Advertisement

Tag: ಡಾ. ಜನಾರ್ದನ ಭಟ್

ಓಬಿರಾಯನ ಕಾಲದ ಕಥಾಸರಣಿಯಲ್ಲಿ ಬೆಳ್ಳೆ ರಾಮಚಂದ್ರ ರಾವ್ ಬರೆದ ಕಥೆ

“ತಾನು ಸುರು ಮಾಡಿದ ಕೆಲಸವು ಇಷ್ಟೊಂದು ಸುಗಮವಾಗಿ ಸಾಗಬಹುದೆಂದು ಗೋಪಿನಾಥನು ಕನಸಿನಲ್ಲೂ ನಿರೀಕ್ಷಿಸಿಲಿಲ್ಲ. ಗ್ರಾಮದ ಶ್ಯಾನುಭೋಗರಿಂದ ಪ್ರಾರಂಭವಾಗಿ ಜಿಲ್ಲಾ ಕಲೆಕ್ಟರವರವರೆಗೂ ಅಧಿಕಾರಿಗಳು ಎಬ್ಬಿಸಿದ ಧೂಳಿನಿಂದ ಮುಚ್ಚಲ್ಪಟ್ಟ ಕಮಿಶನರ ಕಣ್ಣುಗಳನ್ನು ತೆರೆದು ತೊಳೆದು ಜನತಾ ಕಾರುಣ್ಯವನ್ನು ತುಂಬಿಸಿ ಅವರ ಸಹಾನುಭೂತಿಯನ್ನು ಗಳಿಸುವಷ್ಟು ಕಾರ್ಯದಕ್ಷತೆ ತನ್ನಲ್ಲಿದೆಯೆಂದು ಆತ ತಿಳಿದಿರಲಿಲ್ಲ.”

Read More

ಓಬಿರಾಯನ ಕಾಲದ ಕಥಾಸರಣಿಯಲ್ಲಿ ಪಡುಕೋಣೆ ರಮಾನಂದರಾವ್ ಬರೆದ ಕತೆ

“ಹೊರಗಿನಿಂದ ಆ ಬಡ ಜನರ ಗಲಾಟೆ ಇನ್ನೂ ಅವನಿಗೆ ಕೇಳಿಸುತ್ತಿತ್ತು. ಆದರೆ ಅವರ ಮೇಲಿದ್ದ ಅವನ ಕೋಪವೂ ತಾತ್ಸಾರವೂ ಈಗ ಬಹಳ ಮಟ್ಟಿಗೆ ಕಡಿಮೆಯಾದುವು. ಅವರಲ್ಲೊಬ್ಬರಿಗೆ ಒಂದೊಂದು ಅರ್ಧಪಾವು ಅಕ್ಕಿ ಹಾಕಿ ಅವರನ್ನೆಲ್ಲ ಕಳುಹಿಸಿಬಿಡಲೇ ಎಂದು ಆಲೋಚಿಸಿದನು. ಆದರೆ ಅವರ ಗೋಳು ಭಿಕ್ಷೆಯನ್ನೆತ್ತುವುದಕ್ಕಲ್ಲ, ಅಕ್ಕಿಯ ಧಾರಣೆಯನ್ನು ಕಡಿಮೆ ಮಾಡುವುದಕ್ಕೆ ಎಂದು ಅವನು ಚೆನ್ನಾಗಿ ತಿಳಿದಿದ್ದನು. ಅದು ಅವನ ನೆನಪಿಗೆ ಬರುತ್ತಲೆ ಮೆಲ್ಲಮೆಲ್ಲನೆ ದ್ರವಿಸುತ್ತಿರುವ ಅವನ ಹೃದಯ.. “

Read More

ಓಬಿರಾಯನ ಕಾಲದ ಕಥಾಸರಣಿಯಲ್ಲಿ ಸಿಕಂದರ್ ಕಾಪು ಬರೆದ ಕತೆ

“ಘರ್ಷಣೆಗೆ ಕಸುವೇರಲು ಓರ್ವ ಪೋಲೀಸ್ ವೀರ ದರ್ಪದಿಂದ ಧಾವಿಸಿ ಬಂದು ಸುನಂದೆಯ ಬಳಿಯಲ್ಲಿದ್ದ ಒಬ್ಬ ಹುಡುಗಿಯ ತಲೆಗೆ ಲಾಥಿಯಿಂದ ಪ್ರಹಾರ ಮಾಡಿದ. ಉತ್ತರ ಕ್ಷಣ ಅವಳು ಚಟ್ಟನೆ ಚೀರಿ ಬಿದ್ದು ಬಿಟ್ಟಳು. ಈ ದೃಶ್ಯವನ್ನು ಕಂಡು ಕುಪಿತಳಾದ ಸುನಂದೆ ಕೆರಳಿದ ಕೇಸರಿಯಂತೆ ಮುಂಬರಿದು ‘ಎಲೋ ದುರಾತ್ಮಾ, ಬೆತ್ತದೇಟಿನ ಆಜ್ಞೆಯಿರಲು ಹುಡುಗಿಗೆ ದೊಣ್ಣೆಯಿಂದ ಹೊಡೆದೆಯಾ? ನಿನ್ನ ಪೊಳ್ಳು ಪೌರುಷಕ್ಕೆ ಬೆಂಕಿ ಬೀಳಲಿ’ ಎಂದು ಘರ್ಜಿಸಿದಳು….”

Read More

ಓಬಿರಾಯನ ಕಾಲದ ಕಥಾಸರಣಿಯಲ್ಲಿ ಕೆ.ಕೆ. ಶೆಟ್ಟಿ ಬರೆದ ಕತೆ

“ಸ್ತ್ರೀಯರೆಂದರೆ ಆಚಾರ್ಯರಿಗೆ ವಿಶೇಷ ಪಕ್ಷಪಾತ. ಕೀರ್ತನೆ ಮುಗಿದ ಕೂಡಲೆ ಸ್ವರಾಜ್ಯಫಂಡಿಗೆ ಹಣ ಆಭರಣ ಕೂಡಿಸಲು ಆಚಾರ್ಯರೇ ತೊಡಗುತ್ತಿದ್ದರು. ಸ್ತ್ರೀಯರು ತಮ್ಮ ಆಭರಣಗಳನ್ನು ಕೊಡಬೇಕೆಂದು ಪ್ರತ್ಯೇಕವಾಗಿ ಉತ್ತೇಜಿಸುತ್ತಿದ್ದರು. ಆಚಾರ್ಯರ ಉತ್ತೇಜಕ ವಾಕ್ಸರಣಿಯ ಬಲೆಯಲ್ಲಿ ಸಿಕ್ಕಿದ ಎಂತಹ ಲೋಭಿಯ ಮನಸ್ಸೂ ಒಮ್ಮೆಗೆ ತಲ್ಲಣವಾಗುತ್ತಿತ್ತು. ಹಣ ಮಾತ್ರವಲ್ಲದೆ ಉಂಗುರ, ಬಳೆ, ಸರ, ಒಂಟಿ ಮೊದಲಾದ ಆಭರಣಗಳೂ…”

Read More

ಓಬಿರಾಯನಕಾಲದ ಕಥಾ ಸರಣಿಯಲ್ಲಿ ಎಸ್. ಯು. ಪಣಿಯಾಡಿ ಬರೆದ ಕತೆ

“ನನ್ನ ಜೀವ ಈಗಲೋ ಮತ್ತೋ ಎಂಬಂತೆ ಇದೆ. ಒಂದು ವೇಳೆ ನಾನು ಬದುಕಿದ್ದರೆ ಎಂದಾದರೂ ಈ ಜನ್ಮದಲ್ಲಿ ನಿನಗೆ ದರ್ಶನ ಕೊಡದೆ ಹೋಗಲಾರೆ. ಆದರೆ ನಿನ್ನ ಮುಂದಿನ ಸ್ಥಿತಿ ಏನೆಂದು ನಿಶ್ಚಯ ಮಾಡಿಕೋ. ನೀನು ಚಿಕ್ಕವಳಾದುದರಿಂದ ಪುಸ್ತಕದಲ್ಲೋದಿದ ಅಂಶಗಳನ್ನು ಗಿಳಿ ಹೇಳಿದಂತೆ ಹೇಳುತ್ತೀ. ದೊಡ್ಡದೊಡ್ಡ ಯೋಚನೆಗಳು ಯೋಚನೆಗಳೇ. ಅವನ್ನು ಅನುಸರಿಸಲು ಬಹಳ ಕಷ್ಟವಿದೆ.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ