Advertisement

Tag: Dr. Chandramathi Sonda

ಆಟದ ಸುತ್ತ ಒಂದು ಸುತ್ತು: ಚಂದ್ರಮತಿ ಸೋಂದಾ ಸರಣಿ

ಮಳೆಗಾಲ ಮುಗಿದ ಮೇಲೆ ಊರಿನ ಬೀದಿ ಶಾಲೆಯ ಅಂಗಳ, ದೇವಸ್ಥಾನದ ಮುಂದಿನ ಬಯಲು ಎಲ್ಲವೂ ನಮ್ಮ ಆಟಕ್ಕೆ ಸೂಕ್ತ ಎಂದು ಭಾವಿಸಿ ಆಡುತ್ತಿದ್ದೆವು. ಮುಟ್ಟಾಟ ಅಥವಾ ಹಿಡಿಯೋ ಆಟಕ್ಕೆ ಬಹಳ ಪ್ರಾಧಾನ್ಯವಿತ್ತು. ಅಟ್ಟಿಸಿಕೊಂಡು ಹೋಗಿ ಹಿಡಿಯುವುದು ಒಂಥರಾ ಖುಶಿ ಕೊಡುತ್ತಿತ್ತು. ಇದರ ಇನ್ನೊಂದ ರೂಪವೇ ʻಕೂತು ಹಿಡಿತಿಯೋ ನಿಂತು ಹಿಡಿತಿಯೋʼ ಎನ್ನುವುದು. ಕೇಳಿದಾಗ ನಿಂತು ಎಂದರೆ ನಿಂತಾಗ, ಇಲ್ಲವೆ ಕುಳಿತು ಎಂದರೆ ಕುಳಿತಾಗ ಅವರನ್ನು ಮುಟ್ಟಬೇಕು, ಆಗ ಅವರು ಆಟದಿಂದ ಹೊರಕ್ಕೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿ

Read More

ನೆನಪಿನಲ್ಲಿ ಉಳಿಯುವ ಸಾಮಾನ್ಯರು: ಚಂದ್ರಮತಿ ಸೋಂದಾ ಸರಣಿ

ಒಮ್ಮೆ ವಾಕಿಂಗಿಗೆ ಹೋಗುವಾಗ ಸರ್ಕಲ್ಲಿನಲ್ಲಿ ಅವಳು ಸೊಪ್ಪು ಮಾರುವುದನ್ನು ಗಮನಿಸಿದೆ. ಒಂದು ದಿನ ಅವಳು ನನ್ನನ್ನು ಕರೆದು ʻಸೊಪ್ಪು ತಕಳಿ. ಈ ಸೊಪ್ಪು ಬಾರಿ ಚೆನಾಗದೆʼ ಅಂತ ಕೊಟ್ಟಳು. ಇನ್ನೂ ಮೊಬೈಲ್‌ ಕೈಯಲ್ಲಿ ಇಲ್ಲದ ಕಾಲ. ʻದುಡ್‌ ತಂದಿಲ್ಲʼ ಅಂದೆ. ʻನಾಳೆ ಕೊಡಿʼ ಅಂದಳು. ʻನಾಳೆ ಬರದಿದ್ದರೆ?ʼ ಅಂದಿದ್ದಕ್ಕೆ ʻಯಾವತ್ತೋ ಕೊಡಿ ಹೋಗಿʼ ಅಂದಳು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಇಪ್ಪತ್ತೆರಡನೆಯ ಕಂತು

Read More

ಮಲಗು ಮಲಗೆನ್ನ ಮಗುವೆ…: ಚಂದ್ರಮತಿ ಸೋಂದಾ ಸರಣಿ

ನನಗೆ ಈಗಲೂ ನೆನಪಿದೆ, ನನ್ನ ತಮ್ಮಂದಿರನ್ನು, ಅಕ್ಕನ ಮಕ್ಕಳನ್ನು ತೊಟ್ಟಿಲಲ್ಲಿ ಮಲಗಿಸಿ ತೂಗುವಂತೆ ಅಮ್ಮ ಹೇಳುತ್ತಿದ್ದಳು. ಸುಮ್ಮನೆ ತೂಗಿದರೆ ಮಕ್ಕಳು ಅಳುತ್ತಿದ್ದವು. ಲಾಲಿಪದ ಹೇಳಿದರೆ ಸಾಕು ಕೆಲವೇ ಹೊತ್ತಿನಲ್ಲಿ ಅವು ಮಲಗುತ್ತಿದ್ದವು. ಆಗೆಲ್ಲ ನಾವು ದೊಡ್ಡವರು ಹೇಳುತ್ತಿದ್ದ ಜೋಗುಳ, ಲಾಲಿಪದಗಳನ್ನು ಕೇಳಿ ಕಲಿಯುತ್ತಿದ್ದೆವು. ʻಅಳದಿರು ತಮ್ಮಯ್ಯ ಅಳಿರ ಕಣ್ಣಿಗೆ ನಿದ್ದೆ ಬೆಳಗಾದರೆ ಬಕ್ಕು ನಿನ ಮಾವ ತಮ್ಮಯ್ನ ಮಡಿಲಿಗೆ ತಕ್ಕು ಕಡಲೆಯʼ ಅಂತಲೋ ನಮ್ಮದೇ ಆದ ರಾಗದಲ್ಲಿ ಹಾಡುವುದಿತ್ತು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹದಿಮೂರನೆಯ ಕಂತಿನಲ್ಲಿ ಲಾಲಿಹಾಡುಗಳ ಕುರಿತ ಬರಹ ನಿಮ್ಮ ಓದಿಗೆ

Read More

ಭಾಷೆಯ ಭಾವಯಾನ: ಡಾ. ಚಂದ್ರಮತಿ ಸೋಂದಾ ಸರಣಿ

ನಮಗೆ ಅಗತ್ಯವಿಲ್ಲದ ಪದಗಳ ಬಳಕೆಯ ವಿಷಯದಲ್ಲಿ ಸರಿ. ಆದರೆ ದಿನನಿತ್ಯದ ವ್ಯವಹಾರದಲ್ಲಿ ಬಳಸುವ, ನಾವು ಉಪಯೋಗಿಸುವ ವಸ್ತುಗಳ ವಿಷಯವೇ ಬೇರೆ. ಅನೇಕ ಪದಗಳನ್ನು ಕನ್ನಡದಲ್ಲಿ ಹೇಳಲು ಕಷ್ಟಪಡುತ್ತೇವೆ. ಯಾಕೆಂದರೆ ನಮಗೆ ಅವೆಲ್ಲ ಮರೆತೇ ಹೋಗುತ್ತಿವೆ. ಇಂಗ್ಲಿಷ್‌ ಪದಗಳು ಆ ಸ್ಥಾನವನ್ನು ಆಕ್ರಮಿಸಿವೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹತ್ತನೆಯ ಕಂತಿನಲ್ಲಿ ದಿನನಿತ್ಯ ಕನ್ನಡ ಭಾಷೆಯ ಬಳಸುವಿಕೆಯ ಕುರಿತ ಬರಹ ನಿಮ್ಮ ಓದಿಗೆ

Read More

ಡಾ. ಚಂದ್ರಮತಿ ಸೋಂದಾ ಬರೆಯುವ ಸರಣಿ “ಮಾತು ಮಂದಲಿಗೆ” ಆರಂಭ

ಅದೃಷ್ಟದ ಪೆನ್ನು ಎಂದು ತಮ್ಮ ಪೆನ್ನಿನ ಬಗ್ಗೆ ಬಹಳ ಮುತುವರ್ಜಿವಹಿಸುವುದೂ ಇದೆ. ಅದೇನಾದರೂ ಕಳೆದುಹೋಯಿತು ಅಂದ್ರೆ ಆಗ ನೋಡಬೇಕು ಭೂಮಿ ಆಕಾಶ ಒಂದು ಮಾಡುವ ಥರಾ ಕೂಗಾಡುವುದನ್ನು. ಸಿಗಲಿಲ್ಲ ಅಂದರೆ ಮನೆಮಂದಿಗೆಲ್ಲ ಮಂತ್ರಾಕ್ಷತೆ ಬೇರೆ. ಅವರ ಅವತಾರ ನೋಡಿದ್ರೆ ಏನೋ ಆಗಬಾರದ್ದು ಆಗಿದೆ ಅನ್ನುವ ರೀತಿ ನಡವಳಿಕೆ. ಪೆನ್ನು ಕೈಗೆ ಬಂತು ಅಂದರೆ ಎಲ್ಲವೂ ತಣ್ಣಗೆ. ಕೆಲವರ ಸಹಿಯನ್ನಂತೂ ಯಾರಿಗೂ ನಕಲು ಮಾಡಲು ಆಗದಂತಹುದು.
ಡಾ. ಚಂದ್ರಮತಿ ಸೋಂದಾ ಬರೆಯುವ ಹಳೆ ಕಾಲದ ನೆನಪುಗಳ ಸರಣಿ “ಮಾತು ಮಂದಲಿಗೆ” ಇಂದಿನಿಂದ ಮೂರುವಾರಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ