Advertisement

ಅಂಕಣ

ಇಂತೀ, ನಿನ್ನ ಪ್ರೀತಿಸುವ…

ಇಂತೀ, ನಿನ್ನ ಪ್ರೀತಿಸುವ…

ನನ್ನನ್ನು ಅನುಕೂಲಕ್ಕೆ ಬಳಸಿಕೊಂಡರೂ, ಅದು ನಾನೆ ಮನಸಾರೆಯಾಗಿ ಕೊಟ್ಟ ಅವಕಾಶ. ನನ್ನ ಮೇಲೆ ಪ್ರೀತಿ ಹೆಚ್ಚಲಿ ಎಂದಿದ್ದ ಸ್ವಾರ್ಥ. ಹಾಗೇನಾದರೂ ಯಾವತ್ತಾದರೂ ಮತ್ತೆ ನನ್ನನ್ನು ನಿನ್ನ ಅನುಕೂಲಕ್ಕೆ ಉಪಯೋಗಿಸಿಕೊಳ್ಳಬೇಕೆನಿಸಿದರೆ ನೆನಪಿಸಿಕೊ. ನನ್ನ ಮನಸ್ಸು ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಪ್ರೀತಿ ಎಂದರೆ ಕೊಟ್ಟು ಕೊಳ್ಳುವ ವ್ಯಾಪಾರವಲ್ಲ, ಎಲ್ಲವನ್ನೂ ನೀಡುವ ತ್ಯಾಗವಲ್ಲ, ಕಸಿದುಕೊಳ್ಳುವ ದುರ್ಬುದ್ಧಿಯಲ್ಲ, ನಮಗಾಗಿಯೆ ಕೊಡುವ ಸ್ವಾರ್ಥ. ನೋಡುಗರಿಗೆ ಪ್ರೀತಿಯಲ್ಲಿ ಮೋಸ ಕಾಣಿಸಬಹುದು ಆದರೆ ಪ್ರೀತಿಸುವವರಲ್ಲಿ ಕಾಣಿಸಿದರೆ ಅದು ಪ್ರೀತಿಯೆ ಅಲ್ಲ.
ಪ್ರಶಾಂತ್‌ ಬೀಚಿ ಅಂಕಣ

read more
ಆಸ್ಟ್ರೇಲಿಯ-ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಹಾಡುಪಾಡು

ಆಸ್ಟ್ರೇಲಿಯ-ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಹಾಡುಪಾಡು

ಕೋವಿಡ್-೧೯ ವರ್ಷದಲ್ಲಿ ಓದುತ್ತಿದ್ದ ಕೆಲ ವಿದ್ಯಾರ್ಥಿಗಳು ರಜೆಗೆಂದು ತಮ್ಮೂರಿಗೆ (ದೇಶಕ್ಕೆ) ಹಿಂದಿರುಗಿ, ಇತ್ತ ವೈರಸ್ ಹಾವಳಿ ಹೆಚ್ಚಾಗಿ, ಅವರು ವಾಪಸ್ ಬರಲು ಆಗದೆ ತಮ್ಮ ಓದನ್ನು ಆನ್ಲೈನ್ ಮುಖಾಂತರ ಮುಂದುವರೆಸುವ ಫಜೀತಿಯಾಗಿತ್ತು. ಕೆಲವರು ಆಸ್ಟ್ರೇಲಿಯಾದಲ್ಲಿ ಇನ್ನೂ ಮನೆ ಬಾಡಿಗೆ ಕಟ್ಟುತ್ತಿದ್ದರು; ಸಾಮಾನು, ಸರಂಜಾಮುಗಳನ್ನು ಇಲ್ಲೇ ಇಟ್ಟಿದ್ದರು. ಪಾರ್ಟ್‌ ಟೈಮ್ ಕೆಲಸವಿದ್ದವರಿಗೆ ಕೆಲಸ ಹೋಯ್ತು. ವೀಸಾ ಮುಂದುವರೆಸಲು ಸರಕಾರ ಕೊಕ್ಕೆ ಹಾಕಿತು. ಡಿಗ್ರಿ ಮುಗಿಸಲೇ ಬೇಕು ಎನ್ನುವುದು ವಿದ್ಯಾರ್ಥಿ ವೀಸಾದ ಷರತ್ತು. ಡಾ.ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ಅಂಕಣ

read more
ನಕ್ಷತ್ರ ಮಂಡಲ ಇರುವುದು ಎಲ್ಲಿ?

ನಕ್ಷತ್ರ ಮಂಡಲ ಇರುವುದು ಎಲ್ಲಿ?

ಬಸವಣ್ಣ ಹೇಳಿದ “ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ” ಎಂಬ ನುಡಿಯೇ ಈ ಕಾದಂಬರಿಯ ಧ್ಯೇಯವಾಕ್ಯ. ಪ್ರತೀ ಅಧ್ಯಾಯದಲ್ಲೂ ಇರುವ ಸರ್ವನಿಯಾಮಕ ಎಳೆಯೆಂದರೆ ಅದು ಸಂಚಾರ, ಚಲನೆ. “ಜಗತ್ತಿಗೆ ಒಂದು ಸ್ಥಳದಲ್ಲಿ ನೆಲೆ ನಿಲ್ಲದವರ ಮೇಲೆ ಏನು ದ್ವೇಷವೋ ಕಾಣೆ. ಅದಕ್ಕೇ ಸಂಚಾರವನ್ನು ಆಯ್ದುಕೊಂಡವರನ್ನೆಲ್ಲ ತಡವಿಲ್ಲದೇ ಹೊಡೆದುರುಳಿಸಿದೆ ಚರಿತ್ರೆ” ಎನ್ನುತ್ತಾಳೆ ಕಾದಂಬರಿಯ ನಿರೂಪಕಿ ಒಂದು ಕಡೆ. ಅವಳು ನಿರಂತರವಾಗಿ ಚಲನೆಯಲ್ಲೇ ಇರುವವಳು. ಅಂದರೆ ಪ್ರಪಂಚದ ಬೇರೆ ಬೇರೆ ಊರುಗಳಿಗೆ ಸೈಟ್ ಸೀಯಿಂಗಿಗೆಂದು ಹೋಗಿ ಬರುವವಳಲ್ಲ.

read more
ಅನಿವಾಸಿ ಕನ್ನಡಿಗರ ಕತೆಗಳ ʼಗುರುʼ

ಅನಿವಾಸಿ ಕನ್ನಡಿಗರ ಕತೆಗಳ ʼಗುರುʼ

ಗುರುಪ್ರಸಾದ್ ಕಾಗಿನಲೆ ಅವರ ಕತೆಗಳಲ್ಲಿ ರೂಪಕಗಳ ಉಪಯೋಗ ಮತ್ತು ಪ್ರಯೋಗ ಎರಡೂ ತುಂಬ ಕಡಿಮೆ. ಒಳಪ್ರಪಂಚದ ವಿವರಗಳನ್ನು ಎಷ್ಟು ಬೇಕೋ ಅಷ್ಟೇ ಉಪಯೋಗಿಸುತ್ತಾರೆ. ಅಂತರಂಗದ ಭಾವನಾಲೋಕವನ್ನು ತುಂಬ ಕೆದಕುತ್ತ ಹೋಗುವುದಿಲ್ಲ. ಬಾಹ್ಯವಿವರಗಳನ್ನು ಹೆಚ್ಚಾಗಿ ಕೊಟ್ಟು ಪುಟ ತುಂಬಿಸುವುದೆಂದರೆ ಇವರಿಗಾಗದು. ಯಾವ ಪಾತ್ರವನ್ನೂ ಅವರ ರೂಪ, ಎತ್ತರ, ಅಗಲ ಇತ್ಯಾದಿಗಳನ್ನು ತಿದ್ದಿ ತೀಡಿ ಬರೆಯುವುದಿಲ್ಲ. ಪಾತ್ರಗಳ ಊಹೆಯ ಸ್ವಾತಂತ್ರ್ಯವನ್ನು ನಮಗೇ ಬಿಡುತ್ತಾರೆ…

read more
ನಾಟಕವೆಂದರೆ ಶೃತಿಗೆ ಅಣಿಗೊಳಿಸಿದ ವೀಣೆಯಂತೆ

ನಾಟಕವೆಂದರೆ ಶೃತಿಗೆ ಅಣಿಗೊಳಿಸಿದ ವೀಣೆಯಂತೆ

ರಂಗದ ಕಾಯಕ ಅಂದರೆ ಮೊದಲು ನಮ್ಮ ಮನೋಧರ್ಮ ಗುರುತಿಸಿಕೊಂಡು ನಾಟಕ ಕಟ್ಟಿ ಅದು ಪ್ರೇಕ್ಷಕರ ಕಣ್ಣುಗಳ ಫ್ರೇಮಿನಲ್ಲಿ ಸರಿಯಾಗಿ ಫಿಟ್ಟಾಗುತ್ತದೆಯೇ ಎಂದು ಅಂದಾಜು ಮಾಡಿಕೊಳ್ಳಬೇಕು. ನಂತರ ಜನರಿಗೆ ಕಾಯಬೇಕು. ಪಾರ್ಕಿಂಗ್ ಕಡೆ ಕಣ್ಣು ಹಾಯಿಸುತ್ತಿರಬೇಕು. ಇಷ್ಟಾದ ಮೇಲೆ ಭರ್ಜಿಯ ಮೊನೆಗಳಿಗೆ ಮೈ ಒಡ್ಡಿ ನಿಲ್ಲಬೇಕು ಮತ್ತು ನೋವಿನಲ್ಲೂ ನಗಬೇಕು. ನಗಲು ಸಾಧ್ಯವಾಗದಿದ್ದರೆ ಮನಸ್ಸಿನ ಹದ ಕೆಡುತ್ತದೆ. ಮನಸ್ಸು ಕೆಟ್ಟರೆ ಬದುಕಿನ ನೋಟಕ್ರಮದ ಜಾಡು ತಪ್ಪುತ್ತದೆ. ಒಟ್ಟು ಚಿತ್ರವೇ ಕಲಕಿಹೋಗುತ್ತದೆ.
‘ರಂಗ ವಠಾರ’ ಅಂಕಣದಲ್ಲಿ ಮತ್ತೆ…

read more
ಉಳಿದು ಬದುಕುವುದನ್ನೇ ಆಯ್ಕೆ ಮಾಡಿಕೊಂಡವನ ಕಥೆ

ಉಳಿದು ಬದುಕುವುದನ್ನೇ ಆಯ್ಕೆ ಮಾಡಿಕೊಂಡವನ ಕಥೆ

ಒಮ್ಮೊಮ್ಮೆ ಯೋಚಿಸಿದರೆ ನಮ್ಮ ಅಳತೆಗಳನ್ನು ಯೋಜನೆಗಳನ್ನು ಮೀರಿ ಜೀವನದಲ್ಲಿ ಏನೋ ಘಟಿಸುತ್ತಿರುತ್ತದೆ. ಒಮ್ಮೊಮ್ಮೆ ಅದಕ್ಕೊಂದು ಅರ್ಥವೇ ಇರುವುದಿಲ್ಲ. ತರಗೆಲೆಯಂತೆ ತೂರಿ ಎತ್ತೆತ್ತಲೋ ಹಾರಿ ಮತ್ತೆಲ್ಲೋ ಮತ್ಯಾವುದೋ ಮಣ್ಣಿನಲ್ಲಿ ಸೇರಿ ಕೊಳೆತು ಹೋಗಿಬಿಡುವ ಹಾಗೆ ಅನಿಸುತ್ತದೆ. ಬದುಕೇ ಹಾಗೆ! ಹುಡುಕುವಾಗ ನಾವು ಹುಡುಕುತ್ತಿರುವುದು ಸಿಗುವುದಿಲ್ಲ. ಹುಡುಕುವುದನ್ನು ನಿಲ್ಲಿಸಿದಾಗ ಧುತ್ತೆಂದು ತಂದು ಎಸೆಯುತ್ತದೆ. ಈ ಬದುಕಿಗೆ ಅರ್ಥ ಎನ್ನುವುದು ಇದೆಯೇ? ಈ ಬದುಕು ಅರ್ಥಗಳ ಹಂಗನ್ನು ಮೀರಿಕೊಳ್ಳಲು ಪ್ರಯತ್ನಿಸುತ್ತಿರುವ ಕವಿತೆಯೇ?

read more
ನನಗೆ ಜಗತ್ತನ್ನು ಪರಿಚಯಿಸಿದ ಮಿಲೇನಿಯಂ ಸರಣಿ

ನನಗೆ ಜಗತ್ತನ್ನು ಪರಿಚಯಿಸಿದ ಮಿಲೇನಿಯಂ ಸರಣಿ

ಆ ಸಮಯದಲ್ಲಿ ನನ್ನ ತರ್ಕ ಬಹಳ ಸರಳವಾಗಿತ್ತು. ಯಾರ್ಯಾರು ಮಕ್ಕಳ ಕಥೆ ಬರೆಯುತ್ತಾರೋ, ನನಗೆ ಅರ್ಥವಾಗುವಂತಹ ಪರಿಸರ, ವಿಜ್ಞಾನ ಇತ್ಯಾದಿ ವಿಷಯಗಳ ಬಗ್ಗೆ ಸರಳವಾಗಿ ಬರೆಯುತ್ತಾರೋ ಅವರೆಲ್ಲಾ ಚಿಕ್ಕ ಲೇಖಕರು. ಯಾರ ಬರಹಗಳು ಅರ್ಥವಾಗುವುದಿಲ್ಲವೋ, ಒಂದು ಪ್ಯಾರಾಕ್ಕಿಂತಲೂ ಜಾಸ್ತಿ ಓದಿಸಿಕೊಂಡು ಹೋಗುವುದಿಲ್ಲವೋ ಅವರೆಲ್ಲಾ ದೊಡ್ಡ ಲೇಖಕರು ಅನ್ನೋ ನಂಬಿಕೆಯಲ್ಲಿದ್ದೆ. ಆದರೆ ತೇಜಸ್ವಿಯವರ ಬರಹಗಳು ಈ ನಂಬಿಕೆಯನ್ನು ಸಡಿಲಗೊಳಿಸಿದವು.

read more
ಅಪರಾಧಕ್ಕೆ ತಕ್ಕ ಶಿಕ್ಷೆ ಅಂದರೇನರ್ಥ?

ಅಪರಾಧಕ್ಕೆ ತಕ್ಕ ಶಿಕ್ಷೆ ಅಂದರೇನರ್ಥ?

ಬಿಸಿಲು, ಉಪವಾಸ, ಸುತ್ತಲಿನ ಕೊಳಕು, ದೊಡ್ಡವರ ಸಣ್ಣತನ… ಮುಂತಾದವುಗಳಿಂದ ಅವನು ಬೇಸತ್ತಿದ್ದಾನೆ. ಇವನ ಒಳಿತು ಮತ್ತು ಭವಿಷ್ಯಕ್ಕಾಗಿ ತಂಗಿ ದುನ್ಯಾ ಸಿರಿವಂತನಾದ ಲೂಷನ್‍ನನ್ನು ಇಷ್ಟವಿಲ್ಲದಿದ್ದರೂ ವರಿಸಲು ಸಿದ್ಧವಾಗಿರುವ ವಿಷಯ ಈಗಷ್ಟೇ ಅವನಿಗೆ ತಾಯಿಯ ಪತ್ರದಿಂದ ತಿಳಿದಿದೆ. ಏನನ್ನಾದರೂ ಗಂಭೀರವಾಗಿ ಯೋಚಿಸುವಾಗ ಕೈಕಟ್ಟಿ ಅತ್ತಿಂದಿತ್ತ ಸರಸರನೆ ಓಡಾಡುವ ತಂಗಿಯ ಚಿತ್ರ ಅವನ ಕಣ್ಣ ಮುಂದಿದೆ.
ಕಾವ್ಯಾ ಓದಿದ ಹೊತ್ತಿಗೆ ಅಂಕಣದಲ್ಲಿ ಫ್ಯದೊರ್ ದಾಸ್ತಯೇವ್ಸ್ಕಿಯ ಪ್ರಸಿದ್ಧ ಕಾದಂಬರಿ “ಕ್ರೈಂ ಅಂಡ್‌ ಪನಿಷ್ಮೆಂಟ್‌” ಕುರಿತು ಬರೆದಿದ್ದಾರೆ ಕಾವ್ಯಾ ಕಡಮೆ

read more
ಕನ್ನಡವ ಪೊರೆದ ಚೇತನಗಳ ನೆನಪಿನಲ್ಲಿ…

ಕನ್ನಡವ ಪೊರೆದ ಚೇತನಗಳ ನೆನಪಿನಲ್ಲಿ…

‘ಸಿರಿಸಂಪಿಗೆ’ ನಾಟಕದಲ್ಲಿ ಬಹಳ ಹಾಡುಗಳಿವೆ. ಅಲ್ಲಿಯೇ ಹಾರ್ಮೋನಿಯಂ ಹಿಡಿದುಕೊಂಡು ರಾಗ ಹಾಕುತ್ತಿದ್ದರು ಬಸವಲಿಂಗಯ್ಯನವರು. ಅವರದು ಅದ್ಭುತ ಶಾರೀರ. ನಾಟಕದಲ್ಲಿ ಎಲ್ಲ ಹಾಡುಗಳನ್ನು ರಿಹರ್ಸಲ್ ಸಮಯದಲ್ಲೇ ನಮ್ಮ ಕಣ್ಣೆದುರೇ ರಾಗ ಹಾಕಿದರು, ಹಾಡಿಸಿದರು. ನಾವೆಲ್ಲ ಎಲ್ಲ ಹಾಡುಗಳನ್ನೂ ತಾಲೀಮು ಕೂಡ ಮಾಡಿದ್ದೆವು. ಒಂದು ಸಂಜೆ ಅದೇನೆನಿಸಿತೋ, ‘ಇದು ಯಾಕೋ ಸರಿ ಇಲ್ಲ. ನಾಟಕದ ಕಡೀ ಹಾಡು, ಭೈರವಿ ರಾಗದಾಗs ಇರಬೇಕು,’ ಎಂದು ಮತ್ತೆ ಪೇಟಿ ಹಿಡಕೊಂಡು ಭೈರವಿ ರಾಗದಲ್ಲಿ ನಾಟಕದ ಕೊನೆಯ ಹಾಡಿಗೆ ಇನ್ನೊಂದು ಧಾಟಿ ಹಚ್ಚಿದರು.
ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್‌ ಪತ್ರ’

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ