ಒಂದು ಮುತ್ತು ನಿಮ್ಮನ್ನು ಅಷ್ಟು ಭಯ ಪಡಿಸಿತಾ?
ಜೀವನದಲ್ಲಿ ನಾನು ಯಾರನ್ನು ನೋಡುತ್ತೇನೆಯೋ ಅವರಂತೆ ಆಗಲು, ಅವರಲ್ಲಿ ತಾನು ಇಷ್ಟಪಟ್ಟದ್ದನ್ನು ತನ್ನ ಭಾಗವಾಗಿಸಿಕೊಳ್ಳುವ ತನ್ನ ಗುಣಕ್ಕೆ ಏನೆನ್ನಬೇಕು? ಆ ರೀತಿ ಎಲ್ಲರೊಳಗಿನಿಂದ ಒಂದೊಂದು ಹೆಕ್ಕುತ್ತಾ ಅರಗಿಸಿಕೊಂಡು ಬರುತ್ತಾ ಇದ್ದ ತನಗೆ ತನ್ನ ನಿಜವಾದ ಅಸ್ಮಿತೆ ಯಾವುದು? ಎಂದು ಪ್ರತಿಸಲ ಗೊಂದಲಕ್ಕೆ ಬೀಳುತ್ತಾನೆ. ಅದೇ ಹೊತ್ತಿಗೆ ಆ ಹುಡುಗ ಅವನು ಕೂತಿದ್ದ ಜಾಗದಿಂದಲೇ ”ಅಂಕಲ್, ನೀವು ರೈಟರ್ ಆಲ್ವಾ?” ಎಂದು ಜೋರಾಗಿ ಕೇಳಿದ. ಅವನು ಸುಮ್ಮನೆ ತಲೆ ಅಲ್ಲಾಡಿಸಿದ.
ದಾದಾಪೀರ್ ಜೈಮನ್ ಬರೆಯುವ “ಜಂಕ್ಷನ್ ಪಾಯಿಂಟ್” ಅಂಕಣ
ಗೆಟ್ ಅಪ್, ಸ್ಟಾಂಡ್ ಅಪ್, ಶೋ ಅಪ್….
ಆಸ್ಟ್ರೇಲಿಯಾ ದೇಶದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿ ಜನಪಂಗಡಗಳು ಎಷ್ಟೋ ಸಾವಿರ ವರ್ಷಗಳಿಂದ ಈ ನಾಡಿನಲ್ಲಿ ಬದುಕಿ ಬಾಳಿ, ನೆಲ-ಜಲ-ಪ್ರಕೃತಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಸುಮಾರು ಅರವತ್ತು ಸಾವಿರ ವರ್ಷಗಳಿಗೂ ಹೆಚ್ಚಿನ ಕಾಲದಿಂದ ಈ ಖಂಡದಲ್ಲಿ ಅಬೊರಿಜಿನಲ್ ಜನರ ಇರುವಿಕೆಯ ಬಗ್ಗೆ ಅಧಿಕೃತ ಪುರಾವೆಗಳಿವೆ. ಬ್ರಿಟಿಷರ ವಸಾಹತು ಸ್ಥಾಪನೆಯಿಂದ ಆರಂಭವಾಗಿ ಇಲ್ಲಿನ ಮೂಲನಿವಾಸಿಗಳ ನಿರ್ಮೂಲನೆಗೆ ನಡೆದ ಪ್ರಯತ್ನಗಳು, ಅವರ ಅತ್ಯಂತ ಕ್ರೂರ ಆಡಳಿತದೊಡನೆ ಮುಂದುವರೆದು ಅನ್ಯಾಯಗಳ ನಡುವೆಯೂ ಬದುಕುಳಿದ ಅಬೊರಿಜಿನಲ್ ಜನರ ಜೀವನಗಾಥೆ ಇನ್ನೂ ಜ್ವಲಂತವಾಗಿದೆ.
ಡಾ. ವಿನತೆ ಶರ್ಮಾ ಅಂಕಣ
ಎರಡು ಕಣ್ಣುಗಳು… ಆರು ಕೈಗಳು…!
ಈ ಲಿಸ್ಟ್ ನಲ್ಲಿದ್ದ ಕೆಲವು ಪ್ರಶ್ನೆಗಳನ್ನು ನೋಡಿ ಗಾಬರಿಯಾಗಿದ್ದು ಹೌದು. ಈ ಹುಡುಗರನ್ನು ಕರೆದುಕೊಂಡು ಹೋಗಿ ಅಲ್ಲಿ ಇರುವುದು ಸಾಧ್ಯವೇ ಎಂಬ ಸಂಶಯ ನನ್ನಲ್ಲಿ ಮೂಡಲು ಶುರುವಾಯಿತು. ಇಲ್ಲಿನ ನಗರ ಜೀವನಕ್ಕೆ ಹೊಂದಿಕೊಂಡಿರುವ ಹುಡುಗರು (ನಾನೂ ಸೇರಿ!) ಹಳ್ಳಿಯಲ್ಲಿ ಹೊಂದಿಕೊಳ್ಳುವುದು ತುಸು ಕಷ್ಟಸಾಧ್ಯ ಅನಿಸಿತಾದರೂ ಈ ಎರಡು ಹುಡುಗರು ಬರಲು ತಯಾರಾಗಿದ್ದು ನನ್ನಲ್ಲಿ ಒಂದು ಹೊಸ ಹುರುಪು ಮೂಡಿಸಿತ್ತು. ಅದರಲ್ಲಿ ವಿನೋದ ಅವರು ಇನ್ನೂ ನೌಕರಿ ಮಾಡಿಕೊಂಡಿದ್ದರು.
ಗುರುಪ್ರಸಾದ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಯಾಯಣ ಅಂಕಣ
ಕಬೂಲ್…..
ನಿಶ್ಚಿತಾರ್ಥಕ್ಕೆ ಮೂರು ದಿನ ಉಳಿದಿತ್ತು. ಅದೇನಾಯಿತೋ ಕಾಣೆ. ರಾತ್ರಿ ಮನೆಯಲ್ಲಿ ಮಲಗಿದ್ದವಳು ಬೆಳಗ್ಗಿಗೆ ಕಾಣಲಿಲ್ಲ. ಊರೆಲ್ಲಾ ಹುಡುಕಾಯಿತು. ಸುಳಿವಿಲ್ಲ, ಸುದ್ದಿಲ್ಲ. ಅಮ್ಮ ಪಕ್ಕದೂರಿನ ದರ್ಗಾಕ್ಕೆ ಹೋಗಿ ”ಎಲ್ಲಾರ ಇರ್ಲಿ ಸುಖವಾಗಿರ್ಲಿ” ಅಂತ ದುವಾ ಕೇಳಿಕೊಂಡು ಬಂದ್ಲು. ಬಾಬಾ ‘ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ’ ಅನ್ನೊ ಗಾದೆ ನಿಜವಾಗಬಾರದೆಂದು ಉಳಿದ ನಾವು ನಾಲ್ಕು ಹೆಣ್ಣು ಮಕ್ಕಳನ್ನ ಹೆಚ್ಚು ಹೆಚ್ಚು ಕಾಯಲು ಶುರುಮಾಡಿದ. ಸಹಜವಾಗಿಯೇ ಪಾತಿ ಮತ್ತು ಸಯೀದನ ಮದುವೆ ಮುರಿದುಬಿದ್ದಿತ್ತು. ದಾದಾಪೀರ್ ಜೈಮನ್ ಬರಹ
ಆಸ್ಟ್ರೇಲಿಯಾದ ಪ್ರವಾಸಿಗರ ಕನಸು-ಕನವರಿಕೆಗಳು
ಪ್ರವಾಸಿಗರಿಗೆ, ಕ್ಯಾಂಪಿಗರಿಗೆ, ಹೇಳಿ ಮಾಡಿಸಿದ ಚಳಿಗಾಲವಿದು. ಕಳೆದ ಕೆಲ ವರ್ಷಗಳಿಗಿಂತಲೂ ಈ ಬಾರಿ ಅಧಿಕ ಚಳಿಯಿದೆ. ಹಾಗಾಗಿ ಸಮುದ್ರತಟದಲ್ಲಿರಲು ಜನ ಹಾತೊರೆಯುತ್ತಾರೆ. ಅದು ನಿಜವೆಂಬಂತೆ ರಾಣಿರಾಜ್ಯದ ದಕ್ಷಿಣ-ಪೂರ್ವ ಭಾಗದ ಪ್ರತಿಯೊಂದು ನಗರಪಾಲಿಕೆಯೂ ತಮ್ಮಲ್ಲಿನ ಪ್ರವಾಸಿ ಸ್ಥಳಗಳನ್ನು ಪ್ರಚಾರ ಪಡಿಸಲು ಬಲು ಆಕರ್ಷಕವಾದ ಜಾಹಿರಾತುಗಳನ್ನು ಹಾಕುತ್ತಿದ್ದಾರೆ. ಶಾಲೆಗಳಿಗೆ ಟರ್ಮ್ ೨ ನಂತರದ ಎರಡು ವಾರಗಳ ರಜೆ ಆರಂಭವಾಗಿದೆ.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ
ಗುರುಪ್ರಸಾದ ಕುರ್ತಕೋಟಿ ಹೊಸ ಅಂಕಣ ‘ಗ್ರಾಮಡ್ರಾಮಾಯಣ’
ಸಾಕಷ್ಟು ಸಂಬಳ ಒದಗುವ ಐಟಿ ವಲಯದಲ್ಲಿ ಉದ್ಯೋಗ ನಿರ್ವಹಿಸುವಾಗ, ಕಂಪ್ಯೂಟರ್ ಗಳ ಪರದೆ ಕಣ್ಣು ಕೀಲಿಸಿ ಕುಳಿತು ದಣಿವಾದಾಗ ಹಳ್ಳಿ ಮನೆಯ, ಹೊಲಗದ್ದೆಗಳ ಕಂಪು ಮನಸ್ಸನ್ನು ಕಾಡುವುದುಂಟು. ಹಾಗೆಯೇ ತಾನೂ ಕೃಷಿ ಮಾಡುವ ಅವಕಾಶವಿದ್ದಿದ್ದರೆ ಎಷ್ಟು ಚೆನ್ನಾಗಿತ್ತು ಎಂಬ ಕನಸೂ ಮೊಳಕೆಯೊಡೆಯುವುದು. ಹೀಗೆ ಕನಸುಗಳ ಬೆನ್ನತ್ತಿ ಕೃಷಿ ಕ್ಷೇತ್ರದತ್ತ ಮುಖ ಮಾಡಿದವರು ಗುರುಪ್ರಸಾದ ಕುರ್ತಕೋಟಿ. ತಮ್ಮ ಕನಸಿನ ಹಾದಿಯಲ್ಲಿ ಕಂಡ ವಿಚಾರಗಳನ್ನು, ತಮ್ಮ ಅನುಭವಗಳನ್ನು ಅವರು ‘ಗ್ರಾಮ ಡ್ರಾಮಾಯಣ’ ಎಂಬ ಈ ಅಂಕಣದಲ್ಲಿ ಬರೆಯಲಿದ್ದಾರೆ. ಅವರ ಮೊದಲ ಬರಹ ಇಲ್ಲಿದೆ.
ಚಿತ್ತಾಲರ ಕಾದಂಬರಿ ಪ್ರಪಂಚದಲ್ಲಿ ಒಂದೆರಡು ಹೆಜ್ಜೆ
ಕಥಾನಾಯಕ ಪುರುಷೋತ್ತಮ, ಆತನ ತಾಯಿ ಮತ್ತು ಬಳಗದ ನಡುವೆ ನಡೆಯುವ ಕಥಾನಕಗಳೇ ಈ ಕಾದಂಬರಿಯ ವಸ್ತು. ಜೊತೆಗೆ ಒಂದು ಮಹಾನಗರ ಮತ್ತೂ ದೊಡ್ಡದಾಗಿ ವಿಸ್ತರಣೆಯಾಗಬೇಕಾದರೆ ನಡೆಯುವ ತಲ್ಲಣಗಳು, ಹಣ ಅಧಿಕಾರದ ಮುಂದೆ ಮಾನವೀಯತೆ ಗೌಣವಾಗಿ ತನ್ನ ಸ್ವಾರ್ಥಕ್ಕಾಗಿ ಯಾವ ಕೆಲಸಕ್ಕೂ ಇಳಿಯಬಹುದಾದ ಮನುಜನ ಕ್ರೂರತನ, ತನ್ನ ಪ್ರೀತಿಯ ನೆಲವನ್ನು ಉಳಿಸಿಕೊಳ್ಳಲು ಎಲ್ಲಾ ಸ್ವಾರ್ಥಗಳ ಬಿಟ್ಟು ಮಾಡುವ ಹೋರಾಟ ಎಲ್ಲವೂ ಬಹಳ ಸುಂದರವಾಗಿ ನಿರೂಪಿತಗೊಂಡಿದೆ
ಓದುವ ಸುಖ ಅಂಕಣದಲ್ಲಿ ಯಶವಂತ ಚಿತ್ತಾಲರ ಮೂರು ಕೃತಿಗಳ ಕುರಿತು ಬರೆದಿದ್ದಾರೆ ಗಿರಿಧರ್ ಗುಂಜಗೋಡು
ವಿಯೆಟ್ನಾಮ್ ನಲ್ಲಿರುವ ಚಂಪಾ ಸಾಮ್ರಾಜ್ಯದ ನೋಟಗಳು
ನಾಲ್ಕನೇ ಶತಮಾನದಿಂದ ೧೩ ನೇ ಶತಮಾನದ ವರೆಗೂ ಆಳಿದ ಚಂಪಾ ಸಾಮ್ರಾಜ್ಯವು ಆಮೇಲೆ ಚೈನಿಸ್ , ಡ ವಿಯೆಟ್ ಹಾಗೂ ಪ್ರಬಲರಾದ ಕಾಂಬೋಡಿಯಾದ ಖ್ಮೇರ್ ರಾಜರುಗಳಿಗೆ ಮಣಿದು ಕೊನೆಗೆ ಅಳಿದೇಹೊಯಿತು. ಅವರ ಭೌಗೋಳಿಕ ಪ್ರದೇಶಗಳನ್ನು ಇಂದ್ರಪುರ, ಅಮರಾವತಿ, ವಿಜಯಾ ಕೌತುರಾ ಮತ್ತು ಪಾಂಡುರಂಗ ಎಂದು ಕರೆಯುತ್ತಿದ್ದರು. ಮಿಸಾನ್ ಕಣಿವೆಯು ಅಮರಾವತಿಯ ಭಾಗವಾಗಿತ್ತು. ಅಲ್ಲಿಂದ ಅವರು ಶತ್ರುಗಳಿಂದ ಹಿಮ್ಮೆಟ್ಟಿ ಹೋದಂತೆ ಕಣಿವೆಯೂ ಅನಾಥವಾಗುತ್ತಾ ಹೋಯಿತು. ‘ದೇವ ಸನ್ನಿಧಿ’ ಅಂಕಣದಲ್ಲಿ ಗಿರಿಜಾ ರೈಕ್ವ ವಿಯೆಟ್ನಾಂ ಕುರಿತು ಬರೆದಿದ್ದಾರೆ.
ಪಿಜ್ಜಾ ಡೆಲಿವರಿ ಹುಡುಗನೂ ಹಾಗೂ ಓಲ್ಡ್ ಮಾಂಕ್ ಪರಮಾತ್ಮನೂ
ಹೊರಗಡೆಯಿಂದ ನಿಂತು ನಾವು ಸಾವಿರ ಹೇಳಬಹುದು. ಆದರೆ ಒಳಗಿದ್ದು ಕೆಂಡ ಹಾಯುತ್ತಿರುವವರ ಪರಿಸ್ಥಿತಿಗಳು ಭಿನ್ನವಾಗಿರುತ್ತವೆ. ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ಹಿತ ಎನ್ನುವ ಹಾಗೆ; ಏಕ್ತಾ ಕಪೂರ್ ಸೀರಿಯಲ್ಲುಗಳಲ್ಲಿರುವಂತೆ ಅದೆಷ್ಟೋ ಬಾರಿ ಬೇರೆಯಾಗಿ ಮತ್ತೆ ಮತ್ತೆ ಕೂಡಿಕೊಳ್ಳಲೂಬಹುದು. ಮಾತಿನ ಕೊನೆಯಲ್ಲಿ ‘ಹೋಗ್ಲಿ ಬಿಡೋ ಯಣ. ಬಿಟ್ಟೆ ಬಿಡ್ತೀನಿ ಅತಾಗ. ಹೊಯ್ಕೋತ ಹೋಗ್ಲಿ!’ ಎಂದೇನೋ ಅಂದ. ದಾದಾಪೀರ್ ಜೈಮನ್ ಬರೆಯುವ ಜಂಕ್ಷನ್ ಪಾಯಿಂಟ್ ಅಂಕಣ










