Advertisement

Tag: ಜಯಲಕ್ಷ್ಮಿ ಪಾಟೀಲ್

ಜಯಲಕ್ಷ್ಮೀ ಪಾಟೀಲ್‌ ಆತ್ಮಕಥನ “ತಿಟ್ಹತ್ತಿ ತಿರುಗಿ”ಯ ಆಯ್ದ ಭಾಗ

ಒಂದೆರಡು ದಿನಗಳ ನಂತರ ಅಪ್ಪಾ ದಾಡಿ ಮಾಡಿಟ್ಟುಕೊಂಡ ಟೋಪಾಜ್ ಬ್ಲೇಡನ್ನು ತೆಗೆದುಕೊಂಡು, ಬಲಗಡೆಯ ಮುಂದೆಲೆಯಲ್ಲಿನ ಕಿರುಬೆರಳು ಗಾತ್ರದ ಕೂದಲನ್ನು ಕಣ್ಣೆದುರು ಎಳೆದು ತಂದು ಕರ್ರ್ ಕರ್ರ್ ಎಂದು ಕತ್ತರಿಸಿಕೊಂಡು, ಶಾಂತಾ ಹೇಳಿದಂತೆ, ಅದಕ್ಕೆ ನೀರು ಸೋಕಿಸಿ ಬೆರಳಲ್ಲಿ ಸುರಳಿ ಸುತ್ತಿಹಿಡಿದು ಬಿಟ್ಟೆ. ಅವಳಂತೆ ಗುಂಗುರಾಗದೆ ಕತ್ತರಿಸಿದ ಕೂದಲು ಹಾಗೆಲ್ಲ ಸುಲಭದಲ್ಲಿ ಮಣಿಯಲಾರೆವು ಎಂದು ಸೆಟೆದು ನಿಂತಿದ್ದವು. ಮತ್ತೆ ಮತ್ತೆ ಪ್ರಯತ್ನಿಸುವ ನನ್ನ ಸರ್ಕಸ್ ಅಪ್ಪಾರ ಕಣ್ಣಿಗೆ ಬಿತ್ತು. ಏನದು? ಅಂದರು. ಯಾವುದೇ ಅಳುಕಿಲ್ಲದೇ ನಾನು, ಶಾಂತಾ ಮಾಡಿಕೊಂಡಿದ್ದನ್ನು ನೋಡಿ ನನಗೂ ಆಸೆಯಾಗಿ ಹೀಗೆ ಮಾಡಿಕೊಂಡಿದ್ದೇನೆ ಎಂದೆ.
ಜಯಲಕ್ಷ್ಮೀ ಪಾಟೀಲ್‌ ಆತ್ಮಕಥನ “ತಿಟ್ಹತ್ತಿ ತಿರುಗಿ”ಯ ಆಯ್ದ ಭಾಗ ನಿಮ್ಮ ಓದಿಗೆ

Read More

ಅಹಮ್ಮಿಗೊಂದು ಪೆಟ್ಟು ಕೊಡುವ ಸಮಯ…: ಜಯಲಕ್ಷ್ಮಿ ಪಾಟೀಲ್ ಅಂಕಣ

“ಒಮ್ಮೆ ಬ್ಯಾಸಿಗಿ ಮದ್ಯಾನದಾಗ ಆಯಿ ಹಳ್ಳಕ್ಕ ನೀರ ತರಾಕ ಹೋಗಿ, ಜೋಡಗೊಡಾ ಹೊತ್ತು ಹೊಡಮಳ್ಳಿ ಬರೂದ್ರಾಗ ಮುತ್ತ್ಯಾ ಹೊಲದಿಂದ ಬಂದಬಿಟ್ಟಾನವ್ವಿ. ನೀರಡಿಶ್ಯಾನ. ಮನ್ಯಾಗ ಕುಡ್ಯಾಕ ಮುಕ್ಕ್ ನೀರಿಲ್ಲ. ಮುತ್ತ್ಯಾ ತಾಪಗೆದ್ದು, “ಹಾಂ ಅಧೆಂಗ ನೀ ಇಟ್ಟ್ ತಡಾ ಮಾಡೀದಿ ಬರಾಕ! ನಡಿ ರಂಡಿ ನೀ ಅದ ಹಳ್ಳದ್ ದಂಡ್ಯಾಗ ಇರು. ಅಲ್ಲೇ ನಿಂದ್ರು. ದsರ್’ಕರ್ತಾ ಕೊಡಾ ಕೆಳಗಿಳಿಶಿ ಕುಂತೆಪಾ ಅಂದ್ರ ನಿನ್ನ ಸಿಗದು ಅಗಶಿ ಬಾಗಲಕ್ಕ ತೋರ್ಣಾ ಕಟ್ತತೀನಿ ಹುಶಾರ್!” ಅಂತಂದು, ಕೊಡದ ದರ್ಶಿಲೆ ಆಯಿನ್ನ ಕಾದ ಉಸಕಿನ ಮ್ಯಾಲ ಬರೆಗಾಲಿಲೇ ನಿಂದ್ರಿಶಿದ್ನಂತ.”
ಜಯಲಕ್ಷ್ಮಿ ಪಾಟೀಲ್ ಬರೆಯುವ “ಗರ್ದಿ ಗಮ್ಮತ್ತು” ಅಂಕಣ

Read More

ಸೆರಗ ಬಿಡು ಮರುಳೆ: ಜಯಲಕ್ಷ್ಮಿ ಪಾಟೀಲ್ ಅಂಕಣ

ಅಗತ್ಯವಿಲ್ಲದಿದ್ದರೂ, ಇಷ್ಟವಿಲ್ಲದಿದ್ದರೂ, ಪಾಲಿಸಲೇಬೇಕು ಎನ್ನುವುದು ಹೇರಿಕೆಯಾದಾಗ ಸಂಪ್ರದಾಯಗಳು ಸಂಕೋಲೆಗಳಾಗಿ ಹಿಂಸಿಸತೊಡಗುತ್ತದೆ. ಈ ಹೇರಿಕೆ ಕೇವಲ ಸಮಾಜದ್ದಲ್ಲ ನಮ್ಮೊಳಗಿನದೂ ಸಹ! ‘ಸಂಪ್ರದಾಯವನ್ನು ಬಿಟ್ಟು ನಡೆದಲ್ಲಿ ಏನಾದರೂ ಅವಘಡ ಸಂಭವಿಸಿದರೆ ಗತಿ ಏನು ಮುಂದೆ?!’ ಎನ್ನುವ ನಮ್ಮೊಳಗಿನ ಭೀತಿಯೇ ಅರ್ಧ ಮನುಷ್ಯರನ್ನು, ‘ಬಿಟ್ಟರೂ ಬಿಡಲಾರದೀ ಮಾಯೆ’ ಎಂದು ತ್ರಿಶಂಕು ಸ್ಥಿತಿಯಲ್ಲಿ ನೇತಾಡುವಂತೆ ಮಾಡುತ್ತದೆ. ಕಾಲಾಂತರದಲ್ಲಿ ಅಕ್ಷರ, ಹಣ, ಸಾರಿಗೆ ಮತ್ತು ಮಾಧ್ಯಮ ಇತ್ಯಾದಿ ಅನುಕೂಲತೆ ಎಲ್ಲರಿಗೂ ಎಟುಕತೊಡಗಿದಂತೆ, ಅಷ್ಟಿಷ್ಟು ಮೌಢ್ಯಗಳು, ಸಂಪ್ರದಾಯದ ಸಂಕೋಲೆಗಳು ಸಡಿಲಗೊಂಡರೂ, ತ್ರಿಶಂಕು ಸ್ಥಿತಿಯಿಂದ ಅಷ್ಟು ಸುಲಭದಲ್ಲಿ ಬಿಡುಗಡೆ ಸಿಗುವುದಿಲ್ಲ.
ಜಯಲಕ್ಷ್ಮಿ ಪಾಟೀಲ್ ಬರೆಯುವ “ಗರ್ದಿ ಗಮ್ಮತ್ತು” ಅಂಕಣ

Read More

ವಚನಗಳಲ್ಲಿ ಮೌಢ್ಯಗಳ ನಿರಾಕರಣೆ: ಜಯಲಕ್ಷ್ಮಿ ಪಾಟೀಲ್ ಅಂಕಣ

ಸಾಕಷ್ಟು ಜನ ಉದಹರಿಸುವ ಜೇಡರ ದಾಸಿಮಯ್ಯನವರ, ‘ಮೊಲೆ ಮೂಡಿ ಬಂದರೆ ಹೆಣ್ಣೆಂಬರುʼ, ಅಲ್ಲಮಪ್ರಭುದೇವರ, ‘ಹೊನ್ನು ಮಾಯೆ ಎಂಬರು’ ವಚನಗಳಲ್ಲದೇ ಇನ್ನೂ ಕೆಲವು ವಚನಗಳಿವೆ. ಕೇವಲ ಶರಣರ ವಚನಗಳಲ್ಲಿ ಮಾತ್ರವಲ್ಲ, ಶರಣೆಯರ ವಚನಗಳಲ್ಲೂ ನೋಡಬೇಕಿರುವುದು ಅವಶ್ಯಕ. ಶರಣೆಯರ ಅಂಥ ವಚನಗಳನ್ನು ಓದುತ್ತಿದ್ದರೆ ಅಬ್ಬಾ ಎನಿಸುತ್ತದೆ! ಕ್ರಾಂತಿಯ ದೊಂದಿಯನ್ನು ನಂದಿಸಲು ದುಷ್ಟ ವ್ಯವಸ್ಥೆ ಯಾಕೆ ಹಪಹಪಿಸಿತು ಎನ್ನುವುದು ನಿಚ್ಚಳವಾಗುತ್ತದೆ. ಕೇವಲ ಗಂಡಸರು ಮಾತ್ರ ಬಂಡೇಳಲಿಲ್ಲ ಆಗ, ಹೆಂಗಸರೂ ವ್ಯವಸ್ಥೆಯನ್ನು ಮುಲಾಜಿಲ್ಲದೆ ಪ್ರಶ್ನಿಸಿದ್ದು, ಗಂಡು ಹೆಣ್ಣೆಂಬುದರಾಚೆ ನಿಂತು ಮಾತಾಡಿದ್ದು, ತಮ್ಮ ಅಸ್ಮಿತೆಯನ್ನು ಸ್ಪಷ್ಟಪಡಿಸಿದ್ದು ನುಂಗಲಾರದ ತುತ್ತಾಗಿರಬೇಕು.
ಜಯಲಕ್ಷ್ಮಿ ಪಾಟೀಲ್ ಬರೆಯುವ “ಗರ್ದಿ ಗಮ್ಮತ್ತು” ಅಂಕಣ

Read More

ಎಲ್.ಎನ್.‌ ಮುಕುಂದರಾಜ್‌ ಕವಿತೆ ಮತ್ತು ಸಮಾಜ: ಜಯಲಕ್ಷ್ಮಿ ಪಾಟೀಲ್ ಅಂಕಣ

ಮುಕುಂದರಾಜ್ ಅವರು ಈ ಕವನವನ್ನು ಬರೆದು ದಶಕಗಳೇ ಕಳೆದಿರಬಹುದು. ಆದರೆ ಸಮಾಜ, ಮನುಷ್ಯನ ಬುದ್ಧಿ, ಸ್ವಭಾವ ಮಾತ್ರ ಅವತ್ತಿಗೂ ಇವತ್ತಿಗೂ ಯಾವತ್ತಿಗೂ ಬದಲಾಗದು ಎನ್ನುವುದನ್ನು ‘ದಾರಿಯುದ್ದಕ್ಕು’ ಕವನ ತುಂಬಾ ಸಮರ್ಥವಾಗಿ ಬಿಂಬಿಸುತ್ತದೆ. ಈ ಕವಿತೆಯನ್ನು ಓದಿದ ಕೂಡಲೇ ಮುಂದಿನ ಕವಿತೆ ಓದುತ್ತೇನೆ ಎಂದರೆ ಅದು ಸಾಧ್ಯವಾಗದು. ಇದರೊಳಗೆ ಅಡಗಿದ ಅಸಹಾಯಕತೆ, ಮಾರ್ಮಿಕತೆ ಮತ್ತೆ ಮತ್ತೆ ಓದುವಂತೆ ಮಾಡುತ್ತದೆ. ಇಡೀ ಕವಿತೆ ಸರ್ರಿಯಲಿಸಂನ ಜೊತೆಗೆ ತುಸು ಗಜಲ್ ಛಾಯೆಯನ್ನೂ ಹೊತ್ತಿರುವುದು ವಿಶೇಷ. ಅಸ್ತಿತ್ವವಾದದ ನೆಲೆಯಲ್ಲಿ ನಾನು ಈ ನವ್ಯ ಕವನವನ್ನು ನೋಡುತ್ತಿದ್ದೇನೆ.
ಜಯಲಕ್ಷ್ಮಿ ಪಾಟೀಲ್ ಬರೆಯುವ “ಗರ್ದಿ ಗಮ್ಮತ್ತು” ಅಂಕಣ

Read More
  • 1
  • 2

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ