Advertisement

Tag: ಅಬ್ದುಲ್ ರಶೀದ್

ಕಾಕ ಸಾಮ್ರಾಜ್ಯದಲ್ಲಿ ಹೂಹಕ್ಕಿಗಳು ಇರಬಲ್ಲುವೇ?

“ನಾವು ಶಾಲೆಯಲ್ಲಿ ಕಲಿತ ಹಾಗೆ ಇಲ್ಲಿ ತೇಲಿ ಬರುವ ಮೋಡಗಳು ಪರ್ವತಶ್ರೇಣಿಗಳಿಗೆ ಡಿಕ್ಕಿ ಹೊಡೆದು ಮಳೆಯಾಗಿ ಸುರಿಯುವುದಿಲ್ಲ, ಬದಲಾಗಿ ತಮ್ಮ ಭಾರಕ್ಕೆ ತಾವೇ ನಲುಗಿ ದೊಪ್ಪನೆ ತಪ್ಪಲೆಯೊಳಗಿನ ನೀರಂತೆ ಸುರಿದು ತಾವು ಇದುವರೆಗೆ ಇರಲೇ ಇಲ್ಲವೇನೋ ಎಂಬ ಹಾಗೆ ಮಾಯವಾಗಿರುತ್ತದೆ. ದ್ವೀಪದ ಒಳಗೂ ಹಾಗೇ. ಬಿಸಿಲಲ್ಲಿ ಬೆಳಗುತ್ತಿದ್ದ ಆಕಾಶವೇನಾದರೂ ಮಂಕಾಗಿದ್ದರೆ ಮನೆಯಿಂದ ಹೊರಬಂದು ಆಕಾಶಕ್ಕೆ ತಲೆ ಎತ್ತಿದರೆ ಕಪ್ಪಗಿನ ಮೇಘವೊಂದು ಕರಿಯ ಬೆಕ್ಕಿನ ಹಾಗೆ ಮೇಲಿನ ಮೂಲೆಯೊಂದರಿಂದ ನಿಮ್ಮನ್ನು ನೋಡುತ್ತಿರುತ್ತದೆ.”
ಅಬ್ದುಲ್ ರಶೀದ್ ಬರೆಯುವ ಮಿನಿಕಾಯ್ ಫೋಟೋ ಕಥಾನಕದ ಆರನೆಯ ಕಂತು

Read More

ಇಬ್ನ್ ಬತೂತನ ಸ್ತ್ರೀರಾಜ್ಯ

“ಸದಾ ಪ್ರವಾಸಿಗನಾಗಿ ಲೋಕ ಸುತ್ತುತ್ತಿದ್ದ ಇಬ್ನ್ ಬತೂತನಿಗೆ ಮಡದಿಯರ ಅವಶ್ಯಕತೆ ಇತ್ತು. ಆದರೆ ಅವರನ್ನು ಕಟ್ಟಿಕೊಂಡು ಓಡಾಡುವ ತಾಪತ್ರಯಗಳು ಬೇಕಾಗಿರಲಿಲ್ಲ. ಹಾಗಾಗಿ ಆತ ಈ ದ್ವೀಪದ ಇಬ್ಬರು ಸ್ತ್ರೀಯರನ್ನು ವರಿಸುತ್ತಾನೆ. ಇಬ್ಬರೂ ದ್ವೀಪದ ಎರಡು ಪತಿಷ್ಠಿತ ಕುಟುಂಬಗಳಿಗೆ ಸೇರಿದ ಸ್ತ್ರೀಯರು. ಹಾಗಾಗಿ ಆತನಿಗೆ ಈ ದ್ವೀಪದ ಎರಡೂ ಪತಿಷ್ಠಿತ ಕುಟುಂಬಗಳ ಬೆಂಬಲ ದೊರೆತು ಆ ದ್ವೀಪವನ್ನು ಆಳುತ್ತಿದ್ದ ದೊರೆಗಿಂತ ಬಲಶಾಲಿಯಾಗುತ್ತಾನೆ.”
ಅಬ್ದುಲ್ ರಶೀದ್ ಬರೆಯುವ ಮಿನಿಕಾಯ್ ಫೋಟೋ ಕಥಾನಕದ ಐದನೆಯ ಕಂತು

Read More

ಪುಟ್ಟದೊಂದು ಹೂಹಕ್ಕಿಯ ಹುಡುಕುವುದು ಇಲ್ಲಿಗೆ ಹೊರಟ ಕಾರಣವಾಗಿತ್ತು

ಈ ಹಕ್ಕಿಯ ಹೆಸರು ‘ಫೂಕುಂಞಿ’ . ಅಂದರೆ ಹೂಮರಿ ಎಂದು ಅರ್ಥ. ಅಷ್ಟು ಹಗುರ.ಅಷ್ಟು ಸೂಕ್ಷ್ಮ, ಮತ್ತು ಅಷ್ಟೊಂದು ಸುಂದರ. ಒಂದು ಕಾಲದಲ್ಲಿ ಈ ದ್ವೀಪದ ಮನೆಮನೆಗಳ ಎದುರಿಗಿರುವ ಬುಗುರಿ ಮರದ ಎಲೆಗಳಿಗೆ ಜೋತಾಡುತ್ತ, ಎಲೆ ಯಾವುದು ಹಕ್ಕಿ ಯಾವುದು ಎಂದು ಗೊತ್ತಾಗದ ಹಾಗೆ ಉಲಿಯುತ್ತಿದ್ದ ಈ ಹೂ ಹಕ್ಕಿಗಳು ಇವರ ಹಾಡುಗಳಲ್ಲಿ ಮತ್ತು ಕತೆಗಳಲ್ಲಿ ದಂಡಿಯಾಗಿ ಸಿಗುತ್ತವೆ. ಅವುಗಳು ಈಗ ಇಲ್ಲದಿರುವುದಕ್ಕೆ…”

Read More

ಮಿನಿಕಾಯ್ ಎಂಬ ಮಾಯಾದ್ವೀಪ: ಅಬ್ದುಲ್ ರಶೀದ್ ಬರೆಯುವ ಫೋಟೋ ಕಥಾನಕ

ನಾನು ಹೊರಟಿದ್ದುದು ಒಬ್ಬ ನೆಂಟನಂತೆ. ಒಂದು ಔತಣಕೂಟಕ್ಕೆ. ಆ ಔತಣಕೂಟವೂ ವಿಶೇಷವಾಗಿತ್ತು. ಆ ಹಳ್ಳಿ ಈ ಸಲದ ದೋಣಿ ಸ್ಪರ್ದೆಯಲ್ಲಿ ಮೊದಲ ಬಹುಮಾನ ಪಡೆದಿತ್ತು. ನಾನಾದರೋ ಹದಿನೆಂಟು ಗಂಟೆಗಳ ಕಾಲ ಕಡಲಲ್ಲಿ ಚಲಿಸುವ ಹಡಗೊಂದನ್ನು ಹತ್ತಿ, ಸೈಕಲನ್ನೂ ಹತ್ತಿಸಿ ಹೊರಟು ನಿಂತಿದ್ದೆ. ಜೊತೆಗೆ ಕಳೆದ ಕಾಲು ಶತಮಾನದಿಂದ ನನ್ನ ಜೀವನದ ವ್ಯಸನಗಳಾಗಿ ಹೋಗಿರುವ ಕ್ಯಾಮರಾ ಮತ್ತು ಮಸೂರಗಳು.

Read More

ಅಬ್ದುಲ್‌ ರಶೀದ್‌ ಕಥಾಸಂಕಲನಕ್ಕೆ ರಾಜೇಂದ್ರ ಚೆನ್ನಿ ಬರೆದ ಮಾತುಗಳು

“ಈ ಕತೆಗಳಲ್ಲಿ ಕೆಲವು ಬಹುಕಾಲ ಬಾಳಿ ನಮ್ಮನ್ನು ಕೆದಕುವಂಥವು. ಆರಂಭದ ದಿನಗಳಲ್ಲಿಯೇ ರಶೀದ್ ಬರೆದ ‘ಮೂಸಾ ಮೊಯಿಲಿಯವರ ಮುದ್ದಿನ ಮಗಳು ಮತ್ತು ಹೆಲಿಪೆಟ್ಟರ್ ಎಂಬ ದುಷ್ಟಜಂತು’ ಕತೆಯು ಕನ್ನಡದ ಶ್ರೇಷ್ಟ ಕತೆಗಳಲ್ಲಿ ಒಂದಾಗಿರುವುದಕ್ಕೆ ಕಾರಣವೆಂದರೆ ತುಂಬಾ ಸಹಜವಾಗಿ ಅದು ಪಡೆದುಕೊಳ್ಳುವ ಸಾಂದ್ರತೆ ಮತ್ತು ಬಂಧ. ಮರಗಳಿಗೆ ಕೀಟನಾಶಕವನ್ನು,…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ