ಹುಚ್ಚಾಟಗಳಿಗೆ ನಗುವೇ ಪ್ರತಿಭಟನೆ ಅಸ್ತ್ರ!
ಗಂಭೀರವಾಗಿ ಚರ್ಚಿಸುವವರು ಎದುರಾಗಿದ್ದರೆ ನಾನೂ ಗಂಭೀರವಾಗೇ ಚರ್ಚೆಗೆ ತೊಡಗುತ್ತಿದ್ದೆನೇನೊ. ಆದರೆ ಯಾಕೋ ಅಂಥ ಸಂದರ್ಭಗಳು ನ್ಯಾಷನಲ್ ಕಾಲೇಜಿನಲ್ಲಿದ್ದಾಗ ನಿರ್ಮಾಣ ಆಗಲೇ ಇಲ್ಲ. ನಗುವಿನ ಕಚಗುಳಿಗೆ ನಾನೂ ನಗುತ್ತ ಹಾಯಾಗಿದ್ದ ಕಾಲ ಅದು. ಇದು ಎಂಥ ಎಫೆಕ್ಟ್ ಉಂಟುಮಾಡಿತ್ತು ಅಂದರೆ ಕ್ಲಾಸಲ್ಲಿ ಪಾಠ ಮಾಡುವಾಗ ಸೀರಿಯಸ್ನೆಸ್ ಬಿಟ್ಟು ನಗಿಸುತ್ತ ಅರ್ಥೈಸಬೇಕು..”
ನಟ ರಾಜ್ಕುಮಾರ್ ಕೇಳಿದ ಭೂಮಿ ತೂಕದ ಕ್ಷಮೆ
ಅವರ ಈ ಹಾಡು ನನ್ನನ್ನು ಯಾವ ಪರಿ ಹಿಂಬಾಲಿಸೋಕೆ ಶುರುಮಾಡಿತೆಂದರೆ, ಕ್ಲಾಸಿಗೆ ಹೋಗುವ ಮುಂಚೆ ದಿನವೂ ಕೇಳಿ-ಕೇಳಿ, ಪ್ಲೇ ಲಿಸ್ಟ್ನಲ್ಲಿ ಮೊದಲ ಪಟ್ಟಕ್ಕೇರಿ ಕುಂತಿತ್ತು. ಅದಕ್ಕೆ ಹಲವು ಕಾರಣಗಳಿದ್ದವು. ತುಂಬಾ ಬೇಸರಾದಾಗ ರಫಿ ಹಾಡು ಕೇಳುವ ಅಭ್ಯಾಸ ಇದ್ದುದುಂಟು. ದುಃಖದಲ್ಲಿ ಅದ್ದಿ ತೆಗೆದೂ, ಆ ದುಃಖದಿಂದ ಆರೋಗ್ಯಕರ ಅಂತರ ಕಾಪಾಡಿಕೊಳ್ಳುವ ಆಪ್ತ ದನಿಯದು. ಆದರೆ, ರಾಜ್ಕುಮಾರ್ ಈ ಹಾಡಿನಲ್ಲಿ..”
‘ಶಾಂತಿಭವನ’ವೆಂಬ ‘ವಿಧಿಯ ಹೆಣ್ಣುಮಕ್ಕಳʼ ಕತೆ…
ಆರ್ಥಿಕ ಅನಾನುಕೂಲತೆಗಳಿಂದಾಗಿ ಬೋರ್ಡಿಂಗ್ ಶಾಲೆ ಮುಚ್ಚಿಹೋಗುವ ಪರಿಸ್ಥಿತಿ ಬಂದಾಗ ಕಂಗಾಲಾಗಿ ತನ್ನ ಜೀವನ ಮತ್ತೆ ಹಳ್ಳಿಯ ಬದುಕಿಗೆ ಸೀಮಿತ ಎನ್ನುವ ಚಿಂತೆ ಏನೇನೆಲ್ಲವನ್ನು ಮಾಡಿಸುತ್ತದೆ ಎನ್ನುವುದನ್ನು ಆ ಸಮಯದ ದುಗುಡದಿಂದಲೇ ಬರೆದಿದ್ದಾರೆ. ಆದರೆ ಮತ್ತೆ ಶಾಲೆ ತನ್ನ ಕಷ್ಟಗಳನ್ನು ನಿವಾರಿಸಿಕೊಂಡು ಮುಂದುವರೆಯುತ್ತದೆ, ಶಿಲ್ಪಾ, ಶಾಂತಿಭವನದ ಶಿಕ್ಷಣ ಮುಗಿಸಿ ಉನ್ನತ ಶಿಕ್ಷಣಕ್ಕೆ ಅಣಿಯಾಗುತ್ತಾರೆ.”
ಮಾಹಿತಿಯ ವಿಫುಲತೆ ಮತ್ತು ಮನರಂಜನೆಯ ವಿಪರೀತ
“ಪೋಸ್ಟ್ಮನ್ನರ ಪ್ರಕಾರ ಈ ಬೆಳವಣಿಗೆಯ ಕೆಡುಕೆಂದರೆ ನಮಗೆ ನೇರವಾಗಿ ಸಂಬಂಧಿಸಿರದ ವಿಷಯಗಳತ್ತ ಹೆಚ್ಚು ಹೆಚ್ಚುಗಮನ ಸೆಳೆಯಲಾಗುತ್ತದೆ ಮತ್ತು ಯಾವ ಆಗುಹೋಗುಗಳು ನಮ್ಮ ಜೀವನಕ್ಕೆ ನೇರ ಸಂಬಂಧ ಹೊಂದಿವೆಯೋ ಅವು ಸುದ್ದಿಯಾಗಿ ನಮ್ಮೆದುರು ಬರದಿರುವುದು. ಯಾವ ವಿಷಯದೊಂದಿಗೆ ನಮಗೆ ನೇರ ಸಂಬಂಧ ಇಲ್ಲವೋ, ಅದರ ಕುರಿತು ನಾವು ಗಂಭೀರವಾಗಿ, ಜವಾಬ್ದಾರಿಯುತವಾಗಿ…”
ಕಾವ್ಯಾ ಓದಿದ ಹೊತ್ತಿಗೆ: ಅದೊಂದು ಗ್ರೇಟ್ ಅಮೆರಿಕನ್ ನಾವೆಲ್!
ಒಮ್ಮೆ ನಿಕ್ನ ಉಪಸ್ಥಿತಿಯಲ್ಲೇ ಗ್ಯಾಟ್ಸ್ಬಿ ಮತ್ತು ಡೇಸಿ ಟಾಮ್ನೊಂದಿಗೆ ಮಾತಿನ ಚಕಮಕಿ ನಡೆಸಿ ಕಾರನ್ನು ಡ್ರೈವ್ ಮಾಡಿಕೊಂಡು ಹೊರಟುಬಿಡುತ್ತಾರೆ. ಆ ಕಾರು ರಸ್ತೆಯಲ್ಲಿ ಹೊರಟ ಹೆಂಗಸೊಬ್ಬಳಿಗೆ ಢಿಕ್ಕಿ ಹೊಡೆದು ಆಕೆ ಸ್ಥಳದಲ್ಲಿ ಮೃತಪಡುತ್ತಾಳೆ. ಎಫ್ ಸ್ಕಾಟ್ ಫಿಡ್ಜರಾಲ್ಡ್ ಇಪ್ಪತ್ತನೆಯ ಶತಮಾನದ ಕಾದಂಬರಿಕಾರರಲ್ಲಿ ಬಹುಮುಖ್ಯ ಹೆಸರು. ಅವರ ‘ದಿ ಗ್ರೇಟ್ ಗ್ಯಾಟ್ಸ್ಬಿ’ ಕಾದಂಬರಿ ಇಂದಿಗೂ ಗ್ರೇಟ್ ಅಮೆರಿಕನ್ ನಾವೆಲ್ . ಈ ಕಾದಂಬರಿಯ ಕುರಿತು ಈ ಬಾರಿಯ ಅಂಕಣದಲ್ಲಿ ಕಾವ್ಯಾ ಕಡಮೆ ದಾಖಲಿಸಿದ್ದಾರೆ.
ದಾನಗಳಲ್ಲಿ ಮಹಾದಾನ…
“ಆಸ್ಪತ್ರೆಯಿಂದ ಅವರ ದೇಹವನ್ನು ಮನೆಗೆ ತಂದು, ಸಂಪ್ರದಾಯದ ಪ್ರಕಾರ ಎಲ್ಲಾ ಪದ್ಧತಿಗಳನ್ನು ಮತ್ತು ಕಾರ್ಯವನ್ನು ಮುಗಿಸಿ, ದೇಹವನ್ನು ಮಣ್ಣಿಗೆ ಇಡುವ ಬದಲು ಸಂಶೋಧನೆಗೆ ನೀಡಿದರು. ಮನಸ್ಸಿಗೆ ನೆಮ್ಮದಿ ಆಗುವ ಹಾಗೆ ಸಂಪ್ರದಾಯವೂ ಆಯಿತು, ಅವರ ದೇಹವನ್ನು ಸಂಶೋಧಿಸಿ ನೂರಾರು ವಿದ್ಯಾರ್ಥಿಗಳು ಮುಂದೆ ಸಾವಿರಾರು ಜೀವಗಳನ್ನು ಉಳಿಸಲು ಶಕ್ತರಾಗಲು ಸಹಾಯವೂ ಆಯ್ತು. ಒಂದು ದೇಹದ ಸಂಶೋಧನೆಯಿಂದ ಸಾವಿರಾರು ಜೀವಗಳನ್ನು…”
ಈ ಕಾಲದ ಒಂದಷ್ಟು ಯೋಚನೆಗಳು
ಈ ಸಾಂಕ್ರಾಮಿಕದ ಮೊದಲ ಅಲೆ ವ್ಯಾಪಕವಾಗಿರುವಾಗ ನಡೆದ ಬ್ರಿಟನ್ನಿನ ಸಂಶೋಧನೆಗಳಿಂದ ತಿಳಿದು ಬಂದ ಅಂಶವೇನೆಂದರೆ ಸೋಂಕಿತರಲ್ಲಿ ಭಾರತ ಉಪಖಂಡ ಮತ್ತು ಆಫ್ರಿಕಾ ಖಂಡಗಳಿಂದ ಬಂದಿರುವ ಜನರಲ್ಲಿ, ಈ ರೋಗ ಹೆಚ್ಚು ತೀವ್ರವಾಗಿರುತ್ತದೆ ಎನ್ನುವುದು ಮತ್ತು ಹೆಚ್ಚು ಪ್ರಾಣಹಾನಿಯನ್ನು ಮಾಡುತ್ತದೆ ಎನ್ನುವುದು. ಅಷ್ಟೇ ಅಲ್ಲ, ಭಾರತ ಉಪಖಂಡ ಮತ್ತು ಆಫ್ರಿಕಾ ಖಂಡಗಳಿಂದ ಬಂದ ಜನ ಹೆಚ್ಚಾಗಿ ನೆಲೆಸಿರುವ ಪ್ರದೇಶಗಳಲ್ಲಿ…”
ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್ ಪತ್ರ’
ಕೃತಿ ಆರ್ ಪುರಪ್ಪೇಮನೆ ಅಂಕಣ “ಯಕ್ಷಾರ್ಥ ಚಿಂತಾಮಣಿ” ಇಂದಿನಿಂದ…
‘ಮಧ್ಯಮವರ್ಗದ ವಿದ್ಯಾವಂತ ಮತ್ತು ನಗರಕ್ಕೆ ಮುಖ ಮಾಡಿ ನಿಂತ ಸಮುದಾಯ ಯಕ್ಷಗಾನಕ್ಕೆ ತೊಡಗಿಸಿಕೊಂಡಂತೆಲ್ಲಾ ಯಕ್ಷಗಾನದ ರಂಜನೆಯ ಸ್ವರೂಪ ಬೇರೆಯಾಗುತ್ತಾ ಬಂದಿದೆ. ಆಟವು ಕಲೆಯಾಗಿದ್ದು ಹೀಗೆಯೇ. ಅತಿಯಾದ ಹಾಸ್ಯವನ್ನು ಇಷ್ಟಪಡದ, ಪುರಾಣಕತೆಯಿಂದ ಒಂದೂ ಚೂರೂ ಆಚೆ ಈಚೆ ಹೋಗದಂತೆ ‘ಹಿತಮಿತ’ವಾದ ಮಾತು, ಪಾತ್ರದ ‘ಔಚಿತ್ಯ ಮೀರದ’ ಕುಣಿತ.’ ಮತ್ತು ಪಾತ್ರಗಳ ‘ಸರಿಯಾದ ಭಾವ’ವನ್ನು ಹೊರತರುವಂತಹ ಭಾಗವತಿಕೆ..
‘ನಂದು ಹ್ಯೂಮನಿಸಂ… ನಾನು ಎಲ್ರಿಗೂ ಕಾಫಿ ಕೊಡ್ಸಿ, ಕುಡೀರಿ ಅಂತೀನಿ…’
“ಒಮ್ಮೆ ಹೀಗೇ ಧುತ್ತನೆ ಎದುರಾದಿರಿ. ನಿಮ್ಮ ಕಣ್ಣುಗಳಲ್ಲಿ ಒಂದಿಷ್ಟು ಮುಜುಗರ ಇರುತ್ತದೆ ಎಂದು ನಿಮ್ಮ ಕಣ್ಣುಗಳನ್ನೇ ನೋಡಿದ್ದೆ. ನಿಮ್ಮನ್ನ ಕಾಣುವಾಗ ನಾನು ಕೊಂಚ ಅಳುಕಿದ್ದೆ ಅಷ್ಟೇ. ನೀವು ಆರಾಮಾಗೇ ಇದ್ದಿರಿ. ನನ್ನನ್ನ ಕಂಡಿದ್ದೇ ‘ಹೋ ಮಹೇಶ್ ಅವ್ರು.. ಬನ್ನಿ ಕಾಫಿ ಕುಡಿಯೋಣ..’ ಅಂತ ಕರೆದುಕೊಂಡು ಕಲಾಕ್ಷೇತ್ರದ ಹಿಂಬದಿಯ ಕ್ಯಾಂಟಿನ್ ಗೆ ನಡೆದಿರಿ. ನಗುನಗುತ್ತ ಮಾತಾಡಿದಿರಿ. ನನ್ನ ವಿಮರ್ಶೆ ಮಲಗಿತ್ತು ಎನ್ನುವುದು ನನಗೆ ಅವತ್ತೇ ಗೊತ್ತಾಗಿದ್ದು.
ಎನ್.ಸಿ. ಮಹೇಶ್ ಬರೆದ ‘ರಂಗ ವಠಾರ’ ಅಂಕಣ









