Advertisement

Category: ದಿನದ ಪುಸ್ತಕ

ಅನುಭಾವ ಲೋಕದ ಮಹಾಬೆಳಗು

“ಎಷ್ಟು ಸರಳವಾದ ಪದಗಳನ್ನು, ಪೋಣಿಸುತ್ತಾ ತನ್ನ ನುಡಿ ರೂಪಕವನ್ನು ಕಟ್ಟಿಕೊಡುತ್ತಿದ್ದಾಳೆ ಈ ಲಲ್ಲಾ. ಹಕ್ಕಿ ಬೆಳಗಾದಾಗ ಗೂಡು ಬಿಟ್ಟು ತನ್ನ ನಿತ್ಯದ ಬದುಕಿಗಾಗಿ ಹೇಗೆ ತನ್ನ ರೆಕ್ಕೆಯನ್ನು ಮಾತ್ರ ನಂಬಿ ಹೋಗುತ್ತದೆಯೋ ಹಾಗೆ ಅಂತರಂಗದ ಗೆಳೆಯನನ್ನು ನಿನಗೆ ಬೇಕಾದ ಮಿತ್ರನನ್ನು ಹುಡುಕಿಕೋ ಎಂಬ ಸಾಲು ಅವಳ ಮನಸ್ಸಿನ ಹುಡುಕಾಟದ ತೀವ್ರತೆಯನ್ನು ತಿಳಿಸುತ್ತವೆ.”
ಡಾ. ವಿಜಯಾ ಗುತ್ತಲ ಅನುವಾದಿಸಿದ ಕಾಶ್ಮೀರಿ ಕವಯತ್ರಿ ಲಲ್ಲಾ ದೇಡ್‌ ಕವಿತೆಗಳ ಸಂಗ್ರಹ ‘ಎಲ್ಲ ಎಲ್ಲೆ ಮೀರಿ’ ಕುರಿತು ಪದ್ಮಶ್ರೀ ಎಂ ಬರಹ

Read More

ಮನಃಶಾಸ್ತ್ರೀಯ ಗುಣದ ಕಾದಂಬರಿ!

“ಮಗನೂ ಕೂಡ ಅಪ್ಪನಂತೆ ಮಿಲ್ಟ್ರಿಗೆ ಸೇರಿಬಿಡುತ್ತಾನೋ, ದಾರಿ ತಪ್ಪುತ್ತಾನೋ ಎಂಬ ಆತಂಕದಲ್ಲಿ ತಾಯಿ ಶಾಂತಕ್ಕನ ಜೀವನ ತೊಳಲಾಡುತ್ತಾ ಕಾಯುತ್ತಿರುತ್ತದೆ. ಶಾಂತಕ್ಕ ತನಗೆ ತಾನೇ ಸಮಾಧಾನಪಡಿಸಿಕೊಳ್ಳುವ “ಕಣ್ಣಲ್ಲಿ ಎರಡುಹನಿ ನೀರ್ ಇರುವತನಕ ಮಗನನ್ನು ಕಟ್ಟಿ ಹಾಕುತ್ತೇನೆ.” ಎಂಬ ಸಮಾಧಾನದ ಮಾತು ಅಂತಃಕರಣ ಕಲಕುತ್ತದೆ. ಪಿತೃ ಪ್ರಧಾನ ಕುಟುಂಬಗಳು ಸಾಮಾನ್ಯವಾಗಿರುವ ಈ ಹೊತ್ತಿನಲ್ಲಿ ಮಾತೃ ಸಂಸ್ಕೃತಿಯನ್ನು ಇದು ಬಿಂಬಿಸುತ್ತದೆ.”
ನಟರಾಜ್‌ ಹುಳಿಯಾರ್‌ ಬರೆದ ‘ಕಾಮನ ಹುಣ್ಣಿಮೆ’ ಕಾದಂಬರಿ ಕುರಿತು ಆಲೂರು ದೊಡ್ಡನಿಂಗಪ್ಪ ಬರಹ

Read More

ನಿರಾಡಂಬರ ಕಥನ ಕ್ರಮದಲ್ಲಿ ಸಾಗುವ ‘ಸೂತ್ರಧಾರ..’

“ಫಣೀಂದ್ರನ ಗಲಿಬಿಲಿ ಸಂಸಾರ, ಕಾಣದ ಕೈ, ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ, ಹೃದಯಾಂತರಾಳದಲಿ, ತ್ಯಾಗ, ದೊಡ್ಡವರೆಲ್ಲ ಜಾಣರಲ್ಲ, ಕಂದಾ ನೀ ನಗುತಿರು ಮತ್ತು ಸೂತ್ರಧಾರ ಮತ್ತು ಇತರ ಕಥೆಗಳು ಇಲ್ಲಿ ತಮ್ಮ ವಸ್ತು ವಿಷಯಗಳಿಂದ ಗಮನ ಸೆಳೆಯುತ್ತವೆ. ಹೃದಯಾಂತರಾಳದಲ್ಲಿ ಮತ್ತು ಕಂದ ನೀನು ನಗುತಿರು ಕತೆಗಳು ಮಾನವೀಯತೆಯ ಆರ್ದ್ರವಾದ ದನಿಯನ್ನು ಬಿಂಬಿಸಿದರೆ, ದೂರದ ಬೆಟ್ಟ ಮತ್ತು ಕಾಣದ ಕೈಗಳು ಆ ಬಾಳಿನ ಸಹಜವಾದ ಚಿತ್ರವನ್ನು ನೆಚ್ಚಿಕೊಂಡಿವೆ.”
ಶೈಲಜಾ ಸುರೇಶ್‌ ರಾವ್‌ ನಾಯಕ್ ಕಥಾ ಸಂಕಲನಕ್ಕೆ ವಾಸುದೇವ ನಾಡಿಗ್‌ ಬರೆದ ಮುನ್ನುಡಿ

Read More

ಮರಾಠವಾಡಾದ ದಲಿತನ ಆತ್ಮಕಥನ ಕುರಿತು ಸುಧಾ ಆಡುಕಳ ಬರಹ

“ಪರಲಾದನಿಗೆ ಇನ್ನೊಂದು ಅಕ್ಕ ಇದ್ದಳಾದರೂ ಅವಳ ಗಂಡ ಸಾಕ್ಷಾತ್ ಯಮಸ್ವರೂಪಿ! ಅವನಿಗಂಜಿ ಅವಳ ಊರಿಗೆ ಹೋದರೂ ಈ ಹುಡುಗ ಮನೆಯವರೆಗೆ ಹೋಗಲಾರ. ಊರ ಮುಂದಿನ ಗುಡಿಯಲ್ಲಿಯೇ ಕುಳಿತು, ಮಲಗಿ ಕಾಲ ಕಳೆಯುವ ಇವನನ್ನು ಕಂಡು ಮಂದಿ ಅಕ್ಕನಿಗೆ ಸುದ್ದಿ ಮುಟ್ಟಿಸಬೇಕು. ಅವಳು ಬಂದು ಸಮಯ ನೋಡಿ ಮನೆಗೆ ಕರಕೊಂಡು ಹೋಗಿ ಬಡಿಸಬೇಕು.”
ಚಂದ್ರಕಾಂತ ಪೋಕಳೆ ಅನುವಾದಿಸಿದ ಮರಾಠಿ ಲೇಖಕ ಪ್ರ. ಈ. ಸೋನಕಾಂಬಳೆ ಅವರ ಆತ್ಮಕಥನ ‘ನೆನಪಿನ ಹಕ್ಕಿ’ಯ ಕುರಿತು ಸುಧಾ ಆಡುಕಳ ಬರಹ

Read More

ಸ್ಮಿತಾ ಅಮೃತರಾಜ್‌ ಪುಸ್ತಕದ ಕುರಿತು ವಸುಂಧರಾ ಕದಲೂರು ಬರಹ

“ಇಲ್ಲಿನ ಬಹುತೇಕ ಲಲಿತ ಪ್ರಬಂಧಗಳು ನಿರೂಪಣೆಯ ಮಾದರಿಯಲ್ಲಿವೆ. ಅವು ವಾಚಾಳಿಯಾಗಿವೆ, ಸರಳವಾಗಿವೆ. ಸಹಜ ನಿಯತ್ತಿನಿಂದ ಕೂಡಿವೆ. ಮುಚ್ಚುಮರೆಯಿಲ್ಲದೆ ಲೇಖಕರ ಹಳವಂಡಗಳನ್ನು ಪೆದ್ದುತನ, ಮುಗ್ಧತೆಯ ಭಾವನೆಯ ಹರವನ್ನು ಇವು ಒಳಗೊಂಡಿವೆ. ಇಲ್ಲಿನ ಪ್ರಬಂಧಗಳಲ್ಲಿನ ಕೆಲವಾರು ವಸ್ತು ವಿಚಾರಗಳನ್ನು ದೈನಂದಿನ ಚಕ್ರದಲ್ಲಿ ನಾವು ಕಂಡಿದ್ದರೂ ವಿಶೇಷ ಗಮನ ಹರಿಸದೆ ಕಡೆಗಣಿಸಿರುತ್ತೇವೆ.”
ಸ್ಮಿತಾ ಅಮೃತರಾಜ್‌ ಸಂಪಾಜೆ ಬರೆದ ‘ಒಂದು ವಿಳಾಸದ ಹಿಂದೆ’ ಪ್ರಬಂಧ ಸಂಕಲನ ಕುರಿತು ವಸುಂಧರಾ ಕದಲೂರು ಬರೆದ ಲೇಖನ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ