Advertisement

Tag: Chitra Venkataraju

ಒಂದು ಡೈಲಾಗ್‌ ಹೇಳಿ!: ಚಿತ್ರಾ ವೆಂಕಟರಾಜು ಸರಣಿ

ಕಲಿಕೆಯ ಪ್ರಾರಂಭದಲ್ಲಿ ಎಲ್ಲಾ ಕಲೆಗಳಲ್ಲೂ ಅದನ್ನು ಕಲಿಸುವವರನ್ನು ಅನುಕರಣೆ ಮಾಡುತ್ತಾರೆ. ಒಂದು ಹಂತದಲ್ಲಿ ಅದು ಅನಿವಾರ್ಯ ಕೂಡಾ. ನಂತರ ನಿಧಾನವಾಗಿ ಅದನ್ನು ಬಿಡಿಸಿಕೊಂಡು ಅಂದರೆ ಕೌಶಲವನ್ನು ಮೀರಿ, ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಒಂದು ಪಾತ್ರದ ನಡವಳಿಕೆ ಹೇಗಿರಬಹುದು ಎನ್ನುವುದರಿಂದ ನಟನೆಯ ಪ್ರಕ್ರಿಯೆಯನ್ನು ಪ್ರಾರಂಭ ಮಾಡಬೇಕಾಗುತ್ತದೆ. ಇಲ್ಲದಿದ್ದರೆ, ವರ್ಷಗಳ ಹಿಂದೆ ಅನುಕರಣೆ ಮಾಡಿದ ರೀತಿಯಲ್ಲೇ ಎಲ್ಲಾ ಸಂಭಾಷಣೆಗಳನ್ನೂ ಹೇಳುತ್ತೇವೆ. ಕಾಳಿದಾಸನಿಂದ ಹಿಡಿದು ಷೇಕ್ಸ್‌ಪಿಯರ್‌ ನವರೆಗೂ ಎಲ್ಲಾ ನಾಟಕದ ಎಲ್ಲಾ ಪಾತ್ರಗಳೂ ಒಂದೇ ರೀತಿ ಮಾತನಾಡುತ್ತವೆ. ನಿಜ ಜೀವನದಲ್ಲಿ ಮಾತನಾಡುವಂತೆ ರಂಗದ ಪಾತ್ರಗಳು ಮಾತನಾಡಲು ಆಗುವುದಿಲ್ಲ ಅದಕ್ಕೊಂದು ನಾಟಕೀಯತೆ ಇರಬೇಕಾಗುತ್ತದೆ.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು”

Read More

ನೀನು ಬೆಳೆದರೆ ನಾನು ಬೆಳೆವೆನು: ಚಿತ್ರಾ ವೆಂಕಟರಾಜು ಸರಣಿ

ಎಷ್ಟು ಸಲ ಪ್ರವೇಶ ಕೊಡಬಾರದ ಸೀನ್‌ಗಳಲ್ಲಿ ತಪ್ಪಿ ಪ್ರವೇಶ ಕೊಟ್ಟಿರುತ್ತೇವೆ, ಆಡಲೇಬೇಕಾದ ಮಾತನ್ನು ಆಡದೇ ಉಳಿದಿದ್ದೇವೆ. ಆಡಬಾರದಿದ್ದ ಸಂಭಾಷಣೆಗಳನ್ನು ಸುಲಭವಾಗಿ ಆಡಿಬಿಟ್ಟಿರುತ್ತೇವೆ. ಏನೇ ಮಾಡಲಿ ಒಮ್ಮೆ ಆ ನಾಟಕ ಮುಗಿದ ಮೇಲೆ ಮುಗಿಯಿತು… ಒಮ್ಮೆ ಪ್ರದರ್ಶನ ಮುಗಿದ ಮೇಲೆ ಮತ್ತೆ ಆ ದೃಶ್ಯದಲ್ಲಿ ನಮ್ಮ ಎಂಟ್ರಿ ಇಲ್ಲ. ಮತ್ತೆ ಬೇರೆಯದೇ ನಾಟಕದಲ್ಲಿ ಬೇರೆಯದೇ ಪಾತ್ರ! ನಾಟಕದ ಮಜಾ ಎಂದರೆ ಬದುಕಿಗಿಲ್ಲದ ಮರು ಪ್ರದರ್ಶನದ ಅವಕಾಶ ನಾಟಕದಲ್ಲಿದೆ. ಎಲ್ಲ ನಟರೂ ಒಪ್ಪಿದರೆ ಮತ್ತೆ ಅದೇ ನಾಟಕವನ್ನು ಆಡಬಹುದು. ಬೇಕಿದ್ದರೆ ಬೇರೆ ರೀತಿಯಲ್ಲಿ. ಆದರೆ, ಪ್ರತಿ ಬಾರಿಯೂ ಹೊಸದಾಗಿ ಅಭಿನಯಿಸಬೇಕು.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ

Read More

ರಂಗದ ನಂಟು ಅಂಟಿದ ಬಗೆ: ಚಿತ್ರಾ ವೆಂಕಟರಾಜು ಸರಣಿ

ನಾಟಕೋತ್ಸವ ಮುಗಿದು ಅವರೆಲ್ಲ ಹೊರಟುಹೋದ ಮೇಲೆ ಮತ್ತೆ ನಮ್ಮ ದಿನಚರಿಗೆ ಹೊಂದಿಕೊಳ್ಳುವುದಕ್ಕೆ ಬಹಳ ಸಂಕಟವಾಗುತ್ತಿತ್ತು. ಕಿಂದರಿಜೋಗಿಯ ಕುಂಟನಂತೆ ‘ಅಯ್ಯೋ ಹೋಯಿತೆ ಆ ನಾಕ, ಅಯ್ಯೋ ಬಂದಿತೆ ಈ ಲೋಕʼ ಎನ್ನುವ ಭಾವನೆ ಬರುತ್ತಿತ್ತು. ಈಗಿನಷ್ಟು ನಾಟಕ ಪ್ರಯೋಗಗಳು ನೋಡಲು ಸಿಗುತ್ತಿರಲಿಲ್ಲವಾದ್ದರಿಂದ ನೀನಾಸಮ್‌ ತಿರುಗಾಟವನ್ನು ನಾವು ಕರೆಸಿದಷ್ಟು ವರ್ಷಗಳೂ ನಾಟಕ ಮಾಡಬೇಕು ಅನ್ನೋ ಆಸೆ ಹೆಚ್ಚಾಗುತ್ತಿತ್ತು.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ

Read More

ನಾಟಕರಂಗದ ತಮಾಷೆ ಪ್ರಸಂಗಗಳು: ಚಿತ್ರಾ ವೆಂಕಟರಾಜು ಸರಣಿ

ಬರುವಾಗ ಸುಳ್ಯ, ಪುತ್ತೂರಿನ ಸಮೀಪ ಬೆಳಗಿನ ಜಾವ ಸುಮಾರು ೪ ಗಂಟೆಗೆ ಮೂತ್ರವಿಸರ್ಜನೆಗಾಗಿ ಗಾಡಿ ನಿಲ್ಲಿಸಿದರು. ನಂತರ ಹೊರಟು ಇನ್ನೇನು ಮೈಸೂರು ಹತ್ತಿರ ಬರುತ್ತಿದ್ದಂತೆ ಎಲ್ಲರಿಗೂ ಸಂಪೂರ್ಣ ಎ‍ಚ್ಚರವಾಯಿತು. ಇದ್ದಕ್ಕಿದ್ದಂತೆ ಯಾರೋ ‘ರಾಜಪ್ಪ ಎಲ್ಲಿ’ ಅಂತ ಕೇಳಿದರು. ಟೆಂಪೋ ಎಲ್ಲಾ ಹುಡುಕಿದರೂ ರಾಜಪ್ಪ ಇಲ್ಲ. ಎಲ್ಲಿ ಬಿಟ್ಟು ಬಂದ್ವಿ ಗೊತ್ತಿಲ್ಲ. ಅವರು ಪಾಪ ಒಂದು ಪಟಾಪಟಿ ಲುಂಗಿ ಬನಿಯನ್ ಮತ್ತು ಟವೆಲ್ ಸುತ್ತಿಕೊಂಡು ಇಳಿದವರು ವಾಪಸ್ ಬರುವ ಹೊತ್ತಿಗೆ ಟೆಂಪೋ ಹೊರಟಾಗಿತ್ತು. ಕಾಲಲ್ಲಿ ಚಪ್ಪಲಿಯೂ ಇಲ್ಲದಂತೆ ಯಾರದ್ದೋ ಸಹಾಯ ಕೇಳಿ ಕೊನೆಗೆ ಚಾಮರಾಜನಗರದಲ್ಲಿ ಕಾಣಿಸಿಕೊಂಡರು.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ

Read More

ರಂಗದ ಮೇಲಿನ  ದೃಶ್ಯಕಾವ್ಯ  ‘ಚಿತ್ರಾಂಗದಾ’: ಚಿತ್ರಾ ವೆಂಕಟರಾಜು ಸರಣಿ

ಕೊನೆಗೂ ಯಾಕೆ ಈ ನಾಟಕವನ್ನು ಮಾಡಬೇಕು, ಯಾಕೆ ಈ ನಾಟಕವನ್ನು ನೋಡಬೇಕು ಎನ್ನುವುದು ಪ್ರತಿಯೊಬ್ಬ ಕಲಾವಿದನ, ಪ್ರೇಕ್ಷಕನ ಮೂಲಭೂತ ಪ್ರಶ್ನೆ. ಇಲ್ಲಿ ಇದು ಚಿತ್ರಾಂಗದಾ ಮತ್ತು ಅರ್ಜುನನ ಕತೆಯಾದರೂ ಅದರ ನೆಪದಲ್ಲಿ ನಡೆಯುವುದು ಗಂಡು ಹೆಣ್ಣು ಮತ್ತು ಅವರಿಬ್ಬರ ಸಂಬಂಧದ ಸಂಕೀರ್ಣತೆಯ ಬಗ್ಗೆ. ಹೆಣ್ಣಾದರೂ ಗಂಡಿನಂತೆ ವನದಲ್ಲಿರುವ ಚಿತ್ರಾಂಗದೆ ಅರ್ಜುನನನ್ನು ನೋಡಿದ್ದೆ ಮತ್ತೆ ‘ಹೆಣ್ತನ’ ಕ್ಕೆ ಹಾತೊರೆಯುತ್ತಾಳೆ. ಅವಳೊಳಗಿನ ಹೆಣ್ಣನ್ನು ನೋಡಿದ ಅರ್ಜುನ ತನ್ನ ಬ್ರಹ್ಮಚರ್ಯದ ನಿಯಮವನ್ನು ಮುರಿಯುತ್ತಾನೆ.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿಯಲ್ಲಿ ‘ಚಿತ್ರಾಂಗದಾ’ ನಾಟಕದ ಕುರಿತ ಬರಹ

Read More
  • 1
  • 2

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ