`ಕ್ರಾಂತಿ ಕನ್ನೆಯ ಮೋಹದ ಮಳೆಯಲ್ಲಿ’
ರೂಮಿನ ವರಾಂಡದಲ್ಲಿ ಕೆಲವು ವಿದ್ಯಾರ್ಥಿ ಮಿತ್ರರು ನನ್ನ ಪರವಾಗಿ ಬಂದು ಬಾಗಿಲು ಬಡಿದು ಕೂಗಿದ್ದರು. ಒಳಗಿದ್ದವರು ಹೆದರಿದ್ದರು. ಗುಂಡ್ಲುಪೇಟೆಯ ಶಿವಬುದ್ಧಿ ಎಂಬ ಮಿತ್ರ ಇದ್ದ. ದ.ಸಂ.ಸದ ಅರೆಕಾಲಿಕ ಕಾರ್ಯಕರ್ತನಾಗಿ ರಾಜ್ಯಶಾಸ್ತ್ರದಲ್ಲಿ ಎಂ.ಎ.ಮುಗಿಸುತ್ತಿದ್ದ. ಅವಾಜ್ ಹಾಕಿದ್ದ. ‘ಬಾಗ್ಲು ತಗೀಲಿಲ್ಲಾ ಅಂದ್ರೆ ಯೀಚ್ವಾರಿಂದ ಬೀಗಾ ಹಾಕಂದು ಪೋಲಿಸ್ಗೆ ಕಂಪ್ಲೇಂಟ್ ಕೊಡ್ತೀನಿ’ ಎಂದು ಅಬ್ಬರಿಸಿದ್ದ. ಅವರು ನನ್ನನ್ನು ಹೊರಗೆ ಬಿಡಲೇ ಬೇಕಿತ್ತು. ಅವನೊಮ್ಮೆ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದಾಗ ಅವರ ಕಾರಿಗೆ ಅಡ್ಡ ನಿಂತು ಧಮಕಿ ಹಾಕಿ ನಮ್ಮ ಹಳ್ಳಿಗೆ ಇಂತಿಂತಹ ಕೆಲಸಗಳನ್ನು ಮಾಡಿಕೊಡಬೇಕೆಂದು ಆಗ್ರಹಿಸಿ ಯಶಸ್ವಿ ಆಗಿದ್ದ.
ಮೊಗಳ್ಳಿ ಗಣೇಶ್ ಬರೆಯುವ ಸರಣಿ.

