Advertisement
ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

ಕೊಳಲಾಗುವುದೆಂದರೆ…

ಸಾಮಾನ್ಯ ಬಿದಿರೊಂದು
ಕೊಳಲಾಗುವುದೆಂದರೆ-

ಹಿಂದಿದ್ದವರ ಹಿಂದೆಯೇ ಉಳಿಸಿ
ಮುಂದಿದ್ದವರಿಗಿಂತಲೂ ಮುಂದಕ್ಕೆ ಚಲಿಸಿ
ಮಂದೆಯಲೊಂದಾಗದ ಮುಂದುಗಾರನಾಗಿ
ಮುಂದೆ ಮುಂದೆ ಬರುವುದು

ಕಾಡಿನ ಮಡಿಲಲ್ಲಿದ್ದ
ಅನಾಥ ಮಗುವೊಂದು
ರಸಿಕನ ಕೈಯ್ಯ
ತೆಕ್ಕೆಯನ್ನು ಸೇರುವುದು

ಸೀಳುವ ಆಯುಧಕ್ಕೂ ಮುತ್ತಿಟ್ಟು
ರಂಧ್ರ ಕೊರೆದರೂ ನೋಯದೆ
ಎಲ್ಲವನ್ನೂ ಒಪ್ಪಿಕೊಳ್ಳುವುದು;
ಅಪ್ಪಿಕೊಳ್ಳುವುದು

ನಾಭಿಯಿಂದೆದ್ದ ಪರಿದ್ರೋಣ ಕಂಪಿತ ನಾದತರಂಗ
ಕಲಾರಸಿಕರ ಹೃದಯ ತಲುಪುವವರೆಗೂ
ಉಸಿರಾಡುವುದು;
ಜೀವಂತವಾಗಿರುವುದು

About The Author

ಡಾ. ವಿಶ್ವನಾಥ ಎನ್ ನೇರಳಕಟ್ಟೆ

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ),  ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. "ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ" ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ