Advertisement

Category: ಸರಣಿ

ದೂರ ದೂರ ಹೋದರೆ…

ನಾಯಕಿ ನೇಯ್ಗೆ ಮಾಡಿದ ಕೆಂಪು ವಸ್ತ್ರವನ್ನು ಶಾಲಾ ಕಟ್ಟಡದಲ್ಲಿ ಕಟ್ಟಲಾಗುತ್ತದೆ. ಈ ಎಲ್ಲ ಘಟನೆಗಳು ಜರುಗಿದರೂ ಒಮ್ಮೆಯೂ ನಾಯಕ-ನಾಯಕಿಯರ ಮುಖಾಮುಖಿಯಾಗಿರುವುದಿಲ್ಲ. ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವುದರಿಂದ ಉಂಟಾಗುವ ಕಲರವವನ್ನು ಮನೆಯಲ್ಲಿರುವ ನಾಯಕಿ ತನ್ನಜ್ಜಿಯ ಜೊತೆಗೆ ಕೇಳಿಸಿಕೊಳ್ಳುತ್ತ ತನ್ನಷ್ಟಕ್ಕೆ ಸಂಭ್ರಮಿಸುತ್ತಾಳೆ. ಶಿಕ್ಷಕ ನಾಯಕನಿಗೆ ಪ್ರತಿದಿನ ಮಕ್ಕಳ ಜೊತೆ ಊರಾಚೆ ಓಡಾಡುವುದು ವಾಡಿಕೆ. ಅವನು ಹೀಗೆ ಮಾಡುವುದನ್ನು ನಿರೀಕ್ಷೆಯಿಂದ ಕಾಯುವ ಆತಂಕ, ಲಜ್ಜೆ ಸಂತೋಷ ಇವುಗಳನ್ನು ಒಳಗೊಂಡ ನಾಯಕಿಗೆ ನಾಯಕನ ಪ್ರಥಮ ಭೇಟಿಯಾಗುತ್ತದೆ.
ಎ.ಎನ್. ಪ್ರಸನ್ನ ಬರೆಯುವ ಸಿನಿಮಾ ಸರಣಿ

Read More

ಯುದ್ಧದಲ್ಲಿ ಗೆಲ್ಲುವುದು ಸಾವು ಮಾತ್ರ…

ಯುಸಿ಼ಫ್ ತನ್ನ ಹದಿನೈದು ವರ್ಷದ ಮಗ ಆದಮ್‌ನ ಹಿಂದೆ ನಿಂತ. ಅಂಬೆಗಾಲು ಹಾಕುತ್ತ ಜನರ ಕಾಲೊಳಗಿಂದ ಬಾಗಿಲ ಬಳಿ ಹೋಗಲು ಮಗನಿಗೆ ತಿಳಿಸಿದ. ಆದಮ್ ಪ್ರಯತ್ನಪಟ್ಟು ಬಾಗಿಲ ಬಳಿ ಬಂದು ಹೊರಗೆ ನುಸುಳಿ ಓಡತೊಡಗಿದ. ಆದರೆ ನಾಜಿಗಳ ಗುಂಡಿಗೆ ಗುರಿಯಾದ. ಮಗನನ್ನು ಹಿಂಬಾಲಿಸಿದ ಯುಸಿ಼ಫ್ ಮೇಲೂ ಗುಂಡು ಹಾರಿಸಲಾಯಿತು. ನಾಜಿಯೊಂದು ಓಡಿ ಬಂದು ಬಿದ್ದ ಯುಸಿ಼ಫ್‌ನನ್ನು ಬೂಟುಗಾಲಿನಿಂದ ಒದ್ದು, ಬಂದೂಕಿನಿಂದ ತಿವಿಯಲಾಯಿತು. ಖತಿನ್ ಅನುಭವಿಸಿದ ಕೊನೆ ಗಳಿಗೆಯನ್ನು ಮೂರ್ಛಾವಸ್ಥೆಯಲ್ಲಿದ್ದ ಯುಸಿ಼ಫ್ ನೋಡಲಾಗಲಿಲ್ಲ. ನಾಜಿಗಳು ಅಲ್ಲಿಂದ ಹೋದ ನಂತರ ನೆರೆ ಗ್ರಾಮದ ಜನರು ಯುಸಿ಼ಫ್‌ನನ್ನು ಬದುಕಿಸಿದರು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ಸರಣಿ

Read More

ಮದ್ರಾಸಿನಂತಹ ಲಂಡನ್ನಿನಲ್ಲಿದ್ದ ತಪಸ್ವಿ

ಲಂಡನ್ ಬದುಕಿನ ದೀರ್ಘ ಅನುಭವವನ್ನು ಹೀಗೆ ಬರೆದುಕೊಂಡಿದ್ದ ವಿ.ಕೆ. ಕೃಷ್ಣ ಮೆನನ್, ಅದಕ್ಕಿಂತ 43 ವರ್ಷಗಳ ಹಿಂದೆ 1920ರಲ್ಲಿ, ವಕೀಲಿಕೆಯ ವಿದ್ಯಾರ್ಥಿಯಾಗಿ ಮದ್ರಾಸಿನಲ್ಲಿದ್ದಾಗ ಅನ್ನಿ ಬೆಸೆಂಟರ ಹೋಂ ರೂಲ್ ಚಳವಳಿಯ ಪ್ರಭಾವಕ್ಕೆ ಒಳಗಾಗಿದ್ದರು. ಬೆಸೆಂಟರೂ ರಾಷ್ಟ್ರೀಯತೆಯ ಖಾತೆಗೆ ಇನ್ನೊಬ್ಬ ವ್ಯಕ್ತಿಯನ್ನು ಜಮಾ ಮಾಡುವ ಉದ್ದೇಶ ಇಟ್ಟು ಹುಡುಕಾಟದಲ್ಲಿ ಇದ್ದವರು. ಮೆನನ್‌ರನ್ನು “ಹೋಮ್ ರೂಲ್” ಕುಟುಂಬದ ಸದಸ್ಯನನ್ನಾಗಿ ಸ್ವೀಕರಿಸಿದರು ಮತ್ತು ಇಂಗ್ಲೆಂಡ್‌ನಲ್ಲಿ ಮೆನನ್‌ರ ಥಿಯೋಸ್ಪಿಯನ್ ಅರಿವನ್ನು ಹೆಚ್ಚಿಸಬಹುದಾದ ಓದಿನ ವಿದ್ಯಾರ್ಥಿವೇತನಕ್ಕಾಗಿ ಓಡಾಡಿದರು.
ಯೋಗೀಂದ್ರ ಮರವಂತೆ ಬರಹ

Read More

ಓದುಗರಿಗೊಂದು ಪತ್ರ…

ಈ ಆತ್ಮಕಥನ ಕಾದಂಬರಿಯಲ್ಲಿ ಬರುವ ಎಲ್ಲ ಪಾತ್ರಗಳ ನೆನೆದರೆ ತುಂಬ ಬೇಸರವಾಗುತ್ತದೆ. ಅನೇಕರು ಸತ್ತು ಹೋಗಿದ್ದಾರೆ… ಅವರು ಕೇವಲ ಪಾತ್ರವಾಗಿರಲಿಲ್ಲ… ನನ್ನ ವ್ಯಕ್ತಿತ್ವದ ಬೇರುಗಳಾಗಿದ್ದರು. ಆದರೆ ಆ ಕ್ಷಣಕ್ಕೆ ಪಾತ್ರಗಳಾಗಿಯೇ ಬರೆಹಕ್ಕೆ ಕರೆದುಕೊಂಡೆ. ಇವನು ಕೆಟ್ಟವನು… ಅವರು ಬಹಳ ಒಳ್ಳೆಯವರು ಎಂಬ ಭೇದ ಮಾಡಲಿಲ್ಲ. ಬಾಲ್ಯದಲ್ಲಿ ಇಡೀ ಊರಾದ ಊರೇ ನೆರೆದು ರಾಮಾಯಣ ಮಹಾಭಾರತಗಳ ನಾಟಕ ನೋಡುತ್ತಿದ್ದರು. ನಮಗೆ ರಾಮನೂ ರಾವಣನೂ ಇಬ್ಬರೂ ನಮ್ಮ ಸ್ವಂತ ಸಂಬಂಧಿಕರೇ ಆಗಿರುತ್ತಿದ್ದರು.
‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯಲ್ಲಿ ತಮ್ಮ ಆತ್ಮಕತೆಯನ್ನು ಬರೆದ ಮೊಗಳ್ಳಿ ಗಣೇಶ್ ಕೆಂಡಸಂಪಿಗೆಯ ಓದುಗರಿಗೆ ಪತ್ರವೊಂದನ್ನು ಬರೆದಿದ್ದಾರೆ

Read More

ಕರುಳಬಳ್ಳಿಯೋ… ಕೊರಳ ಉರುಳೋ…

ಅಲ್ಲಿ ಜನರು ಒಬ್ಬರಿಗೊಬ್ಬರು ಅಂಟಿಕೊಂಡು ಟೊಮೇಟೊ ಕೆಂಪು ರಸವನ್ನು ಒಬ್ಬರಿಗೊಬ್ಬರು ಮೆತ್ತುತ್ತಿರುತ್ತಾರೆ. ಮುಂದುವರಿದ ಹಾಗೆ ಚಿತ್ರ ಬದಲಾಗಿ ಅವರ ತಲೆಯ ಮೇಲೆ ಅಂಗಾತ ಮಲಗಿದ ಟಿಲ್ಡಾಳನ್ನು ದಾಟಿಸುತ್ತಿರುತ್ತಾರೆ. ಅವಳ ಮೈ ಮೇಲೆ ಟೊಮ್ಯಾಟೋ ರಸ ಹರಿಯುತ್ತಿರುತ್ತದೆ. ಕೆಂಪು ಬಣ್ಣ ಸೂಸುವ ಅಹಿತಕರವಾದ ಭಾವನೆಗಳಿಗೆ ಮತ್ತು ಚಿತ್ರದ ಅಂತರಾಳಕ್ಕೂ ಸಂಬಂಧವಿರುವುದು ವಿಶೇಷ. ಅಲ್ಲದೆ ಟೊಮ್ಯಾಟೊ ರಸದಲ್ಲಿ ಮುಳುಗಿರುವ ಟಿಲ್ಡಾಳ ಮುಖದಲ್ಲಿ ನಗುವಿರುವುದು ಆಶ್ಚರ್ಯವೇ. ಅಲ್ಲದೆ ಇದು ಸಾಕಷ್ಟು ಗೊಂದಲಗಳನ್ನೂ ಹುಟ್ಟಿಸುತ್ತದೆ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಇಂಗ್ಲೆಂಡ್‌ನ ʻವಿ ನೀಡ್‌ ಟು ಟಾಕ್‌ ಅಬೌಟ್‌ ಕೆವಿನ್‌ʼ ಸಿನಿಮಾದ ವಿಶ್ಲೇಷಣೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ