Advertisement

Category: ಸರಣಿ

ಉಪೇಂದ್ರನ ಹಾವಳಿ ಮತ್ತು ರಾಮಾಂಜಿ ಲವ್

ಸರ್ಕಾರದಿಂದ ನಡೆಯುವ ಯಾವುದೇ ಪರೀಕ್ಷೆಗಳನ್ನು ನಡೆಸಲು ನಮ್ಮ ಜೂನಿಯರ್ ಕಾಲೇಜಿನ ಕೊಠಡಿಗಳನ್ನ ಕಡ್ಡಾಯವಾಗಿ ತೆಗೆದುಕೊಳ್ಳುತ್ತಿದ್ದುದರಿಂದ ಆಗೆಲ್ಲ ನಮಗೆ ದೀರ್ಘ ರಜೆ ಸಿಗುತ್ತಿತ್ತು. ಚೆನ್ನಾಗಿ ಓದಬೇಕೆಂಬ ಕನಸು ಹೊತ್ತು ಬಂದಿದ್ದ ನಮಗೆ ಇಲ್ಲಿನ ವಿಪರೀತ ರಜೆಗಳಿಂದಾಗಿ ನಿರಾಸೆ ಉಂಟಾಗಿತ್ತು. ನಮಗೆ ಇತ್ತ ಕೆಲ ತಿಂಗಳು ಕಳೆದರೂ ಕಾಲೇಜು ಪ್ರಾರಂಭ ಆಗದೆ ಊರಲ್ಲೆ ಉಳಿದಾಗ, ಪಕ್ಕದ ಮನೆ ಕೇಸುದೊಡಪ್ಪ ‘ಎಲ್ಲೊ ಪೇಲಾಗವೆ ಅದ್ಕೆ ಹೋಗಿಲ್ಲ’ ಎಂದು ಅನುಮಾನ ಪಟ್ಟುಕೊಳ್ಳುತ್ತಿತ್ತು. ಗುರುಪ್ರಸಾದ್‌ ಕಂಟಲಗೆರೆ ಬರಹ.

Read More

ಠಕ್ಕರ ಸಲಹುವ `ಕಾಳಿ’ ಮತ್ತು ಠಕ್ಕದೀಕ್ಷೆ

ಸರ್ವಶಕ್ತನ ಹೆಂಡತಿಯನ್ನು ದೇವಿ, ಭವಾನಿ, ಕಾಳಿ- ಹೀಗೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಅವಳು ಒಂದು ಬೊಂಬೆಯನ್ನು ಮಾಡಿದಳು. ಅದಕ್ಕೆ ಜೀವಶಕ್ತಿ ತುಂಬಿದಳು. ಅದು ಜೀವ ತುಂಬಿಕೊಂಡ ಕೂಡಲೇ, ತನ್ನ ಬಹಳ ಮಂದಿ ಭಕ್ತರನ್ನು ಕೂಡಿಸಿದಳು. ಅವಳು ಅವರಿಗೆ ಠಕ್ಕರು ಎಂದು ಹೆಸರಿಟ್ಟಳು. ಅವರಿಗೆಲ್ಲಾ ಠಕ್ಕ ವೃತ್ತಿಯನ್ನು ಅದರ ಚಮತ್ಕಾರಗಳನ್ನು ಕಲಿಸಿದಳು. ಅದರ ಗುಟ್ಟುಗಳನ್ನು ಅವರೆಲ್ಲಾ ಸರಿಯಾಗಿ ಅರಿತುಕೊಳ್ಳುವಂತೆ ಮಾಡಲು, ತಾನು ರೂಪಿಸಿ ಜೀವ ನೀಡಿದ್ದ ಬೊಂಬೆಯನ್ನು ತನ್ನ ಕೈಯಾರೆ ನಾಶ ಮಾಡಿದಳು. ಅವಳು ಠಕ್ಕರಿಗೆ…

Read More

ಏಕಸೂತ್ರದಲ್ಲಿ ಬಂಧಿಯಾದ ಭಿನ್ನ ನೆಲೆಗಳು

ವಿಶ್ವನಾಥರ ಅದೃಷ್ಟವೆಂದರೆ, ಪಲ್ಲಟಗಳು, ಪರಿವರ್ತನೆ ಜರುಗುತ್ತಿದ್ದ ಕಾಲದಲ್ಲಿ ಎಲ್ಲವನ್ನೂ ಬಿಡುಗಣ್ಣಿನಿಂದ ನೋಡುವಂತ ವಯಸ್ಸಿನಲ್ಲಿ ಅವರಿದ್ದುದು. ಮುಂಬೈನಲ್ಲಿ ಸಂಶೋಧಕನ ವೃತ್ತಿ, ನಂತರ ಅಮೆರಿಕಾದಲ್ಲಿ ವೃತ್ತಿ, ಸಂಶೋಧನೆಗಳಿಂದಾಗಿ ಮೂಡಿದ ವಿಶಾಲ ಜೀವನ ದೃಷ್ಟಿ, ಇವುಗಳ ಹಿನ್ನೆಲೆಯಲ್ಲಿ ಸುಮಾರು ೫೦-೬೦ ವರ್ಷಗಳ ನಂತರ ಒಂದು ರೀತಿಯ ‘ಮಾನಸಿಕ ದೂರ’ದಿಂದ ಈ ಕತೆ ಬರೆದಿದ್ದು, ತಂದೆ-ತಾಯಿ-ಪತ್ರಿಕೆಗಳ ಬಗ್ಗೆ ಮಾತ್ರವಲ್ಲ, ಸೋದರ ಬ್ರಹ್ಮಾನಂದ, ಕುಟುಂಬಕ್ಕೆ ಆಪ್ತರಾಗಿದ್ದವರ…

Read More

ನಿಗೂಢತೆಯೆಡೆಗೆ ಚಲಿಸುವ ಇರಾನ್‌ನ ʻಸರ್ಟಿಫೈಡ್‌ ಕಾಪಿʼ

ಅಬ್ಬಾಸ್ ಕಿಯರೋಸ್ತಮಿ ತನ್ನ ನೆಚ್ಚಿನ ಮನೋಭೂಮಿಕೆಗೆ ಹತ್ತಿರವಾದ ಮನುಷ್ಯನ ಅಂತರಂಗದಲ್ಲಿ ಹುದುಗಿರುವ ಭಾವನೆಗಳ ಏರಿಳಿತವನ್ನು ತೀರಾ ಸರಳವಾದ ನಿರೂಪಣಾ ವಿಧಾನದಿಂದ ಪ್ರಸ್ತುತಪಡಿಸುತ್ತಾನೆ. ಅವನ ಚಿತ್ರಗಳ ಪಾತ್ರಗಳ ಸೃಷ್ಟಿಕ್ರಿಯೆ ಹಲವು ಪದರುಗಳಲ್ಲಿ ಜರುಗುವುದು ಸಾಮಾನ್ಯ. ಇವುಗಳು ಅಷ್ಟಕ್ಕೆ ನಿಲ್ಲದೆ ತೀರ ಗಹನ ವಿಷಯಗಳನ್ನು ಅತ್ಯಂತ ಕಡಿಮೆ ಘಟನೆಗಳನ್ನು ಉಪಯೋಗಿಸಿ ಪ್ರಸ್ತುತಪಡಿಸುವುದು ಅವನ ಶೈಲಿಯಾಗಿದೆ. …

Read More

ಹಾಸ್ಟೆಲ್ ರೂಂನಲ್ಲಿ ಓದುವ ‘ಸೆಟಪ್’ ನಿರ್ಮಾಣ

ರಂಗಸ್ವಾಮಣ್ಣ ಮಾವನ ಬಗೆಗೆ ಕೊಟ್ಟಿದ್ದ ಬಿಲ್ಡಪ್‌ನಿಂದ ರೂಮಿನವರಾದ ನಾವಷ್ಟೆ ಅಲ್ಲದೆ ಅಕ್ಕಪಕ್ಕದವರೂ ಸೈಲೆಂಟಾಗಿದ್ದರು. ಗಂಟೆ ಗಟ್ಟಲೆ ಇದ್ದ ತಿಮ್ಮರಾಯಪ್ಪನವರು ಬಹಳ ಹೊತ್ತು ಭಾಮೈದುನನನ್ನು ಮಾತ್ರವಲ್ಲದೆ ನಮ್ಮನ್ನೂ ವಿಚಾರಿಸಿಕೊಂಡರು. ಕುಂದೂರು ತಿಮ್ಮಯ್ಯನವರ ಮಗ ಮತ್ತು ಭಾಮೈದ ಎಂದು ತಿಳಿದ ನಂತರ ನಮ್ಮನ್ನೂ ಕಾಳಜಿಯಿಂದ ಮಾತಾಡಿಸಿದರು. ಭಾಮೈದನ ವಿದ್ಯಾಭ್ಯಾಸದ ಸ್ಥಿತಿಗತಿಯನ್ನ ಒಂದಷ್ಟು ಒಳಹೊಕ್ಕೆ ಕೆದಕಿದ ನಂತರವೂ ಜೋಬಿಗೆ ಕೈ ಹಾಕಿ ಏನನ್ನೂ ತೆಗೆದಿದ್ದು ಕಾಣಲಿಲ್ಲ. ಹೊರಡಲು ಸಿದ್ಧರಾದ ತಿಮ್ಮರಾಯಪ್ಪನವರನ್ನ…

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ