Advertisement

Category: ವಾರದ ಕಥೆ

ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಉಮಾ ರಾವ್‌ ಬರೆದ ಕತೆ

ಎಂಟುಗಂಟೆಗೆ ಕೆಲಸದವಳು ಬಂದಾಗಲೂ ಬಾಗಿಲು ತೆರೆದ ಕೂಡಲೇ ಅದೇ ದೃಶ್ಯ. ಜೊತೆಗೆ ಅವನ ಮನೆ ಬಾಗಿಲು ತೆಗೆದಾಗ ಹಾಲಿನಲ್ಲಿ ಕಣ್ಣಿಗೆ ಬೀಳುತ್ತಿದ್ದ ನೀರಿನ ಹೂಜಿ, ಹಾಸಿದ ಚಾಪೆ, ಮುಂದೆ ದೇವರಪಟ ಎಲ್ಲಾ ನಾಪತ್ತೆ. ಕೆಲಸದವಳನ್ನು ಮುಂದೆ ಮಾಡಿಕೊಂಡು ಒಂದೆರಡು ಹೆಜ್ಜೆ ಒಳಗೆ ಹೋದಾಗ ಮನೆ ಖಾಲಿಯಾಗಿರುವುದು ಅರಿವಾಯಿತು. ತಕ್ಷಣ ಇವರು ಇಂಟರ್‌ಕಾಮ್‌ನಲ್ಲಿ ಸೆಕ್ಯೂರಿಟಿಯವನಿಗೂ, ರಾಧಾಕೃಷ್ಣನ್‌ಗೂ ಹೇಳಿದರು. ಎಲ್ಲಾ ತಕ್ಷಣ ಓಡಿ ಬಂದರು.
ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಉಮಾ ರಾವ್‌ ಬರೆದ ಕತೆ “ಹಾವಾಡಿಗ”

Read More

ಡಾ. ಚಂದ್ರಮತಿ ಸೋಂದಾ ಬರೆದ ಈ ಭಾನುವಾರದ ಕತೆ

ಯಾಕೋ ಅವರ ಮನೆಯ ಕೆಲವು ಆಗುಹೋಗುಗಳಿಗೆ ನಾನು ಸಾಕ್ಷಿಯಾಗಿರುವಂತೆ ನನಗೆ ಅನಿಸಿದ್ದು ಸುಳ್ಳಲ್ಲ. ಮೊನ್ನೆಯ ಭೇಟಿಯ ನಂತರದಲ್ಲಿ ಯಾಕೋ ಗಂಗತ್ತೆ ಬಹಳವಾಗಿ ನೆನಪಾಗುತ್ತಿದ್ದಾರೆ. ಅಷ್ಟು ವರ್ಷ ಮನೆಯಿಂದ ದೂರವಿದ್ದ ಅವರಿಗೆ ಕೊನೆಗಾಲಕ್ಕೆ ಮತ್ತೆ ಆ ಮನೆಗೆ ಬರಬೇಕು ಅನಿಸಿದ್ದು ಯಾಕೆ? ಮನೆಯವರು ಒಪ್ಪದಿರುವುದರಿಂದ ಅವರಿಗೆ ಆ ಮನೆಗೆ ಬರುವ ಅವಕಾಶ ದೊರಕಿರಲಿಲ್ಲ. ಆದರೆ ಅವರ ಸಾವು ರಾಮಣ್ಣನನ್ನು ವಿಚಲಿತಗೊಳಿಸಿತೇ? ಸಾವಿನ ಸುದ್ದಿ ತಿಳಿದಿದ್ದೆ ರಾಮಣ್ಣ ಜಾನಕ್ಕ ಅಲ್ಲಿಗೆ ಧಾವಿಸಿದ್ದರಂತೆ.
ಡಾ. ಚಂದ್ರಮತಿ ಸೋಂದಾ ಬರೆದ ಈ ಭಾನುವಾರದ ಕತೆ “ಕಣ್ಣಾಚೆಯ ನೋಟ” ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ತೇಜಸ್ವಿನಿ ಹೆಗಡೆ ಕತೆ

ಗಂಡನಿಂದ ಒದಗಿರುವ ವಿಪತ್ತನ್ನು ತಿಳಿದ ಪಾರ್ವತಮ್ಮ, ಚಿಂತೆಯಲ್ಲಿ ತಮ್ಮ ಆಪ್ತರೊಂದಿಗೆ ಗುಟ್ಟನ್ನು ರಟ್ಟಾಗಿಸಿದ್ದು ದೊಡ್ಡ ಪ್ರಮಾದವಾಗಿ ಬಿಟ್ಟಿತ್ತು. ಅದು ಹೇಗೋ ಈ ಕಳುವಿನ ವಿಷಯ ಬೀಗರ ಕಿವಿಗೂ ಬಿದ್ದು, ಸ್ಫೋಟವಾಗಿ, ಹುಡುಗನ ಹೆತ್ತವರು ಈಗ ಮದುವೆಗೆ ನಿರಾಕರಿಸತೊಡಗಿದ್ದರು. ರಾಮಭಟ್ಟರು ಇನ್ನಿಲ್ಲದಂತೇ ಬೇಡಿಕೊಳ್ಳುತ್ತಿದ್ದರೂ, ಕೊನೆಗೆ ನೆಂಟರಿಷ್ಟರು ದಬಾಯಿಸಿದರೂ, ಹಠದಿಂದ ಒಪ್ಪದ ಬೀಗರು, ವಾಗ್ದಾನ ಶಾಸ್ತ್ರಕ್ಕಾಗಿ ಅಲ್ಲೇ ಕುಳಿತಿದ್ದ ಹುಡುಗಿಯ ಕಡೆ ಕಣ್ಣೆತ್ತಿಯೂ ನೋಡದೇ ಹೊರ ನಡೆದುಬಿಟ್ಟರು.
ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ತೇಜಸ್ವಿನಿ ಹೆಗಡೆ ಬರೆದ ಕತೆ “ಮರಕತ”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ವನರಾಗ ಶರ್ಮಾ ಕತೆ

ಭೂಮಿ ಕಂಪಿಸುತ್ತಿದೆ. ಇಮಾರತುಗಳು, ಗಿಡಮರಗಳು ಅಲುಗಾಡುತ್ತಿವೆ. ಏನಾಗುತ್ತಿದೆ? ಎಂಬುದೇ ತಿಳಿಯದೇ ಎಲ್ಲರೂ ಒಂದು ಕ್ಷಣ ದಂಗಾದರು. ಮರುಕ್ಷಣದಲ್ಲಿಯೇ ತೀವ್ರ ಭೂಕಂಪದ ಅನುಭವ ಆಗುತ್ತಿದ್ದಂತೆ, ಕೆಲವರ ಮೊಬೈಲಿನಲ್ಲಿ ಕರಾವಳಿಯಲ್ಲಿ ತ್ಸುನಾಮಿ ಎರಗಿದ ಮೆಸೇಜ್ ಬರತೊಡಗಿದಾಗ ಎದೆ ಬಡಿತ ಜೋರಾಯಿತು. ಮಾತು ಹೊರಡುತ್ತಿಲ್ಲ. ಮುಕುಲ ಇಲ್ಲಿಂದ 35-40 ಕಿಮಿ ದೂರದ ತುಕುಶಿಕ ನಗರದ ಕಂಪನಿಯ ಆಫೀಸಿನಲ್ಲಿದ್ದಳು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ವನರಾಗ ಶರ್ಮಾ ಕತೆ “ವಿಪ್ಲವ” ನಿಮ್ಮ ಓದಿಗೆ

Read More

ಮಂಜುನಾಥ್ ಕುಣಿಗಲ್ ಬರೆದ ಈ ಭಾನುವಾರದ ಕತೆ

ಅಮ್ಮನಿಗೆ ವಿಷಯ ತಿಳಿದರೆ ಎದೆಹೊಡೆದು ಕುಸಿದುಬಿದ್ದಾಳು! ಆಕೆ ತನ್ನ ಜೀವನ ಒತ್ತೆಯಿಟ್ಟು ಅದೂ-ಇದೂ ಚಾಕರಿ ಮಾಡುತ್ತಾ ನಮ್ಮನ್ನು ಸಾಕಿದ್ದು. ಆಕೆಗೆ ಏನು ಸುಖ ಕೊಟ್ಟಿದ್ದೆ? ಅದ್ಯಾವುದೋ ನನ್ನ ಕಂಪ್ಯೂಟರ್ ಕೋರ್ಸಿಗೆ ಹನ್ನೆರೆಡು ಸಾವಿರವನ್ನು ಹೊಂಚಲು ಎಲ್ಲೆಲ್ಲೋ ಹೊಟ್ಟೆಬಟ್ಟೆ ಕಟ್ಟಿ ಅದೆಷ್ಟು ಕಷ್ಟಪಟ್ಟಳು? ಆ ದುಡ್ಡನ್ನು ನಾನಿನ್ನೂ ವಾಪಸ್ ಕೊಟ್ಟಿಲ್ಲ! ಹೊಟ್ಟೆಯಲ್ಲಿ ಏನೋ ಕಟ್ಟಿಕೊಂಡ ಸಂಕಟ!
ಮಂಜುನಾಥ್ ಕುಣಿಗಲ್ ಹೊಸ ಕಥಾ ಸಂಕಲನ “ದೂರ ದೇಶದ ದೇವರು” ಕೃತಿಯ ಶೀರ್ಷಿಕೆ ಕತೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ