ಮಾಂತ್ರಿಕ ಫುಟ್ಬಾಲ್ ಹುಟ್ಟಿಸಿದ ಕನಸುಗಳು: ವಿನತೆ ಶರ್ಮ ಅಂಕಣ
ಪಂದ್ಯದ ಎರಡನೇ ಅರ್ಧದಲ್ಲಿ ಆಸ್ಟ್ರೇಲಿಯಾ ತಂಡವು ಸೋಲುವುದು ಖಚಿತವಾಗಿತ್ತು. ಆದರೆ ನಮ್ಮ ಮಟಿಲ್ಡಾಸ್ ಬಗ್ಗೆ ಇದ್ದ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಅದರ ಜೊತೆಗೆ ಇಂಗ್ಲಿಷ್ ಪಟುಗಳು ಆಡಿದ ವೈಖರಿಗೆ, ಅವರ ಅಚ್ಚುಕಟ್ಟಾದ ಆಟದ ಶೈಲಿಗೆ ಎಲ್ಲರೂ ಮನಸೋತಿದ್ದರು. ಎರಡು ಬಾರಿ ಸ್ಯಾಮ್ ಕೆರ್ ತಮ್ಮ ಬಳಿಗೆ ಬೀಸಿಬಂದ ಫುಟ್ಬಾಲನ್ನು ತಲೆಯಿಂದ ಡಿಕ್ಕಿಕೊಟ್ಟು ಅದನ್ನು ಗೋಲ್ ನೆಟ್ ಕಡೆಗೆ ಚಿಮ್ಮಿಸಿದಾಗ ಅರೆಕ್ಷಣ ಎಲ್ಲರ ಹೃದಯ ಬಾಯಿಗೆ ಬಂದಿತ್ತು. ಆದರೆ ಗೋಲ್ ಆಗದೇ ನೆಟ್ ತಲೆಯಮೇಲೆ ಬಾಲ್ ಹಾರಿಹೋಗಿತ್ತು.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ
ಕೃಷಿಯೆಂದರೆ ಸುಲಿದ ಬಾಳೆಯೇ?: ಗುರುಪ್ರಸಾದ್ ಕುರ್ತಕೋಟಿ ಅಂಕಣ
ಅವಳು ತನ್ನ ಈ ಪರಿಸ್ಥಿತಿಗೆ ಸರಕಾರದ ಯಾವುದೋ ಒಂದು ನೀತಿಯೇ ಕಾರಣ ಅಂತ ಹಳಿಯುತ್ತಿದ್ದಳು. ಪೂರ್ತಿ ಏಳು ಎಕರೆಯಲ್ಲಿ ಶುಂಠಿ ಹಾಕು ಅಂತ ಸರಕಾರ ಅವಳಿಗೆ ಹೇಳಿತ್ತೆ? ಅದೇ ಒಂದು ವೇಳೆ ಒಳ್ಳೆ ಬೆಲೆ ಬಂದು ಒಂದಿಷ್ಟು ಲಕ್ಷ ಲಾಭವಾಗಿದ್ದರೆ ಸರಕಾರದ ಕಾರಣದಿಂದ ತನಗೆ ಲಾಭ ಆಯ್ತು ಅಂತ ಅನ್ನುತ್ತಿದ್ದಳೆ? ಊಹೂಂ.. ಆಗ ಮಾತ್ರ ನಾನು ಕಷ್ಟ ಪಟ್ಟಿದ್ದಕ್ಕೆ ಹೀಗೆ ಒಳ್ಳೆಯದಾಯ್ತು ಅನ್ನುತ್ತಿದ್ದಳು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ
ಆರೋಗ್ಯವನ್ನೂ ದುಡ್ಡಿನಿಂದ ಕೊಳ್ಳುವ ಹಾಗಿದ್ದಿದ್ದರೆ!: ಎಸ್. ನಾಗಶ್ರೀ ಅಜಯ್ ಅಂಕಣ
ಸಂಬಳ ಕೊಡುವ ಕೆಲಸವನ್ನು, ಹುದ್ದೆ ನೀಡುವ ಅಧಿಕಾರವನ್ನು, ಹಣ ತಂದುಕೊಡುವ ಸವಲತ್ತನ್ನು, ಸುಲಭಕ್ಕೆ ಬೆರಳತುದಿಗೆ ದಕ್ಕಿಸುವ ಆಧುನಿಕ ಜೀವನಶೈಲಿಯನ್ನು ಪ್ರೀತಿಸುವ, ಅದನ್ನು ಉಳಿಸಿಕೊಳ್ಳಲು ವಿಶ್ವಪ್ರಯತ್ನ ಮಾಡುವ ನಮಗೆ ಆರೋಗ್ಯ ಕಾಡಿಸುವ ಮರೀಚಿಕೆ. ಆರೋಗ್ಯವನ್ನೂ ಹಣ ಕೊಟ್ಟು ಕೊಳ್ಳುವ ಹಾಗಿದ್ದರೆ, ಸರಿಯಾಗುತ್ತಿತ್ತೇನೋ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ
ಕೆಂಪೆಂದರೆ ಕೆಟ್ಟದ್ದೂ ಅಲ್ಲ… ಭಯವೂ ಅಲ್ಲ…: ಮಾಲತಿ ಶಶಿಧರ್ ಅಂಕಣ
ಆ ತರಗತಿಯಲ್ಲಿ ಬೋಧಿಸಬೇಕಾದ ಪಾಠವನ್ನು ಅಂದಿನ ಮಟ್ಟಕ್ಕೆ ಮುಂದೂಡಿ ಇಂಥ ಅದೆಷ್ಟು ಮಕ್ಕಳು ಹೀಗೆ ಹಿಂಸೆ ಅನುಭವಿಸುತ್ತಿದ್ದಾರೋ ಅನಿಸಿ ನಡೆದ ಎಲ್ಲವನ್ನೂ ಮತ್ತಷ್ಟು ನನ್ನ ಆ ದಿನಗಳ ಉದಾಹರಣೆ ಕೊಟ್ಟು, ಆ ದಿನಗಳಲ್ಲಿ ಆಗುವ ಬದಲಾವಣೆಗಳೇನು, ಹೇಗೆ ಸಿದ್ಧವಿರಬೇಕು, ಸಮಸ್ಯೆಗಳಾದಾಗ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂದೆಲ್ಲ ತಿಳಿಸಿ, ಏನೇ ಸಮಸ್ಯೆ ಇದ್ದರೂ ನನ್ನ ಬಳಿ ಮುಕ್ತವಾಗಿ ಹೇಳಿಕೊಳ್ಳಿ ಎಂದಿದ್ದೆ. “ಹೊಳೆವ ನದಿ” ಅಂಕಣದಲ್ಲಿ ಮಾಲತಿ ಶಶಿಧರ್ ಬರಹ ನಿಮ್ಮ ಓದಿಗೆ
ವೆಸ್ಟ್ ಇಂಡೀಸ್ ಕ್ರಿಕೆಟ್ – ಅಂದು, ಇಂದು: ಇ.ಆರ್. ರಾಮಚಂದ್ರನ್ ಅಂಕಣ
ಇಲ್ಲಿನ ಕ್ರಿಕೆಟ್ ಆಟ ಎಷ್ಟು ಮೇಲುಗೈ ಆಗಿತ್ತೆಂದರೆ ಇವರ ವಿರುದ್ಧ ಆಡುವುದಕ್ಕೇ ಟೀಮುಗಳು ಹೆದರುತ್ತಿದ್ದವು! ಇವರ ವೇಗದ ಬೋಲಿಂಗ್ನಲ್ಲಿ ಎಷ್ಟು ಶಕ್ತಿ ಇತ್ತೆಂದರೆ ಆಡುವುದು ಇರಲಿ, ರನ್ ಹೊಡೆಯುವುದು ಇರಲಿ, ಏಟು ತಿನ್ನದೆ ಹೇಗೆ ಆಡುವುದು? ಎಂಬ ಶಂಕೆ ಮನಸ್ಸಿನಲ್ಲಿ ಏಳುತ್ತಿತ್ತು. ಭಾರತದ ಆಲ್-ರೌಂಡರ್ ಬಾಪು ನಾದ್ಕರ್ಣಿ ಒಮ್ಮೆ ಹೀಗೆ ಹೇಳಿದ್ದರು…
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಹೊಸ ಬರಹ ನಿಮ್ಮ ಓದಿಗೆ
ಪುನರಪಿ ಜನನಂ….: ವಿನತೆ ಶರ್ಮ ಅಂಕಣ
ಮೂಲನಿವಾಸಿಗಳಾದ ಅವರ ಸ್ಥಳ-ನಾಮ, ಸಂಸ್ಕೃತಿ, ಭಾಷೆಗಳ ಮೇಲೆ ಅಧಿಕಾರ ಮತ್ತು ನಿಯಂತ್ರಣ ಸಾಧಿಸುವ ಬ್ರಿಟಿಷರ ಪ್ರಯತ್ನಗಳಿಗೆ ಕೊನೆಯಿಲ್ಲವಾಗಿತ್ತು. ಮೂಲನಿವಾಸಿಗಳ ಮಕ್ಕಳನ್ನು ಬಲವಂತವಾಗಿ ಅವರ ಕುಟುಂಬಗಳಿಂದ, ಸಮುದಾಯಗಳಿಂದ ಬೇರ್ಪಡಿಸಿ ಅವರಿಗೆ ಇಂಗ್ಲಿಷ್ ಭಾಷೆ ಕಲಿಸುತ್ತಾ, ಬ್ರಿಟಿಷ್ ಜೀವನ ರೀತಿಗಳಿಗೆ ಒಗ್ಗುವಂತೆ ಮಾಡಲಾಗಿತ್ತು. ಅವರ ಹೆಸರುಗಳ ಜೊತೆ ಅವರ ನೆಲೆಗಳ ಹೆಸರುಗಳೂ ಮರೆಯಾದವು.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ
“ಯಾಕ್ ಫೋನ್ ತಗೀಲಿಲ್ಲ..” ಅಂತ ಕೇಳೋದಿಲ್ಲ!: ಗುರುಪ್ರಸಾದ್ ಕುರ್ತಕೋಟಿ ಅಂಕಣ
ಈ ಬೋರಿನ ಗಾಡಿಯ ರಹಸ್ಯ ಇನ್ನೂ ಬಗೆಹರಿಯಲಿಲ್ಲ. ಪಕ್ಕದ ಹೊಲದ ಗೌಡರಿಗೆ ಫೋನ್ ಮಾಡಿದಾಗ ಅದೊಂದು ಗಾಡಿ ಬೇರೆ ಎಲ್ಲೋ ಬೋರ್ ಹೊಡೆಯಲು ಬಂದಿದ್ದು ಸ್ವಲ್ಪ ಹೊತ್ತು ನಮ್ಮ ಹೊಲದಲ್ಲಿ ನಿಂತಿತ್ತು ಅಂತ ಹೇಳಿದರು. ಇವರನ್ನೇ ಫೋನ್ ಮಾಡಿ ಕೇಳಿದ್ದರೆ ಈ ಗುಡ್ಡಪ್ಪನ ಮಾತು ಕೇಳಿ ಇಷ್ಟು ಅಡ್ಡಾಟ ಮಾಡೋದು ತಪ್ಪುತಿತ್ತು ಅಂತ ನನಗೆ ನಾನೇ ಹಳಿದುಕೊಂಡೆ. ಆದರೂ ಅವನ ದೆಸೆಯಿಂದ ನನ್ನ ಹೊಲಕ್ಕಾದರೂ ಹೊಕ್ಕು ಬಂದೆನಲ್ಲ ಎಂಬ ಸಮಾಧಾನವೂ ಆಯ್ತು!
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ
ಎದೆ ಹಿಂಡುವ ನೆನಪು…: ಎಸ್. ನಾಗಶ್ರೀ ಅಜಯ್ ಅಂಕಣ
ಮಧ್ಯಾಹ್ನದ ಊಟಕ್ಕೆ ಆರಾಮಾಗಿ ಮನೆಗೆ ಹೋಗಿ ಬರಬಹುದಿತ್ತು. ಕೆಲವು ಮಕ್ಕಳ ತಾಯಂದಿರು ಮಾತ್ರ ಪ್ರತಿದಿನ ತಮ್ಮ ಮಕ್ಕಳ ಡಬ್ಬಿ ಹಿಡಿದು ಮಧ್ಯಾಹ್ನ ಶಾಲೆಗೆ ಬಂದು ತಿನ್ನಿಸಿ ಹೋಗುತ್ತಿದ್ದರು. ಒಂದು ಮಳೆಮಧ್ಯಾಹ್ನ ನನ್ನ ಅಮ್ಮನೂ ಡಬ್ಬಿ ತಂದು, ತಿನ್ನುವವರೆಗೂ ಜೊತೆಯಿದ್ದು ಹೋದಾಗ ಒಂದು ಬಗೆಯ ಜಂಬ. ಸಂತೋಷ. ನನ್ನ ಗೆಳತಿಯೊಬ್ಬಳನ್ನು ಕೇಳಿದ್ದೆ, “ಇವತ್ತು ನಮ್ಮಮ್ಮ ಬಂದಿದ್ರು. ನೋಡಿದ್ಯೇನೇ?” ಅವಳು ಅಷ್ಟೇ ಸಹಜವಾಗಿ, “ಎಷ್ಟು ಜೋರು ಮಳೆ ಬಂದರೂ ನಮ್ಮಮ್ಮ ಬರಲ್ಲ ಕಣೆ. ನಾನು ಹುಟ್ಟಿದಾಗಲೇ ಅವರು ಸತ್ತೋದ್ರು.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ
ನಿಯಂತ್ರಿಸುವ ಬುದ್ಧಿಯನ್ನು ನಿಯಂತ್ರಿಸೋಣವೇ?: ಮಾಲತಿ ಶಶಿಧರ್ ಅಂಕಣ
ಈಗ ಹೆಜ್ಜೆ ಹೆಜ್ಜೆಗೂ ನಿಯಂತ್ರಣ ಹೇರುತ್ತಿದ್ದ ಗಂಡನಿಲ್ಲ. ಹೆಂಡತಿಗೆ ಕಟ್ಟು ಪಾಡು ಹೇರುವವರಿಲ್ಲ, ಆಕೆ ಮಗಳ ಜೊತೆ ಶಾಶ್ವತವಾಗಿ ತನ್ನ ತವರು ಸೇರಿದ್ದಾರೆ. ಈಗ ಹೀಗೆ ಇರು ಹಾಗೆ ಇರು ಎಂದು ಹೇಳುವವರಿಲ್ಲ. ಆಕೆ ಹೇಗೆ ಬೇಕಾದರೂ ಇರಬಹುದು. ಗಂಡನಿಲ್ಲದ ನೋವಿದೆ ಆದರೀಗ ಉಸಿರುಗಟ್ಟುತ್ತಿಲ್ಲ. ಇಷ್ಟಕ್ಕೇಕೆ ಆತ ಅಷ್ಟೆಲ್ಲಾ ಹೆಂಡತಿಯನ್ನ ಹಿಡಿತದಲ್ಲಿಟ್ಟುಕೊಳ್ಳಬೇಕಿತ್ತು. ಆತನಿಗೆ ಒಂದು ದಿನ ಎಲ್ಲವನ್ನೂ ಎಲ್ಲರನ್ನೂ ಬಿಟ್ಟು ಇದ್ದಕ್ಕಿದ್ದ ಹಾಗೆ ಅನಾಥನಾಗಿ ಹೊರಟು ಬಿಡಬೇಕು ಎಂಬ ಅರಿವಿದ್ದರೆ ನಿಜಕ್ಕೂ ಆತ ಹಾಗೆಲ್ಲ ಮಾಡುತ್ತಿದ್ದರ?
ಮಾಲತಿ ಶಶಿಧರ್ ಬರೆಯುವ ಅಂಕಣ “ಹೊಳೆವ ನದಿ”










