Advertisement

Tag: ಕೆಂಡಸಂಪಿಗೆ

ಪ್ರಕೃತಿಯೇ ದೈವವೆನ್ನುವ ದೈಯ್ಯದ ಹರಕೆ: ಭವ್ಯ ಟಿ.ಎಸ್. ಸರಣಿ

ರಮಣೀಯವಾದ ಹಚ್ಚಹಸಿರಿನ ಮಲೆನಾಡಿನ ಒಂಟಿ ಮನೆಗಳ ಅಕ್ಕಪಕ್ಕದ ದರುಗು ಗುಡಿಸುವ ಹಡ್ಡೆಗಳ ಬನದೊಳಗೆ ಇರುವ ಮರದ ಬುಡಗಳೇ ಈ ದೈಯ್ಯಗಳ ಆವಾಸಸ್ಥಾನ. ಪ್ರಕೃತಿ, ಮರ-ಗಿಡಗಳಲ್ಲಿ ದೈವತ್ವವನ್ನು ಕಾಣುವ ಮಲೆಯ ಜನರ ಭಕ್ತಿ, ಶ್ರದ್ಧೆಗಳಿಗೆ ಈ ದೈಯ್ಯಗಳು ಪಾತ್ರವಾಗಿವೆ. ದೈಯ್ಯದ ಮರಗಳೆಂಬ ಭಯ, ಭಕ್ತಿಯಿಂದ ಈ ಮರಗಳನ್ನು ಯಾರೂ ಕಡಿಯುವುದಿಲ್ಲ. ಇದರಿಂದ ಪ್ರಕೃತಿಯ ಸಂರಕ್ಷಣೆಯೂ ಆಗುತ್ತಿದೆ. ಊರು ತೊರೆದು ಬೇರೆ ಬೇರೆ ಊರಿಗೆ ಹೋಗಿ ನೆಲೆಸಿರುವ ಜನರು ಪುನಃ ಊರಿಗೆ ಬರುವುದು, ಬಂಧು ಬಾಂಧವರೊಡನೆ ಬೆರೆಯಲು ಇದೊಂದು ಸುದಿನ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿಯಲ್ಲಿ ದೇವರ ಹರಕೆ ಸಲ್ಲಿಸುವುದರ ಕುರಿತ ಬರಹ ನಿಮ್ಮ ಓದಿಗೆ

Read More

ಸೌದಿಯ ಹೊಸ ಮೆಗಾ ಪ್ರಾಜೆಕ್ಟ್‌!: ದರ್ಶನ್‌ ಜಯಣ್ಣ ಸರಣಿ

ಆತ “ದುಬೈ ನಲ್ಲಿ ಏನಿದೆ? ಒಂದು ಐದಾರು ಶಾಪಿಂಗ್ ಮಾಲ್‌ಗಳು, ಎರಡು ಮುಖ್ಯ ರಸ್ತೆ, ಎರಡು ಹೋಟೆಲ್ಲು ಮತ್ತು ಬಹು ಮಹಡಿ ಕಟ್ಟಡ ಅಷ್ಟೇ ತಾನೇ?! ನಮ್ಮದು ಅದಕ್ಕಿಂತ ದೊಡ್ಡ ಯೋಜನೆ ಮತ್ತು ಹತ್ತು ಪಟ್ಟು ಹಿರಿದಾದದ್ದು” ಎಂದುಬಿಟ್ಟ. ಪ್ರಶ್ನೆ ಕೇಳುತ್ತಿದ್ದವರು ಕಕ್ಕಾ ಬಿಕ್ಕಿ. ಈ ಉತ್ತರ ಕೆಲವು egoistic ಸೌದಿಗಳಿಗೆ ಅಪ್ಯಾಯವಾಗಬಹುದು; ಆದರೆ ಒಂದು ವಿಷಯ ಗಮನದಲ್ಲಿಟ್ಟುಕೊಳ್ಳಬೇಕು. ದುಬೈ ನಗರ ಅಥವಾ ಯುಎಇ ದೇಶ ಈ ಎಲ್ಲವನ್ನೂ 50 ವರ್ಷ ಮುಂಚಿತವಾಗಿ ಮಾಡಿ ಗೆದ್ದಿದೆ. ಆಗಲೇ ಅವರ ದೃಷ್ಟಿಕೋನ ಹಾಗಿತ್ತು ಎಂಬುದನ್ನು ಯಾರೂ ಮರೆಯಬಾರದು.
ದರ್ಶನ್‌ ಜಯಣ್ಣ ಬರೆಯುವ “ಸೌದಿ ಡೇಟ್ಸ್”‌ ಸರಣಿಯ ಐದನೆಯ ಬರಹ

Read More

ಪದಗಳಲ್ಲಡಗಿದ ಅನೇಕಾರ್ಥ ಮತ್ತು ನ್ಯಾಂಡೊ ಪೆರಾಡೊ: ಸುಮಾವೀಣಾ ಸರಣಿ

ಈ ‘ಮಾನ’ ಎಂದಾಗ ಮೊನ್ನೆ ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತವೇ ನೆನಪಾಗುತ್ತದೆ. ‘ವಿಮಾನ’ ಬರೆ ಪ್ರಯಾಣಿಕರನ್ನು ಹೊತ್ತು ಸಾಗುವುದಲ್ಲ. ದೇವಾಲಯದ ಗರ್ಭಗುಡಿಯ ಮೇಲ್ಭಾಗದ ಗೋಪುರಕ್ಕೂ ‘ವಿಮಾನ’ ಎಂದು ಕರೆಯುತ್ತಾರೆ. ವಿಚಿತ್ರ ಎಂದರೆ ಪಾರ್ಥೀವ ಶರೀರವನ್ನು ಸಾಗಿಸುವ ಬಿದಿರಿನ ಜೋಡಣೆಗೂ ವಿಮಾನವೆನ್ನುವರು. ಒಂದೊಮ್ಮೆ ತಿರುಪತಿ ಗೋವಿಂದರಾಜ ದೇವಸ್ಥಾನವನ್ನು ವೀಕ್ಷಣೆ ಮಾಡುತ್ತಾ ಇದು ‘ವಿಮಾನ ಗೋಪುರ’ ಎಂದು ವಿವರಿಸುತ್ತಿದ್ದಂತೆ ನಿಜವಾಗಿ ವಿಮಾನವೊಂದು ಹಾರಿ ಹೋಗಿದ್ದು ಇಲ್ಲಿ ನೆನಪಾಗುತ್ತಿದೆ…
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿ

Read More

ನಾರಿ ಮತ್ತು ವಾಹನ ಸವಾರಿ – ಸಬಲೀಕರಣದ ಪರಿಣಾಮಕಾರಿ ದಾರಿ!: ಡಾ.ಎಲ್.ಜಿ.ಮೀರಾ ಅಂಕಣ

ನಮ್ಮ ಜೀವನವೆಂಬ ವಾಹನದ ಚಾಲಕಪೀಠದಲ್ಲಿ ಯಾರಿದ್ದಾರೆ? ನಾವೋ ಅಥವಾ ಬೇರೆ ಯಾರಾದರೂ ಅಧಿಕಾರಸ್ಥರೋ? ಗಂಡಾಳಿಕೆಯ ಸಮಾಜಗಳಲ್ಲಿ ಹೆಣ್ಣು ತನ್ನ ಜೀವನದ ಚಾಲಕ ಪೀಠದಲ್ಲಿ ಕುಳಿತಿದ್ದು ತೀರಾ ಅಪರೂಪ. ಅವಳು ಏನು ತಿನ್ನಬೇಕು, ಕುಡಿಯಬೇಕು, ಯಾವ ಬಟ್ಟೆ ತೊಡಬೇಕು ಮುಂತಾದ ಸಾಧಾರಣ, ದೈನಿಕ ಸಂಗತಿಗಳಿಂದ ಹಿಡಿದು ಓದು, ಕೆಲಸ, ಮದುವೆ, ಆಸ್ತಿಗಳಿಕೆಗಳಂತಹ ಮುಖ್ಯ ವಿಷಯಗಳ ತನಕ ಮನೆಯ ಗಂಡಸರೋ ಅಥವಾ ಅವರ ಪ್ರತಿನಿಧಿಗಳಾದವರೋ ನಿರ್ಧರಿಸುವ ಕಾಲ ಅನೇಕ ಶತಮಾನಗಳ ತನಕ ಇತ್ತಲ್ಲ?
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಮಲೆನಾಡಿನ ಗದ್ದೆಗಳಲ್ಲಿ ನೆಟ್ಟಿ ಸಂಭ್ರಮ: ಭವ್ಯ ಟಿ. ಎಸ್. ಸರಣಿ

ಹೂಟಿ ಮಾಡಿದ ನೆಲದ ಮಣ್ಣು ಉಬ್ಬು ತಗ್ಗುಗಳಿಂದ ಕೂಡಿದ್ದು ಅದನ್ನು ನೆಟ್ಟಿಗೆ ಸಹಾಯಕವಾಗುವಂತೆ ಸಮತಟ್ಟು ಮಾಡಲು ನಳ್ಳಿ ಬಳಸುತ್ತಾರೆ. ಹಿಂದೆ ಎತ್ತುಗಳನ್ನು ಬಳಸಿ ಹೂಟಿ ಮಾಡುತ್ತಿದ್ದರಿಂದ ಇದಕ್ಕಾಗಿ ಬಳಸುವ ನೊಗ ಮತ್ತು ನೇಗಿಲು ಪ್ರತಿ ಮನೆಗಳಲ್ಲಿ ಇರುತ್ತಿತ್ತು. ಕಾಲ ಬದಲಾದಂತೆ ಇವುಗಳ ಸ್ಥಾನವನ್ನು ಆಧುನಿಕ ಕೃಷಿ ಸಲಕರಣೆಗಳು ಆಕ್ರಮಿಸಿವೆ. ಈ ಎತ್ತುಗಳಿಗೆ ಆಹಾರವಾಗಿ ಕೊಡಲು ಹುರುಳಿಯನ್ನು ಬೇಯಿಸುತ್ತಿದ್ದರು. ಇದನ್ನು ಬೇಯಿಸಿದ ನೀರೇ ಹುರುಳಿಕಟ್ಟು. ಮಳೆಗಾಲದಲ್ಲಿ ಹುರುಳಿ ಕಟ್ಟಿನ ಘಮ ತೇಲಿ ಬಂದರೆ ಆಹಾ ಎಷ್ಟು ಸುಂದರ ಅನುಭೂತಿ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ