Advertisement

Tag: ಎನ್.ಸಿ. ಮಹೇಶ್

ಸಂಸರ ‘ಬಿಂಬ’ ವನ್ನು ಕಂಡುಕೊಳ್ಳಬೇಕಾದ ಬಗೆಗೆ ಚಿಂತಿಸುತ್ತ…

ರಂಗಶಾಲೆಗಳು ಮತ್ತು ರಂಗಸಂಸ್ಥೆಗಳು ಮಾತ್ರ ಕಟ್ಟಿ ನಿಲ್ಲಿಸಬಹುದಾದ ಪ್ರಯೋಗಗಳು. ಅಮೇಚೂರ್ ಗಳಿಗೆ ಸಂಸರು ನಿಲುಕುವುದು ಕಷ್ಟ. ಕೈಲಾಸಂ ಮತ್ತು ಸಂಸರು ಒಂದೇ ಕಾಲಮಾನದವರಾದರೂ ಇವರ ಭಾಷಾ ಪ್ರಯೋಗದ ಅನನ್ಯತೆ ದೊಡ್ಡದು. ಕೈಲಾಸಂ ಕಟ್ಟಿರುವ ಭಾಷೆ- ಅದನ್ನು ಒಡೆದು ಓದುವ ಕ್ರಮ ತಿಳಿಯದಿದ್ದರೆ ಅವರ ನಾಟಕಗಳು ದಕ್ಕುವುದಿಲ್ಲ. ಸಂಸರನ್ನು ಓದಬೇಕಾದರೆ ಹಳಗನ್ನಡದ ಅಥವಾ ನಡುಗನ್ನಡದ ಟಚ್ ಇರಿಸಿಕೊಂಡಿರಬೇಕು. ಶಾಸ್ತ್ರೀಯವಾಗಿ ಅಭ್ಯಸಿಸಬೇಕು.
ಎನ್.ಸಿ. ಮಹೇಶ್‌ ಬರೆಯುವ ‘ರಂಗ ವಠಾರ’ ಅಂಕಣ

Read More

ಅಗಲಿದ ನಮ್ಮ ರಂಗಕಲಾವಿದರ ಜೊತೆಗೆ ರೊಟಿಮಿ ನೆನಪು…

ಕಿಂಗ್ ಲಯಸ್ ಆಫ್ರಿಕದ ದೊರೆ ‘ಅಡೆಟುಸ’ ಆಗುತ್ತಾನೆ. ರಾಣಿ ಜೊಕಾಸ್ತ ಆಫ್ರಿಕದ ರಾಣಿ ‘ಒಜೋಲ’ ಆಗುತ್ತಾಳೆ. ಕ್ರಯಾನ್ ಅಡ್ರೆಪೊ ಆಗುತ್ತಾನೆ. ಟೈರೀಷಿಯಸ್ ಬಾಬ ಫಕನುಲ್ – ಕುರುಡು ತತ್ವಜ್ಞಾನಿ ಆಗುತ್ತಾನೆ. ಮೂಲ ಪಠ್ಯದಲ್ಲಿನ ಕುರಿಗಾಹಿ, ಘೂಂಕ ಆಗುತ್ತಾನೆ. ಥೀಬ್ಸ್ ಎನ್ನುವುದು ಆಫ್ರಿಕನ್ ಹಿನ್ನೆಲೆಯಲ್ಲಿ ಕುಟುಂಜೆ ಆಗಿ ‘ಇಡೆ’ ಎನ್ನುವುದು ಮಾತಾಪಿತೃಗಳ ವಧಾ ಸ್ಥಾನವಾಗುತ್ತದೆ.
ಎನ್‌.ಸಿ. ಮಹೇಶ್‌ ಬರೆಯುವ ‘ರಂಗ ವಠಾರ’ ಅಂಕಣ

Read More

ಕ್ಲಬ್ ಹೌಸ್ ಮಾತುಕಥೆಯಲ್ಲಿ ಕಂಡ ನಟರ ಎರಡು ಬಗೆ…

ಹೊಸತರಲ್ಲಿ ಎಲ್ಲ ಚೆಂದವೇ. ಒಂದು ವಾರ ಕಳೆಯುವಷ್ಟರಲ್ಲಿ ಈ ಕೇಳ್ಮೆ ಕೂಡ ಯಾಕೊ ಮನೊಟನಸ್ ಆಗುತ್ತಿದೆ ಅನಿಸಿತು. ಕೇಳ್ಮೆಯ ಮೂಲಕ ವಿಚಾರ ಕ್ರೋಢೀಕರಣ ಸರಿ. ಓದುವ ತ್ರಾಸಿಗಿಂತ ಕೇಳ್ಮೆ ಸುಲಭ. ಇದೂ ಸರಿ. ಆದರೆ ಕೇಳಿಸಿಕೊಂಡದ್ದನ್ನು ಒಂದು ಕಡೆ ಅಕ್ಷರ ಮತ್ತು ಪದಗಳಲ್ಲಿ ಕ್ರಮಬದ್ಧವಾಗಿ ದಾಖಲಿಸಬೇಕಾಗುವಾಗ ವಾಕ್ಯರಚನೆ ಬಿಗಿಬಂಧದಲ್ಲಿ ರೂಪುತಳೆಯಬೇಕಾದರೆ ಓದಿನ ಸಂಗ ಅಗತ್ಯ ಬೇಕು ಎಂಬ ಅರಿವು ಜಾಗೃತವಾಯಿತು.
ಎನ್‌.ಸಿ. ಮಹೇಶ್‌ ಬರೆಯುವ ‘ರಂಗ ವಠಾರ’ ಅಂಕಣ

Read More

ಹುಚ್ಚಾಟಗಳಿಗೆ ನಗುವೇ ಪ್ರತಿಭಟನೆ ಅಸ್ತ್ರ!

ಗಂಭೀರವಾಗಿ ಚರ್ಚಿಸುವವರು ಎದುರಾಗಿದ್ದರೆ ನಾನೂ ಗಂಭೀರವಾಗೇ ಚರ್ಚೆಗೆ ತೊಡಗುತ್ತಿದ್ದೆನೇನೊ. ಆದರೆ ಯಾಕೋ ಅಂಥ ಸಂದರ್ಭಗಳು ನ್ಯಾಷನಲ್ ಕಾಲೇಜಿನಲ್ಲಿದ್ದಾಗ ನಿರ್ಮಾಣ ಆಗಲೇ ಇಲ್ಲ. ನಗುವಿನ ಕಚಗುಳಿಗೆ ನಾನೂ ನಗುತ್ತ ಹಾಯಾಗಿದ್ದ ಕಾಲ ಅದು. ಇದು ಎಂಥ ಎಫೆಕ್ಟ್ ಉಂಟುಮಾಡಿತ್ತು ಅಂದರೆ ಕ್ಲಾಸಲ್ಲಿ ಪಾಠ ಮಾಡುವಾಗ ಸೀರಿಯಸ್ನೆಸ್ ಬಿಟ್ಟು ನಗಿಸುತ್ತ ಅರ್ಥೈಸಬೇಕು..”

Read More

‘ನಂದು ಹ್ಯೂಮನಿಸಂ… ನಾನು ಎಲ್ರಿಗೂ ಕಾಫಿ ಕೊಡ್ಸಿ, ಕುಡೀರಿ ಅಂತೀನಿ…’

“ಒಮ್ಮೆ ಹೀಗೇ ಧುತ್ತನೆ ಎದುರಾದಿರಿ. ನಿಮ್ಮ ಕಣ್ಣುಗಳಲ್ಲಿ ಒಂದಿಷ್ಟು ಮುಜುಗರ ಇರುತ್ತದೆ ಎಂದು ನಿಮ್ಮ ಕಣ್ಣುಗಳನ್ನೇ ನೋಡಿದ್ದೆ. ನಿಮ್ಮನ್ನ ಕಾಣುವಾಗ ನಾನು ಕೊಂಚ ಅಳುಕಿದ್ದೆ ಅಷ್ಟೇ. ನೀವು ಆರಾಮಾಗೇ ಇದ್ದಿರಿ. ನನ್ನನ್ನ ಕಂಡಿದ್ದೇ ‘ಹೋ ಮಹೇಶ್ ಅವ್ರು.. ಬನ್ನಿ ಕಾಫಿ ಕುಡಿಯೋಣ..’ ಅಂತ ಕರೆದುಕೊಂಡು ಕಲಾಕ್ಷೇತ್ರದ ಹಿಂಬದಿಯ ಕ್ಯಾಂಟಿನ್ ಗೆ ನಡೆದಿರಿ. ನಗುನಗುತ್ತ ಮಾತಾಡಿದಿರಿ. ನನ್ನ ವಿಮರ್ಶೆ ಮಲಗಿತ್ತು ಎನ್ನುವುದು ನನಗೆ ಅವತ್ತೇ ಗೊತ್ತಾಗಿದ್ದು.
ಎನ್.ಸಿ. ಮಹೇಶ್‌ ಬರೆದ ‘ರಂಗ ವಠಾರ’ ಅಂಕಣ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ