ಅಗರ್ತಲಾದ ಬೀದಿಗಳಲ್ಲಿ ಸುತ್ತಾಡಿದ ನೆನಪುಗಳು: ರೂಪಶ್ರೀ ಕಲ್ಲಿಗನೂರ್ ಅಂಕಣ
“ತ್ರಿಪುರಾ ವಿಶ್ವವಿದ್ಯಾಲಯದಿಂದ ನೀರ್ ಮಹಲ್ ಮೂವತ್ತು ಕಿಲೋಮೀಟರುಗಳಷ್ಟು ದೂರವಿತ್ತು. ಹಾದಿಯುದ್ದಕ್ಕೂ ಅಲ್ಲಲ್ಲಿ ಹಸುರು ಗದ್ದೆಗಳು, ಕೈಕಾಲು ಮುರಿದುಕೊಂಡು ಬೀದಿಗೆ ಬಿದ್ದ ಬಂಗಾಳಿ ದೇವತೆಯರು, ಮೆಟಲ್ ಶೀಟಿನ ಅಂಗಡಿಗಳು, ಮನೆಗಳು, ಕಾಡು ಕಡಿದು ಎದೆಯುಬ್ಬಿಸಿಕೊಂಡು ಎದ್ದು ನಿಂತಿದ್ದ ರಬ್ಬರ್ ತೋಟಗಳು ಸಿಕ್ಕವು. ಪ್ರವಾಸಿಗರ ಕೊರತೆಯಿಂದ ಹಾಗೂ ಬಡತನದ ಹೊಡೆತದಿಂದ ಅಗರ್ತಲಾ…”
ಕನ್ನಡದಲ್ಲಿ ಡಾರ್ಕ್ ಹ್ಯೂಮರ್ ಪ್ರಯೋಗ: ಶ್ರೀಹರ್ಷ ಸಾಲಿಮಠ ಅಂಕಣ
“ಡಾರ್ಕ್ ಹ್ಯೂಮರ್ ನಮ್ಮ ಸಮಾಜದಲ್ಲಿ ಬೆಳೆಯದಿರುವುದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದು ಮೇಲ್ ಸಮುದಾಯದ ಜನರು ಡಾರ್ಕ್ ಹ್ಯೂಮರ್ ಅನ್ನು ಸಹಿಸಿಕೊಳ್ಳುವಷ್ಟು ಹೃದಯ ವೈಶಾಲ್ಯ ಹೊಂದಿರದಿರುವುದು. ಎರಡನೆಯದು ಕೆಲ ಸಮುದಾಯಗಳು ಡಾರ್ಕ್ ಹ್ಯೂಮರ್ ತಡೆದುಕೊಳ್ಳುವಷ್ಟು ಸಾಮಾಜಿಕ ಬಲಿಷ್ಠತೆ ಪಡೆಯದಿರುವುದು. ಜಾತಿ, ಧರ್ಮ, ಲಿಂಗ, ಭೂಗೋಳ, ಸಮಾಜ, ವೇಷಭೂಷಣ..”
ಮನುಷ್ಯನ ಮನಸ್ಸಿನ ಏರಿಳಿತಗಳು: ವಿನತೆ ಶರ್ಮ ಅಂಕಣ
“ಈ ಯೋಚನೆಗಳಲ್ಲಿ ಮುಳುಗಿದ್ದಾಗ ಮರುದಿನ ಶುಕ್ರವಾರ ತಾಯಿಯೊಬ್ಬಳು ತನ್ನ ಒಂಭತ್ತು ವರ್ಷ ವಯಸ್ಸಿನ ಮಗನನ್ನು ರಕ್ಷಿಸಲು ಕೈಗೊಂಡ ಕ್ರಮದ ಸುದ್ದಿ ಬಂತು. ಅವಳು ನನ್ನ ಸ್ನೇಹಿತೆಯೊಬ್ಬಳ ಸ್ನೇಹಿತೆ, ನನಗೂ ಪರಿಚಿತೆ. ಅವಳ ಮಗನನ್ನೂ ನಾವು ನೋಡಿದ್ದಿತ್ತು. ಅವನು ಕುಬ್ಜತೆ ಎಂಬ ದೈಹಿಕ ಸ್ಥಿತಿಗೆ ಗುರಿಯಾಗಿ ಅವನ ವಯಸ್ಸಿನ ಬೇರೆ ಮಕ್ಕಳಂತೆ ಶಾರೀರಿಕ ಬೆಳವಣಿಗೆಯನ್ನು ಪಡೆದಿಲ್ಲ. ತಲೆ ದೊಡ್ಡದು, ದೇಹ ಕುಬ್ಜ ಎಂಬಂಥ ರೂಪವಿದೆ. ಜನರ ದೃಷ್ಟಿ ಅವನೆಡೆ ಹೊರಳಿದಾಗ ಅವನನ್ನು ಎರಡೆರಡು ಬಾರಿ ದಿಟ್ಟಿಸಿ ನೋಡುತ್ತಾರೆ.”
ಮೌನಕ್ಕೆ ಮೌನವೇ ಹೊರಬರುವ ಹಾದಿಯಾದಾಗ…: ಆಶಾಜಗದೀಶ್ ಅಂಕಣ
“ಒಬ್ಬ ಕವಿ ತಾನು ಪ್ರಪಂಚವನ್ನು ನೋಡಿ ಗ್ರಹಿಸಿದ್ದು ಒಂದು ಬಗೆಯ ಜ್ಞಾನವಾದರೆ ಪ್ರಪಂಚ ಅವನಿಗೆ ಅನಿವಾರ್ಯವಾಗಿ ಕಲಿಸಿದ ಅಥವಾ ನೀಡಿದ ಜ್ಞಾನ ಮತ್ತೊಂದೇ ಬಗೆಯದು. ಕವಿ ಇದೆರೆಡರ ಸಮಪಾಕದಲ್ಲಿ ಬೆಂದು ಬರೆದಾಗ ಕವಿತೆ ಯಾರನ್ನಾದರೂ ಮುಟ್ಟಿ ತಟ್ಟಬಲ್ಲದು. ಮತ್ತೆ ಗ್ರಹಿಕೆ ಯಾವ ಬಗೆಯದ್ದೇ ಇರಲಿ ನನ್ನ ಗ್ರಹಿಕೆ ಎನ್ನುವುದು ಬಹಳ ಸೀಮಿತ ಕ್ಷಿತಿಜ. ಅದನ್ನು ಸಾಮಾನ್ಯೀಕರಿಸುವ ಹೊತ್ತಿನಲ್ಲಿ ಒಂದು ಕಾಳಜಿ ಒಂದು ಜಾಗ್ರತೆ ಬೇಕೇಬೇಕಿರುತ್ತದೆ.”
ವಿಳಾಸದ ಅಂದದ ಬೆಡಂಗಿನ ಪೆಂಡಿರೇ ಪೆಂಡಿರಲ್ಲಿಯಾ: ಆರ್. ದಿಲೀಪ್ ಕುಮಾರ್ ಅಂಕಣ
“ಒಂದಷ್ಟು ಸೂಕ್ಷ್ಮವಾಗಿ ಗಮನಿಸಿದಾಗ ಪರಿಸರವನ್ನು ಕಟ್ಟಿಕೊಡುವ ಪಂಪನ ಕಲೆ ಬಹುಮುಖ್ಯವಾಗುತ್ತದೆ. ಯಾವುದೇ ರಸವೂ ಅದು ಸ್ಪಷ್ಟವಾಗಿ ಗ್ರಹಿಕೆಗೆ ಬರುವುದು ಅಲ್ಲಿನ ಪರಿಸರದ ಆಧಾರದ ಮೇಲೆ. ಇಲ್ಲಿ ಕತ್ತಲಾಗಿದೆ, ಪೆಂಡವಾಸದ ಮನೆಯ ಮುಂದೆ ಹೋಗುತ್ತಿದ್ದಾನೆ, ಮಬ್ಬು ಗತ್ತಲು, ಬಾಗಿಲ ಮುಂದೆ ಜಗುಲಿಗಳ ಮೇಲೆ ಕುಳಿತಿರುವವರು, ಅಲ್ಲಿನ ಬಣ್ಣ ಕಪ್ಪು ಮಿಶ್ರಣ ಹಸಿರು. ಹೀಗೆ ಒಂದು ಸಂದರ್ಭದ ಬಹುಮುಖ್ಯ ಅಂಶಗಳೇ ಗಮನ ಸೆಳೆದು ಬಿಡುತ್ತದೆ.”
ಧಾರವಾಡದ ದಿನಗಳ ನೆನೆಯುತ್ತಾ…: ಲಕ್ಷ್ಮಣ ವಿ.ಎ. ಅಂಕಣ
“ಎಲೆಯುದುರುವ ಕಾಲವಿದು. ರಾತ್ರಿ ಮೈಯ್ಯೆಲ್ಲ ಥರಗುಟ್ಟುವ ಚಳಿ. ಕಾಲಿಗೆ ಬರುವ ಹೊದಿಕೆ ತಲೆಗೆ ಬರುತ್ತಿರಲಿಲ್ಲ ತಲೆಗೆ ಬಂದದ್ದು ಕಾಲಿಗೆ ಬರುತ್ತಿರಲಿಲ್ಲ. ಅಷ್ಟೇ ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು ವಿಶೇಷವಾಗಿ ಚಳಿಗಾಲದಲ್ಲಿ ಹೀಗಾಗಿ ತಾಯ ಗರ್ಭದಲ್ಲಿ ಮಗು ಮಲಗಿರುತ್ತದಲ್ಲ ಎರಡು ಕಾಲು ಮಡಚಿ ತಲೆ ತಗ್ಗಿಸಿ ಅರ್ಧ ಬಿಲ್ಲಿನಾಕಾರಾದಲ್ಲಿ ಹಾಗೆ ಮಲಗುತ್ತಿದ್ದೆ, ಧಾರವಾಡದ ಸಪ್ತಾಪೂರದ ಮಿಚಿಗನ್ ಕಂಪೌಂಡಿನ ಸಿಂಗಲ್ ಔಟ್ ಹೌಸ್ ರೂಮಿನಲ್ಲಿ…”
ಬಡತನದ ಘನತೆ ಮತ್ತು ದಯೆ ಧರ್ಮದ ಮೂಲ:ಶ್ರೀಹರ್ಷ ಸಾಲಿಮಠ ಅಂಕಣ
“ಬಡತನ ಎನ್ನುವುದೊಂದೇ ದೊಡ್ಡ ಅಡ್ಡಗಾಲಲ್ಲ. ಅತಿ ದೊಡ್ಡ ತೊಡರುಗಾಲಿರುವುದು ಮನುಷ್ಯನ ಘನತೆಯದ್ದು! ಇಂಡಿಯಾದಂತಹ ದೇಶಗಳಲ್ಲಿ ಆರ್ಥಿಕವಾಗಿ ಒಂದೇ ದಾರ್ಢ್ಯವಿದ್ದರೂ ಸಾಮಾಜಿಕವಾಗಿ ಅಂತಸ್ತು ಬೇರೆ. ಅವು ವೃತ್ತಿಯಾಧಾರಿತವಾಗಿರಬಹುದು, ಜಾತಿಯಾಧಾರಿತವಾಗಿರಬಹುದು, ಧರ್ಮಾಧಾರಿತವಾಗಿರಬಹುದು…. ಆಸ್ಟ್ರೇಲಿಯದಂತಹ ದೇಶಗಳಲ್ಲಿ ಆರ್ಥಿಕವಾಗಿ ಮೇಲು ಕೆಳಗುಗಳಿದ್ದರೂ ಸಾಮಾಜಿಕ ಅಂತಸ್ತು ಒಂದೇ…”
ಶ್ರೀಸಾಮಾನ್ಯರ ಹಸಿರು ಕ್ರಾಂತಿ ಕಥೆಗಳು: ವಿನತೆ ಶರ್ಮಾ ಅಂಕಣ
“ಆಕೆಯ ಮನೆಯಂಗಳದ ಕೈತೋಟದಲ್ಲಿದ್ದ ಗಿಡಮರಗಳು, ಸುಮಾರು ಹದಿನೈದು ಗೊಬ್ಬರ ಡಬ್ಬಗಳು, ಬಕೆಟ್ಟುಗಳು, ಮೂರು ಗೊಬ್ಬರ ಹುಳುಗಳ ಕೇಂದ್ರಗಳು, ಒಂದು ದೊಡ್ಡ ಇಡೀ ಬಾತ್ ಟಬ್ಬನ್ನು ಗೊಬ್ಬರ ಹುಳು ಸಾಕಾಣಿಕೆ ಕೇಂದ್ರವನ್ನಾಗಿರಿಸಿದ ಪ್ರಯತ್ನ, ಮೂಲೆಯಲ್ಲಿದ್ದ ಕೋಳಿಸಾಕಾಣಿಕೆ ಕೇಂದ್ರ ಎಲ್ಲವನ್ನೂ ನೋಡಿ ಅಬ್ಬಾಬ್ಬಾ ಎಂದೆ. ನನ್ನನ್ನು ಬೆರಗಾಗಿಸಿದ ವಿಷಯವೆಂದರೆ ಆಕೆಯ ಈ ಎಲ್ಲಾ ಪ್ರಯತ್ನಗಳಲ್ಲಿ ತೊಂಭತ್ತು ಭಾಗಕ್ಕೆ ಯಾವುದೇ ಹಣ ಹೂಡಿಕೆಯಿಲ್ಲದಿದ್ದದ್ದು….”
ಸಾಮಾನ್ಯಮೇ ಬಗೆಯೆ ಭವತ್ ಕೇಶಪಾಶ ಪ್ರಪಂಚಂ: ಆರ್. ದಿಲೀಪ್ ಕುಮಾರ್ ಅಂಕಣ
“ಹೀಗೆ ಮಾಡಿದ ಪ್ರತಿಜ್ಞೆಯನ್ನ ಕೊನೆಗಾಣಿಸಿ ಯುದ್ಧರಂಗದಲ್ಲಿ ಅವನಾಡುವ ಮಾತು ಬಹಳ ಮುಖ್ಯವಾಗುತ್ತದೆ. ಅದರಲ್ಲಿಯೂ ದುಶ್ಯಾಸನನನ್ನು ಕೊಂದು ಅವಳ ಮುಡಿಯನ್ನು ಕಟ್ಟುವುದು, ಕಟ್ಟಿ ನೋಡಿ ನಗುವುದು ಇಲ್ಲಿನ ಬಹು ಮುಖ್ಯವಾದ ಭಾಗ. ಆ ಪದ್ಯವಂತೂ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಬಹು ಚರ್ಚಿತವಾಗಿದೆ. ಪಂಪನೇ ದ್ರೌಪತಿಯನ್ನು ಕಾರ್ಯ ಕಾರಣದ ಮೂಲ ಅಂಶವಾಗಿ ನಿಲ್ಲಿಸಿ ನೋಡಿರುವುದಕ್ಕೆ ಈ ಪದ್ಯ ಸಾಕ್ಷಿಯಾಗಿದೆ…”










