ನನ್ನ ಪುಟ್ಟ ಶಾಲೆ: ರೂಪಾ ರವೀಂದ್ರ ಜೋಶಿ ಸರಣಿ
ನಮ್ಮ ಗುರ್ಜಿ ಎಲ್ಲರ ಕೈ ಮೇಲೆ ಕಿತ್ತಳೆ ತೊಳೆ ಆಕಾರದ ಪೆಪ್ಪರಮಿಠಾಯಿ ಇಡುತ್ತಿದ್ದಂತೇ, ಅದು ಬುಳಕ್ಕನೆ ಬಾಯಿಗಿಳಿದು ಬಿಡುತ್ತಿತ್ತು. ನಾವೆಲ್ಲ ಅದನ್ನು ಕಡಿಯದೇ ದವಡೆಯಲ್ಲಿ ಅದುಮಿಟ್ಟುಕೊಂಡು ಮೆಲ್ಲಗೆ ರಸ ಹೀರಿ, ಹೀರಿ ಚಪ್ಪರಿಸುತ್ತಿದ್ದೆವು. ಅದು ಖಾಲಿಯಾಗುವ ತನಕ ಮಾತು ಕತೆ ಎಲ್ಲ ಬಂದ್… ನಮ್ಮಿಡೀ ದಿನದ ಸಂಭ್ರಮ, ಸಂತೋಷ ಆ ಪುಟ್ಟ ಮಿಠಾಯಿಗೋಸ್ಕರವೇ ಇರುತ್ತಿತ್ತೊ ಗೊತ್ತಿಲ್ಲ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿ
ಗೌರವ ಹೆಚ್ಚಿಸುವ ಬಟ್ಟೆ; ಚೆನ್ನಾಗಿಲ್ಲದಿರೆ ಆಗಬಹುದು ಬದುಕು ಮೂರಾಬಟ್ಟೆ!!: ಬಸವನಗೌಡ ಹೆಬ್ಬಳಗೆರೆ ಸರಣಿ
ನಮ್ಮ ವ್ಯಕ್ತಿತ್ವ, ಗುಣ ಮುಖ್ಯವೇ ಹೊರತು, ಹೊರಗೆ ಧರಿಸಿರುವ ದಿರಿಸಲ್ಲ ಎಂದು ಹೇಳುವ ಮಾತು ಕೇವಲ ಹೇಳಲಿಕ್ಕೆ ಮಾತ್ರ ಚೆಂದ ಅಷ್ಟೇ. ಇಂದಿನ ಯುಗದಲ್ಲಿ ಬಾಹ್ಯ ಆಕರ್ಷಣೆಯೇ ಮುಖ್ಯ!! ಆಸ್ತಿಯಾಗಿ ಕಚ್ಚೆ ಹರಿವೆಯಷ್ಟು ಹೊಲ ಇಲ್ದಿದ್ರೂ ಒಳ್ಳೇ ಮನೆ, ಕಾರು ಇದ್ದರೆ ಸಂಬಂಧ ಮಾಡೋಕೆ ಜನರು ಬರ್ತಾರೆ!! ಇಲ್ದಿದ್ರೆ ಅವರ ಕಥೆ ಅಷ್ಟೇ!! ಆದರೂ ಬ್ರಿಟಿಷರಿಂದ ‘ಅರೆ ಬೆತ್ತಲೆ ಫಕೀರ’ ಎಂದು ಕರೆಸಿಕೊಂಡು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಇಂದಿಗೂ ಜನಮಾನಸದಲ್ಲಿ ಉಳಿದಿರುವ ಮಹಾತ್ಮ ಗಾಂಧೀಜಿಯವರು ಧರಿಸುತ್ತಿದ್ದುದು ಸಾಮಾನ್ಯ ಅರೆಬರೆ ಉಡುಪನ್ನೇ!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ
ಮನುಷ್ಯ ಮೃಗವಾಗುತ್ತಿರುವನೆ?: ಸುಮಾವೀಣಾ ಸರಣಿ
ವಾಹನಗಳ ವಿಚಾರಕ್ಕೆ ಬಂದಾಗ ಗಾಳಿ ಇದ್ದರೆ ಗಾಲಿ ಓಡಲು ಸಾಧ್ಯ ಅಲ್ವೆ! ಸ್ವಲ್ಪ ಗಾಳಿ ಹೆಚ್ಚಾದರೂ ವಾಹನಗಳಾಗಲಿ, ಮನುಷ್ಯನಾಗಲಿ ಇರುವುದಿಲ್ಲ. ಗಾಳಿ ಹೆಚ್ಚಾಗಿ ಸೈಕಲ್ ಬರ್ಸ್ಟ್ ಆಯಿತು. ಅದೇ ಗಾಳಿ ಇಲ್ಲದೆ ಹೋದರೆ ಅದು ಓಡುವುದೇ ಇಲ್ಲ ಪಂಚರ್ ಆಗುತ್ತದೆ. ಅಂತೆಯೇ ಮಾನವ ಉಸಿರುಗಟ್ಟಿ ಸಾಯುತ್ತಾನೆ. ಹೌದು! ಮಾನವನ ಬದುಕು ಉಸಿರು ಹೋದಾಗ ‘ಸತ್ತರು’, ‘ಅದು’, ‘ಇದು’, ‘ಶವ’ ಎಂಬುದಾಗಿ ಮಾತನಾಡುತ್ತಾರೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಇಪ್ಪತ್ತೊಂದನೆಯ ಬರಹ ನಿಮ್ಮ ಓದಿಗೆ
ಟು ಡು ಲಿಸ್ಟ್ ಹಾಗೂ ರದ್ದಿ ಹಾಳೆಯ ಕತೆಗಳು….: ಎಚ್. ಗೋಪಾಲಕೃಷ್ಣ ಸರಣಿ
ನನ್ನ ಅನುಭವಗಳನ್ನು ಕೊಂಚ, ಕೊಂಚ ಏನೂ ತುಂಬಾ ಹೆಚ್ಚಾಗಿಯೇ ಉತ್ಪ್ರೇಕ್ಷಿಸಿ ಬುರುಡೆ ಅಂದರೆ ಸಖತ್ ಬುರುಡೆ ಬಿಡುತ್ತಿದ್ದೆ. ಈ ಬುರುಡೆಯಲ್ಲಿ ಬಹಳ ಮುಖ್ಯವಾಗಿ ಬ್ಯಾಂಕ್ ಡೈರೆಕ್ಟರ್ ಜತೆ ಇಂಟರ್ವ್ಯೂ ಮಾಡಿಸಿಕೊಂಡು ಸಾಲವನ್ನು ಮೂವತ್ತು ಸಾವಿರದಿಂದ ಮೂವತ್ತ ಮೂರು ಸಾವಿರ ಹೆಚ್ಚಿಸಿದ್ದು, ಬೇವಿನ ಮರದ ಹಳೇ ಬಾಗಿಲು ಕೊಂಡು ಟೋಪಿ ಬಿದ್ದದ್ದು, ಕುಬೇರಪ್ಪ ಹಳದಿ ಇಂಗಿನ ಬ್ಯಾಗ್ನಲ್ಲಿ ಕೇಜಿ ಅಷ್ಟು ಚಿನ್ನ ತುಂಬಿಕೊಂಡು ಯಶವಂತ ಪುರಕ್ಕೆ ನಡೆದುಕೊಂಡು ಹೋಗಿ ಚಿನ್ನ ಮಾರಿದ್ದೂ, ನನ್ನ ಹತ್ತಿರ ಊಹೂಂ ನನ್ನ ಹತ್ತಿರ ಅಲ್ಲ, ನನ್ನಾಕೆ ಹತ್ತಿರ ಮುಕ್ಕಾಲು ಗ್ರಾಮ್ನ ತಾಳಿ ಇರೋದು…. ಇವೆಲ್ಲಾ ಸೇರಿರುತ್ತಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ
ಪ್ರಕೃತಿಯೇ ದೈವವೆನ್ನುವ ದೈಯ್ಯದ ಹರಕೆ: ಭವ್ಯ ಟಿ.ಎಸ್. ಸರಣಿ
ರಮಣೀಯವಾದ ಹಚ್ಚಹಸಿರಿನ ಮಲೆನಾಡಿನ ಒಂಟಿ ಮನೆಗಳ ಅಕ್ಕಪಕ್ಕದ ದರುಗು ಗುಡಿಸುವ ಹಡ್ಡೆಗಳ ಬನದೊಳಗೆ ಇರುವ ಮರದ ಬುಡಗಳೇ ಈ ದೈಯ್ಯಗಳ ಆವಾಸಸ್ಥಾನ. ಪ್ರಕೃತಿ, ಮರ-ಗಿಡಗಳಲ್ಲಿ ದೈವತ್ವವನ್ನು ಕಾಣುವ ಮಲೆಯ ಜನರ ಭಕ್ತಿ, ಶ್ರದ್ಧೆಗಳಿಗೆ ಈ ದೈಯ್ಯಗಳು ಪಾತ್ರವಾಗಿವೆ. ದೈಯ್ಯದ ಮರಗಳೆಂಬ ಭಯ, ಭಕ್ತಿಯಿಂದ ಈ ಮರಗಳನ್ನು ಯಾರೂ ಕಡಿಯುವುದಿಲ್ಲ. ಇದರಿಂದ ಪ್ರಕೃತಿಯ ಸಂರಕ್ಷಣೆಯೂ ಆಗುತ್ತಿದೆ. ಊರು ತೊರೆದು ಬೇರೆ ಬೇರೆ ಊರಿಗೆ ಹೋಗಿ ನೆಲೆಸಿರುವ ಜನರು ಪುನಃ ಊರಿಗೆ ಬರುವುದು, ಬಂಧು ಬಾಂಧವರೊಡನೆ ಬೆರೆಯಲು ಇದೊಂದು ಸುದಿನ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿಯಲ್ಲಿ ದೇವರ ಹರಕೆ ಸಲ್ಲಿಸುವುದರ ಕುರಿತ ಬರಹ ನಿಮ್ಮ ಓದಿಗೆ
ಬಾವೋಬಾಬ್ ಗುಲಾಬ್ ಸೆನೆಗಲ್: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ
ಇಪ್ಪತ್ತನೇ ಶತಮಾನದ ಕೊನೆಯಲ್ಲಿ ಬರ ಬಂದದ್ದರಿಂದಾಗಿ ಕೃಷಿ ಉತ್ಪಾದನೆ ಕುಂಠಿತಗೊಂಡಿತ್ತು. ಮಾಲಿ ಪ್ರದೇಶದ ಮನಾಂತಲಿ ಅಣೆಕಟ್ಟಿನ ನೀರನ್ನು ಬಳಸಿಕೊಂಡ ಕಾರಣ ಈ ಸಮಸ್ಯೆ ಸ್ವಲ್ಪಮಟ್ಟಿಗೆ ನಿವಾರಣೆಯಾಯಿತು. ಸೆನೆಗಲ್ನ ಹವಾಮಾನ ಜಾನುವಾರುಗಳ ಸಾಕಣೆಗೆ ಪೂರಕವಾಗಿದೆ. ಸವನ್ನಾ ವಿಧದ ಸಸ್ಯವರ್ಗ ಇರುವುದರಿಂದಾಗಿ ಜಾನುವಾರುಗಳ ಆಹಾರಕ್ಕೆ ಯಾವುದೇ ತೊಂದರೆಯಿಲ್ಲ. ದನ, ಮೇಕೆ, ಕುರಿ, ಕುದುರೆ, ಒಂಟೆ, ಕತ್ತೆ, ಹಂದಿ ಮೊದಲಾದ ಪ್ರಾಣಿಗಳನ್ನು ಸಾಕುತ್ತಾರೆ ಸೆನೆಗಲ್ ಜನರು.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಸೆನೆಗಲ್ ದೇಶದ ಕುರಿತ ಬರಹ ನಿಮ್ಮ ಓದಿಗೆ
ಸೌದಿಯ ಹೊಸ ಮೆಗಾ ಪ್ರಾಜೆಕ್ಟ್!: ದರ್ಶನ್ ಜಯಣ್ಣ ಸರಣಿ
ಆತ “ದುಬೈ ನಲ್ಲಿ ಏನಿದೆ? ಒಂದು ಐದಾರು ಶಾಪಿಂಗ್ ಮಾಲ್ಗಳು, ಎರಡು ಮುಖ್ಯ ರಸ್ತೆ, ಎರಡು ಹೋಟೆಲ್ಲು ಮತ್ತು ಬಹು ಮಹಡಿ ಕಟ್ಟಡ ಅಷ್ಟೇ ತಾನೇ?! ನಮ್ಮದು ಅದಕ್ಕಿಂತ ದೊಡ್ಡ ಯೋಜನೆ ಮತ್ತು ಹತ್ತು ಪಟ್ಟು ಹಿರಿದಾದದ್ದು” ಎಂದುಬಿಟ್ಟ. ಪ್ರಶ್ನೆ ಕೇಳುತ್ತಿದ್ದವರು ಕಕ್ಕಾ ಬಿಕ್ಕಿ. ಈ ಉತ್ತರ ಕೆಲವು egoistic ಸೌದಿಗಳಿಗೆ ಅಪ್ಯಾಯವಾಗಬಹುದು; ಆದರೆ ಒಂದು ವಿಷಯ ಗಮನದಲ್ಲಿಟ್ಟುಕೊಳ್ಳಬೇಕು. ದುಬೈ ನಗರ ಅಥವಾ ಯುಎಇ ದೇಶ ಈ ಎಲ್ಲವನ್ನೂ 50 ವರ್ಷ ಮುಂಚಿತವಾಗಿ ಮಾಡಿ ಗೆದ್ದಿದೆ. ಆಗಲೇ ಅವರ ದೃಷ್ಟಿಕೋನ ಹಾಗಿತ್ತು ಎಂಬುದನ್ನು ಯಾರೂ ಮರೆಯಬಾರದು.
ದರ್ಶನ್ ಜಯಣ್ಣ ಬರೆಯುವ “ಸೌದಿ ಡೇಟ್ಸ್” ಸರಣಿಯ ಐದನೆಯ ಬರಹ
ರೂಪಾ ರವೀಂದ್ರ ಜೋಶಿ ಹೊಸ ಸರಣಿ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಇಂದಿನಿಂದ
ಏನೇ ಹೇಳಿ, ಆ ಕಾಡು ಮಧ್ಯದ ಪುಟ್ಟ ಶಾಲೆಯಲ್ಲಿ ಓದುವಾಗಿನ ಆ ನೆನಪುಗಳು ನಿಜಕ್ಕೂ ಚಿರಸ್ಮರಣೀಯ. ನಮ್ಮನೆಯಿಂದ ಶಾಲೆ ಸುಮಾರು ಎರಡು ಕಿ.ಮೀ. ನಷ್ಟು ದೂರವಿತ್ತು. ಎರಡು ಸೊಪ್ಪಿನ ಬೆಟ್ಟ ದಾಟಿ, ಒಂದು ಗುಡ್ಡ ಏರಿಳಿದರೆ, ನಮ್ಮ ಶಾಲೆ. ಮಳೆಗಾಲದಲ್ಲಿ ಒಂದು ಪುಟ್ಟ ಕಾಲುವೆ ದಾಟಬೇಕಾಗುತ್ತಿತ್ತು. ಹೆಚ್ಚು ಕಮ್ಮಿ ಮಾರಗಲವಿದ್ದ ಆ ಕಾಲುವೆ, ಅಂಥ ಭಯಂಕರ ಕಾಲುವೆಯೇನೂ ಆಗಿರಲಿಲ್ಲ. ಅದೂ ಕೂಡಾ ನಮ್ಮ ಬಾಲ್ಯದ ಸಂಗಾತಿಯಂತೇ ನಮ್ಮ ಖುಶಿಯಲ್ಲಿ ಪಾಲು ಪಡೆದಿತ್ತು.
ರೂಪಾ ರವೀಂದ್ರ ಜೋಶಿ ಹೊಸ ಸರಣಿ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಇಂದಿನಿಂದ
ಅಲಾರಾಂ ಹಾಗೂ ಓದುವ ವೇಳೆಯ ಕುರಿತು ಒಂದಷ್ಟು ಮಾತು… ಬಸವನಗೌಡ ಹೆಬ್ಬಳಗೆರೆ ಸರಣಿ
ನಮ್ಮಜ್ಜನ ಮನೆಯಲ್ಲಿ ಇದ್ದಾಗ, ನಮ್ಮಜ್ಜ ನನ್ನನ್ನು ಬೆಳಗ್ಗೆ ಏಳಿಸುವ ಅಲಾರಾಂನಂತೆ ಕೆಲಸ ಮಾಡುತ್ತಿದ್ದರು. ಆದರೆ ಯಾವಾಗ ಹಾಸ್ಟೆಲ್ ಸೇರಿದೆನೋ ಅಲ್ಲಿ ಹಾಸ್ಟೆಲ್ ವಾರ್ಡನ್ ಪೀಪಿಯನ್ನು ಊದಿ ಏಳಿಸುತ್ತಿದ್ದರು. ಆಗ ನಮ್ಮ ಮಲ್ಲಾಡಿಹಳ್ಳಿಯ ಹಾಸ್ಟೆಲ್ಲಿನಲ್ಲಿ ತುಂಬಾ ಶಿಸ್ತು ಇತ್ತು. ನಾವು ಕಡ್ಡಾಯವಾಗಿ ಬೆಳಗ್ಗೆ 5 ಕ್ಕೆ ಏಳಲೇಬೇಕಾಗಿತ್ತು. ಏಳದಿದ್ದರೆ ಕೋಲು ಹಿಡಿದುಕೊಂಡು ಬರುತ್ತಿದ್ದರು. ಒಂದೊಮ್ಮೆ ಮಲಗಿರುವುದನ್ನು ಕಂಡರೆ ಕುಂಡೆಯ ಮೇಲೆ ಬಾರಿಸುತ್ತಾ ಹೋಗುತ್ತಿದ್ದರು, ಬೆಳಗ್ಗೆ ಎದ್ದು ಕೆಲವರು ಓದುತ್ತಾ ಕುಳಿತರೆ ಕೆಲವರು ಬ್ರಷ್ ಮಾಡಲು ಹೋಗುತ್ತಿದ್ದರು. ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ










