Advertisement

Category: ಸಂಪಿಗೆ ಸ್ಪೆಷಲ್

ವಿಷ್ಣು ಪುರಾಣ: ವಿನಾಯಕ ಎಸ್.‌ ನಾಯಕ ಬರೆದ ಲಲಿತ ಪ್ರಬಂಧ

ಏನೋ ಗಂಭೀರವಾದ ವಿಷಯವಿರಬೇಕೆಂದು ಕರೆ ಸ್ವಿಕರಿಸಿದೆ, ಕರೆ ಸ್ವಿಕರಿಸುತ್ತಿದ್ದಂತೆ ವಿಷ್ಣು ಸ್ವಲ್ಪ ಗಾಬರಿಯಿಂದ ಅಣ್ಣ ಸ್ವಲ್ಪ ಅರ್ಜೆಂಟಾಗಿ ಹಡಿನಬಾಳಕ್ಕೆ ಬಂದು ಹೋಗು. ತಿಮ್ಮಪ್ಪಜ್ಜ ಬಹಳ ಸಿರಿಯಸ್ ಆಗಿದ್ದು ಇನ್ನೇನು ಒಂದೆರಡು ತಾಸು ಬದುಕಿರಬಹುದೇನೋ. ಕಣ್ಣೆಲ್ಲಾ ಮೇಲಕ್ಕೆ ಹೋಗಿ ನಾಲಿಗೆ ಹೊರಕ್ಕೆ ಬಂದಿದೆ ಅಂದ. ತಿಮ್ಮಪ್ಪಜ್ಜನ ವಿಚಾರ ಕೇಳಿ ನನಗೂ ಸ್ವಲ್ಪ ಕನಿಕರ ಹುಟ್ಟಿ ಕೂಡಲೆ ಬರುವುದಾಗಿ ಶುಗರ್, ಹಿಮೊಗ್ಲೊಬಿನ್ ಪರೀಕ್ಷಿಸುವ ಮಿಟರ್ ಹಾಗೂ ಬಿ.ಪಿ ನೋಡುವ ಮೀಟರ್ ತೆಗೆದುಕೊಂಡು ವೈದ್ಯಾಧಿಕಾರಿಗಳ ಅನುಮತಿ ಪಡೆದು ಹೊರಟೆ, ನಾನು ತಿಮ್ಮಪ್ಪಜ್ಜನ ಮನೆಗೆ ತಲುಪಿದಾಗ ಅರ್ಧ ಊರೆ ಅಲ್ಲಿ ನೆರೆದಿತ್ತು.
ವಿನಾಯಕ ಎಸ್.‌ ನಾಯಕ ಬರೆದ ಲಲಿತ ಪ್ರಬಂಧ ನಿಮ್ಮ ಓದಿಗೆ

Read More

“ಕಳೆದು ಹೋದವರ ಹಾಡು” ಗಾಳಿಗಿಟ್ಟ ದೀಪಗಳ  ಪ್ರತಿಬಿಂಬ!: ಡಾ. ರಾಜೇಂದ್ರಕುಮಾರ್  ಕೆ. ಮುದ್ನಾಳ್ ಯಾದಗಿರಿ

‘ನಾನು ಕುಣಿಯುತ್ತೇನೆ, ಬಾಗುತ್ತೇನೆ, ನಡೆಯುತ್ತೇನೆ, ನಾನು ಶೃಂಗಾರ ಮಾಡಿಕೊಳ್ಳುತ್ತೇನೆ ಏನ್ ಈವಾಗ್’ ಎಂಬ ಧೋರಣೆ ಬಲವಾಗುವುದಕ್ಕೆ ತೊಡಗಿದಾಗ ಸಮಾಜವನ್ನು ಎದುರಿಸುವ ಶಕ್ತಿ ನಿರ್ಮಾಣವಾಗುತ್ತಾ ಸಾಗುತ್ತದೆ. ಇಲ್ಲಿ ತಾವೇ ಆತ್ಮಸ್ಥೈರ್ಯವನ್ನು ತಂದುಕೊಳ್ಳಬೇಕು. ತಾವೇ ಸಂತೈಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಅಲ್ಪಸಂಖ್ಯಾತರ ಬದುಕು ಕೆಂಡದ ಹಾದಿಯ ಮೇಲೆ ನಡೆದಂತೆ ಎಂಬ ನಿಲುವು ಪ್ರೇಕ್ಷಕರದಾಯಿತು.
ಮಂಗಳ ಎನ್. ನಿರ್ದೇಶನದ “ಕಳೆದು ಹೋದವರ ಹಾಡು” ನಾಟಕದ ಕುರಿತು ಡಾ. ರಾಜೇಂದ್ರಕುಮಾರ್ ಕೆ. ಮುದ್ನಾಳ್ ಬರಹ

Read More

ಇರಾನಿಗೂ ಹಿಂದೂಸ್ತಾನಕ್ಕೂ ಅಂಟಿರುವ ಸಾವಿರಾರು ವರ್ಷಗಳ ನಂಟು: ಶೇಷಾದ್ರಿ ಗಂಜೂರು ಬರಹ

ಗಹನವಾದ ವಿಚಾರಗಳನ್ನು ಪ್ರಸ್ತಾಪಿಸುವಾಗ ಅವಕ್ಕೆ ಭಾರತದೊಂದಿಗೆ ಸಂಬಂಧ ಕಲ್ಪಿಸುವುದನ್ನು ಪರ್ಷಿಯನ್ ಕಾವ್ಯಪರಂಪರೆಯಲ್ಲಿ ನಾವು ಮತ್ತೆ ಮತ್ತೆ ಕಾಣಬಹುದು. ಉದಾಹರಣೆಗೆ, ಫಿರ್ದೂಸಿಯ ಒಂದು ಶತಮಾನದ ನಂತರ ಬಂದ ನಿಜ಼ಾಮಿ ಗಂಜಾವಿಯ ಹಫ್ತ್ ಪೇಕಾರ್ ಕಾವ್ಯದಲ್ಲಿ ಭಾರತೀಯ ರಾಜಕುಮಾರಿಯೊಬ್ಬಳು ಆ ಕಥನದ ನಾಯಕ ಬೆಹ್ರಾಮನಿಗೆ ಆತ್ಮ ಸಂಯಮದ ಮಹತ್ವವನ್ನು ಹೇಳಿಕೊಡುತ್ತಾಳೆ.
ಇರಾನಿಗೂ ಹಿಂದೂಸ್ತಾನಕ್ಕೂ ಇರುವ ನಂಟಿನ ಕುರಿತು ಶೇಷಾದ್ರಿ ಗಂಜೂರು ಬರಹ

Read More

ಯುಗಾದಿ ಅಂದ್ರೆ ನಂಗಿಷ್ಟ: ರೂಪಶ್ರೀ ಕಲ್ಲಿಗನೂರ್‌ ಬರಹ

ಚೈತ್ರ ಮಾಸ ಅಂದರೆ ಫಕ್ಕನೆ ನೆನಪಾಗೋದು ಹಸಿರು, ಯಾಕಂದ್ರೆ ಚಳಿಗಾಲದಲ್ಲಿ ಬರಡಾಗಿ ನಿಂತಿದ್ದ ಗಿಡ, ಮರಾ, ಬಳ್ಳಿಗಳು ಚಿಗುರೊ ಕಾಲ. ಹಾಗಾಗಿ ಊರ ತುಂಬ, ಗಿಡ-ಮರಗಳೆಲ್ಲ ಹೂ-ಹಸಿರು ಹೊದ್ದು ಚಂದವಾಗಿ ನಗುತ್ತ ನಿಂತಿರುವುದನ್ನ ನೋಡೋದೇ ಚಂದ. ಮೈತುಂಬಾ ಹೂ ಹೊತ್ತು ನಿಲ್ಲುವ ಮರಗಳನ್ನು ನೋಡುವಾಗಲೆಲ್ಲ, ವರ್ಷದ ಪ್ರತಿ ಮಾಸವೂ ಚೈತ್ರ ಮಾಸವೇ ಆಗಿದ್ದರೆ ಎಷ್ಟು ಚಂದ ಅಲ್ಲವೇ ಅನ್ನಿಸುತ್ತೆ.
ಚೈತ್ರಮಾಸದ ಯುಗಾದಿಯ ಕುರಿತು ರೂಪಶ್ರೀ ಕಲ್ಲಿಗನೂರ್‌ ಬರಹ

Read More

ಸರ್ಕಲ್ ಆಫ್ ಲೈಫ್- ಬಾಲ್ಯ, ಹದಿಹರೆಯ, ವೃದ್ಧಾಪ್ಯಗಳ ಆಲಿಂಗನ: ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಬರಹ

ಮಾತೇ ಮಾಣಿಕ್ಯ ಎನ್ನುವವರಿಗೆ ಮಾತು ಮಾಣಿಕ್ಯವಲ್ಲ ಮೌನ ಮಾಣಿಕ್ಯ ಎಂಬ ಸೂತ್ರಕ್ಕೆ ತಕ್ಕಂತೆ ಮಕ್ಕಳು ಅಣಿಯಾಗಿದ್ದರು. ಬೊಂಬೆ ಆಟದಲ್ಲಿ ಪ್ರಾವಿಣ್ಯತೆ ಪಡೆದ ಕ್ರಿಯಾಶೀಲರು ಗೊಂಬೆಯನ್ನು ಬಹಳ ಅಮೋಘವಾಗಿ ಓಡುವುದನ್ನು, ನಡೆಯುವುದನ್ನು, ಹಾರಾಡುವುದನ್ನು, ನಿಧಾನಗತಿಯ ಚಲನೆಯನ್ನು, ಬೈಕ್ ಸವಾರಿ ಮಾಡುವುದನ್ನು, ಕನಸು ಕಾಣುವ ವೈಶಿಷ್ಟ್ಯತೆಯನ್ನು ಅದ್ಭುತವಾಗಿ ರಚಿಸಿಕೊಂಡಿದ್ದರು. ಹದಿಹರೆಯದಲ್ಲಿರುವಾಗ ಮನುಷ್ಯನ ಆಸೆ ಆಕಾಂಕ್ಷೆಗಳು ಕೇವಲ ಮಾತುಗಳಲ್ಲಿಲ್ಲ ಭಾವನೆಗಳಲ್ಲಿವೆ.
ಕಲ್ಬುರ್ಗಿ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡ ‘ಸರ್ಕಲ್ ಆಫ್ ಲೈಫ್’ ಪಪೇಟ್ ಶೋ ಕುರಿತು ಡಾ. ರಾಜೇಂದ್ರಕುಮಾರ್‌ ಮುದ್ನಾಳ್‌ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ