Advertisement

ಪ್ರವಾಸ

ಆನೆಗಳ ಅನಾಥಾಶ್ರಮದಲ್ಲಿ ಮಂಡೋದರಿಯ ನೆನಪಾಯಿತು

ಆನೆಗಳ ಅನಾಥಾಶ್ರಮದಲ್ಲಿ ಮಂಡೋದರಿಯ ನೆನಪಾಯಿತು

ರಾಜೀವ್ ಗಾಂಧಿಯ ನಡೆಯನ್ನು ಕಂಡ ಈ ನೆಲದ ಜನರಿಗೆ ಭಾರತದ ವಿಸ್ತಾರತೆಯ ಬಗ್ಗೆ ಆಸ್ಥೆ ಏನಿಲ್ಲ, ಬೆಂಗಳೂರು ಗೊತ್ತಿಲ್ಲ ಮತ್ತು ಚೆನ್ನೈ ತಮ್ಮದು ಎನ್ನುವುದನ್ನು ಬಿಟ್ಟಿಲ್ಲ. ಎಲ್‌ಟಿಟಿಈ ಜೊತೆ ಸಂಬಂಧ ಇತ್ತು ಎಂದು ನ್ಯಾಯಾಲಯದಲ್ಲಿ ಪ್ರಕರಣ ಎದುರಿಸುತ್ತಿರುವವರು ಸಂಸದರಾಗಿದ್ದಾರೆ ಎಂದರೆ ನಾವೆಲ್ಲರೂ ಒಂದೇ ಎಂದು ಹಾಡಿಕೊಳ್ಳಲು ಅಡ್ಡಿಯಿಲ್ಲ ಎನ್ನಿಸಿತು. ನಮ್ಮಲ್ಲಿ ಸಿಗುವ ನಾಗಣ್ಣ ಸ್ಟೋರ್ಸ್, ಮಲ್ಲಪ್ಪನ ಅಂಗಡಿ ವಗೈರೆಗಳಂತೆ ಅಲ್ಲಿಯೂ ಗಲ್ಲಿಗಲ್ಲಿಗಳಲ್ಲಿ ಹೇರಳವಾಗಿ ಸಿಗುತ್ತವೆ ಕಾಕಾ ಅಂಗಡಿಗಳು ಮತ್ತು ಮ್ಯಾಗಿ ಮ್ಯಾಗಿ ಮ್ಯಾಗಿ ಟು ಮಿನಿಟ್ಸ್‌ನಲ್ಲೇ ಸಿಗುತ್ತವೆ. ಅಂಜಲಿ ರಾಮಣ್ಣ ಅವರ ಪ್ರವಾಸ ಕಥನ.

read more
ವಾಟರ್ ಸ್ಟೋನ್ಸ್ ಪುಸ್ತಕ ಮಳಿಗೆಯೆಂಬ ಜಾಗತಿಕ ಕಿಟಕಿ

ವಾಟರ್ ಸ್ಟೋನ್ಸ್ ಪುಸ್ತಕ ಮಳಿಗೆಯೆಂಬ ಜಾಗತಿಕ ಕಿಟಕಿ

ಎಲ್ಲಿಯೇ ಹೋದರೂ ಅಲ್ಲಿನ ನ್ಯೂಸ್‌ಪೇಪರ್ಗಳ ಬಗ್ಗೆ ತಿಳಿದುಕೊಂಡು ಅವುಗಳನ್ನು ನೋಡುವುದು, ಪುಸ್ತಕ ಮಾರಾಟ ಮಳಿಗೆಗಳಿಗೆ ಭೇಟಿ ನೀಡುವುದು ಮತ್ತೊಂದು ಇಷ್ಟದ ಕೆಲಸ. ಈ ಬಾರಿ ಹಾಗೆ ಹೋಗಿದ್ದು ಲಂಡನ್‌ನ ಹೃದಯ ಭಾಗದಲ್ಲಿ ಪಿಕಡೆಲಿ ರಸ್ತೆಯಲ್ಲಿ ‘ವಾಟರ್‌ಸ್ಟೋನ್ಸ್’ ಎನ್ನುವ ಹೆಸರು ಹೊತ್ತು, ವರ್ಷ ಒಂದಕ್ಕೆ ಎಪ್ಪತ್ತೆರಡು ಸಾವಿರ ಪುಸ್ತಕಗಳನ್ನು ಮಾರಾಟ ಮಾಡುತ್ತಾ ಸರಸ್ವತಿ ಪ್ರತಿಮೆಯಂತೆ ಕಂಗೊಳಿಸುತ್ತಿರುವ ಪುಸ್ತಕ ಸ್ವರ್ಗಕ್ಕೆ.
ಅಂಜಲಿ ರಾಮಣ್ಣ ಅವರ ಪ್ರವಾಸ ಕಥನ.

read more
ಮಂಜಿನೂರಿನಲ್ಲಿ ಹಿಮಸಾರಂಗದ ಸ್ನೇಹ

ಮಂಜಿನೂರಿನಲ್ಲಿ ಹಿಮಸಾರಂಗದ ಸ್ನೇಹ

ಶರತ್ಕಾಲದ ಪ್ರಾರಂಭದಲ್ಲಿ ಹಿಮಸಾರಂಗಗಳನ್ನು ಮತ್ತೆ ಫಾರ್ಮ್ ಹೌಸ್ ಗೆ ತರಲು ಹೇಗೆ ಪತ್ತೆ ಹಚ್ಚಲಾಗುತ್ತದೆ ಎನ್ನುವುದನ್ನೆಲ್ಲಾ ವಿವರಿಸುತ್ತಾರೆ. ಇದೂ ಒಂದು ಕೌತುಕದ ಸಂಗತಿ. ನಾವು ಸೊಳ್ಳೆ ಕಂಡರೆ ಹೊಡೆದು ಅಥವಾ ಸೊಳ್ಳೆ ಬತ್ತಿ ಹಾಕಿ ಸಾಯಿಸುತ್ತೇವೆ. ಆದರೆ ಬೇಸಿಗೆಯ ಅತಿಯಾದ ಸೊಳ್ಳೆ ಕಾಟ ಇವರಿಗೆ ವರದಾನವಾಗಿದೆ. ಸೊಳ್ಳೆಯ ಕಾಟ ಎಷ್ಟಿರುತ್ತದೆ ಎಂದರೆ, ಸೊಳ್ಳೆಯ ಕಾಟದಿಂದ ತಪ್ಪಿಸಿಕೊಳ್ಳಲು ಹಿಮಸಾರಂಗಗಳು ಹಿಂಡು ಹಿಂಡಾಗಿ ಗುಂಪಿನಲ್ಲಿ ಚಲಿಸುತ್ತವೆ.
‘ದೂರದ ಹಸಿರು’ ಸರಣಿಯಲ್ಲಿ ಗುರುದತ್‌ ಅಮೃತಾಪುರ ಬರಹ

read more
ಇಲ್ಲಿಂದಲೇ ಪಾಂಡವರು ಸ್ವರ್ಗಾರೋಹಣ ಮಾಡಿದರು

ಇಲ್ಲಿಂದಲೇ ಪಾಂಡವರು ಸ್ವರ್ಗಾರೋಹಣ ಮಾಡಿದರು

ಸರಸ್ವತಿ ನದಿ ಕಣ್ಣಿಗೆ ಕಾಣಸಿಗುವುದು ಇಲ್ಲಿ ಮಾತ್ರ ಮತ್ತು ಶ್ವೇತಶುಭ್ರವಾಗಿ, ರಭಸದಲ್ಲಿ ಹರಿಯುತ್ತಿದ್ದಾಳೆ. ಜ್ಞಾನದಾಯಿನಿ ಸರಸ್ವತಿ ಮಾತೆಗಿಲ್ಲೊಂದು ಅಪರೂಪದ ಮಂದಿರವಿದೆ. ಅಲ್ಲೇ ಅದರೆದುರೇ ಕಾಣುವ ಒಂದು ಹೆಬ್ಬೆರಳು ಗಾತ್ರದ ನೀರಿನ ಝರಿಯು ಮಾನಸ ಸರೋವರದಿಂದ ಬರುತ್ತಿದೆ ಎಂದು ತೋರುತ್ತಾರೆ ಇಲ್ಲಿನ ಜನ. ಇಲ್ಲಿ ಸರಸ್ವತಿ ಹುಟ್ಟಿ, ಹೆಚ್ಚಿನ ಆರ್ಭಟದಿಂದ ಕುಣಿಕುಣಿದು ಹರಿಯುತ್ತಿದ್ದಳಂತೆ. ಮಹಾಭಾರತ ರಚನೆಯಲ್ಲಿ ಮಗ್ನರಾಗಿದ್ದ ವ್ಯಾಸರಿಗೆ ಇವಳ ಸದ್ದು ಕೋಪ ತರಿಸಿತಂತೆ. ಕಂಡಷ್ಟೂ ಪ್ರಪಂಚ ಅಂಕಣದಲ್ಲಿ ಅಂಜಲಿ ರಾಮಣ್ಣ ಅವರ ಪ್ರವಾಸ ಕಥನ.

read more
ಕರೆಂಟು ಬಂದರೆ ಆರೋಗ್ಯ ಹಾಳಾಗುತ್ತಾ?

ಕರೆಂಟು ಬಂದರೆ ಆರೋಗ್ಯ ಹಾಳಾಗುತ್ತಾ?

‘ಜಬ್ ವಿ ಮೆಟ್’ ಸಿನೆಮಾ ನೋಡಿದಾಗಲಿಂದ ಕೂಡ ಆ ಕರೀನ ಕಪೂರ್‌ಳ ಸ್ಟೈಲ್‌ನಲ್ಲೇ ಶಾಹಿದ್‌ನಂತಹ ಬೆಣ್ಣೆ ಹುಡುಗನೊಬ್ಬನ ಜೊತೆ ಒಂದು ರಾತ್ರಿ ಹಳ್ಳಿಯೊಂದರಲ್ಲಿ ಎಗ್ಸ್ಯಾಕ್ಟ್ಲೀ ಹಾಗೇ ಕಳೆಯಬೇಕೆನ್ನುವ ಬಯಕೆ ಉಂಟಾಗಿದ್ದದ್ದು ಸುಳ್ಳಲ್ಲ. ಅದೇ ಆಸೆಯಲ್ಲಿ ಹೊಕ್ಕೆ ರತ್ನಾಲ್ ಎನ್ನುವ ಹಳ್ಳಿಯೊಂದನ್ನು. ಕಚ್ ಎನ್ನುವ ಬಿಳಿ ಮರಳುಗಾಡಿನ ಪುಟ್ಟದಾದ ಚೊಕ್ಕವಾದ ಹಳ್ಳಿಯದು. ಆ ಬೆಳದಿಂಗಳಲ್ಲಿ ಸಿನೆಮಾದಲ್ಲಿ ಆಗೋ ಹಾಗೆ ಬೆಂಕಿಗೆ ಬೆಣ್ಣೆ ಕರಗಲೇ ಇಲ್ಲ ಕಾರಣ ನನ್ನ ವಾಚಾಳಿತನ!

read more
ರೊವಿನೇಮಿಯದಲ್ಲಿ ಸಾಂಟಾಕ್ಲಾಸ್ ಸಹವಾಸ

ರೊವಿನೇಮಿಯದಲ್ಲಿ ಸಾಂಟಾಕ್ಲಾಸ್ ಸಹವಾಸ

ಇಲ್ಲಿಂದ ಹಿರಿಯರು ಪೋಸ್ಟ್ ಮಾಡಿದ ಅಂಚೆ 2022ರ ಕ್ರಿಸ್ಮಸ್ ಹೊತ್ತಿಗೆ ಮಕ್ಕಳನ್ನು ತಲುಪುತ್ತೆ. ಆ ರೀತಿಯ ವ್ಯವಸ್ಥೆ ಇದೆ. ಎಲ್ಲ ಸ್ಟ್ಯಾಂಪ್ ಮೇಲೂ ಸಾಂಟಾ ಕ್ಲಾಸ್ ಇರುತ್ತಾನೆ. ನಾವು ಸಹ ಪೋಸ್ಟ್ ಕಾರ್ಡ್ ಪಡೆದು ನಮ್ಮ ಮನೆಗಳಿಗೆ ಪೋಸ್ಟ್ ಮಾಡಿದೆವು. ಇಲ್ಲಿಯ ಮತ್ತೊಂದು ವಿಶೇಷ ಎಂದರೆ ಪ್ರಪಂಚದಾದ್ಯಂತ ಮಕ್ಕಳು ಸಾಂಟಾ ಕ್ಲಾಸಿಗೆ ಕಳಿಸುವ ಅರಿಕೆಯ ಪತ್ರಗಳು ಇಲ್ಲಿ ಬಂದು ತಲುಪುತ್ತವೆ. ವರ್ಷಕ್ಕೆ ಸುಮಾರು ಐವತ್ತು ಲಕ್ಷ ಪತ್ರಗಳು! ಹಾಗಾಗಿ ರೊವಿನೇಮಿಯ ಸಾಂಟಾ ಕ್ಲಾಸ್ ವಿಲೇಜ್ ಕ್ರಿಸ್ಮಸ್ ತಾತನ ಅಧಿಕೃತ ಸ್ಥಳವಾಗಿದೆ.

read more
ಶಿವನೆನ್ನಿ…. ಶಂಕರನೆನ್ನಿ.. ಎಲ್ಲವೂ ಅವನೇ!

ಶಿವನೆನ್ನಿ…. ಶಂಕರನೆನ್ನಿ.. ಎಲ್ಲವೂ ಅವನೇ!

ಶಿವ ಪಾರ್ವತಿಯರು ಸಪ್ತಪದಿ ತುಳಿದುದರ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಅದೇ ಅಗ್ನಿಯನ್ನು ಅಂದಿನಿಂದ ಈ ಘಳಿಗೆಯವರೆಗೂ ಆರದಂತೆ ಕಾಯುತ್ತಿರುವ ಭಕ್ತರ ನಂಬಿಕೆ ಮತ್ತು ಕೈಂಕರ್ಯಗಳು ಹಾಗು ಅಲ್ಲಿ ಆವರಿಸಿಕೊಂಡಿದ್ದ ಮುಡಿವಾಳದ ಘಮ. ಅಲ್ಲಿಂದ ಮುಖ ಮಾಡಿದ್ದೆ ಕೇದಾರನಾಥನ ತಪ್ಪಲಿಗೆ. ಕಪರ್ದಿಯ ದರ್ಶನಕ್ಕೆ ಮೊದಲು ಭಕ್ತರನ್ನು ಮೀಯಿಸಿ ಶುಚಿಗೊಳಿಸುವ ಬಿಸಿನೀರಿನ ಬುಗ್ಗೆಯ ಗೌರಿಕುಂಡ ಈ ತಪ್ಪಲಿಗೆ ಆತುಕೊಂಡಿದೆ. ರಸ್ತೆ ಯಾನ ಕೊನೆಯಾಗುವುದು ಇಲ್ಲೇ.

read more
ಕೊಹಿಮಾದ ಟೆನ್ನಿಸ್ ಕೋರ್ಟ್ ನಲ್ಲಿ ಕಳೆದು ಹೋದವರ ಸ್ಮರಿಸುತ್ತ…

ಕೊಹಿಮಾದ ಟೆನ್ನಿಸ್ ಕೋರ್ಟ್ ನಲ್ಲಿ ಕಳೆದು ಹೋದವರ ಸ್ಮರಿಸುತ್ತ…

ನಾಗಾಲ್ಯಾಂಡ್ ಚಿಕ್ಕ ರಾಜ್ಯವದರೂ ಬಹು ವೈವಿದ್ಯಮಯ ನಾಡು. ಸುಮಾರು ೧೬ ವಿವಿಧ ಜನಾಂಗಗಳಿರುವ ಈ ರಾಜ್ಯದಲ್ಲಿ ಅನೇಕ ಭಾಷೆಗಳನ್ನು ಮಾತನಾಡುತ್ತಾರೆ. ಇಂಗ್ಲಿಷನ್ನು ಆಡಳಿತ ಭಾಷೆಯನ್ನಾಗಿ ಬಳಸುತ್ತಾರೆ. ನಾಗಾ ಜನಾಂಗಗಳ ಜೀವನ-ಸಂಸ್ಕೃತಿ ವರ್ಣ ರಂಜಿತ. ಅವರ ಉಡುಗೆ ತೊಡುಗೆಯಿಂದ ಹಿಡಿದು ಊಟದವರೆಗೂ ವಿಶಿಷ್ಟತೆ ಎದ್ದು ಕಾಣುತ್ತದೆ. ಬಹಳ ಜನ ನಾಗಾ ಗಳು ನಾಯಿ ತಿನ್ನುತ್ತಾರೆ. ಅರುಣಾಚಲದಲ್ಲಿ ಇಲಿ ತಿನ್ನುತ್ತಾರೆ ಎಂದು ಈಶಾನ್ಯ ರಾಜ್ಯದ ಜನರನ್ನು ಅಣಕಿಸುತ್ತಾರೆ. ಅದು ಶತಮಾನಗಳಿಂದ ಬೆಳೆದು ಬಂದ ಆಹಾರ ಪದ್ಧತಿ.

read more
ಲ್ಯಾಪ್ಲ್ಯಾಂಡ್ ಕನಸು ನನಸಾದ ಕ್ಷಣಗಳ ಸುತ್ತ

ಲ್ಯಾಪ್ಲ್ಯಾಂಡ್ ಕನಸು ನನಸಾದ ಕ್ಷಣಗಳ ಸುತ್ತ

ಇಷ್ಟೆಲ್ಲಾ ಬಟ್ಟೆ ಧರಿಸಿಕೊಂಡು ತಯಾರಾಗುವುದೇ ದೊಡ್ಡ ಸಾಹಸ. ಕೈ ಕಾಲುಗಳ ಸಲೀಸಾದ ಚಲನೆ ಇಲ್ಲದಂತಾಗಿ, ಯಾರೋ ಬಿಗಿಯಾಗಿ ಕಟ್ಟಿ ಹಾಕಿರುವ ಭಾವನೆ. ತಯಾರಾಗಲು ಒಂದರ್ಧ ಘಂಟೆ ಹಿಡಿಯುತ್ತಿತ್ತು. ಮನೆಯ ಒಳಗೆ ಹೀಟರ್ ವ್ಯವಸ್ಥೆ ಇರುವುದರಿಂದ ಇಷ್ಟೆಲ್ಲಾ ತಯಾರಾಗುವ ಒಳಗೆ ಮೈ ಎಲ್ಲಾ ಬೆವರಲು ಶುರು. ಹೊರಗೆ ಕೊರೆಯುವ ಚಳಿ. ನನ್ನಷ್ಟೇ ಭಾರದ ಉಡುಗೆ ತೊಡುಗೆ ತೊಟ್ಟು ಹೊರ ನಡೆದರೆ ಎಲ್ಲೆಲ್ಲೂ ಹಿಮ. ಈ ರೀತಿ ತಯಾರಾಗಿದ್ದರೂ, ಆ ದಿನದ ಸುತ್ತಾಟ ಮುಗಿಯುವ ಹೊತ್ತಿಗೆ ಕಾಲು ಬೆರಳುಗಳು ಮರಗಟ್ಟಿ ಹೋಗಿರುತ್ತಿದ್ದವು.
‘ದೂರದ ಹಸಿರು’ ಸರಣಿಯಲ್ಲಿ ಲಾಪ್ಲ್ಯಾಂಡ್‌ ಪ್ರವಾಸದ ಮತ್ತಷ್ಟು ಅನುಭವಗಳನ್ನು…

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ಬದುಕಿನಲ್ಲಿ....

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ