ಹಾಗಾದರೆ ದೇವರು ಮನುಷ್ಯನನ್ನು ಪೂಜಿಸುತ್ತಾನೆಯೇ..
ಅವನು ನನ್ನನ್ನು ಒಂದು ಸುಂದರ ಸ್ಮಶಾನದಲ್ಲಿ ಭೇಟಿಯಾದ. ಇಂಗ್ಲೆಂಡಿನ ಸ್ಮಶಾನಗಳು ಭಾರತದ ಪಾರ್ಕ್ ಗಳಿಗಿಂತ ಸುಂದರವಾಗಿರುತ್ತದೆ. ಕೂತು ನಾವಿಬ್ಬರೆ ಏನೇನೊ ಮಾತನಾಡಿದೆವು, ನಾನು ಅವನ ಹಳ್ಳಿಯ ಬಗ್ಗೆ ಕೇಳತೊಡಗಿದೆ. ಅವನ ಹಳ್ಳಿಯನ್ನು ನೋಡುವ ಆಸೆ ತಿಳಿಸಿದೆ. ನನ್ನ ಜೊತೆಗೆ ಒಳ್ಳೆಯ ಸ್ನೇಹ ಬೆಳೆದ ಕಾರಣ ಅವನು ಸಲುಗೆಯಿಂದ ಮಾತನಾಡುತ್ತಾ ಹೋದ. ತನ್ನ ಕಥೆಯನ್ನು ಹೇಳತೊಡಗಿದ. ಸುರಳೀತ ದುಡಿಮೆಯಿಲ್ಲದ, ಸಂಗಾತಿಯಿಲ್ಲದ ಅವನ ಬದುಕೇ ಕಷ್ಟಗಳ ಸುಳಿಯಲ್ಲಿ ಸಿಲುಕಿತ್ತು.
ಪ್ರಶಾಂತ್ ಬೀಚಿ ಅಂಕಣ
ಇಂಗ್ಲೆಂಡಿನ ಕ್ರಿಕೆಟ್ ಲೋಕದ ಹುಮ್ಮಸ್ಸು
ಇಂಗ್ಲೆಂಡ್ ನಲ್ಲಿ ಪ್ರತಿ ಕ್ರಿಕೆಟ್ ಕ್ಲಬ್ಬಿಗೂ ಕ್ರಿಕೆಟ್ಟಿಗೆಂದೇ ಮೀಸಲಾದ ಮೈದಾನಗಳು ಇರುತ್ತವೆ. ಪ್ರತಿ ಕ್ಲಬ್ಬಿಗೂ ಸದಸ್ಯರಾಗಲು ವಾರ್ಷಿಕ ಚಂದಾ ಕೊಡಬೇಕು. ಒಂದು ಆಡಳಿತದ ತಂಡ ಇರುತ್ತದೆ. ಚಿಕ್ಕದಾದರೂ ಸರಿ, ಮೈದಾನಕ್ಕೆ ಅಂಟಿಕೊಂಡಂತೆ ಒಂದು ಕಟ್ಟಡವಿರುತ್ತದೆ, ಅದರೊಳಗೆ ಚಿಕ್ಕ ಪಬ್ಬು ಕೂಡ ಇರುತ್ತದೆ, ಮ್ಯಾಚು ನೋಡಲು ಬಂದವರು, ಮ್ಯಾಚು ಮುಗಿಸಿದ ಮೇಲೆ ತಿಂದು ಕುಡಿದು ಹೋಗಲು ಅಲ್ಲಿ ಅವಕಾಶವಿರುತ್ತದೆ. ಕ್ಲಬ್ಬಿನಲ್ಲಿ ಆಗಾಗ ಡಿನ್ನರ್ ಗಳನ್ನೂ ಬಾರ್ಬಿಕ್ಯೂಗಳನ್ನೂ ಇಟ್ಟುಕೊಂಡಿರುತ್ತಾರೆ ಮತ್ತು ಕ್ಲಬ್ಬಿಗೆ ದುಡ್ಡಿನ ಅವಶ್ಯಕತೆ ಇದ್ದಾಗ ಕೆಲವು ಕಾರ್ಯಕ್ರಮಗಳನ್ನೂ ಇಟ್ಟುಕೊಳ್ಳುತ್ತಾರೆ.
ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್ ಪತ್ರ’
ಸಂಸ್ಕೃತಿಗಳ ಮರುಜೇವಣಿಯಲ್ಲಿ ತೊಡಗಿರುವ ಶಿವಪ್ರಕಾಶರ ಕಾವ್ಯ
ಈ ಬಹುಮುಖಿ ಸಂವಾದದ ಮೂಲಕ ಶಿವಪ್ರಕಾಶರ ಕಾವ್ಯ ಕನ್ನಡ ಸಂಸ್ಕೃತಿಯ ಅಷ್ಟೇ ಏಕೆ ಭಾರತೀಯ ಸಂಸ್ಕೃತಿಯ ಮುಖ್ಯಗುಣವಾದ ಬಹುರೂಪಿತನವನ್ನು ಆವಾಹಿಸಿಕೊಂಡಿದೆ. ಕನ್ನಡ ಸಂವೇದನೆಯ ಅಸಲೀ ಗುಣವೆಂದರೆ ಅದು ಆದಿಮ ಕಾಲದಿಂದಲೂ ಅಂದರೆ ಶಂಗಂ ಸಾಹಿತ್ಯ, ಕವಿರಾಜ ಮಾರ್ಗದ ಕಾಲದಿಂದಲೂ ಹಲವು ಭಾಷೆ-ಸಂಸ್ಕೃತಿ-ಮೌಲ್ಯಗಳನ್ನು ಪ್ರತಿನಿಧಿಸುವ ಮಾರ್ಗ. ದೇಸಿ ಲೌಕಿಕ ಸಾಮಾಜಿಕ ಅನುಭಾವಿಕ ಧಾರ್ಮಿಕ ತತ್ವಶಾಸ್ತ್ರೀಯ ಅನುಭವಗಳೆಲ್ಲವನ್ನೂ ಏಕೀಭವಿಸಿಕೊಳ್ಳುವ ಗುಣವನ್ನು ಹೊಂದಿದೆ.
ಎಚ್.ಎಸ್. ಶಿವಪ್ರಕಾಶ್ ಅವರ ಕಾವ್ಯದ ಕುರಿತು ಎಸ್. ಸಿರಾಜ್ ಅಹಮದ್ ಬರಹ
ಸಂಸರ ‘ಬಿಂಬ’ ವನ್ನು ಕಂಡುಕೊಳ್ಳಬೇಕಾದ ಬಗೆಗೆ ಚಿಂತಿಸುತ್ತ…
ರಂಗಶಾಲೆಗಳು ಮತ್ತು ರಂಗಸಂಸ್ಥೆಗಳು ಮಾತ್ರ ಕಟ್ಟಿ ನಿಲ್ಲಿಸಬಹುದಾದ ಪ್ರಯೋಗಗಳು. ಅಮೇಚೂರ್ ಗಳಿಗೆ ಸಂಸರು ನಿಲುಕುವುದು ಕಷ್ಟ. ಕೈಲಾಸಂ ಮತ್ತು ಸಂಸರು ಒಂದೇ ಕಾಲಮಾನದವರಾದರೂ ಇವರ ಭಾಷಾ ಪ್ರಯೋಗದ ಅನನ್ಯತೆ ದೊಡ್ಡದು. ಕೈಲಾಸಂ ಕಟ್ಟಿರುವ ಭಾಷೆ- ಅದನ್ನು ಒಡೆದು ಓದುವ ಕ್ರಮ ತಿಳಿಯದಿದ್ದರೆ ಅವರ ನಾಟಕಗಳು ದಕ್ಕುವುದಿಲ್ಲ. ಸಂಸರನ್ನು ಓದಬೇಕಾದರೆ ಹಳಗನ್ನಡದ ಅಥವಾ ನಡುಗನ್ನಡದ ಟಚ್ ಇರಿಸಿಕೊಂಡಿರಬೇಕು. ಶಾಸ್ತ್ರೀಯವಾಗಿ ಅಭ್ಯಸಿಸಬೇಕು.
ಎನ್.ಸಿ. ಮಹೇಶ್ ಬರೆಯುವ ‘ರಂಗ ವಠಾರ’ ಅಂಕಣ
ಕಳ್ಳರ ಸಹವಾಸದಲ್ಲಿ ಕಳೆದ ಎರಡು ಸಾಹಸಿ ದಿನಗಳು
ಮೊಬೈಲ್ ಕಳ್ಳನನ್ನು ಬೆನ್ನತ್ತಿದ ತಕ್ಷಣ ಅದೆಲ್ಲ ನೆನಪಾಗಿ, ನಾನೊಬ್ಬ ಖೋ ಖೋ ಆಟದ ರೈಡರ್ ಆಗಿ ಬದಲಾಗಿಬಿಟ್ಟಿದ್ದೆ. ಆತ, ಎಡ-ಬಲ ತಡಕುತ್ತ, ಹೊಯ್ದಾಡುತ್ತ ಒಂದೇ ಸಮ ಓಡುತ್ತಿದ್ದ; ನಾನು ಅವನನ್ನಷ್ಟೇ ದಿಟ್ಟಿಸುತ್ತ ನೇರದಿಕ್ಕಿನಲ್ಲಿ ಓಡುತ್ತಿದ್ದೆ. ಇಬ್ಬರ ವೇಗವೂ ನೂರು ಮೀಟರ್ ಓಟಗಾರರ ವೇಗದಷ್ಟೇ ಇತ್ತು. ಇನ್ನೂರೈವತ್ತು ಮೀಟರ್ ಓಡಿರಬಹುದು. ಕಳ್ಳ ಓಡುತ್ತಲೇ ಹಿಂದಕ್ಕೊಮ್ಮೆ ತಿರುಗಿನೋಡಿದ. ಆತನ ಮೊಗದಲ್ಲಿ ಭಯ ಕಡಿಮೆ ಆದಂತಿತ್ತು.
-‘ಸೊಗದೆ’ ಅಂಕಣದಲ್ಲಿ ಕಳ್ಳರ ಚಮತ್ಕಾರಗಳನ್ನು ಬರೆದಿದ್ದಾರೆ ಸಹ್ಯಾದ್ರಿ ನಾಗರಾಜ್
ಇದು ಆಸ್ಟ್ರೇಲಿಯನ್ ಮಹಿಳಾ ಕ್ರೀಡಾಪಟುಗಳಿಗೆ ಸೇರಿದ ವರ್ಷ!
ಇಪ್ಪತ್ತೊಂದನೇ ಶತಮಾನದಲ್ಲಿ ಕೂಡ ಹೊರದೇಶದವರಿಗೆ ಆಸ್ಟ್ರೇಲಿಯ ಅಂದರೆ ಆಂಗ್ಲೋ-ಆಸ್ಟ್ರೇಲಿಯಾ ಎಂಬ ಏಕತ್ವ ಮಾತ್ರ ಕಾಣುವುದು. ಎಲ್ಲವೂ ಆಂಗ್ಲೋ-ಯೂರೋಪಿಯನ್-ಅಮೇರಿಕನ್ ಆಗಿರುವ ಈ ದೇಶದಲ್ಲಿ ಈ ಮಣ್ಣಿನ ಮಕ್ಕಳಾದ ಅಬೊರಿಜಿನಲ್ ಜನರ ಸಂಸ್ಕೃತಿ ಮತ್ತು ತಿಳಿವಳಿಕೆಯ ಮಹತ್ವ ಬೆಳಕಿಗೆ ಬರಲು ಸಾಕಷ್ಟು ಅವಕಾಶವಾಗಿಲ್ಲ. ಇಂಥಾ ಸನ್ನಿವೇಶದಲ್ಲಿ ಮಹಿಳಾ ಕ್ರೀಡಾಪಟುವೊಬ್ಬರು ರೂಪುಗೊಳ್ಳುವುದು ಸರಳ ಮಾತಲ್ಲ.
ವಿನತೆ ಶರ್ಮಾ ಬರೆದ ‘ಆಸ್ಟ್ರೇಲಿಯ ಪತ್ರ’ ಇಲ್ಲಿದೆ.
ಪ್ರದರ್ಶನ ಕಲೆಗಳಲ್ಲಿ ಸ್ತ್ರೀಯರ ಸ್ಥಾನ
ಯುಗಧರ್ಮದ ಮನಸ್ಥಿತಿಯು ಆ ಸಮಾಜ ಸೃಷ್ಟಿಸಿದ ಘಟಕಗಳಲ್ಲಿ ಅಂತರ್ಗತವಾಗಿಯೆ ಇರುತ್ತದೆ. ಉದಾಹರಣೆಯಾಗಿ ಯಕ್ಷಗಾನವನ್ನೆ ತೆಗೆದುಕೊಂಡರೆ, ಅದರ ಎಲ್ಲ ಅಂಗಗಳಲ್ಲಿ, ರೂಪ-ಸ್ವರೂಪ, ಹಿಮ್ಮೇಳ-ಮುಮ್ಮೇಳ, ಮೌಲ್ಯ-ಔಚಿತ್ಯ, ರಸ-ರುಚಿ, ಪಠ್ಯ-ಸಂಕಲನ, ಅಥವಾ ತಾಳಮದ್ದಲೆಯಲ್ಲಿ ಬೆಳೆದು ಬಂದ ವಾಗ್ವಾದದ, ತರ್ಕದ ಪರಂಪರೆ ಇವೆಲ್ಲದರಲ್ಲೂ ನಾವು ಈ ಆಲೋಚನೆಯ ಒಂದು ಎಳೆಯು ನಿರಂತರವಾಗಿರುವುದನ್ನು ಕಾಣಬಹುದು.
ಯಕ್ಷಗಾನ ಕ್ಷೇತ್ರದಲ್ಲಿ ಮಹಿಳೆಯ ಸ್ಥಾನದ ಕುರಿತು ‘ಯಕ್ಷಾರ್ಥ ಚಿಂತಾಮಣಿ’ಯಲ್ಲಿ ಕೃತಿ ಪುರಪ್ಪೇಮನೆ ಲೇಖನ
ಅಸಾಧ್ಯತೆಗಳ ಕಲ್ಪನೆಯಲ್ಲಿ ಕತೆಗಾರ: ಇಟಾಲೋ ಕ್ಯಾಲ್ವಿನೋ
ಪುಸ್ತಕದ ಮೊದಲ ಮತ್ತು ಅಂತಿಮ ಭಾಗದಲ್ಲಿ ಹತ್ತು ಕಾಲ್ಪನಿಕ ನಗರಗಳ ವರ್ಣನೆಗಳಿದ್ದರೆ, ಮಧ್ಯದ ಭಾಗಗಳಲ್ಲಿ ಐದೈದು ನಗರಗಳ ವರ್ಣನೆಗಳಿವೆ. ಪೋಲೋ ವರ್ಣಿಸುವ 55 ನಗರಗಳನ್ನು, ನಗರ ಮತ್ತು ಸ್ಮೃತಿ, ನಗರ ಮತ್ತು ಬಯಕೆ, ನಗರ ಮತ್ತು ಸಂಜ್ಞೆ, ಸಪೂರ ನಗರ, ವ್ಯಾಪಾರದ ನಗರ, ಕಂಗಳು ಮತ್ತು ನಗರ, ಇತ್ಯಾದಿ ಹನ್ನೊಂದು ವಿಷಯ-ಕೇಂದ್ರಿತ ಗುಂಪುಗಳಾಗಿ ವರ್ಣಿಸಲಾಗಿದೆ. ಅಲ್ಲದೇ ಪ್ರತಿ ಅಧ್ಯಾಯದಲ್ಲಿಯೂ ಪೋಲೋ ಮತ್ತು ಕುಬ್ಲಾ ಖಾನರ ನಡುವಿನ..”
ಈಕೆ ಕಲಿತಿದ್ದು ಪರ್ವತದ ನೀರವತೆಯಿಂದ
ಮನೆಯವರೊಂದಿಗೆ ಹೋರಾಡಿ ತಾರಾ ಕಾಲೇಜೊಂದಕ್ಕೆ ಸೇರಿಕೊಳ್ಳುತ್ತಾಳೆ. ಅಲ್ಲಿಂದ ಮುಂದೆ ಇಂಗ್ಲಂಡಿನ ಕೇಂಬ್ರಿಡ್ಜಿನಲ್ಲಿರುವ ಪ್ರತಿಷ್ಠಿತ ಟ್ರಿನಿಟಿ ಕಾಲೇಜಿನಲ್ಲಿ ಪಿಎಚ್ಡಿ ಪದವಿಯನ್ನೂ ಪಡೆಯುತ್ತಾಳೆ. ಈ ಪಯಣದಲ್ಲಿ ತಂದೆ ತಾಯಿಯರಿಂದ ಯಾವುದೇ ಭಾವನಾತ್ಮಕ ಆಶ್ರಯವೂ, ಸ್ಪಂದನೆಯೂ ಅವಳಿಗೆ ದಕ್ಕುವುದಿಲ್ಲ. ಹಿಂತಿರುಗಿ ನೋಡಿದಾಗ ತನ್ನ ತಂದೆ ಯಾವುದೋ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರಬಹುದೇ ಎಂದು ಅವಳಿಗೆ ಸಂದೇಹವಾಗುತ್ತದೆ. ಎಲ್ಲರಂತೆ ತನಗೂ ಒಂದು ಸಹಜ ಬಾಲ್ಯವಿರಬೇಕಿತ್ತು..”










