Advertisement

Tag: ನಾರಾಯಣ ಯಾಜಿ

ರಾಜಶೇಖರ ಜೋಗಿನ್ಮನೆ ಕಥಾ ಸಂಕಲನದ ಕುರಿತು ನಾರಾಯಣ ಯಾಜಿ ಬರಹ

“ಕಥೆಯ ನಿರೂಪಣೆಯಲ್ಲಿ ನಾವೂ ಕೂಡಾ ಕರುಣಾಕರನ ಜಾಗದಲ್ಲಿ ನಿಂತುಬಿಡುತ್ತೇವೆ. ಒಂದೆಲಗ ನೆನಪಿನ ಶಕ್ತಿಹೆಚ್ಚಿಸುವ ಸಂಕೇತ. ಇದು ನೆಲದಲ್ಲಿ ಬೆಳೆಯುವ ಸಸ್ಯವೂ ಹೌದು. ನೀರು ಮತ್ತು ಭೂಮಿಯ ಕುರಿತು ಅಪರಿಮಿತ ಆಸಕ್ತಿಯಿದ್ದ ಜೋಗಿನ್ಮನೆಯವರ ಇಗ್ಗಪ್ಪ ಮತ್ತು ಕರುಣಾಕರ ಇಬ್ಬರೂ ಇಲ್ಲಿ ಸಾಮ್ಯತೆಯನ್ನು ಪಡೆಯುವದು ಹೀಗೆ. ನಾವು ಕಳೆದುಕೊಂಡುದೆಲ್ಲಿ ಎನ್ನುವದರ ಹುಡುಕಾಟದಲ್ಲಿರುವ ಪುರಾಣಗಳ ‘ಅಭಿಜ್ಞಾ’ನದ “

Read More

ನೈದಿಲೆಯ ಒಡಲು: ನಾರಾಯಣ ಯಾಜಿ ಬರೆದ ಕತೆ

“ರಾತ್ರಿಯೆಲ್ಲ ನಿದ್ರೆಯಿಲ್ಲದೇ ಹೊರಳಾಡಿದೆ. ಬಳಸಲು ಬಂದ ನಿನ್ನನ್ನು ದೂರ ತಳ್ಳಿದ್ದು ನನ್ನೆದೆಯಲ್ಲಿನ ಜ್ವಾಲಾಮುಖಿಯಲ್ಲಿ ನೀನು ಅಪ್ಪಚ್ಚಿಯಾಗಬಾರದೆಂದು. ಮಿಹಿಕಾ ನಿದ್ರಿಸುವಾಗಲೆಲ್ಲ ನಮ್ಮಿಬರ ಕೈಗಳನ್ನು ತನ್ನ ಮುಖದಮೇಲೆ ಇರಿಸಿ ನಿದ್ರಿಸುತ್ತಿದ್ದಳು. ಅವಳನ್ನು ಆ ಸ್ಥಿತಿಯಲ್ಲಿ ದಿಟ್ಟಿಸಿ ನೋಡಿದಾಗ ಅಳುವೇ ಬಂತು. ಅಂಶುವಿನ ಮಾತು ನೆನಪಿಗೆ ಬಂದು ದುಃಖವೇ ಉಮ್ಮಳಿಸಿತು. ಅವನ ಚರ್ಯೆಗಳೆಲ್ಲದರ ಹಿಂದೆ ಏನೋ ಇರುವ ಸಂಚು ಕಂಡಿತು. ನಿನ್ನ ಮೇಲಿನ ನನ್ನ ಪೊಸೆಸಿವ್ ನೆಸ್ ಅನ್ನು ಅವ ಚನ್ನಾಗಿಯೇ ಉಪಯೋಗಿಸಿಕೊಂಡಿದ್ದ, ನಿನ್ನ ಮೋಸಕ್ಕೆ ನನ್ನದೂ ಮೋಸವೇ ಉತ್ತರವಾಗಬೇಕೆ.”

Read More

ಯಕ್ಷಗಾನದ ಮಟ್ಟು ಮತ್ತು ರೂಪಕದ ಸಾದೃಶ್ಯ: ನಾರಾಯಣ ಯಾಜಿ ಬರಹ

“ಯಕ್ಷಗಾನವನ್ನು ಪ್ರಸ್ತುತ ಸಂದರ್ಭದಲ್ಲಿ ಬಯಲಾಟದ ರಂಗಕಲೆ ಮತ್ತು ಕೂಟ ಪದ್ಧತಿಯ ತಾಳಮದ್ದಲೆಯಾಗಿ ದ್ವಿಮುಖ ಸಂಪ್ರದಾಯದಲ್ಲಿ ನೋಡಬಹುದು. ತನ್ನದೇ ಆದ ಪರಂಪರೆಯ ಬಣ್ಣ, ವೇಷಗಳ ಸೊಗಸು, ನೃತ್ಯ, ಮುಖವರ್ಣಿಕೆ, ಪರಂಪರೆಯಿಂದ ಬಂದ ಅದ್ಭುತವಾದ ನಡೆ, ರಂಗದಮೇಲೆ ತೋರುವ ಅಲೌಕಿಕತೆ ಒಂಡು ಕಡೆಯಾದರೆ; ಇವಾವವೂ ಇಲ್ಲದೆ ಕೇವಲ ಪದ್ಯ ಹಾಗೂ ಅರ್ಥಗಾರಿಕೆಯ ಸೊಗಸು…”

Read More

ಮುಗ್ಧ ಮನಸ್ಸಿನ ಬಂಡಾಯದ ಲೇಖಕ ಮೊಪಾಂಸಾ : ನಾರಾಯಣ ಯಾಜಿ ಬರಹ

“ಯಾವಾಗ ಅವರೆಲ್ಲ ಗಮ್ಯ ಸ್ಥಾನವನ್ನು ಸೇರಿದರೋ ಮತ್ತೊಮ್ಮೆ ಅವರಲ್ಲಿನ ನೈತಿಕ ಪ್ರಜ್ಞೆ ಜಾಗೃತವಾಗುತ್ತದೆ. ಎಲಿಜೆಬೆತಳೊಟ್ಟಿಗೆ ಊಟಮಾಡಲೂ ನಿರಾಕರಿಸುತ್ತಾರೆ. ನಡುರಾತ್ರಿಯಲ್ಲಿ ಈಕೆಯನ್ನು ಇಳಿಸಿ ಕಂಡಕ್ಟರ್ ಸೀಟಿ ಊದಿ ಮುಂದೆ ಸಾಗುವಾಗ ವಿಷಣ್ಣವಾಗಿ ಎಲ್ಲರನ್ನು ನೋಡಿ ಎಲ್ಲರಿಗಾಗಿ ಎಲ್ಲವನ್ನು ಕಳಕೊಂಡ ತನ್ನ ಕುರಿತು ಮೌನವಾಗಿ ಅಳು, ಕ್ರೋಧದಿಂದ ಅವರನ್ನು ನೋಡುವಲ್ಲಿಗೆ ಕತೆ ಮುಕ್ತಾಯವಾಗುತ್ತದೆ.”

Read More

ತಾಳಮದ್ದಳೆಯ ಆಕರಗಳು: ನಾರಾಯಣ ಯಾಜಿ ಬರಹ

“ಅರ್ಥಗಾರಿಕೆಯಲ್ಲಿ ಒಂದು ವಿಷಯವನ್ನು ನೆನಪಿಸಿಕೊಳ್ಳಲೇಬೇಕು. ಮಹಾಕಾವ್ಯಗಳು ಕಾವ್ಯವಾಗಿ ಪುರಾಣಗಳಾಗಿ ಬರುವಾಗ ಭೋದನೆಗೆ ಮತ್ತು ಅನುಸರಣೆಗೆ ಬೇಕಾದ ಬದಲಾವಣೆಯನ್ನು ಮಾಡಿಕೊಂಡಿವೆ. ಇವೇ ನಾಟಕವೋ ರಂಗಕೃತಿಯೋ ಆಗಿ ಬರುವಾಗ ರಂಗಕ್ಕೆ ಅಗತ್ಯವಾದ ರಸನಿಷ್ಟೆಯನ್ನು ಬಳಸಿಕೊಂಡು ರೂಪಾಂತರಗೊಂಡಿದೆ.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ