Advertisement

ಅಂಕಣ

ಶಹರದ ಗೋಡೆಗಳ ಕೆಡವುದು ಹೇಗೆ?: ರೂಪಶ್ರೀ ಕಲ್ಲಿಗನೂರ್ ಅಂಕಣ

ಶಹರದ ಗೋಡೆಗಳ ಕೆಡವುದು ಹೇಗೆ?: ರೂಪಶ್ರೀ ಕಲ್ಲಿಗನೂರ್ ಅಂಕಣ

“ಅವೆಲ್ಲ ಅಮ್ಮ ಬೆಳೆಸಿದ ಹೂಗಳು. ಮನೆಯ ಮುಂದೆ ಹೂ ಬೆಳೆಸಲು ಜಾಗವೂ ಇಲ್ಲ, ಹಿಡಿ ಮಣ್ಣೂ ಇಲ್ಲ. ಹಾಗಂತ ಅಮ್ಮ ಸುಮ್ಮನಿರೋಲ್ಲ. ಬೇರೆಯವರ ಟೆರೆಸ್ಸಿನ ಮೇಲೇ, ತನ್ನ ಗಾರ್ಡನ್ನನ್ನು ಬೆಳೆಸುತ್ತಿದ್ದಾರೆ. ಮನೆಯಹಾಗೆ ಇಷ್ಟಗಲ ಮೊಗವರಳಿಸಿಕೊಂಡು ನಿಲ್ಲುವ ಒಂದೊಂದೂ ಹೂಗಳನ್ನ ಅವಳು ಪ್ರೀತಿಯಿಂದ ನೋಡ್ತಾರೆ. ಮನೆಗೆ ಹೋದವರ ಮುಂದೆಲ್ಲ ಅದರ ಅಂದಚಂದದ ಗುಣಗಾನ ಮಾಡ್ತಾ, ಅಕಸ್ಮಾತ್ ಯಾರಾದ್ರೂ ಹೇಳದೇ ಕೇಳದೇ ಹೂಗಳನ್ನ ಕಿತ್ತುಬಿಟ್ರೆ ಮುಗೀತು…”

read more
ಕಚ್ಚಾ ಹಾಳೆಯಂತಹ ನನ್ನ ಊರು: ಲಕ್ಷ್ಮಣ ವಿ.ಎ. ಅಂಕಣ

ಕಚ್ಚಾ ಹಾಳೆಯಂತಹ ನನ್ನ ಊರು: ಲಕ್ಷ್ಮಣ ವಿ.ಎ. ಅಂಕಣ

“ಉತ್ತರ ದಿಕ್ಕಿನ ಅಂಗಳದ ಎಡಭಾಗದಲ್ಲಿ ಎರಡು ಹಿಂಡುವ ಎಮ್ಮೆ ಮತ್ತು ಇನ್ನೊಂದು ವಯಸ್ಸಾದ ಮುರುಕುಕೋಡಿನ ಗೊಡ್ಡೆಮ್ಮೆ. ದಕ್ಷಿಣದ ಬಾಗಿಲಿನ ಹಿತ್ತಲಿನಲ್ಲಿ ಜೋಳದ ದಂಟಿನಿಂದ ಮರೆಮಾಚಿದ ಸ್ನಾನಕ್ಕೆಂದು ಮರೆಮಾಡಿದ ಎರಡಗಲದ ಒಂದು ಜಾಗ, ಸ್ನಾನದ ನೀರು ಹೋಗಿ ಇಂಗುವಲ್ಲಿ ತಿಪ್ಪೆ, ಆ ತಿಪ್ಪೆಯಲ್ಲಿ ಎಮ್ಮೆ ಆಡುಗಳ ಯಥೇಚ್ಛ ಗೊಬ್ಬರ ಇಂತಹ ಊರಿನಲ್ಲಿ ಬಹುಬೇಗ ಬೆಳೆಯುವಂತವು ಒಂದು ತಿಪ್ಪೆಗಳು ಮತ್ತು ಇನ್ನೊಂದು ಮೈ ನೆರೆದ ಹುಡುಗಿಯರು…”

read more
ಕಪ್ಪೆಚಿಪ್ಪಿನೊಳಗೆ ಮುತ್ತಾದ ಸೋನೆಮಳೆ…: ಆಶಾ ಜಗದೀಶ್ ಅಂಕಣ

ಕಪ್ಪೆಚಿಪ್ಪಿನೊಳಗೆ ಮುತ್ತಾದ ಸೋನೆಮಳೆ…: ಆಶಾ ಜಗದೀಶ್ ಅಂಕಣ

“ಇದ್ದಕ್ಕಿದ್ದಂತೆ ಅವನೆದುರು ಮತ್ತೊಂದು ಹುಡುಗ ಧುತ್ತೆಂದು ಪ್ರತ್ಯಕ್ಷನಾಗುತ್ತಾನೆ. ಅವನ ಕೈಲಿ ಅರಳಿದ ಛತ್ರಿಯಿದೆ. ಆದರವನು ಇವನ ಅಪ್ಪನಿಗೆ ಆಗದವರ ಮಗ. ಇವನು ಇನ್ನೇನು ಸುಮ್ಮನೇ ಅವನನ್ನು ಹಾದು ಹೋಗಬೇಕು… ಅಷ್ಟರೊಳಗೆ ಅವನು ಇವನ ಬಳಿ ಬರುತ್ತಾನೆ. ಇಬ್ಬರೂ ಒಂದೇ ಛತ್ರಿಯಡಿ ನಡೆಯತೊಡಗುತ್ತಾರೆ. ಇಬ್ಬರ ನಡುವೆಯೂ ಮಾತೊಂದಿಲ್ಲ. ಮಳೆ ಸುರಿಯುತ್ತಲೇ ಇದೆ. ನಾಯಿ ಮರಿಗೆ ಒರಗಿಸಿಕೊಳ್ಳುವ ಎದೆ ಸಿಕ್ಕ ಸಂಭ್ರಮ…”

read more
ರೇಖಕ್ಕ ಕಲಿಸಿದ ಮಗ್ಗಿಯ ಲೆಕ್ಕ: ಶ್ರೀಹರ್ಷ ಸಾಲಿಮಠ ಅಂಕಣ

ರೇಖಕ್ಕ ಕಲಿಸಿದ ಮಗ್ಗಿಯ ಲೆಕ್ಕ: ಶ್ರೀಹರ್ಷ ಸಾಲಿಮಠ ಅಂಕಣ

“ನನ್ನ ಮಗ್ಗಿಯ ಪಾಠ ಇಪ್ಪತ್ನಾಲ್ಕನ್ನೂ ಮುಟ್ಟಲಿಲ್ಲ! ಅದೆಷ್ಟು ತಿಂಗಳು ಹೀಗೆ ಆಕೆಯ ಹಿಂಬಾಲಿಸಿ ಕಳೆದಿದ್ದೆನೋ ನನಗೆ ನೆನಪಿಲ್ಲ. ಆದರೆ ನಾವು ಮನೆ ಬದಲಿಸಲಾಗಿ ಮತ್ತೆಂದೂ ರೇಖಿಯ ಭೇಟಿಯಾಗಲಿಲ್ಲ. ಈಗಲೂ ಒಮ್ಮೊಮ್ಮೆ ರೇಖಿಯಂತಹ ಪ್ರತಿಭಾವಂತೆಯ ಬಳಿ ಪಾಠ ಹೇಳಿಸಿಕೊಂಡಿದ್ದಕ್ಕೆ ಆಗಾಗ ಹೆಮ್ಮೆಯೆನಿಸುತ್ತದೆ. ಆಗ ಆಕೆ ಬದುಕಿದ್ದ ಕುಟುಂಬದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಲೆಕ್ಕ ಹಾಕಿದರೆ ಬಹುಷಃ ಹೆಚ್ಚು ಓದಿ ಕಡಿದು ಗುಡ್ಡೆ ಹಾಕಿರಲಿಕ್ಕೆ ಆಕೆಯ ಮನೆಯವರು ಬಿಟ್ಟಿರಲಿಕ್ಕಿಲ್ಲ.”

read more
ಹೊರಾಂಗಣ ಕಲಿಕೆ ಮತ್ತು ಹೆಣ್ಣಿನ ಒಳದನಿ: ವಿನತೆ ಶರ್ಮಾ ಅಂಕಣ

ಹೊರಾಂಗಣ ಕಲಿಕೆ ಮತ್ತು ಹೆಣ್ಣಿನ ಒಳದನಿ: ವಿನತೆ ಶರ್ಮಾ ಅಂಕಣ

“ಕೇವಲ ಹೊರಾಂಗಣ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕಾರಣದಿಂದಲೇ ಅದೆಷ್ಟೋ ಹೆಂಗಸರ ಗಂಡು ಜೀವನಸಂಗಾತಿಗಳು ಅವರನ್ನು ಬಿಟ್ಟುಹೋದದ್ದಿದೆ. ತಾಯಂದಿರು ತಮ್ಮ ಹೆಣ್ಣುಮಕ್ಕಳಿಗೆ ಧೈರ್ಯವನ್ನು ತುಂಬಿ ಆತ್ಮಸ್ಥೈರ್ಯವನ್ನು ಹೆಚ್ಚಿಸಿದ ಕಥೆಗಳಿವೆ. ತಮ್ಮ ಖಾಸಗಿ ಜೀವನದಲ್ಲಿನ ತಮ್ಮ ಸ್ವಲಿಂಗ ಸಂಬಂಧ ಆಯ್ಕೆಯಿಂದಾಗಿ ಕೆಲವರು ಕೆಲಸದ ಸ್ಥಳದಲ್ಲಿ ತಾರತಮ್ಯಕ್ಕೊಳಗಾಗಿ, ಬೆರಳು ತೋರಿಸುವ ಮಂದಿಯ ಕೈಯಲ್ಲಿ ಅನಿಸಿಕೊಂಡು ತಮ್ಮ ವೃತ್ತಿಜೀವನದಲ್ಲಿ ಅದೆಷ್ಟು ನರಳಿದ್ದಾರೆ…”

read more
ಅಲರ್ಗಣ್ಣೊಳ್ ಸ್ಮರಂ ಇರ್ದನಕ್ಕುಂ: ಆರ್.ದಿಲೀಪ್ ಕುಮಾರ್ ಅಂಕಣ

ಅಲರ್ಗಣ್ಣೊಳ್ ಸ್ಮರಂ ಇರ್ದನಕ್ಕುಂ: ಆರ್.ದಿಲೀಪ್ ಕುಮಾರ್ ಅಂಕಣ

“ದ್ರೌಪತಿಯನ್ನು, ಸುಭದ್ರೆಯನ್ನು, ಹಿಡಿಂಬೆಯೊಂದಿಗೆ ಭೀಮನ ಸಂಬಂಧವನ್ನು ವರ್ಣಿಸುವಾಗ ಇದ್ದ ಒಂದು ಮಿತಿ ಇಲ್ಲಿ ಮೀರಿದೆ. ಕಾವ್ಯ ಸಂವಿಧಾನ ಮತ್ತು ಕಾವ್ಯದ ಬಂಧ ಅದನ್ನು ಒಪ್ಪುತ್ತದೆ. ಸುಭದ್ರೆಯನ್ನು ನೋಡಿದ ತಾಪ ಪರಿಹಾರಕ್ಕೆ ಅಂದಿನ ರಾತ್ರಿಯೇ ಅರ್ಜುನ ಊರು ಸುತ್ತುವುದು ಇಲ್ಲಿನ ಮುಖ್ಯ ಭಾಗ. ಆದರೆ ಹೋಗುವಾಗ ಅವನಿಗಷ್ಟೇ ಕಾಣುವ ವೇಶ್ಯೆಯರನ್ನು ತೋರಿಸದೆ ಓದುಗರಿಗೂ ಕಾಣಿಸುವಂತೆ ಮಾಡುವುದನ್ನು ನೋಡಿ ಪಂಪನ ರಸಿಕತೆಗೆ…”

read more
ಕಾಯುವುದಿಲ್ಲ ಕವಿತೆಗೆ ಯಾರೂ ಕವಿಯೊಬ್ಬನಲ್ಲದೆ…: ಲಕ್ಷ್ಮಣ ವಿ.ಎ. ಅಂಕಣ

ಕಾಯುವುದಿಲ್ಲ ಕವಿತೆಗೆ ಯಾರೂ ಕವಿಯೊಬ್ಬನಲ್ಲದೆ…: ಲಕ್ಷ್ಮಣ ವಿ.ಎ. ಅಂಕಣ

“ಮೊನ್ನೆ ಮೊನ್ನೆ ನಮ್ ರಸ ಋಷಿ ಕುವೆಂಪು ಅವರ ಜನ್ಮ ಶತಮಾನೋತ್ಸವ ಇದ್ದಾಗ ರವೀಂದ್ರ ಕಲಾಕ್ಷೇತ್ರದಾಗ ಒಂದ ಕವಿಗೋಷ್ಠಿ ಇಟ್ಟಿದ್ರು. ನಾಡಿನ ಎಲ್ಲ ಯುವಕವಿಗಳೂ ದಂಡಿ ದಂಡಿಯಾಗಿ ಬಂದಿದ್ರು… ಆದರೆ ಕೇಳೋ ಕಿವಿಗಳು ಅಲ್ಲೊಂದು ಇಲ್ಲೊಂದು…. ಎಲ್ಲಾರೂ ತಮ್ಮ ತಮ್ಮ ಕವಿತೆ ಓದಿದ ಮ್ಯಾಲ ಶಾಲು ಸನ್ಮಾನ ಮಾಡಿಸ್ಕೊಂಡು ಸಿಟಿ ಮಾರ್ಕೆಟಿಗೆ ಸಂತಿ ಮಾಡ್ಲಿಕ್ಕ ಹೋಗಬೇಕ!? ಕೊನೆಗೆ ವೇದಿಕೆ ಮೇಲೆ ಉಳಿದವರು ಕವಿಗೋಷ್ಠಿ ಅಧ್ಯಕ್ಷರು ಮತ್ತು ನಿರೂಪಕರು.”

read more
ಅಳುವ ಕಂದನಿಗಾಗಿ.. ಅತ್ತಿತ್ತ ನೋಡುತ್ತಾ…: ಶ್ರೀಹರ್ಷ ಅಂಕಣ

ಅಳುವ ಕಂದನಿಗಾಗಿ.. ಅತ್ತಿತ್ತ ನೋಡುತ್ತಾ…: ಶ್ರೀಹರ್ಷ ಅಂಕಣ

“ಕ್ಯಾಪಿಟಲಿಸಂನ ಕೀಲುಗೊಂಬೆಗಳಾಗಿ ಬದುಕುತ್ತಿರುವ ಜನರಿಗೆ ವಿಕಾಸವಾದವನ್ನು ಯೊಚಿಸುವ ವ್ಯವಧಾನವೆಲ್ಲಿದೆ? ತಾವೇ ಕಟ್ಟಿಕೊಂಡ ಸಮಾಜದ ಸರಳುಗಳೊಳಗೆ ಬಂಧಿಯಾಗಿ ಒದ್ದಾಡುತ್ತಿರುವ, ಹುಚ್ಚು ಓಟದೊಳಗೆ ನಮ್ಮನ್ನು ನಾವೇ ಕಳೆದುಕೊಂಡ ನತದೃಷ್ಟ ಪೀಳಿಗೆ ನಮ್ಮದು! ಹಣ ಸಂಪಾದಿಸಲು ಬಂಜೆತನ ತಂದುಕೊಳ್ಳುವುದು, ಕಳೆದುಹೋದ ಫಲವತ್ತತೆಯನ್ನು ಕೊಂಡುಕೊಳ್ಳಲು ಮತ್ತೆ ಅದೇ ಹಣ ಖರ್ಚು ಮಾಡುವುದು! ಎಷ್ಟು ಸೂಕ್ಷ್ಮವಾಗಿ ನಮ್ಮನ್ನು ಈ ಬಂಡವಾಳಶಾಹಿ ವ್ಯವಸ್ಥೆಯು ಯಾವ ಗುರಿಯೂ ಇಲ್ಲದಂತೆ ಓಡುವಂತೆ ಮಾಡುತ್ತದೆ.”

read more
ಕಥಾಲೋಕದ ‘ಹೊಸನೀರು…’. : ಆಶಾ ಜಗದೀಶ್ ಅಂಕಣ

ಕಥಾಲೋಕದ ‘ಹೊಸನೀರು…’. : ಆಶಾ ಜಗದೀಶ್ ಅಂಕಣ

“ಮನೆಯಲ್ಲಿ ಹಿಡಿ ಕೂದಲಿಲ್ಲ! ಸೌಕಾತಿ ಚವರಿ ಮಾಡಿ ಕೊಡಲು ಹೇಳಿದ್ದಾಳೆ ಬೇರೆ, ಅಂಥವಳಿಗೆ ಮಾಡಿಕೊಟ್ಟರೆ ನಾಲ್ಕು ಕಾಸು ಹೆಚ್ಚಿಗೆ ಸಿಕ್ಕಿತು ಎನ್ನುವ ಆಸೆ ಇವಳಿಗೆ. ಇಂತಹ ಸಂದಿಗ್ಧದಲ್ಲಿ ಅವಳಿಗೆ ಕಾಣಿಸುವ ಒಂದೇ ದಾರಿ ಎಂದರೆ ತನ್ನದೇ ಸೊಂಪು ಕೂದಲನ್ನು ಕತ್ತರಿಸಿ ಚವರಿ ಮಾಡಿಕೊಡುವುದು. ಹಸುವಿಗೆ ಹೆಸರುವಾಸಿ ದುಗ್ಗಿ ಕೊನೆಗೆ ಅದನ್ನೇ ಮಾಡುತ್ತಾಳೆ. ಇದು ತಿಳಿಯದ ಆ ಸೌಕಾತಿ ಚವರಿಯನ್ನು ಮೆಚ್ಚಿ ತಲೆಗೆ ಹಚ್ಚಿಕೊಂಡು…”

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ