ಅಂಕುಡೊಂಕಿನ ಪಯಣ: ಡಾ. ಎಂ ಉಷಾ ಕಾದಂಬರಿಯ ಪುಟಗಳು

ಮೊದಲೇ ಅಸಮಧಾನಗೊಂಡಿದ್ದ ಪುಟ್ಟಮ್ಮನಿಗೆ ಮಕ್ಕಳ ಈ ಕಳ್ಳಾಟದಿಂದ ಪಿತ್ತ ನೆತ್ತಿಗೇರಿತು. ಕಂಕುಳಲ್ಲಿದ್ದ ಮಲ್ಲಿಯನ್ನು ಕೆಳಕ್ಕೆ ಕುಕ್ಕಿದವಳೆ ಸರೋಜಳ ಮೇಲೆ ಮುಗಿಬಿದ್ದಳು. ‘ಮನೆ ಕೆಲಸ ಮಾಡದು ಬುಟ್ಟು ಸೂಳೆರಂಗೆ ಅಲಂಕಾರ ಮಾಡ್ಕತಾ ಕೂತಿದಿಯಾ ಇಲ್ಲಿ? ಯಾವ ನಾಯಕಸಾನಿ ಕೊಟ್ಲೆ ಇದ್ನ ನಿಂಗೆ… ʼ ಎಂದು ಸಿಕ್ಕಸಿಕ್ಕಲ್ಲಿ ಬಡಿಯ ತೊಡಗಿದಳು. ಈ ಬಾರಿ ಗೌರಿಹಬ್ಬಕ್ಕೆಂದು ರಾಜಶೇಖರ ದಾಕ್ಷಾಯಿಣಿಗೆ ಹೊಸ ಸ್ನೋಪೌಡರ್ ಡಬ್ಬಿಗಳನ್ನು ತಂದುಕೊಟ್ಟಿದ್ದನ್ನು ಗಮನಿಸಿದ ಸರೋಜ ಚಿಕ್ಕಮ್ಮನಲ್ಲಿ ಹಳೆಯ ಡಬ್ಬಿಯನ್ನು ಕೇಳಿ ಪಡೆದಿದ್ದಳು. ಇವತ್ತು ಹಬ್ಬದ ದಿನವಾಗಿದ್ದುದು ಮತ್ತು ಕೆಲಸದಲ್ಲಿ ಮುಳುಗಿ ಹೋಗಿರುವ ಅಮ್ಮ ಗಮನಿಸುವುದಿಲ್ಲ ಎನ್ನುವ ಧೈರ್ಯದಲ್ಲಿ ಹಚ್ಚಿಕೊಂಡಿದ್ದಳು.
ಡಾ. ಎಂ. ಉಷಾ ಹೊಸ ಕಾದಂಬರಿ “ಬಾಳ ಬಟ್ಟೆ”ಯ ಕೆಲವು ಪುಟಗಳು ನಿಮ್ಮ ಓದಿಗೆ

Read More