Advertisement

Category: ಸಂಪಿಗೆ ಸ್ಪೆಷಲ್

ಮೂರ್ತದಿಂದ ಅಮೂರ್ತದೆಡೆಗೆ: ನಾರಾಯಣ ಯಾಜಿ ಬರಹ

ಪಾಶ್ಚಾತ್ಯವೇ ಇರಲಿ ಪೌರಾತ್ಯವೇ ಇರಲಿ ಈ ನಾಟಕ ಹೇಗೆ ಮತ್ತು ಯಾವಾಗ ವಿಕಸಗೊಂಡಿತು ಎನ್ನುವದನ್ನು ನಿಖರವಾಗಿ ತಿಳಿಸಲು ಸಾಧ್ಯವಾಗುವದಿಲ್ಲ. ಪ್ರಾಚೀನ ಗ್ರೀಸಿನ ಮೊದಲ ನಾಟಕಗಳು ಮೇಳಗೀತಗಳಿಂದ ಮೊದಲ ಅಭಿನಯ ಮತ್ತು ನಟನೆಗಳು ಹುಟ್ಟಿರಬಹುದೆನ್ನುವದನ್ನು ತತ್ವಜ್ಞಾನಿ ಅರಿಸ್ಟಾಟಲ್ ಹೇಳುತ್ತಾನೆ. ನಟನೆ ಎನ್ನುವುದು ಜೀವಿಗಳ ಕಲಿಕೆಯ ಮೊದಲ ಹಂತವೆನ್ನಬಹುದು.
ವಿಶ್ವರಂಗಭೂಮಿಯ ದಿನಾಚರಣೆಯ ಹೊತ್ತಿನಲ್ಲಿ ಭರತನ ನಾಟ್ಯಶಾಸ್ತ್ರದ ಪ್ರಸ್ತುತತೆಯ ಕುರಿತು ನಾರಾಯಣ ಯಾಜಿ ಬರಹ

Read More

ಧರೆಯೂ ಮತ್ತು ಬದುಕೂ ಧಗಧಗನೆ ಉರಿಯಿತು…: ಗಿರಿಧರ್‌ ಗುಂಜಗೋಡು ಬರಹ

ನಾನು ಕೆಲಸದ ಸಲುವಾಗಿ ಆಗಾಗ ಮಾತನಾಡುತ್ತಿದ್ದ ಬಾಂಗ್ಲಾದೇಶ ಮೂಲದ ಸಹೋದ್ಯೋಗಿಯೊಬ್ಬರ ಮನೆ ಕೂಡಾ ಸಂಪೂರ್ಣವಾಗಿ ಸುಟ್ಟಿತ್ತು. ಪತಿ ಮತ್ತು ಮೂವರು ಮಕ್ಕಳೊಡನೆ ಮನೆ ಬಿಟ್ಟು ಬರುವಾಗ ಎರಡು ಮೂರು ಸೂಟ್‌ಕೇಸಿನಷ್ಟು ಬಟ್ಟೆ ಮತ್ತು ಅತೀ ಅವಶ್ಯಕವಾದ ವಸ್ತುಗಳನ್ನು ಮಾತ್ರ ತರಲು ಅವರಿಗೆ ಸಾಧ್ಯವಾಗಿದ್ದು. ವಿಮೆ ಕೂಡಾ ತಕ್ಕಮಟ್ಟಿಗೆ ಸಿಗಬಹುದು. ಕಳೆದುಕೊಂಡಿದ್ದನ್ನು ಸಂಪಾದಿಸಲೂಬಹುದು.
ಇತ್ತೀಚೆಗೆ ಕ್ಯಾಲಿಫೋರ್ನಿಯಾದಲ್ಲಿ ಕಾಣಿಸಿಕೊಂಡ ಬೆಂಕಿ ಮತ್ತು ಅದರ ಪರಿಣಾಮಗಳನ್ನು ಹತ್ತಿರದಿಂದ ಕಂಡ ಗಿರಿಧರ್‌ ಗುಂಜಗೋಡು ಬರಹ ನಿಮ್ಮ ಓದಿಗೆ

Read More

ಅಮ್ಮ ಮತ್ತು ಹುಣ್ಣಿಮೆ: ಸುಧಾ ಆಡುಕಳ ಬರಹ

ಪ್ರತಿದಿನ ಸ್ನಾನಮಾಡಿ ಬಂದಕೂಡಲೇ ಅಮ್ಮ ಮುಖದ ತುಂಬ ಪಾಂಡ್ಸ್ ಪೌಡರನ್ನು ಢಾಳಾಗಿ ಹಚ್ಚಿಕೊಳ್ಳುತ್ತಿದ್ದಳು. ಅಶ್ವತ್ಥದ ಎಲೆಯಾಕಾರದಲ್ಲಿ ಕಾಡಿಗೆಯನ್ನು ಚಂದಗೆ ಬೊಟ್ಟಾಗಿಸುತ್ತಿದ್ದಳು. ಎಲ್ಲರಂತೆ ಕುಂಕುಮವನ್ನು ಹಣೆಗೆ, ತಾಳಿಗೆ ಹಚ್ಚಿಕೊಳ್ಳದೇ ತುಟಿಗೆ ನವಿರಾಗಿ ಲೇಪಿಸಿಕೊಳ್ಳುತ್ತಿದ್ದಳು. ಎಲ್ಲವೂ ಮುಗಿದು ಕನ್ನಡಿಯಲೊಮ್ಮೆ ಇಣುಕುವಾಗ ಅವಳ ಮುಖದಲ್ಲೊಂದು ಹೂ-ನಗೆಯಿರುತ್ತಿತ್ತು.
ಇಪ್ಪತ್ತೊಂಭತ್ತು ವರ್ಷಗಳ ಹಿಂದೆ ಹುಣ್ಣಿಮೆಯ ರಾತ್ರಿ ತೀರಿಕೊಂಡ ತಮ್ಮ ತಾಯಿಯ ಕುರಿತು ಸುಧಾ ಆಡುಕಳ ಬರಹ ನಿಮ್ಮ ಓದಿಗೆ

Read More

ತಾಕಲಾಟಗಳ ಮೌನದಲ್ಲಿ ಮೂಡಿದ ವಸಂತ: ನಾರಾಯಣ ಯಾಜಿ ಬರಹ

ಚರ್ಚಿನಲ್ಲಿ ಹಾಡಿದ ಮಗಳು ರೈಲಿನ ಟಿಕೆಟ್ಟಿಗೆ ಹಣ ಕೂಡಿಟ್ಟಿದ್ದನ್ನು ತಿಳಿದಾಗ ಅದನ್ನು ದೆವ್ವವೆನ್ನುವಂತೆ ದೂರ ಎಸೆಯುವ ಅಸಹಾಯಕತೆ ಮತ್ತು ಉಮ್ಮಳಿಸುವ ದುಃಖ, ಕೋಪಬಂದರೂ ಅಜ್ಜನ ಭಾವನೆಯನ್ನು ಅರ್ಥಮಾಡಿಕೊಂಡು ಮೊಮ್ಮಗಳು ಒಳಗೊಳಗೇ ಅನುಭವಿಸುವ ತುಮುಲ ಇವೆಲ್ಲವನ್ನೂ ರಂಗದಲ್ಲಿ ತೆರೆದಿಡುವ ನಾಟಕದ ಕೊನೆಯಲ್ಲಿ ಮೊಮ್ಮಗಳು ಅಜ್ಜನನ್ನು ಒಪ್ಪಿಸಿ ಹೊರಟು ಹೋಗುವಾಗ ಮಗುವಿನ ಪ್ರತಿಭೆ ಕಾಡ ಬೆಳದಿಂಗಳಾಗಲಿಲ್ಲವಲ್ಲ ಎನ್ನುವ ನಿಟ್ಟಿಸಿರು, ಅಜ್ಜನ ಪಾಡು ಎಂಥದೋ ಎನ್ನುವ ನೋವು ಎರಡೂ ಕಾಡುತ್ತದೆ.
ಡಾ. ಶ್ರೀಪಾದ ಭಟ್ ನಿರ್ದೇಶನದ “ಮೌನ ಕಣಿವೆಯ ಹಾಡು” ನಾಟಕದ ಕುರಿತು ನಾರಾಯಣ ಯಾಜಿ ಬರಹ

Read More

ಮೌಲ್ಯಗಳು ಹಿಂದುಮುಂದಾಗುವ ಸಮಯದಲ್ಲಿ…: ವಿಶ್ವನಾಥ ಎನ್‌ ನೇರಳಕಟ್ಟೆ ಬರಹ

ಬ್ಯಾಗ್ ತೆರೆದಾಗ ಅದರೊಳಗೆ ಕಂಡ ಕಂತೆ ಕಂತೆ ನೋಟುಗಳು ಒಂದು ಕ್ಷಣಕ್ಕೆ ಯೂಸುಫ್‌ನ ಅಂತರಂಗದ ನೈತಿಕತೆಯ ಪರೀಕ್ಷಾರಂಗವಾಗುತ್ತದೆ. ಈ ಹಣವನ್ನಿಟ್ಟುಕೊಂಡು ಮಗಳ ಮದುವೆ ಮಾಡಿಮುಗಿಸಬಹುದು ಎಂಬ ಯೋಚನೆ ಬಂದರೂ ಅದನ್ನು ಹತ್ತಿಕ್ಕಿಕೊಂಡು ಬ್ಯಾಗನ್ನು ಆ ಶ್ರೀಮಂತನಿಗೆ ಹಿಂದಿರುಗಿಸುವ ನಿರ್ಧಾರ ಮಾಡುತ್ತಾನೆ ಯೂಸುಫ್. ಅಂತೆಯೇ ಸಿರಿವಂತನ ಮನೆಯನ್ನು ಹುಡುಕಿಹೋಗಿ ಆ ಬ್ಯಾಗನ್ನು ಕೊಟ್ಟುಬರುತ್ತಾನೆ.
ಬದುಕಿನ ಮೌಲ್ಯಗಳ ಸುತ್ತ ಹೆಣೆದ ಕತೆಗಳ ಕುರಿತು ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರಹ ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ