Advertisement

Tag: ಡಾ.ವಿನತೆ ಶರ್ಮಾ

ನಮ್ಮ ಆಹಾರ ನಮ್ಮ ಸಮುದಾಯದ ಹಸಿರುಕಣ್ಣು!: ವಿನತೆ ಶರ್ಮ ಅಂಕಣ

ಎಲ್ಲರ ಜಗಳದಲ್ಲಿ ಬಡವಾಗಿರುವುದು ನಾವೇ ನಾವು, ಸಾಮಾನ್ಯರು. ಏಕೆಂದರೆ ನಾವು ಪ್ರಕೃತಿಯ ಭಾಗವಲ್ಲವೇ! ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರ ಬೆಳೆಯುವ ಮಣ್ಣಿಗೆ ಅನಾರೋಗ್ಯವುಂಟಾದರೆ ನಮ್ಮ ಆರೋಗ್ಯವೂ ಕೆಡುತ್ತದೆ ಎಂದು ಕಳೆದ ‘ಆಸ್ಟ್ರೇಲಿಯಾ ಪತ್ರ’ದಲ್ಲಿ ಬರೆದಿದ್ದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ಕೇಂದ್ರೀಯ ಬಜೆಟ್‌ನ ಉಪಕಥೆಗಳು: ಡಾ. ವಿನತೆ ಶರ್ಮ ಅಂಕಣ

ಇತ್ತೀಚೆಗೆ ವಿದ್ಯಾರ್ಥಿನಿಯೊಬ್ಬಳು ಹೇಳಿದಂತೆ ಯೂನಿವರ್ಸಿಟಿಯ ಸಹಪಾಠಿಯೊಬ್ಬರು ತಮ್ಮ ಕಾರಿನಲ್ಲಿ ಬದುಕುತ್ತಿದ್ದರಂತೆ. ರಾತ್ರಿ ಸಮಯ ರಸ್ತೆ ಬದಿಯಲ್ಲಿ ಕಾರನ್ನು ನಿಲ್ಲಿಸಿಕೊಂಡಿರುವುದು, ಒಳಗೆ ಮುದುರಿಕೊಂಡು ಮಲಗುವುದು. ಬೆಳಿಗ್ಗೆ ಎದ್ದು ಯೂನಿವರ್ಸಿಟಿಗೆ ಬಂದು ಅಲ್ಲಿದ್ದ ಟಾಯ್ಲೆಟ್, ಶವರ್ ಸೌಲಭ್ಯಗಳನ್ನು ಬಳಸಿಕೊಂಡು, ಕೆಫೆಯಲ್ಲಿ ವಿದ್ಯಾರ್ಥಿಗಳಿಗೆ ಸಿಕ್ಕುವ ರಿಯಾಯ್ತಿ ದರದಲ್ಲಿ ಕಾಫಿ, ಸ್ಯಾಂಡ್ವಿಚ್ ಮತ್ತು ಉಚಿತ ಹಣ್ಣು ಪಡೆಯುವುದು. ದಿನಪೂರ್ತಿ ಯೂನಿವರ್ಸಿಟಿ ಕಟ್ಟಡದೊಳಗೇ ಇದ್ದುಕೊಂಡು ಒಂದಷ್ಟು ವ್ಯಾಸಂಗ, ನಿದ್ದೆ ಮಾಡುವುದು. ರಾತ್ರಿ ಪುನಃ ಕಾರಿಗೆ ವಾಪಸ್.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ

Read More

ಆಸ್ಟ್ರೇಲಿಯಾದ ‘ಬಿಗ್ ಥಿಂಗ್ಸ್’ ಆಕರ್ಷಣೆಗಳು

ಏನಿದು ‘ಬಿಗ್ ಥಿಂಗ್ಸ್’ ಎಂದು ಮೊದಲ ಬಾರಿ ಕೇಳಿದಾಗ ನನ್ನ ಆಸ್ಟ್ರೇಲಿಯನ್ ಸ್ನೇಹಿತೆಯ ಗಂಡ ಬಲು ಸೊಗಸಾಗಿ ವಿವರಿಸಿದ್ದರು. ಒಂದೂರಿನ ಜನರು ಸೇರಿ ತಮಗೆ ಆಪ್ತವೆನಿಸಿದ ಹಣ್ಣು, ಆಹಾರ, ಪ್ರಾಣಿ, ಪಕ್ಷಿ, ಮರ ಇತ್ಯಾದಿಗಳಲ್ಲಿ ಒಂದನ್ನು ಆರಿಸಿಕೊಂಡು ಅದನ್ನು ದೊಡ್ಡ ಗಾತ್ರದ ಶಿಲ್ಪ ಕೃತಿಯಾಗೋ, ಲೋಹ ಕಲಾ ಕೃತಿಯಾಗಿಯೋ ನಿರ್ಮಿಸಿ ಹೆಮ್ಮೆಯಿಂದ ಆ ಪ್ರತಿಮೆಯನ್ನು ತಮ್ಮೂರಲ್ಲಿ ಸ್ಥಾಪಿಸುವುದು. ಕ್ರಮೇಣ ಅದಕ್ಕೆ ಪ್ರಚಾರ ಕೊಟ್ಟು ಅದನ್ನು ದೇಶದ ‘ಬಿಗ್ ಥಿಂಗ್ಸ್’ ಪಟ್ಟಿಗೆ ಸೇರುವಂತೆ ಮಾಡುವುದು. ಇದರಿಂದ ಆ ಊರಿಗೆ ಅದೇನೋ ವಿಶೇಷ ಗುರುತು ಸಿಕ್ಕಿದಂತಾಗುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಅನ್ ರಿಯಲ್ ಲೋಕದಲ್ಲಿ ಶಾಂತಿ ಮಂತ್ರ ಜಪ

ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿದ್ದಾಗ ಈ ಬಲು ದೀರ್ಘ ಪ್ರೋಸ್/ ಪೊಯೆಟ್ರಿ, ನವ್ಯ ಕಾವ್ಯ ಬಹಳ ದಿನಗಳ ಕಾಲ ನನ್ನನ್ನು ಕಾಡಿತ್ತು. ಅದನ್ನು ಕೈಲಿ ಹಿಡಿದುಕೊಂಡು ಎಲ್ಲವನ್ನೂ ಬಿಟ್ಟು ಯಾವುದೊಂದೂ ವ್ಯವಸ್ಥೆಗೆ ಸಿಲುಕದೆ ಪ್ರಪಂಚ ಸುತ್ತುವ ಇರಾದೆ ಹುಟ್ಟಿತ್ತು. ಆ ಕಾಲದಲ್ಲಿ ಅವು ನಾನು ಮನೆಬಿಟ್ಟು ಹೋಗುವ, ಹುಟ್ಟಿ ಬೆಳೆದ ಕುಟುಂಬವನ್ನು ತ್ಯಜಿಸುವ ನಿರ್ಧಾರ ತೆಗೆದುಕೊಂಡಿದ್ದ ದಿನಗಳು. ಕಾಲೇಜು ಹುಡುಗಿ ಮನೆಬಿಟ್ಟು ಹೋದಮೇಲೆ ಹೇಗೆ ಬದುಕುವುದು ಎನ್ನುವ ಚಿಂತನೆಯಲ್ಲಿದ್ದ ದಿನಗಳು. ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಸಾಂಘಿಕವಾದ ಕ್ರಿಸ್ಮಸ್ ಸೀಸನ್ ಶುಭಾಶಯಗಳು

ಬಹುಶಃ ಪ್ರಪಂಚದಾದ್ಯಂತ ಕೋಟ್ಯಾಂತರ ಮಕ್ಕಳು ಎದುರು ನೋಡುವ, ಹಾಗೆ ಗಪ್ ಚಿಪ್ ಆಗಿ ಚಿಮಿಣಿಯಲ್ಲಿ ಸಾಂಟಾ ಬಂದು ಕೊಡುವ ಉಡುಗೊರೆಗಾಗಿ ಕಾಯುವ ಯಾವೊಂದು ಮಗುವಿಗೂ ನಿರಾಸೆಯಾಗದ ಸಂದರ್ಭ ಈ ಕ್ರಿಸ್ಮಸ್ ಸೀಸನ್. ಇದು ‘giving’ ಸೀಸನ್. ಅಂದರೆ ನಾವು ಮನಃಪೂರ್ವಕವಾಗಿ ಕೈಲಾದಷ್ಟು ದಾನ ಮಾಡುವ ಕಾಲ. ನಾವು ಕೊಡುವ ದಾನವು ಹಣದಿಂದ ಹಿಡಿದು ಬಟ್ಟೆ, ಉಡುಗೆತೊಡುಗೆ, ಮನೆವಸ್ತುಗಳು, ಪೀಠೋಪಕರಣಗಳು, ಪುಸ್ತಕಗಳು, ಆಹಾರ ಪದಾರ್ಥ, ಎಂಬಂತೆ ನಾನಾತರಹವಾಗಿ ನಾವು ದಾನವೀಯಬಹುದು.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ