Advertisement
ಗೀತಾ ಹೆಗಡೆ ಬರೆದ ಈ ದಿನದ ಕವಿತೆ

ಗೀತಾ ಹೆಗಡೆ ಬರೆದ ಈ ದಿನದ ಕವಿತೆ

ವ್ಯಕ್ತಮಧ್ಯ

ಅವರವರ ಅಂತರಿಕ್ಷದಲಿ
ವಿಕಲ್ಪವೃಕ್ಷದ ಕಣೆಗೆ ನೇತು
ಹಾಕಿದ-
ತೂಗುತೊಟ್ಟಿಲು

ಅಂತಿಂಥ ಅಂತರ್ಮುಖಿಯಲ್ಲ
ನಿಂತ ಜೋಕಾಲಿ;
ಯಾರಾದರೊಬ್ಬರು ತಳ ಊರುವವರೆಗೆ-
ಸರದಿಯಲ್ಲಿ

ಬಿಚ್ಚುಗೈಯಿಂದ ಒಂದು ಮೀಟು
ನೆಲ ಸರಿದರೆ ಒಂದು ದಾಟು
ಭೂಮ್ಯಾಕಾಶಕೆ ಅಲೆಯುವಂತೆ-
ಜೀಕು..ಜೀಕು..
ಜೀಕು!

ಹಿಂದಿನದೆಲ್ಲವ ಬಿಟ್ಟೇ-
ಬಿಡುವ ಸ್ವಗತ;
ಮುಂದಿನದೆಲ್ಲವ ಮುಟ್ಟೇ-
ಬಿಡುವ ಎನುತ

ಪ್ರತಿ ಜೀಕಿಗೆ ಪ್ರಗತಿ-
ಯ ಶ್ರುತಿ ಭಾವಿಸುತ
ಅಲ್ಲಲ್ಲೇ ವಿಸ್ತಾರ- ಕೆರೆ-
ಗೆಸೆದ ಕಲ್ಲು!

ಲೋಲಕದ ಗಿರಕಿಗಳ
ಅಣಕಿಸುತ ಜೋಕಾಲಿ
ಲಂಬ ಲಂಬಿಸುತ
ಊರ್ಧ್ವಕೇರಿಸುತ.. ಗಡಿ-
ಯಾರದಾಗಿರಲಿ
ಪರಿಧಿಯೊಂದಿದೆಯಲ್ಲಿ..!

ಕ್ಷಣ-ಕ್ಷಣಕೂ ಜರುಗುವ
ಕೇಂದ್ರಬಿಂದುವಿನಹವಾಲು
ಮೂಲಾಧಾರಕೆ
ಸೇರಲು ತವಕಿಸುವ ಅತಿಮಂದ್ರ-
ನಾದವೊಂದು
ಇಹದಲ್ಲೆ ಪರಮಪದ
ಶೋಧಿಸಲು
ಅಣುಗಾಲ
ಗಾಳಿಗೊಡ್ಡಿದ
ಅಹಮಿಕೆಯ ಕಂದೀಲು.

ಆದಿ ಅಜ್ಞಾತ
ಅನುವಾದಿ ಉಪೋದ್ಘಾತ
ವ್ಯಕ್ತಮಧ್ಯದಿ
ಜೀಕುಬಿದ್ದಿದೆ
ಜೋಕಾಲಿ-
ಅವ್ಯಾಹತ..

About The Author

ಗೀತಾ ಹೆಗಡೆ, ದೊಡ್ಮನೆ

ಕವಯತ್ರಿ, ಲೇಖಕಿ ಗೀತಾ ಹೆಗಡೆಯವರಿಗೆ ಸಂಗೀತ ಮತ್ತು ಪ್ರಕೃತಿಯಲ್ಲಿ ಆಸಕ್ತಿ. ‘ಅಕ್ಷರ ಚೈತನ್ಯ’ ಇವರ ಪ್ರಕಟಿತ ಕೃತಿ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ