Advertisement

Tag: ನಾಗೇಶ ಹೆಗಡೆ

ವಿನಿಮಯವೇ ನಿಸರ್ಗದ ನಿಯಮ: ನಾಗೇಶ ಹೆಗಡೆ ಮಾತುಗಳು

ಯಾವುದೋ ದೇಶದಿಂದ ಬರುವ ಪೆಟ್ರೋಲಿಯಂ ದ್ರವ್ಯವನ್ನೇ ಆಧರಿಸಿಯೇ ರೈತರು ಬದುಕು ನಡೆಸುತ್ತ, ಮಾರುಕಟ್ಟೆಗೆ ತಮ್ಮದೆಲ್ಲವನ್ನೂ ಮಾರಿಕೊಳ್ಳುವ ದುರ್ಭರ ಪರಿಸ್ಥಿತಿಯಿಂದ ಬಿಡುಗಡೆ ಪಡೆಯಬೇಕೆಂಬ ಸಣ್ಣ ಹಂಬಲವೊಂದು ಇಲ್ಲಿ ಮೊಳಕೆಯೊಡೆಯುತ್ತಿರುವುದು ನನಗೆ ಕಾಣಿಸುತ್ತಿದೆ. ಸ್ಥಳೀಯ ಮಟ್ಟದಲ್ಲಿ ರೈತರು ಸಂಘಟಿತರಾದರೆ, ಸ್ಥಳೀಯ ಸಂಪನ್ಮೂಲವನ್ನೇ ಆದಷ್ಟೂ ಬಳಸಬೇಕೆಂಬ ಪ್ರೇರಣೆ ಅವರಲ್ಲಿ ಮೂಡಿತೆಂದರೆ, ಪ್ರಕೃತಿಯ ವಿನಿಮಯ ಪದ್ಧತಿಗಳನ್ನೂ ನಿಯಮಗಳನ್ನು ಗೌರವಿಸಿದಂತಾಗುತ್ತದೆ.
ಮಲ್ಲಿಕಾರ್ಜುನ ಹೊಸಪಾಳ್ಯ ಸಂಪಾದಿಸಿದ ವಿಜಯನಗರ ಜಿಲ್ಲೆಯ ಕೃಷಿ ಕಥನಗಳ “ಹಸಿರು ಮಾತುಕತೆ” ಕೃತಿಗೆ ನಾಗೇಶ ಹೆಗಡೆಯವರು ಬರೆದ ಮಾತುಗಳು

Read More

ನಾಗೇಶ ಹೆಗಡೆ ಎಂಬ ವಿಸ್ಮಯ: ರಂಜಾನ್ ದರ್ಗಾ ಸರಣಿ

ವಿಜ್ಞಾನದ ಆಳವಾದ ಜ್ಞಾನದ ಜೊತೆಗೆ ಸಮಾಜವಿಜ್ಞಾನ, ಅರ್ಥವಿಜ್ಞಾನ, ಮನೋವಿಜ್ಞಾನ, ಪರಿಸರವಿಜ್ಞಾನ, ಕೃಷಿವಿಜ್ಞಾನ, ಭಾಷಾವಿಜ್ಞಾನ, ವೈದ್ಯಕೀಯ, ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಕೂಡ ಅವರ ತಿಳಿವಳಿಕೆ ಮೆಚ್ಚುವಂಥದ್ದು. ಈ ಎಲ್ಲ ಕ್ಷೇತ್ರಗಳ ಜ್ಞಾನದ ಮೂಲಕ ವಿಜ್ಞಾನದ ಜೊತೆಗೆ ಮಾನವನ ಅಭ್ಯುದಯದ ಸಂಬಂಧ ಕಲ್ಪಿಸುವಿಕೆ ಅವರಿಗೆ ಪ್ರಿಯವಾದುದು. ಹೀಗೆ ಹತ್ತಾರು ಆಯಾಮಗಳ ಮೂಲಕ ಅವರು ವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆಯುತ್ತಾರೆ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ಉತ್ತಮ ಪೂರ್ವಜರಾಗುವುದು ಹೇಗೆ?

ನಮ್ಮಲ್ಲಿ ಅರಣ್ಯ ವಿಸ್ತೀರ್ಣ ಹೆಚ್ಚಾಗಿದೆ ಎಂದು ಉಪಗ್ರಹ ಚಿತ್ರಗಳ ಆಧರಿಸಿ ಸರಕಾರಿ ಅಂಕಿ ಅಂಶಗಳ ಘೋಷಣೆಯಾಗುತ್ತದೆ. ಅಂಥ ಅರಣ್ಯದಲ್ಲಿ ಜೀವಾವಾಸ ನಿಜಕ್ಕೂ ಹೆಚ್ಚಾಗಿದೆಯೆ, ಪಶುಪಕ್ಷಿಗಳ ಸಂಖ್ಯೆ, ದುಂಬಿ-ಜೇನ್ನೊಣಗಳ ಸಾಂದ್ರತೆ ಹೆಚ್ಚಿದೆಯೆ, ನದಿ ಕೊಳ್ಳಗಳಲ್ಲಿ ಜಲಚರಗಳ ಸಂಖ್ಯೆ ಹೆಚ್ಚಾಗಿದೆಯೆ, ಅದು ಗೊತ್ತಿರುವುದಿಲ್ಲ. ಮಳೆ ಚೆನ್ನಾಗಿ ಸುರಿದಾಗ ಎಲ್ಲ ಕೆರೆಕಟ್ಟೆಗಳಲ್ಲೂ ನೀರು ತುಂಬಿ ಹೊರಕ್ಕೆ ಹರಿಯುತ್ತದೆ; ಆದರೆ ಅಂಥ ಕೆರೆಗಳಲ್ಲಿ ಹೂಳು ಎಷ್ಟು ತುಂಬಿದೆ ಎಂಬುದು ಲೆಕ್ಕಕ್ಕೆ ಬರುವುದೇ ಇಲ್ಲ.
ಪರಿಸರವಾದಿ ನಾಗೇಶ ಹೆಗಡೆಯವರ ಹೊಸ ಕೃತಿ “ಅಪಾಯ ಬಂದಿದೆ: ಅಡಗಲು ಸ್ಥಳವೆಲ್ಲಿ?”ಯ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ