Advertisement

Tag: ಮೊಗಳ್ಳಿ ಗಣೇಶ್

ನೆರಳ ಅಲೆಗಳಲ್ಲಿ ಇರುಳ ಕಳೆದೆ

ಒಂದು ಕಾಲಕ್ಕೆ ಅಜ್ಜಿ ಮನೆಗೆ ಹೋಗುವುದೆಂದರೆ ಸ್ವರ್ಗ ಸಿಕ್ಕಂತಾಗುತ್ತಿತ್ತು. ಅಪ್ಪನ ಪರಾಕ್ರಮ ಒಂದೆರಡಲ್ಲ! ಆಗ ಕಾಲು ನಡಿಗೆಯ ದಾರಿ. ಅದೇ ಸುಖ. ತೋಟ ತುಡಿಕೆಯ ಹಣ್ಣು ಹಂಪಲು ತಿಂದು ಹೊಳೆ ದಂಡೆಯಲ್ಲಿ ಸಾಗುವಾಗ ದಣಿವೇ ಇರಲಿಲ್ಲ. ಆ ಹೆಗಲಿನ ರೇಡಿಯೊ ಏನೇನೊ ಹಾಡಿ ಮಾತಾಡುತಿತ್ತು. ಅದರತ್ತ ನನಗೆ ಗಮನವಿರಲಿಲ್ಲ. ಅಪ್ಪನಿಗೆ ಅದೊಂದು ದೊಡ್ಡಸ್ತಿಕೆಯ ತೋರಿಕೆ. ಅಲ್ಲಲ್ಲಿ ಸಿಗುತ್ತಿದ್ದ ಊರುಗಳಲ್ಲಿ ಜನ ನಮ್ಮನ್ನು ಬೆರಗಾಗಿ ನೋಡುತ್ತಿದ್ದರು. ಆ ಕಾಲಕ್ಕೆ ರೇಡಿಯೊ ಶ್ರೀಮಂತಿಕೆಯ ಸಂಕೇತವಾಗಿತ್ತು.
ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ನಾಲ್ಕನೆಯ ಕಂತು

Read More

ಮುಸುಕಿನ ಮರೆಯ ಪಾಡು

ನಾವು ಹುಟ್ಟಿ ಬೆಳೆದಿದ್ದ ಊರಲ್ಲಿ ಚಿಕ್ಕಪ್ಪ ಎಂಬುವವನೊಬ್ಬ ಇದ್ದ. ರಭಸವಾದ ಕುಡುಕ. ಎಣ್ಣೆ ಕೊಡಿಸಿದರೆ ಎಲ್ಲಾ ನ್ಯಾಯವನ್ನು ತಲೆಕೆಳಗೆ ಮಾಡುತ್ತಿದ್ದ. ಆ ಮನೆಯಲ್ಲಿ ನನ್ನ ತಮ್ಮನಿಗೂ ನನಗೂ ಭಾಗ ಬರಬೇಕಿತ್ತು. ನಾನದರತ್ತ ತಿರುಗಿಯೂ ನೋಡಿರಲಿಲ್ಲ. ತಮ್ಮ ಬೆಂಗಳೂರು ಸೇರಿ ಅಲ್ಲೇ ಸಂಸಾರ ಹೂಡಿ ಒಂದು ಪುಟ್ಟ ಮನೆಯನ್ನು ಮಾಡಿಕೊಂಡಿದ್ದ. ಅವನಿಗೂ ಅಂತಹ ಆಸಕ್ತಿ ಇರಲಿಲ್ಲ. ಆದರೆ ನನ್ನಕ್ಕ ಬಿಟ್ಟಿರಲಿಲ್ಲ. ನಾವು ಭಾಗ ಕೊಡುವುದಿಲ್ಲ ಎಂದು ಅವನ ಮಗ ಹಾಗೂ ಹೆಂಡತಿ ಎಗರಾಡುತ್ತಿದ್ದರು.
ಮೊಗಳ್ಳಿ ಗಣೇಶ್‌ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಮೂರನೆಯ ಕಂತು

Read More

ಅತ್ತೆಯರ ಲೋಕದಲ್ಲಿ ನಾನೆಷ್ಟೋಂದು ಅತ್ತೆ…

ಒಂದು ದಿನ ಎದೆ ಬಡಿತವ ಸುಧಾರಿಸಿಕೊಂಡು ಎಲ್ಲರ ಜೊತೆ ಏನೋ ಜೋಕು ಹೇಳುತ್ತಾ ನಗಿಸುತ್ತಿದ್ದೆ. ಅಷ್ಟು ದೂರದ ಆಚೆ ಮೂಲೆಯಲ್ಲಿ ಮರದಡಿ ನಿಂತು ಯಾರೊ ಹೆಂಗಸರು ಗಮನಿಸುತ್ತಿದ್ದಾರೆಂಬ ಅನುಮಾನ ಬಂತು. ಗಮನಿಸಿ ಅವರತ್ತ ದಿಟ್ಟಿಸಿದೆ. ಅವರು ನನ್ನನ್ನು ಹೇಗೆ ನೋಡುತ್ತಿದ್ದರೆಂಬುದಕ್ಕೆ ನನ್ನ ಬಳಿ ವಿವರಿಸಲು ತಕ್ಕ ಶಬ್ದಗಳೇ ಇಲ್ಲ. ಮೈ ಜುಂ ಎಂದು ಕತ್ತಲಿಡಿದಂತಾಯಿತು. ಒಂದು ಕ್ಷಣ ಮೈ ನೀರು ತುಳುಕಿದಂತಾಗಿ ಕೆಳಗೆ ಒಂದು ಹನಿ ನೀರು ಜಾರಿತ್ತು. ಗಂಟಲು ಕೂಡಲೇ ಒಣಗಿತು.
ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಎರಡನೆಯ ಕಂತು

Read More

‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಮೊಗಳ್ಳಿ ಆತ್ಮ ಕಥಾನಕದ ಮೊದಲ ಕಂತು

ನನ್ನ ಅಪ್ಪ ಕ್ರೂರವಾಗಿದ್ದರು. ಬರ್ಬರತೆಯ ಪ್ರಚಂಡ ವ್ಯಕ್ತಿಯಾಗಿದ್ದರು.  ಅವರ ಹಂಗಿನಲ್ಲಿದ್ದರು ಕೇರಿಯ ಜನರೆಲ್ಲ. ಬಹಳವೇ ಪಾಳೇಗಾರಿಕೆ ಮಾಡುತ್ತಿದ್ದರಿಂದ, ಅವರನ್ನು ನೋಡಿದಾಗ ಒಂದು ರೀತಿಯ ಭಯವೂ ಆವರಿಸಿದಂತೆ ಅನಿಸುತ್ತಿತ್ತು. ಅವರ ಕುರಿತು ಬರೆಯುವ ನೆಪದಲ್ಲಿ ನಾನು ನನ್ನ ಪೂರ್ವಿಕರನ್ನೆಲ್ಲ ತುಂಬಿಕೊಂಡು ಹೀಗೊಂದು ಆತ್ಮಕತೆಯನ್ನು ಬರೆಯಲು ಹೊರಟಿದ್ದೇನೆ.

Read More

ಮೊಗಳ್ಳಿ ನೆನಪಿನಲ್ಲಿ ಸಿದ್ಧಲಿಂಗಯ್ಯ

‘ಚಾಪ್ಸ್ ಅಂದ್ರೆನೇ ಅಂಗೆ.. ಬೋನ್ ಬಿಡಿಸಿಕೊಂಡು ತಿನ್ನಬೇಕೂ’ ಎನ್ನುತ್ತ, ಮೊಮ್ಮಕ್ಕಳನ್ನು ಕೂರಿಸಿಕೊಂಡು ತಾತ ಒಂದೇ ತಟ್ಟೆಯಲ್ಲಿ ಮಕ್ಕಳಿಗೆ ತಿನ್ನುವುದನ್ನು ಕಲಿಸುವಂತೆ ಆ ದಪ್ಪ ಚಾಪ್ಸ್ ಎತ್ತಿಕೊಂಡು ಬಿಡಿಸಿ ಬಿಡಿಸಿ ದವಡೆಯಲ್ಲಿಟ್ಟು ಗಸಗಸನೇ ಅಗಿದು ಮಸೆದು ನುಂಗಿ, ‘ಹೀಗೆ ತಿನ್ನಬೇಕು’ ಎಂದರು. ನಿಷ್ಕಲ್ಮಷವಾದ ಅವರ ಪ್ರೀತಿ, ಅಂತಃಕರಣ, ಸಜ್ಜನಿಕೆ, ಪ್ರಾಮಾಣಿಕತೆ ಬಹಳ ಅಪರೂಪವಾದುದು. ಡಾ. ಸಿದ್ಧಲಿಂಗಯ್ಯ ಅವರೊಂದಿಗಿನ ಒಡನಾಟದ ಕುರಿತು ಕಥೆಗಾರ ಮೊಗಳ್ಳಿ ಗಣೇಶ್ ಆಪ್ತ ಬರಹ.  

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ