Advertisement
ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

ನವೀನ ಗಣಪತಿ ಬರೆದ ಈ ಭಾನುವಾರದ ಕತೆ

ಮಧ್ಯಾಹ್ನ ಒಂದು ಘಂಟೆಗೇ ತಾನು ಮನೆಯಲ್ಲಿ ಮಾಡಬಹುದಾದ ಎಲ್ಲ ಕೆಲಸಗಳೂ ಮುಗಿದು ಮತ್ತೆಲ್ಲ ಮನಸ್ಸಿಗೆ ಕಿರಿಕಿರಿಯಾಗ ಹತ್ತಿತ್ತು. ನಾಲ್ಕು ದಿನ ದಾವಣಗೆರೆಗೆ ಹೋಗಿ ಮಗಳೊಟ್ಟಿಗೆ ಇದ್ದು ಬರೋಣವೆನಿಸುತ್ತಿತ್ತು. ಆದರೆ ಶಂಭಣ್ಣನನ್ನು ಬಿಟ್ಟು ಎಲ್ಲಿಯೂ ಹೋಗುವಂತಿರಲಿಲ್ಲ. ಮಗಳೂ ವಾರ ವಾರ ಬರುವವಳಲ್ಲ. ಅವಳಿಗೆ ಭಾನುವಾರ ರಜಾದಿನಗಳು ಇದ್ದಾಗಲೇ ಜೋರು ವ್ಯಾಪಾರ. ಇನ್ನು ಆಚೀಚೆ ಎರಡು ಹೆಂಗಸರೊಟ್ಟಿಗೆ ಹರಟೆ – ಮಾತು – ಒಡನಾಟ ಮಾಡೋಣವೆಂದರೆ, ಒಬ್ಬರ ವ್ಯವಹಾರವಾದರೂ ಚೊಕ್ಕಟವಾಗಿದೆಯೇ?
ನವೀನ ಗಣಪತಿ ಬರೆದ ಈ ಭಾನುವಾರದ ಕತೆ “ಧನಲಕ್ಷ್ಮಿ”

Read More

ನವೀನ ಗಣಪತಿ ಬರೆದ ಈ ಭಾನುವಾರದ ಕತೆ ಪ್ರಾಣಪಕ್ಷಿ

ಗಾರೇಜಿನಲ್ಲಿ ನೆರವಾಗುತ್ತಿದ್ದ ಪಿಟ್ಟನಿಗೆ ಆ ತಿಂಗಳ ಸಂಬಳ ಕೊಡುವುದಕ್ಕೇ ಸಾಧ್ಯವಾಗಲಿಲ್ಲ ಅಡಿಗರಿಗೆ. ಸಾಧು ಸ್ವಭಾವದವನಾದ, ಯಾವತ್ತೂ ಸಂಬಳಕ್ಕಾಗಿ ಹಾತೊರೆದು ಕೇಳದ ಪಿಟ್ಟ ಆರಂಭದಲ್ಲಿ ಏನೂ ಕೇಳಲಿಲ್ಲ. ಆದರೆ ಕೆಲದಿನಗಳಲ್ಲಿ, ‘ಸ್ವಲ್ಪ ಇದ್ದರೆ ಬೇಕಿತ್ತು’ ಎಂದು ಎರಡು ಮೂರು ಬಾರಿ ಕೇಳಿದ. ನಾಳೆ ಕೊಡುವ ಎಂದು ಅಡಿಗರು ಆಶ್ವಾಸನೆ ಕೊಟ್ಟರೂ, ಹಾಗೆ ಹಣ ಕೊಡುವುದಕ್ಕೆ ಸಾಧ್ಯವಾಗಲಿಲ್ಲ. ಈ ನಡುವೆ ಹುಶಾರು ತಪ್ಪಿದ ಪಿಟ್ಟ, ಆಗಸ್ಟ್ ತಿಂಗಳಲ್ಲಿ ಸಿದ್ಧಾಪುರದ ಆಸ್ಪತ್ರೆಗೆ ಸೇರಿದವನು, ತೀರಿಯೇ ಹೋದ ಸುದ್ದಿ ಬಂದಿತ್ತು.”

Read More

ಆಸ್ಕರ್ ವೈಲ್ಡ್ ಕಾದಂಬರಿ: ಗುಂಗು ಹಿಡಿಸುವ ಓದು

ತನ್ನ ಮತ್ತು ವೇನ್ ಳ ಮಾಯೆಗಳನ್ನೆಲ್ಲ ತೋರಿಸಿ ಬೇಸ್ತು ಬೀಳಿಸುವ ಉತ್ಸಾಹ ಗ್ರೇ ಗೆ. ಬೇಸಿಲ್ ಮತ್ತು ಹ್ಯಾರಿಯನ್ನು ಕರೆದುಕೊಂಡು ಹೋಗಿ ಥಿಯೇಟರಿನಲ್ಲಿ ವೇನ್ ಳ ಪ್ರತಿಭಾ ಸೌಂದರ್ಯವನ್ನು ತೋರಿಸುವ ಪ್ರಯತ್ನ ಮಾಡಿದ ಗ್ರೇ. ಆದರೆ ಅಂದು ರಾತ್ರಿ ದೊಡ್ಡ ಆಘಾತ ಕಾದಿತ್ತು. ರೊಸಾಲಿಂಡಳ ಪಾತ್ರ ಮಾಡಿದ್ದ ವೇನ್, ಜೀವಂತಿಕೆಯನ್ನೇ ಕಳೆದುಕೊಂಡ ಆಟದ ಬೊಂಬೆಯಂತೆ ನಟಿಸಿದಳು.
ಆಸ್ಕರ್ ವೈಲ್ಡ್ ಬರೆದ ‘ದಿ ಪಿಕ್ಚ್ ರ್ ಆಫ್ ಡೋರಿಯನ್ ಗ್ರೇ’ ಕಾದಂಬರಿ ಕುರಿತು ನವೀನ ಗಣಪತಿ ಬರಹ

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ವಿನಿಮಯವೇ ನಿಸರ್ಗದ ನಿಯಮ: ನಾಗೇಶ ಹೆಗಡೆ ಮಾತುಗಳು

ಯಾವುದೋ ದೇಶದಿಂದ ಬರುವ ಪೆಟ್ರೋಲಿಯಂ ದ್ರವ್ಯವನ್ನೇ ಆಧರಿಸಿಯೇ ರೈತರು ಬದುಕು ನಡೆಸುತ್ತ, ಮಾರುಕಟ್ಟೆಗೆ ತಮ್ಮದೆಲ್ಲವನ್ನೂ ಮಾರಿಕೊಳ್ಳುವ ದುರ್ಭರ ಪರಿಸ್ಥಿತಿಯಿಂದ ಬಿಡುಗಡೆ ಪಡೆಯಬೇಕೆಂಬ ಸಣ್ಣ ಹಂಬಲವೊಂದು ಇಲ್ಲಿ ಮೊಳಕೆಯೊಡೆಯುತ್ತಿರುವುದು…

Read More

ಬರಹ ಭಂಡಾರ