ಕಲ್ಯಾಣಕ್ರಾಂತಿ: ಡಾ. ಲತಾ ಗುತ್ತಿ ಕಾದಂಬರಿಯ ಪುಟಗಳು

ಬೆಳಗಿನ ಜಾವ ಕಣ್ಣುಬಿಟ್ಟಾಗ ಎಲ್ಲೆಲ್ಲೂ ಜಾತ್ರೆಯದೇ ಆದ ಒಂದು ಬೆಡಗಿನ ಸೊಬಗು. ತಣ್ಣನೆಯ ಗಾಳಿ-ಪಕ್ಷಿಗಳ ಕಲರವ. ಸೂರ್ಯೋದಯ. ದೇವಸ್ಥಾನದ ಆವರಣದಿಂದ ಕೇಳಿಬರುವ ಶರಣರ ವಚನಗಳ ಹಾಡುಗಳು. ಸುತ್ತೆಲ್ಲ ಹಸಿರು ಗಿಡಮರಗಳಿಂದ ತುಂಬಿದ ತಂಪಾದ ಸ್ಥಳದಲ್ಲಿ ಚೆನ್ನಬಸವಣ್ಣನ ದೇವಸ್ಥಾನ ದೂರ ದಿಂದಲೇ ಕಂಗೊಳಿಸುತ್ತದೆ. ಎತ್ತರದ ಗೋಪುರದಲ್ಲಿ ಶಿವಶರಣರ ಶಿಲ್ಪ ಕೃತಿಗಳು. ಅವರವರ ವೃತ್ತಿಗೆ ತಕ್ಕಂತೆ ಕೆತ್ತನೆಗಳಿವೆ. ೧೨ನೆಯ ಶತಮಾನದ ಶರಣರೆಲ್ಲ ಕಣ್ಣಿಗೆ ಕಟ್ಟುವಂತೆ ಕಾಣುತ್ತಾರೆ. ದೇವಸ್ಥಾನ ತಳಿರು ತೋರಣಗಳಿಂದ ಶೋಭಿತಗೊಂಡಿದೆ.
ಡಾ. ಲತಾ ಗುತ್ತಿ ಹೊಸ ಕಾದಂಬರಿ “ಚದುರಂಗ”ದ ಕೆಲವು ಪುಟಗಳು ನಿಮ್ಮ ಓದಿಗೆ

Read More