Advertisement

Tag: kendasampige

ಕಾರವಾರದ ಆ ದಿನಗಳು: ರಂಜಾನ್ ದರ್ಗಾ ಸರಣಿ

‘ನಮ್ಮ ಕಷ್ಟ ಸುಖದಲ್ಲಿ ಇವರು. ಇವರ ಕಷ್ಟ ಸುಖದಲ್ಲಿ ನಾವು. ನಮ್ಮ ನಡುವೆ ಧರ್ಮಗಳು ಅಡ್ಡ ಬರುವುದಿಲ್ಲ. ಧರ್ಮಗಳ ಗೋಜಿಗೆ ನಾವು ಹೋಗುವುದಿಲ್ಲ. ಅವುಗಳ ಪಾಡಿಗೆ ಅವು ಇರುತ್ತವೆ. ನಮ್ಮ ಪಾಡಿಗೆ ನಾವು ಇರುತ್ತೇವೆ. ಕೆಲಸ ಮಾಡುವವರಿಗೆ ಎಲ್ಲ ಧರ್ಮಗಳು ಒಂದೇ. ಕೆಲಸವಿಲ್ಲದವರಿಗೆ ಮತ್ತು ಕೆಲಸವಿಲ್ಲದೆ ಬದುಕಬೇಕೆನ್ನುವವರಿಗೆ ಧರ್ಮಗಳು ಬೇರೆ ಬೇರೆಯಾಗಿ ಕಾಣುತ್ತವೆ. ಆ ಅವರು ಉಗ್ರರೂಪ ತಾಳಿ ಅನ್ಯ ಧರ್ಮೀಯರನ್ನು ಕೊಲ್ಲುತ್ತಾರೆ ಇಲ್ಲವೆ ಅವರಿಂದ ಕೊಲೆಗೀಡಾಗುತ್ತಾರೆ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 100ನೇ ಕಂತು ನಿಮ್ಮ ಓದಿಗೆ

Read More

ಸ್ರೀರಾಮ್ನೋಮಿ: ಸುಮಾ ಸತೀಶ್ ಸರಣಿ

ರಾಮುನ್ನ ಒಲಿಸ್ಕಣಾದು ಕಷ್ಟ. ಹನುಮಂತನ್ನ ಒಲಿಸ್ಕಣಾದು ಸುಲ್ಬ. ರಾಮಾ ಅಂದ್ರೆ ಸಾಕು ಹನುಮ ಓಡೋಡ್ಕಂಡು ಬರ್ತಾನೆ. ಆಗ ಬ್ಯಾರೆ ಆಟ ಕಟ್ದೆ ರಾಮ್ನೂ ಹಿಂದಿಂದ್ಲೇ ಬತ್ತಾನೆ‌ ಅಂಬೋದು ಅಜ್ಜಿ ಯೋಳ್ತಿದ್ದ ಇಚಾರ. ಅಂಗಾಗಿ ರಾಮನ ಹತ್ರುಕ್ಕೆ ಹೋಗಾಕೆ ಸಲೀಸು ಹನುಮಂತನ ಭಜನೆ ಮಾಡೋದು. ಹನುಮ ಕಪಿ ಅಲ್ವೇ. ಕಿಚಪಿಚಾಂತ ನಾವೂ ಕಪಿಗಳಂಗೇ ಭಜನೆ ಹಾಡ್ತಿದ್ವಿ. ಮರದಾಗಿರೋವೂ ಜಾತಿಪ್ರೀತಿಗೆ ಓಡಿಬರೋ ಅಂಗೆ ಇರ್ತಿತ್ತು ನಮ್ಮ ಆಲಾಪ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ

Read More

‘ರೈತ ಕವಿ’ ಲೆನಾರ್ಟ್ ಸ್ಯೋಗ್ರೆನ್ : ಎಸ್. ಜಯಶ್ರೀನಿವಾಸ ರಾವ್ ಸರಣಿ

ಈ ಕಾರ್ಯದ ವಿರೋಧಾಭಾಸದ ಸ್ವರೂಪವು ಅವರ ಕವಿತೆಗಳಿಗೆ ಒಂದು ರೀತಿಯ ಮೊಂಡುತನದ ನಿಷ್ಠುರತೆಯನ್ನು ನೀಡುತ್ತದೆ. ಮೌನದ ದಿಕ್ಕಿನಲ್ಲಿ ಮಾತನಾಡುವ ಈ ಮಾತು, ಭಾಷೆಯ ಮೂಲಕ ಭಾಷೆಯಿಲ್ಲದವರ ಜಗತ್ತನ್ನು ವ್ಯಾಖ್ಯಾನಿಸುವ ಈ ಪ್ರಯತ್ನ – ಅದರೊಂದಿಗೆ, ಯಾವಾಗಲೂ ಅಡಗಿರುವ ವೈಫಲ್ಯದ ಭಾವನೆಯ ಜೊತೆ – ಸ್ಯೋಗ್ರೆನ್ ಅವರು ಇದನ್ನು ಮುವ್ವತ್ತಕ್ಕೂ ಹೆಚ್ಚು ಕವನ ಸಂಕಲನಗಳಲ್ಲಿ ನಿರಂತರವಾಗಿ ಮತ್ತು ಸಮಚಿತ್ತದಿಂದ ನಿರ್ವಹಿಸುತ್ತಾ ಬಂದಿದ್ದಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಸ್ವೀಡನ್ ದೇಶದ ಕವಿ ಲೆನಾರ್ಟ್ ಸ್ಯೋಗ್ರೆನ್-ರವರ (Lennart Sjögren, 1930) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು

Read More

ಚುನಾವಣಾ ಕಣಕ್ಕೆ ಪ್ರವೇಶ: ಡಾ. ವಿನತೆ ಶರ್ಮ ಅಂಕಣ

ಈ ಬಾರಿ ಈ ಡಟ್ಟನ್ ಮಹಾಶಯ ವಲಸಿಗರ ಮನ ಓಲೈಸುವ ಪ್ರಯತ್ನಕ್ಕೆ ಇಳಿದಿದ್ದಾರೆ. ಪ್ರತಿದಿನವೂ ಆಸ್ಟ್ರೇಲಿಯನ್ ನಗರಗಳ ಹೊರವಲಯಗಳಲ್ಲಿ ವಾಸಿಸುತ್ತಿರುವ ವಲಸಿಗ ಸಮುದಾಯಗಳಿಗೆ ಭೇಟಿಕೊಟ್ಟು, ಭರವಸೆಗಳನ್ನು ಕೊಡುತ್ತಿದ್ದಾರೆ. ತಾವು ವಲಸಿಗರ ‘ಆಸ್ಟ್ರೇಲಿಯನ್ ಕನಸು’ ಎಂಬುದಕ್ಕೆ ಬೆಂಬಲ ಕೊಟ್ಟು, ವಲಸಿಗರ ಜೀವನವನ್ನು ಹಸನು ಮಾಡುವ ಮಾತನ್ನು ಆಡುತ್ತಿದ್ದಾರೆ. ವಲಸಿಗರೂ ಅಷ್ಟೇ, ಬಹಳ ಆಸಕ್ತಿಯಿಂದ ಚುನಾವಣಾ ವಿಷಯಗಳಲ್ಲಿ ಭಾಗವಹಿಸುತ್ತಿದ್ದಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಗತಕಾಲದ ಚಿನ್ನದ ಗಣಿ ಕೊಲಂಬಿಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ಕೊಲಂಬಿಯಾದಲ್ಲಿ ದೊಡ್ಡವರು ಮಾತ್ರವಲ್ಲ, ಚಿಕ್ಕ ಮಕ್ಕಳೂ ಸಹ ಕಾಫಿಪ್ರಿಯರು. ಊಟದ ನಂತರವೂ ಸಹ ಕಾಫಿ ಕುಡಿಯುವ ಅಭ್ಯಾಸವನ್ನು ಇವರು ಇಟ್ಟುಕೊಂಡಿದ್ದಾರೆ. ರಾತ್ರಿಯ ಊಟದ ನಂತರ ಹೆತ್ತವರೇ ತಮ್ಮ ಮಕ್ಕಳಿಗೆ ಕಾಫಿಯನ್ನು ಕುಡಿಯುವುದಕ್ಕೆ ಕೊಡುತ್ತಾರೆ. ಇದನ್ನು ‘ಕಾಫಿ ಕಾನ್ ಲೆಚೆ’ ಎಂದು ಕೊಲಂಬಿಯನ್ ಭಾಷೆಯಲ್ಲಿ ಕರೆಯಲಾಗುತ್ತದೆ. ಅಂದರೆ ‘ಹಾಲಿನ ಜೊತೆಗೆ ಕಾಫಿ’ ಎಂದರ್ಥ. ಮಕ್ಕಳಿಗೆ ಹಾಲಿನ ಜೊತೆಗೆ ಬೆರೆಸಿದ ಲೈಟಾದ ಕಾಫಿಯನ್ನು ಕೊಡುವ ದೊಡ್ಡವರು ಸ್ಟ್ರಾಂಗ್ ಕಾಫಿಯನ್ನೇ ಕುಡಿಯುತ್ತಾರೆ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ