Advertisement

ಅಂಕಣ

ಟಿಶ್ಯೂಮಾರುವ ಹುಡುಗ ಸುಳ್ಳು ಹೇಳಲಿ ಬಿಡಿ

ಟಿಶ್ಯೂಮಾರುವ ಹುಡುಗ ಸುಳ್ಳು ಹೇಳಲಿ ಬಿಡಿ

ಕೊನೆಗೂ ಉಷಾ ಇದ್ದ ಅಪಾರ್ಟ್ಮೆಂಟ್ ಬಂತು. ಲಿಫ್ಟ್ ಕಾರ್ನರ್ ಪ್ರವೇಶ ಮಾಡುವ ಮೊದಲೇ ಒಂದು ಮಂಟಪದಂತಹ ಜಾಗದಲ್ಲಿ ನಿಂತು ಅದರ ನಾಲ್ಕೂ ಮೂಲೆಗೂ ಹಬ್ಬಿದ್ದ ಮಲ್ಲಿಗೆ ಬಳ್ಳಿಯನ್ನು ನೋಡುತ್ತಾ ಅದರ ಸುಗಂಧವನ್ನು ಅಘ್ರಾಣಿಸಲು ನಿಂತರು. ಇಹದಲ್ಲಿ ನಿಂತು ಪರಲೋಕಕ್ಕೆ ಕೈಚಾಚಿ ನಿಂತ ಘಳಿಗೆಯಾಗಿ ನನಗದು ಕಂಡಿತು. ಆ ಕ್ಷಣದಲ್ಲಿ ನನಗವರ ಮೇಲೆ ಕ್ಯಾಬಲ್ಲಿ ಉಕ್ಕಿದ್ದ ಕೋಪವೆಲ್ಲಾ ಮಾಯವಾಯಿತು. ಉಷಾಳ ಗಂಡ ಅನಿಕೇತ್ ನೋಡುವುದಕ್ಕೆ ನಿಜಕ್ಕೂ ಚೆನ್ನಾಗಿದ್ದ.
ದಾದಾಪೀರ್‌ ಜೈಮನ್‌ ಬರೆಯುವ ಅಂಕಣ

read more
ಆಶ್ರಯ ಕೊಡು-ಕೊಳ್ಳುವಿಕೆಯ ಕಹಿ ಸತ್ಯ

ಆಶ್ರಯ ಕೊಡು-ಕೊಳ್ಳುವಿಕೆಯ ಕಹಿ ಸತ್ಯ

ತಮ್ಮ ದೇಶದಲ್ಲಿ ನಡೆಯುತ್ತಿರುವ ಆಂತರಿಕ ಯುದ್ಧ, ಗಲಾಟೆ, ಹಿಂಸೆ, ಸಾವು, ಮಿಲಿಟರಿ ಆಡಳಿತ ಎಂಬಂತೆ ಜೀವಹಾನಿಕಾರಕ ಪರಿಸ್ಥಿತಿಯಿದ್ದು ಜೀವ ರಕ್ಷಿಸಿಕೊಳ್ಳಲು ದೇಶ ಬಿಟ್ಟು ಬರುವ ಜನರು ಇತ್ತೀಚಿನ ದಶಕಗಳಲ್ಲಿ ಹೆಚ್ಚುತ್ತಿದ್ದಾರೆ. ಅಲ್ಲದೆ ಮಾನವ ಹಕ್ಕುಗಳ ಉಲ್ಲಂಘನೆ ಎಂಬ ಕಾರಣವನ್ನು ಮುಂದೆ ಮಾಡಿಕೊಂಡು ಕೂಡ ಸಾವಿರಾರು ಜನರು ದೇಶ ತೊರೆದು ಬೇರೆ ಕಡೆ ಆಶ್ರಯವನ್ನು ಬೇಡಿಕೊಂಡು ಹೋಗುತ್ತಾರೆ. ಇವರು ‘ಅಸೈಲಮ್ ಸೀಕರ್’ ಎಂದು ಕರೆಸಿಕೊಳ್ಳುತ್ತಾರೆ.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”

read more
ದುಬಾರಿ ಲೋಕದಲ್ಲಿ ರಂಗಪ್ರದರ್ಶನಗಳ ಪೂರ್ವಾಪರ

ದುಬಾರಿ ಲೋಕದಲ್ಲಿ ರಂಗಪ್ರದರ್ಶನಗಳ ಪೂರ್ವಾಪರ

ಧೈರ್ಯ ಮಾಡಿ ರಂಗಮಂದಿರದ ಬಾಡಿಗೆ ಕಟ್ಟಿ ನಾಟಕ ಮಾಡಲು ಮುಂದಾಗುತ್ತೇವೆ ಅಂತಿಟ್ಟುಕೊಳ್ಳಿ. ಜನ ಬರಬೇಕಲ್ಲ ? ಪೆಟ್ರೋಲ್ ದರ ಯಾವ ಶಿಖರವನ್ನ ಗುರಿಯಾಗಿಟ್ಟುಕೊಂಡಿದೆ ಎನ್ನುವುದು ತಿಳಿಯುತ್ತಿಲ್ಲ. ಅಡುಗೆ ಅನಿಲ ದರ ಕೇಳಿದರೆ ಎದೆ ಸ್ಫೋಟಗೊಳ್ಳುತ್ತದೆ. ಅಡುಗೆಗೆ ಬಳಸುವ ಎಣ್ಣೆ ತನಗೆ ಬೆಲೆ ಬರುತ್ತಿರುವುದಕ್ಕೆ ವ್ಯರ್ಥವಾಗಿ ಹಿಗ್ಗುತ್ತಿದೆ. ನೀವು ರಂಗಮಂದಿರಗಳ ಬಾಡಿಗೆ ದರ ಏರಿಸಿದರೆ ನಾವು ರಂಗತಂಡಗಳವರು ಏನು ಮಾಡಬೇಕು? ಎನ್. ಸಿ. ಮಹೇಶ್.  ಬರಹ

read more
ಒಳ್ಳೆಯ ಮತ್ತು ಕೆಟ್ಟ ಸಮಾಚಾರಗಳ ಬೇವುಬೆಲ್ಲ

ಒಳ್ಳೆಯ ಮತ್ತು ಕೆಟ್ಟ ಸಮಾಚಾರಗಳ ಬೇವುಬೆಲ್ಲ

ಶುಭಕೃತ್ ಸಂವತ್ಸರವು ಅಡಿಯಿಟ್ಟಿದೆ. ಆದರೆ ಕಾಲವು ಅದೇ ಪ್ರಕಾರ ಒಳಿತುಕೆಡುಕುಗಳನ್ನು ಒಟ್ಟಿಗೆ ಕಟ್ಟಿಕೊಂಡು ಸಾಗುತ್ತಿದೆ.  ಪ್ರಕೃತಿ ವಿಕೋಪವೆಂಬ ಬೇವು, ಮಾನವೀಯತೆ ಎಂಬ  ಬೆಲ್ಲವನ್ನು  ಸಮಾನ ಮನಸ್ಸಿನಿಂದ ಸ್ವೀಕರಿಸಬೇಕಾಗಿದೆ. ಆಸ್ಟ್ರೇಲಿಯಾದಲ್ಲಿ  ಟೆನಿಸ್ ಪಟು ಆಶ್ ಬಾರ್ಟಿ ನಿವೃತ್ತಿಯ ಬೇಸರ. ಆದರೆ ಅವರ ಮುಂದಿನ ನಿರ್ಧಾರ ಖುಷಿ ಕೊಡುವುದು. ಪ್ರವಾಹವು ನೋವು ಕೊಡುವುದು. ಡಾ. ವಿನತೆ ಶರ್ಮ ಬರೆದ ಆಸ್ಟ್ರೇಲಿಯಾ ಪತ್ರದಲ್ಲಿ ಅಲ್ಲಿನ ಕ್ಷೇಮ ಸಮಾಚಾರಗಳನ್ನು ತಿಳಿಯೋಣ.

read more
ಚೂಟಿ ಹುಡುಗನ ಸೃಜನಶೀಲತೆ ಹೇಳಿದ ಪಾಠ

ಚೂಟಿ ಹುಡುಗನ ಸೃಜನಶೀಲತೆ ಹೇಳಿದ ಪಾಠ

ಯಾವಾಗ ಅಧ್ಯಾಪಕನಾಗಿ ಶಾಲೆ ಸೇರಿ, ನಾನೇ ಪರೀಕ್ಷೆಯ ಪ್ರಶ್ನೆಪತ್ರಿಕೆ ಮಾಡಲು ಪ್ರಾರಂಭ ಮಾಡಿದೆನೋ, ಮಕ್ಕಳಿಗೆ ಪರೀಕ್ಷೆಯ ತಯಾರಿಯ ಬಗ್ಗೆ ಹೇಳಬೇಕಾಗಿ ಬಂತೋ ಆಗ ಪೇಚಿಗೆ ಸಿಲುಕುತ್ತಿದ್ದೆ. ಮಕ್ಕಳಿಗೆ ಪರೀಕ್ಷಾ ತಯಾರಿಯ ಉಪದೇಶ ಮಾಡುವಾಗ ನಾನು ಕೇಳಿದ ನನ್ನಪ್ಪನ ಮತ್ತು ನನ್ನ ಗುರುಗಳ ಮಾತುಗಳು ನನಗೆ ಅರಿವಿಲ್ಲದಂತೆ ಬಾಯಿಗೆ ಬಂದು ಬಿಡುತ್ತಿತ್ತು. ಉಪದೇಶವನ್ನು ಮಾಡಿದ ಬಳಿಕವೂ ಮಕ್ಕಳು ಉತ್ತರಪತ್ರಿಕೆಯಲ್ಲಿ ಬಿಟ್ಟ ಖಾಲಿ ಜಾಗಗಳನ್ನು ನೋಡಿದಾಗ ನನ್ನ ಉಪದೇಶಗಳು ಪ್ರಯೋಜನಕ್ಕೆ ಬಾರದೇ ಇರುವುದು ಸ್ಪಷ್ಟವಾಗಿ ತಿಳಿಯುತ್ತಿತ್ತು.
‘ಗಣಿತ ಮೇಷ್ಟರ ಶಾಲಾ ಡೈರಿ’ಯಲ್ಲಿ ಅರವಿಂದ ಕುಡ್ಲ ಬರಹ

read more
ನಾಲ್ಕು ರಾಜ್ಯಗಳ ಏಳಿಗೆಯ ಅವಲೋಕನ

ನಾಲ್ಕು ರಾಜ್ಯಗಳ ಏಳಿಗೆಯ ಅವಲೋಕನ

ಕೃತಿಯು ಮುಖ್ಯವಾಗಿ ಶಿಕ್ಷಣ ಮತ್ತು ಆರೋಗ್ಯ ಸೂಚ್ಯಂಕಗಳನ್ನು ಆದರ್ಶವಾಗಿರಿಸಿಕೊಂಡು ಕಳೆದ ನೂರು ವರ್ಷಗಳಿಂದ ಆದ ಬದಲಾವಣೆಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ. ನೂರು ವರ್ಷಗಳ ಮುಂಚೆ ಪರಿಗಣನೆಗೆ ತೆಗೆದುಕೊಂಡ ನಾಲ್ಕೂ ರಾಜ್ಯಗಳು ಹೆಚ್ಚುಕಮ್ಮಿ ಒಂದೇ ಪರಿಸ್ಥಿತಿಯಲ್ಲಿದ್ದವು. ಆದರೆ ಉಪರಾಷ್ಟ್ರೀಯತೆಯ ಪ್ರಜ್ಞೆ ಬೆಳೆಸಿಕೊಂಡ ತಮಿಳುನಾಡು ಮತ್ತು ಕೇರಳ ಪ್ರಗತಿ ಹೊಂದಿದರೆ ಆ ಪ್ರಜ್ಞೆ ಬೆಳೆಸಿಕೊಳ್ಳಲು ವಿಫಲವಾದ ರಾಜ್ಯಗಳು ಹೇಗೆ ಹಿಂದುಳಿದಿವೆ ಅನ್ನುವುದನ್ನು ವಿವರಿಸಲಾಗಿದೆ.

read more
ರುಚಿಯ ದಾರಿ ಹಿಡಿದವರ ಕಥೆ

ರುಚಿಯ ದಾರಿ ಹಿಡಿದವರ ಕಥೆ

ಕೋವಿಡ್ ಮೊದಲನೇ ಅಲೆಯ ಕಾರಣದಿಂದ ಹಲವರು ಕೆಲಸ ಕಳೆದುಕೊಳ್ಳುತ್ತಿದ್ದರು. ಮತ್ತೊಂದಿಷ್ಟು ಕಡೆ ಪರ್ಸಂಟೇಜ್ ಸ್ಯಾಲರಿಗೆ ಬಂದು ನಿಂತಿತ್ತು. ಸಂಯೋಜಕರಾಗಿ ಕೆಲಸ ಮಾಡುತ್ತಿದ್ದ ಮಿಸಸ್ ಪ್ರೆಸಿಲ್ಲಾ ಅವರನ್ನು ಹೆಚ್ಚುವರಿ ಹುದ್ದೆಗಳನ್ನು ವಜಾ ಮಾಡುವ ನೆಪ ಹೇಳಿ ಕೆಲಸದಿಂದ ತೆಗೆದು ಹಾಕಿದ್ದರು. ಅವರೇ ರೆಫರ್ ಮಾಡಿದ್ದ, ನಾನು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಇಂಗ್ಲಿಷ್ ಭಾಷಾ ಅಧ್ಯಾಪಕರಾಗಿ ಸೇರಿಕೊಂಡರು. ನಾವೀಗ ಸಹೋದ್ಯೋಗಿಗಳಾಗಿದ್ದೆವು. ಜಂಕ್ಷನ್ ಪಾಯಿಂಟ್ ಅಂಕಣದಲ್ಲಿ ದಾದಾಪೀರ್ ಜೈಮನ್ ಬರಹ

read more
ಸೇವೆಯನ್ನು ಕಲಿಯುವ ಉತ್ಸಾಹಿ ಮಕ್ಕಳು

ಸೇವೆಯನ್ನು ಕಲಿಯುವ ಉತ್ಸಾಹಿ ಮಕ್ಕಳು

ಕೆನಡಾದಲ್ಲಿ ಹೈ ಸ್ಕೂಲ್ ಓದುವ ಮಕ್ಕಳು 40 ಗಂಟೆಗಳ ಸೇವಾ ಕಾರ್ಯಗಳನ್ನು ಮಾಡಬೇಕು. ಆದನ್ನು ಮುಗಿಸಿದರೆ ಮಾತ್ರ ಅವರಿಗೆ ಹೈ ಸ್ಕೂಲ್ ಮುಗಿಸಿದ ಪ್ರಮಾಣ ಪತ್ರವನ್ನು ಕೊಡುತ್ತಾರೆ. ಯಾವ ಸಂಸ್ಥೆಗೆ ಸೇವೆ ಮಾಡುತ್ತೇವೆ, ಎಷ್ಟು ಗಂಟೆಗಳು ಮಾಡುತ್ತೇವೆ ಎಂದು ನಮೂದಿಸಿ, ಸೇವಾ ಸಂಸ್ಥೆಗಳ ವಿವರ ಮತ್ತು ಅಲ್ಲಿನ ಪರಿಚಾರಕರ ಸಹಿಯ ಜೊತೆಗೆ ಅವರ ವಿವರಗಳನ್ನು ನಮೂದಿಸಬೇಕು. ಎಲ್ಲಾ ಮಕ್ಕಳು ಇದನ್ನು ಬಹಳ ನ್ಯಾಯಯುತವಾಗಿ ಮತ್ತು ನಿಖರ ಮಾಹಿತಿಯೊಂದಿಗೆ ಪೂರ್ಣ ಮಾಡುತ್ತಾರೆ. ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಕೊಡುವುದಿಲ್ಲ.
ಪ್ರಶಾಂತ್‌ ಬೀಚಿ ಅಂಕಣ

read more
ನ್ಯಾಯದ ವಿವಿಧ ಮುಖಗಳ ಕತೆಗಳು

ನ್ಯಾಯದ ವಿವಿಧ ಮುಖಗಳ ಕತೆಗಳು

ಇದ್ಯಾಕೆ ಹೀಗೆ ಎಂದು ಪ್ರಶ್ನಿಸಿಕೊಂಡರೆ ಆಸ್ಟ್ರೇಲಿಯಾದ ಪಾಳೆಗಾರಿಕೆ ಮತ್ತು ವಸಾಹತುಶಾಹಿ ಚರಿತ್ರೆ ಬಿಚ್ಚಿಕೊಳ್ಳುತ್ತದೆ. ನಡೆದು ಹೋದ ಕರಾಳ ಚಾರಿತ್ರಿಕ ಘಟನೆಗಳು, ಅಬೊರಿಜಿನಲ್ ಜನರ ಮಾರಣಹೋಮ, ಅವರನ್ನು ಗುಲಾಮಗಿರಿಗೆ ಒಳಪಡಿಸಿದ್ದು, ಅವರ ಮಕ್ಕಳನ್ನು ಕದ್ದು ಬಲವಂತವಾಗಿ ಅವರಿಗೆ ‘ಸಂಸ್ಕೃತಿ ಪಾಠ’ ಕಲಿಸಿದ್ದು, ಬಿಳಿಯರ ಆಳ್ವಿಕೆ, ಆಡಳಿತ, ‘ವೈಟ್ ಆಸ್ಟ್ರೇಲಿಯಾ’ ಕಾಯಿದೆ/ಕಾನೂನು ಪಾಲನೆ, ಸಮಾಜದಲ್ಲಿ ಆಳವಾಗಿ…

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ