಹಲಕ್ಕೆ ಓದಿಸಿಕೊಳ್ಳುವಿಕೆಗೆ ತೊಡಕಾಗದಂತೆ ಬರೆಯುವುದು ಕೂಡ ಲೇಖಕರ ಪ್ರತಿಭೆ. ಮಿಸೆಸ್ ಕೆಂಪೆ ಮತ್ತು ಅಶೋಕ, ಇಂಜೆಕ್ಷನ್ ಮೊದಲಾದ ಕಥೆಗಳಲ್ಲಿ ಭಾಷೆಯೆ ಮನುಷ್ಯ ಭಾವಗಳ ಹೃದ್ಯವಾಗಿಸಿವೆ.”
ಸಿದ್ರಾಮ್‌ ಪಾಟೀಲ ಬರೆದ ‘ಜಂಗಮಕ್ಕಳಿವಿಲ್ಲʼ ಹೊಸ ಕಥಾ ಸಂಕಲನದ ಕುರಿತು ಪ್ರಿಯಾ ಭಟ್‌ ಕಲ್ಲಬ್ಬೆ ಬರೆದ ಲೇಖನ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ