Advertisement

Tag: ಕತೆ

ಎಸ್. ನಾಗಶ್ರೀ ಅಜಯ್ ಬರೆದ ಈ ಭಾನುವಾರದ ಕತೆ “ಭಿನ್ನ”

ಹೀಗೆ ಅಚಾನಕ್ಕಾಗಿ ಕೆಲಸ ಬಿಡುವ ನಿರ್ಧಾರ ತಿಳಿಸಿ ಹಿಂತಿರುಗಿ ನೋಡದೆ ಬೀಸುನಡಿಗೆಯಲ್ಲಿ ಎದ್ದು ಬರಬೇಕೆನ್ನುವ ತೀರ್ಮಾನ ಹಿಂದಿನ ರಾತ್ರಿ ಮೊಳಕೆಯೊಡೆದು ಬೆಳೆದು ಬೆಳೆದು ಬೃಹದಾಕಾರವಾಗಿ ಇವತ್ತು ಹರಿಣಿಯ ಮುಂದೆ ಕುಳಿತಾಗ ಹೇಳಲೇಬೇಕಾದ ಒತ್ತಡ ಸೃಷ್ಟಿಸಿತ್ತು. ಎಂದಿನಂತೆ ಮೀಟಿಂಗ್ ರೂಮಲ್ಲಿ ಸಿಗದೆ ತನ್ನ ಕ್ಯಾಬಿನ್ನಿಗೆ ಕರೆಸಿ ಕೂರಿಸಿದಾಗಲೇ ಹರಿಣಿ ತನ್ನ ಅಧಿಕಾರ ಪ್ರದರ್ಶನ ಮಾಡಿಯೇ ತೀರುವ ಸೂಚನೆ ಸಿಕ್ಕಿತ್ತು.
ಎಸ್. ನಾಗಶ್ರೀ ಅಜಯ್ ಹೊಸ ಕಥಾ ಸಂಕಲನ “ಕಡೆ ಹಾಯ್ವ ದೋಣಿ”ಯ ಒಂದು ಕತೆ “ಭಿನ್ನ”

Read More

ಡಾ. ಪ್ರೇಮಲತ ಬಿ. ಈ ಭಾನುವಾರದ ಕತೆ “ನೆತ್ತಿಯ ಕಣ್ಣು”

ನೆತ್ತಿಯ ಮೇಲಿನ ಕಣ್ಣ ಸ್ವಾಮೀಜಿ ಈಗ ಸಮಾಧಾನದಲ್ಲಿದ್ದು ಬೆವರುವುದನ್ನು ನಿಲ್ಲಿಸಿದ್ದರು. ಉಂಗುರಗಳನ್ನು ಹಾಕಿದ್ದ ಹಿತ್ತಾಳೆ ಚೊಂಬಿನ ನೀರನ್ನು ಇಬ್ಬರಿಗೂ ತೀರ್ಥದಂತೆ ಕೊಟ್ಟು ತಾವೂ ಬಲಗೈ ಗೆ ಬಗ್ಗಿಸಿಕೊಂಡರು. ಸ್ವಾಮೀಜಿ ಏನು ಮಾಡುತ್ತಾರೋ ಅದನ್ನೇ ಮಾಡಲು ತಯಾರಾದ ದಂಪತಿಗಳು ಅವರನ್ನೇ ನೋಡುತ್ತಿದ್ದರು. ಸ್ವಾಮೀಜಿ ನೀರಿದ್ದ ಕೈಯನ್ನು ಎರಡೂ ಕಣ್ಣುಗಳಿಗೆ ಒತ್ತಿಕೊಂಡು ಗಟಕ್ಕೆಂದು ಆ ನೀರನ್ನು ಕುಡಿದರು. ನಂತರ ಅಂಗೈಯನ್ನು ಮುಂಡಾಸಿನ ಬಳಿ ತಗೊಂಡುಹೋದರು.
ಡಾ. ಪ್ರೇಮಲತ ಬಿ. ಈ ಭಾನುವಾರದ ಕತೆ “ನೆತ್ತಿಯ ಕಣ್ಣು” ನಿಮ್ಮ ಓದಿಗೆ

Read More

ಬೇಟೆಗಾರ ಕೀಟವೇ ಬೇಟೆಯಾದಾಗ!: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ಈ ಕುತೂಹಲಕಾರಿ ಮರ್ಡರ್ ಮಿಸ್ಟರಿ ಕೇಳುತ್ತಾ, ವಿಭಾಗೆ ಬಸ್ ಹೊರಟದ್ದೇ ತಿಳಿದಿರಲಿಲ್ಲ. ಅಕ್ಕ ನೀರು ಕುಡಿಯೋಕೆ ಅಂತ ಮಾತು ನಿಲ್ಲಿಸಿದಾಗ, ಕಿಟಕಿಯಾಚೆ ನೋಡಿ, “ಓಹ್! ಆಗ್ಲೆ ಇಷ್ಟು ಮುಂದೆ ಬಂದುಬಿಟ್ವಾ? ಸರಿ, ನೀನು ಮುಂದುವರೆಸು ಕಾವ್ಯಕ್ಕಾ” ಎಂದಳು. “ಹೂಂ, ನಿಮ್ ಭಾವ ಮಾತ್ರ ಅಲ್ಲ, ನಾನೂ ನೋಡಿದೀನಿ ಈ ‘ಕೀಟಗಳನ್ನ ತಿನ್ನೋ ಗಿಡಗಳನ್ನ’ ಗೊತ್ತಾ?” ಎಂದಳು ಕಾವ್ಯಾ ಕೀಟಲೆ ಮಾಡುತ್ತಾ. ಆಗ ವಿಭಾ ನಗುತ್ತಾ, “ಅಯ್ಯೋ! ನೀನೂ ಅಂದ್ರೇನು ಸುಮ್ನೇನಾ ಅಕ್ಕಾ? ನೀನೇನು ನೋಡಿದ್ದು? ಎಲ್ಲಿ ನೋಡ್ದೆ? ಹೇಳ್ಬೇಕು ತಾನೆ ಮತ್ತೆ” ಎಂದು ಅಕ್ಕನಿಗೆ ಪೂಸಿ ಹೊಡೆದಳು.
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ಯಲ್ಲಿ ನಾಲ್ಕನೆಯ ಕತೆ

Read More

ಕೋಡಿಹಳ್ಳಿ ಮುರಳಿಮೋಹನ್ ಅನುವಾದಿಸಿದ ತೆಲುಗಿನ ಸೈಯದ್ ಸಲೀಂ ಕತೆ “ಬೂದು ಬಣ್ಣದ ಆಕಾಶ”

ನಾನು ಭಯಪಟ್ಟ ಸಮಯ ಕೊನೆಗೂ ಬಂತು… ಬ್ರೂನೊವನ್ನು ಮೆರ್ಸಿ ಕಿಲಿಂಗ್ ಮಾಡುವ ಸಮಯ… ನಾನು ಬ್ರೂನೋ ಕಡೆಗೆ ದಯೆಯಿಂದ ನೋಡಿದೆ. ಅದು ಹಿಂದಿನಂತೆ ನನ್ನನ್ನು ಗುರುತಿಸುತ್ತಿಲ್ಲ. ತನ್ನ ತುಟಿಗಳನ್ನು ಚಾಚಿ ನಗುವುದು ಮರೆತಿದೆ. ಚುರುಕಾಗಿ ಚಲಿಸುತ್ತಿದ್ದ ಹಿಂದಿನ ಬ್ರೂನೊ ಇಲ್ಲ ಈಗ. ಅದರ ಚಲನೆಗಳಲ್ಲಿಯೂ, ವ್ಯವಹಾರದಲ್ಲಿಯೂ ಬಹು ಬದಲಾವಣೆಗಳು. ಅದು ಈಗ ವೈದ್ಯಶಾಸ್ತ್ರ ಸಂಶೋಧನೆಗೆ ಕೆಲಸಕ್ಕೆ ಬರದ ಪ್ರಾಣಿ.
ಕೋಡಿಹಳ್ಳಿ ಮುರಳಿಮೋಹನ್ ಅನುವಾದಿಸಿದ ತೆಲುಗಿನ ಸೈಯದ್ ಸಲೀಂ ಕತೆ “ಬೂದು ಬಣ್ಣದ ಆಕಾಶ”‌

Read More

ರವಿಶಂಕರ್‌ ಎಸ್. ಎಲ್. ಬರೆದ ಈ ಭಾನುವಾರದ ಕತೆ “ರೋಬಿಣಿ”

ಟೀನಾ ಒಂದು ದಿನ ರೋಬಿಣಿಯನ್ನು ಕರೆದು ಮನೆ ಕೆಲಸಗಳಲ್ಲಿ ಸಹಾಯ ಮಾಡಲು ಕೇಳಿದಳು. ರೋಬಿಣಿ ಕಡ್ಡಿತುಂಡರಿಸಿದಂತೆ ನಿರಾಕರಿಸಿದಳು. ರೋಬಿಣಿಯನ್ನು ಮುಂದಿನ ಬಾರಿ ಬದಲಾಯಿಸುವಾಗ ಮನೆ ಕೆಲಸಗಳನ್ನು ಮಾಡುವಂತಹ ಪ್ರೋಗ್ರಾಮ್ ಅಳವಡಿಸಲು ಬಿಎಂಐ ಕಂಪನಿಗೆ ಹೇಳಬೇಕು ಎಂದುಕೊಂಡಳು ಟೀನಾ. ಅದು ಸಾಧ್ಯವಿಲ್ಲವೆಂದು ಜಗ ಟೀನಾಗೆ ತಿಳಿಸಿ ಹೇಳಿದ. ಕಂಪನಿಯ‌ ಪ್ಯಾಕೇಜ್ ನಿಬಂಧದಂತೆ ಹಾಗೂ ರೋಬಾಟ್ಸ್ ರೈಟ್ಸ್ ಪ್ರಕಾರ, ಮಗುವಂತೆ ಸಾಕಲು ಪಡೆದ ರೋಬಾಟ್‌ಗಳಿಂದ ಮನೆಕೆಲಸಗಳನ್ನು ಮಾಡಿಸಲು ಸಾಧ್ಯವಿರಲಿಲ್ಲ.
ರವಿಶಂಕರ್‌ ಎಸ್. ಎಲ್. ಬರೆದ ಈ ಭಾನುವಾರದ ಕತೆ “ರೋಬಿಣಿ” ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ