Advertisement

Category: ಸರಣಿ

‘ಯಕ್ಷಗಾನೀಯವಲ್ಲದ್ದು ಔಚಿತ್ಯವೂ ಅಲ್ಲ’

ಯಕ್ಷಗಾನದ ಆವರಣದಲ್ಲೇ ಹುಟ್ಟಿ ಬೆಳೆದ ಜಿ ಎಸ್ ಭಟ್ಟರು, ಗುಂಡುಬಾಳದ ಆಟ ನೋಡುತ್ತಲೇ ಬೆಳೆದವರು. ಅವರ ಯೌವನ ಕಾಲದಲ್ಲಿ ನಾಟಕದ ಬಗ್ಗೆಯು ಆಸಕ್ತಿ ವಹಿಸಿದ್ದರು. ಗುಂಡುಬಾಳದ ಹರಕೆ ಆಟವು ಯಕ್ಷಗಾನ ಕಲಾ ಪ್ರಕಾರದಲ್ಲೇ ವಿಶಿಷ್ಟವಾದ ಮಾದರಿ. ಅಲ್ಲಿ ದೇವರೇ ಪ್ರೇಕ್ಷಕರು. ಹಾಗಾದ್ದರಿಂದಲೇ ಅದು ಹೊಸ ನಡೆಯ ಪ್ರಯೋಗಗಳಿಗೆ…
“ಯಕ್ಷಾರ್ಥ ಚಿಂತಾಮಣಿ”ಯಲ್ಲಿ ಜಿ ಎಸ್ ಭಟ್ಟರ ಜೊತೆಗೆ ತಾವು ನಡೆಸಿದ ಸಂದರ್ಶನವನ್ನು ಬರೆದಿದ್ದಾರೆ ಕೃತಿ ಆರ್‌ ಪುರಪ್ಪೇಮನೆ

Read More

ಗಣಿತವೊಂದು ಭಾಷೆಯೆಂಬ ಹೊಸ ದೃಷ್ಟಿ

ನಾವು ಬಳಸುವ ಸಂಖ್ಯೆಗಳು, ವಿಜ್ಞಾನದಲ್ಲಿ ಬರುವ ಅಳತೆಯ ಮಾನಗಳು, ಇತಿಹಾಸದ ಇಸವಿಗಳು, ಸಮಯ, ಕಾಲಗಣನೆ ಮೊದಲಾದ ಯಾವುದೇ ಸಂದರ್ಭವನ್ನು ತೆಗೆದುಕೊಳ್ಳಿ. ಅಲ್ಲಿ ಗಣಿತ ಎಂಬ ಭಾಷೆಯನ್ನು ಬಳಸದೇ ಇದ್ದರೆ ಸಂದರ್ಭವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಗಣಿತ ಎಂಬ ಭಾಷೆಗೆ ಅಂಕೆಗಳೇ ಅಕ್ಷರಗಳು. ಕೂಡುವುದು, ಕಳೆಯುವುದು, ಗುಣಿಸುವುದು, ಭಾಗಿಸುವುದು ಅದರ ವ್ಯಾಕರಣ ಎಂದು ಒಮ್ಮೆ ಯೋಚಿಸಿ ನೋಡು ಆಗ ನೀನು ಗಣಿತ ವಿಷಯವನ್ನು ನೋಡುವ ದಿಕ್ಕೇ ಬದಲಾಗುತ್ತದೆ.
‘ಗಣಿತ ಮೇಷ್ಟರ ಶಾಲಾ ಡೈರಿ’ಯಲ್ಲಿ ಅರವಿಂದ ಕುಡ್ಲ ಇಂದಿನ ಬರಹ

Read More

ಸಾಮಾಜಿಕ ಸಂಘರ್ಷ ಮತ್ತು ಕೊಡುಕೊಳ್ಳುವಿಕೆ

ಕೆರೆ ಒತ್ತುವರಿಯ ಕಾರಣಕ್ಕೆ ಮಳೆನೀರು ಗಂಟಿಚೋರರ ಓಣಿಗೆ ನುಗ್ಗಿತು. ನೀರುನಿಂತು ಆಡು ಕುರಿಗಳು ಸಾವನ್ನಪ್ಪಿದವು. ಮೇವಿನ ಬಣವೆಗಳು ನೀರಲ್ಲಿ ತೇಲಿದವು. ಹೀಗಾಗಿ ಗಂಟಿಚೋರರು ಇದರ ವಿರುದ್ಧ ಕೋರ್ಟಿಗೆ ಹೋದರು. ಕೋರ್ಟು ಕೆರೆಯನ್ನು ಪುನಶ್ಚೇತನ ಮಾಡಲು ಆದೇಶಿಸಿತು. ಈ ಆದೇಶ ಪಾಲನೆಯಾಗಲಿಲ್ಲ. ನಂತರ  ನ್ಯಾಯಾಂಗ ನಿಂದನೆ ದಾವೆ ಹೂಡಿದರು.
‘ಗಂಟಿಚೋರರ ಕಥನಗಳು ‘ಸರಣಿಯಲ್ಲಿ ಡಾ. ಅರುಣ್ ಜೋಳದ ಕೂಡ್ಲಿಗಿ  ಸಾಮಾಜಿಕ ಸವಾಲುಗಳ  ಕುರಿತು ಬರೆದಿದ್ದಾರೆ. 

Read More

ತೊರೆಯಲಾಗದ ಮಾಯೆ ಹಿಯಾ ಯಾಂಗ್ಕೆ

ದೂರವಾಗಿರುವ ತನ್ನ ಸಂಸಾರದ ಸದಸ್ಯರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತನಾದ ಹಾನ್ ದೈನಂದಿನ ನಿರ್ವಹಣೆಗಾಗಿ ಅತಿ ಕಳಪೆ ಮಟ್ಟದ ವಸತಿ ಮತ್ತು ಉದರ ಪೋಷಣೆಯಿಂದ ತೃಪ್ತನಾಗುತ್ತಾನೆ ಮತ್ತು ತನ್ನ ಶೋಧ ಕಾರ್ಯ ಮುಂದುವರಿಸುತ್ತಾನೆ. ಚಿತ್ರದುದ್ದಕ್ಕೂ ಕಟ್ಟಡ ಕೆಡವುತ್ತಿರುವ ಹಾಗೂ ಅದರ ಅವಶೇಷಗಳ ನಡುವೆಯೇ ಹಾನ್ ಸೇರಿದಂತೆ ಕೆಲಸಗಾರರ ಚಲನೆ ಕಾಣುತ್ತಿದ್ದು ಅವು ಅವನ ಅಂತರಂಗದ ತುಮುಲ ಮತ್ತು ಕಳವಳಗಳ ರೂಪಕಗಳಾಗುತ್ತವೆ. ಎ.ಎನ್. ಪ್ರಸನ್ನ ಬರೆಯುವ ಸಿನಿಮಾ ವಿಶ್ಲೇಷಣೆ

Read More

ನೀಲಿ ಬರೆಗಳ ಮುಟ್ಟಿ ಮುಟ್ಟಿ ನೋಡಿದ

ಅಂತೂ ಚಿಕ್ಕಪ್ಪ ಬಂದಿದ್ದ. ಯಾವತ್ತಿನಂತೆ ಎದ್ದು ನಿಂತು ಕೈ ಮುಗಿದೆ. ಬೀಗ ತೆಗೆದು; ‘ಐದು ನಿಮಿಷ ಇರಿ; ಪಲಾವ್ ತರ್ತೀನಿ’ ಎಂದು ಸೈಕಲೇರಿ ಹೋದ. ಪಲಾವ್ ಎನ್ನುವ ಹೆಸರನ್ನೆ ನಾನಾಗ ಕೇಳಿರಲಿಲ್ಲ. ಕೈಕಾಲು ಮುಖ ತೊಳೆದು ದೇವರಿಗೆ ಕಡ್ಡಿ ಹಚ್ಚು ಎಂದ ತಾತ. ಹಾಗೇ ಮಾಡಿದೆ. ಪಲಾವ್ ತಂದ ಚಿಕ್ಕಪ್ಪ. ಗಮ್ಮೆನ್ನುವ ಪೊಟ್ಟಣ. ತಾತನ ಮೆಲ್ಲಗೆ ‘ಇದೇನಪ್ಪಾ’ ಎಂದು ಕೇಳಿದ. ‘ಗಮುಲ್ದನ್ನ’ ಎಂದ. ಅಹಾ! ಅಂತಹ ಗಮಗಮಿಸುವ ಅನ್ನವ ನಾನೆಂದೂ ಉಂಡಿರಲಿಲ್ಲ. ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಹದಿನೈದನೆಯ ಕಂತು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ